Published : Jun 16, 2025, 06:54 AM ISTUpdated : Jun 16, 2025, 11:43 PM IST

Karnataka News Live: ಇರಾನ್‌ ಸುಪ್ರೀಂ ಲೀಡರ್‌ ಅಯತೊಲ್ಲಾ ಖಮೇನಿ ಹತ್ಯೆ ಮಾಡುವ ಸುಳಿವು ನೀಡಿದ ಇಸ್ರೇಲ್‌ ಪ್ರಧಾನಿ

ಸಾರಾಂಶ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಒಂದು ವಾರ ಮಳೆ ಸುರಿಯಲಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ದೇವಿಮನೆ, ಶೃಂಗೇರಿ ತಾಲೂಕಿನ ನೆಮ್ಮಾರ್‌, ಮಂಗಳೂರಿನ ಕದ್ರಿ, ಕಂಕನಾಡಿಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

Israeli Prime Minister Benjamin Netanyahu and Iran's Supreme Leader Ayatollah Khamenei.

11:43 PM (IST) Jun 16

ಇರಾನ್‌ ಸುಪ್ರೀಂ ಲೀಡರ್‌ ಅಯತೊಲ್ಲಾ ಖಮೇನಿ ಹತ್ಯೆ ಮಾಡುವ ಸುಳಿವು ನೀಡಿದ ಇಸ್ರೇಲ್‌ ಪ್ರಧಾನಿ

ಇಸ್ರೇಲ್ ಪ್ರಧಾನಿ ನೆತನ್ಯಾಹು ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆ ಯೋಜನೆ ಬಗ್ಗೆ ಸುಳಿವು ನೀಡಿದ್ದಾರೆ. ಈ ಕ್ರಮ ಯುದ್ಧ ಕೊನೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಟ್ರಂಪ್ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
Read Full Story

11:16 PM (IST) Jun 16

ಈ ಯುದ್ಧವನ್ನ ಇರಾನ್‌ ಗೆಲ್ಲೋದಿಲ್ಲ, ತಡವಾಗುವ ಮುನ್ನ ಮಾತುಕತೆ ನಡೆಸಿ ಎಂದ ಟ್ರಂಪ್‌!

ಕೆನಡಾದಲ್ಲಿ ನಡೆಯಲಿರು G7 ಶೃಂಗಸಭೆಗೂ ಮುನ್ನ, ಡೊನಾಲ್ಡ್ ಟ್ರಂಪ್ ಇಸ್ರೇಲ್-ಇರಾನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒತ್ತಾಯಿಸುವ ಹೇಳಿಕೆಯನ್ನು ಬೆಂಬಲಿಸಲು ನಿರಾಕರಿಸಿದರು, ಇಸ್ರೇಲ್‌ನ ಕ್ರಮಗಳನ್ನು ಬಲವಾಗಿ ಬೆಂಬಲಿಸಿದರು ಮತ್ತು ರಷ್ಯಾ ಮೈತ್ರಿಕೂಟಕ್ಕೆ ಮರಳಬೇಕೆಂದು ಕರೆ ನೀಡಿದರು.

 

Read Full Story

10:31 PM (IST) Jun 16

ಇಂದಿನಿಂದ ಮಿಂಚಿನ ವೇಗದಲ್ಲಿ ನಡೆಯಲಿದೆ ಯುಪಿಐ ವಹಿವಾಟು , ಜಸ್ಟ್‌ 15 ಸೆಕೆಂಡ್‌ನಲ್ಲಿಯೇ ಟ್ರಾನ್ಸ್‌ಫರ್‌ ಆಗಲಿದೆ ಹಣ!

UPI ಪಾವತಿಗಳು ಈಗ 50% ವೇಗವಾಗಿವೆ, ಕೇವಲ 15 ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತವೆ. NPCI ಕಳೆದ ತಿಂಗಳು ನಿಯಮಗಳನ್ನು ಬದಲಾಯಿಸಿದ್ದು, ಜೂನ್ 16 ರಿಂದ ಜಾರಿಗೆ ಬಂದಿದೆ. ವಹಿವಾಟು ವೈಫಲ್ಯ ಮತ್ತು ಬಳಕೆದಾರರ ಅಸಮಾಧಾನ ಕಡಿಮೆ ಮಾಡುವುದು ಇದರ ಉದ್ದೇಶ.
Read Full Story

09:45 PM (IST) Jun 16

ಇಸ್ರೇಲ್-ಇರಾನ್ ಸಂಘರ್ಷ - ಟಿವಿ ಸ್ಟುಡಿಯೋದಲ್ಲಿ ಬಾಂಬ್ ದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇಸ್ರೇಲ್ ಇರಾನ್‌ನ ರಾಷ್ಟ್ರೀಯ ಟಿವಿ ಚಾನೆಲ್‌ನ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಲೈವ್ ಕಾರ್ಯಕ್ರಮ ನಡೆಸುತ್ತಿದ್ದ ನಿರೂಪಕಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. 

Read Full Story

09:27 PM (IST) Jun 16

ಟೆರರಿಸ್ಟ್‌ ಫಂಡಿಂಗ್‌ ಇಲ್ಲದೆ, ಪಹಲ್ಗಾಮ್‌ ದಾಳಿಯಂಥ ಕೃತ್ಯ ಆಗಲು ಸಾಧ್ಯವೇ ಇಲ್ಲ ಎಂದ FATF

ಪಹಲ್ಗಾಮ್ ದಾಳಿಯನ್ನು FATF ಖಂಡಿಸಿದ್ದು, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಲಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಮತ್ತೆ 'ಬೂದು ಪಟ್ಟಿ'ಗೆ ಸೇರಿಸಬಹುದೆಂಬ ಚರ್ಚೆಗಳು ಆರಂಭವಾಗಿವೆ. 

Read Full Story

09:24 PM (IST) Jun 16

Honeymoon Mur*der - ಪ್ರವಾಸಿಗನ ಕ್ಯಾಮೆರಾದಲ್ಲಿ ಅನಿರೀಕ್ಷಿತವಾಗಿ ಕೊನೆಯ ಕ್ಷಣದ ವಿಡಿಯೋ ಸೆರೆ!

ಮಧ್ಯಪ್ರದೇಶದ ಇಂದೋರ್​ನ ರಾಜಾ ರಘುವಂಶಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಪ್ರವಾಸಿಗನೊಬ್ಬ ಅನಿರೀಕ್ಷಿತವಾಗಿ ವಿಡಿಯೋ ಮಾಡಿದ್ದು, ಅದರಲ್ಲಿ ಈ ದಂಪತಿ ಕಾಣಿಸಿಕೊಂಡಿದ್ದಾರೆ. ಇದು ದಂಪತಿಯ ಕೊನೆಯ ಕ್ಷಣ ಇರಬಹುದು ಎಂದು ಊಹಿಸಲಾಗಿದೆ.

 

Read Full Story

09:01 PM (IST) Jun 16

ಬೆಂಗಳೂರಿನ ಹೊಸ ಹೆಜ್ಜೆ ಹಳದಿ ಮೆಟ್ರೋ ಶೀಘ್ರವೇ ಸಂಚಾರ ಮುಕ್ತ, ನಿಲ್ದಾಣದ ವಿಶೇಷಗಳಿವು!

ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಜೂನ್ 2025ರಲ್ಲಿ ಭಾಗಶಃ ಕಾರ್ಯಾರಂಭ ಮಾಡಲಿದೆ. ಆರಂಭದಲ್ಲಿ ಕೆಲವು ನಿಲ್ದಾಣಗಳಲ್ಲಿ ಸೀಮಿತ ಸೇವೆ ಲಭ್ಯವಿರುತ್ತದೆ. ಪೂರ್ಣ ಪ್ರಮಾಣದ ಸೇವೆ ಆಗಸ್ಟ್ ಅಥವಾ ಸೆಪ್ಟೆಂಬರ್ 2025ರಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
Read Full Story

08:47 PM (IST) Jun 16

ಹಣಕ್ಕಾಗಿ ಹೊಸ ಮಾರ್ಗ ಹಿಡಿದ ಮೆಟಾ, ಎರಡೇ ತಿಂಗಳಲ್ಲಿ ವಾಟ್ಸಾಪ್‌ನಲ್ಲೂ ಬರಲಿದೆ ಜಾಹೀರಾತು!

ಯೂಸರ್‌ಗಳ ವೈಯಕ್ತಿಕ ಸಂದೇಶಗಳು, ಕರೆಗಳು ಮತ್ತು ಸ್ಟೇಟಸ್‌ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಟ್ ಆಗಿರುತ್ತವೆ ಮತ್ತು ಆದ್ದರಿಂದ ಜಾಹೀರಾತುಗಳನ್ನು ತೋರಿಸಲು ಬಳಸಲಾಗುವುದಿಲ್ಲ ಎಂದು WhatsApp ಹೇಳಿದೆ.

 

Read Full Story

08:16 PM (IST) Jun 16

'ನಮ್ದು ನಾವು ಉಳಿಸಿಕೊಂಡ್ರೆ ಸಾಕಾಗಿದೆ..' ಸಚಿವ ಸಂಪುಟ ಬದಲಾವಣೆ ಕುರಿತು ಜಾರಕಿಹೊಳಿ ಮಹತ್ವದ ಹೇಳಿಕೆ!

ಸಚಿವ ಸಂಪುಟ ಬದಲಾವಣೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಸ್ಥಾನ ಉಳಿಸಿಕೊಂಡರೆ ಸಾಕು ಎಂದು ಹೇಳಿದ ಅವರು, ರಾಜಕೀಯದಲ್ಲಿ ಬದಲಾವಣೆ ಸಹಜ ಎಂದಿದ್ದಾರೆ. ಡಿಕೆ ಶಿವಕುಮಾರ ಸಿಎಂ ಆಗುವ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
Read Full Story

07:46 PM (IST) Jun 16

ಶಬರಿಮಲೆ ಯಾತ್ರೆ ವೇಳೆ ಹೃದಯಾಘಾತಕ್ಕೆ ಬಲಿಯಾದ ಅಯ್ಯಪ್ಪಸ್ವಾಮಿ ಭಕ್ತ!

ಶಬರಿಮಲೆ ಯಾತ್ರೆಯ ವೇಳೆ ಯುವಕ ಪ್ರಜ್ವಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಘಟನೆ ಕುಟುಂಬ ಮತ್ತು ಸ್ನೇಹಿತರಿಗೆ ಆಘಾತ ತಂದಿದೆ. ಯಾತ್ರಾ ಸ್ಥಳದಲ್ಲಿ ಸಾವನ್ನಪ್ಪಿದ ಭಕ್ತನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

07:45 PM (IST) Jun 16

ಈ ರೀತಿ ಹಣದ ವ್ಯವಹಾರ ಮಾಡಿದ್ರೆ ನಿಮಗೂ ಬರತ್ತೆ Income Tax ನೋಟಿಸ್​! ತಪ್ಪಿಸಿಕೊಳ್ಳೋದು ಹೇಗೆ?

ಆದಾಯ ತೆರಿಗೆ ಇಲಾಖೆಯಿಂದ ಐದು ರೀತಿಯ ಹಣದ ವ್ಯವಹಾರಗಳಿಗೆ ನೋಟಿಸ್​ ಬರಬಹುದು. ಹಾಗೆಂದು ನಿಮ್ಮ ಮೇಲೆ ಸಂದೇಹ ಎಂದಲ್ಲ. ಅದಕ್ಕಾಗಿ ನೀವು ಮಾಡಬೇಕಿರುವುದು ಏನು? ಇಲ್ಲಿದೆ ಡಿಟೇಲ್ಸ್​

 

Read Full Story

07:40 PM (IST) Jun 16

ಅಂಡಮಾನ್‌ ಸಮುದ್ರದಲ್ಲಿ ಭಾರೀ ತೈಲದ ನಿಕ್ಷೇಪ, ದೇಶದ ಆರ್ಥಿಕ ಸ್ಥಿತಿಯನ್ನೇ ಬದಲಿಸುವ ಜಾಕ್‌ಪಾಟ್‌ನ ಅಂಚಿನಲ್ಲಿ ಭಾರತ!

ಭಾರತವು ಅಂಡಮಾನ್ ಸಮುದ್ರದಲ್ಲಿ ಪ್ರಮುಖ ತೈಲ ಅನ್ವೇಷಣೆಯ ಅಂಚಿನಲ್ಲಿದೆ. ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿದ್ದು, ಭಾರತದ ಪಾಲಿಗೆ ಈ ತೈಲ ನಿಕ್ಷೇಪ ಗಯಾನ ದೇಶಕ್ಕೆ ಮಾಡಿದ ಅದ್ಭುತವನ್ನು ಮಾಡಬಹುದು ಎಂದಿದ್ದಾರೆ.

 

Read Full Story

07:27 PM (IST) Jun 16

ಪೆಟ್ರೋಲ್ ಬಂಕ್ ಹುಡುಗನ ಎದೆಗೆ ಗನ್ ಪಾಯಿಂಟ್ ಇಟ್ಟ ಯುವತಿ! ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ವಾ?

ಉತ್ತರ ಪ್ರದೇಶದ ಸಿಎನ್‌ಜಿ ಕೇಂದ್ರದಲ್ಲಿ ಕಾರ್ ಪಾರ್ಕಿಂಗ್ ವಿಚಾರಕ್ಕೆ ಮಹಿಳೆಯೊಬ್ಬರು ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

07:22 PM (IST) Jun 16

ಬಾಲಕಿ ಮೃತಪಟ್ಟ ಆಸ್ಪತ್ರೆಯ ಹಾಸಿಗೆಯಲ್ಲಿ ಈಗಲೂ ವಿಚಿತ್ರ ಶಬ್ದ! ವೈದ್ಯಲೋಕಕ್ಕೇ ಸವಾಲು...

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇದೆಯೋ ಇಲ್ಲವೋ ಎನ್ನುವ ವಾದ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ವೈದ್ಯಲೋಕಕ್ಕೇ ಸವಾಲು ಎನ್ನಿಸುವ ಘಟನೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಏನದು?

 

Read Full Story

06:51 PM (IST) Jun 16

ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಕೆ ಸ್ಥಗಿತ! ಯಾವ ಏರಿಯಾಗೂ ಒಂದು ಹನಿ ನೀರು ಬರೋದಿಲ್ಲ!

ಜೂನ್ 19 ರಿಂದ 20 ರವರೆಗೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ 5ನೇ ಹಂತದ ಕಾಮಗಾರಿ ಹಾಗೂ ವಿದ್ಯುತ್ ನಿರ್ವಹಣೆ ಕಾರಣದಿಂದಾಗಿ ಈ ಸ್ಥಗಿತ ಅನಿವಾರ್ಯವಾಗಿದೆ. ನಾಗರಿಕರು ಮುಂಜಾಗ್ರತೆಯಾಗಿ ನೀರು ಸಂಗ್ರಹಿಸಿಕೊಳ್ಳುವಂತೆ BWSSB ಮನವಿ ಮಾಡಿದೆ.
Read Full Story

06:50 PM (IST) Jun 16

ಅರ್ಧ ಶತಮಾನದ ಬಳಿಕ ಹುಟ್ಟಿದ ಹೆಣ್ಣುಮಗುವಿಗೆ ವೈಭವದ ಸ್ವಾಗತ; ವಿಡಿಯೋ ನೋಡಿ ನೀವೂ ಕಣ್ತುಂಬಿಕೊಳ್ಳಿ!

ಅರ್ಧ ಶತಮಾನದ ನಂತರ ಕುಟುಂಬವೊಂದಕ್ಕೆ ಹೆಣ್ಣು ಮಗುವಿನ ಜನನ. ದೆಹಲಿಯಲ್ಲಿ ನಡೆದ ಈ ಸಂಭ್ರಮದಲ್ಲಿ ನೂರಾರು ಕಾರುಗಳ ಮೆರವಣಿಗೆ, ದೀಪಾಲಂಕಾರ, ಹೂವಿನ ಅಲಂಕಾರ, ಪಟಾಕಿಗಳೊಂದಿಗೆ ಅದ್ದೂರಿಯಾಗಿ ಮಗುವನ್ನು ಸ್ವಾಗತಿಸಲಾಯಿತು. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

06:48 PM (IST) Jun 16

ಇಂಗ್ಲೀಷ್ ಶಿಕ್ಷಣಕ್ಕೆ ಈ ಸರ್ಕಾರಿ ಶಾಲೆಗೆ ಸೇರಿದರೆ ₹1000 ಬಹುಮಾನ!

ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರದ ಸರ್ಕಾರಿ ಶಾಲೆಯೊಂದು ಇಂಗ್ಲಿಷ್ ಮಾಧ್ಯಮದಲ್ಲಿ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ₹1000 ನೀಡುತ್ತಿದೆ. ಶಿಕ್ಷಕ ಶ್ರೀಧರ್ ಅವರ ಈ ಉಪಕ್ರಮದಿಂದಾಗಿ ದಾಖಲಾತಿ ಹೆಚ್ಚಿದೆ.

Read Full Story

06:40 PM (IST) Jun 16

ನೈಟ್‌ ಶಿಫ್ಟ್‌ಅಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅಸ್ತಮಾ ಅಪಾಯ ಹೆಚ್ಚು ಎಂದ ವರದಿ!

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರು ಹಗಲಿನ ವೇಳೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗಿಂತ ಆಸ್ತಮಾದಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ. ಪುರುಷರಲ್ಲಿ ಮಾತ್ರ ಈ ಸಂಬಂಧ ಕಂಡುಬಂದಿಲ್ಲ.

 

Read Full Story

06:29 PM (IST) Jun 16

ಕೇರಳದಲ್ಲಿ ವಿಪರೀತ ಮಳೆಗೆ 3 ಸಾವು, ಇಡುಕ್ಕಿಯ ಪೊನ್ಮುಡಿ ಅಣೆಕಟ್ಟು ಓಪನ್

ಇಡುಕ್ಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪೊನ್ಮುಡಿ ಅಣೆಕಟ್ಟನ್ನು ತೆರೆಯಲಾಗಿದೆ. ಪನ್ನಿಯಾರ್ ನದಿ ಪಕ್ಕದಲ್ಲಿ ವಾಸಿಸುವವರು ಜಾಗರೂಕರಾಗಿರಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದೆ.
Read Full Story

06:08 PM (IST) Jun 16

ಬೆಂಗಳೂರು ರ‍್ಯಾಪಿಡೋ ಚಾಲಕನಿಂದ ಯುವತಿಗೆ ಹಲ್ಲೆ ಕೇಸ್‌ಗೆ ಭರ್ಜರಿ ಟ್ವಿಸ್ಟ್; ಸಿಸಿಟಿವಿ ದೃಶ್ಯದಲ್ಲಿ ಬಯಲಾಯ್ತು ಸತ್ಯ!

ಬೆಂಗಳೂರಿನ ಜಯನಗರದಲ್ಲಿ ರ‍್ಯಾಪಿಡೋ ಚಾಲಕನೊಬ್ಬ ಯುವತಿಗೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ರ‍್ಯಾಪಿಡೋ ಚಾಲಕನ ಹಲ್ಲೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು ಹೊಸ ತಿರುವು ನೀಡಿವೆ.

Read Full Story

06:01 PM (IST) Jun 16

ಇನ್ನು ಜೆರಾಕ್ಸ್‌ ಮಾಡಬೇಕಂತಿಲ್ಲ, QR ಕೋಡ್‌ ಮೂಲಕ ಶೇರ್‌ ಮಾಡಬಹುದು ಆಧಾರ್‌ ಕಾರ್ಡ್‌!

ಆಧಾರ್ ಕಾರ್ಡ್‌ನ ಜೆರಾಕ್ಸ್ ಬದಲಿಗೆ ಡಿಜಿಟಲ್ ರೂಪದಲ್ಲಿ ಗುರುತು ಹಂಚಿಕೊಳ್ಳಲು ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ. ಮನೆಯಲ್ಲಿಯೇ ಆಧಾರ್ ವಿವರಗಳನ್ನು ನವೀಕರಿಸಲು ಹೊಸ ಪ್ರೋಟೋಕಾಲ್.
Read Full Story

05:35 PM (IST) Jun 16

ಬೆಂಗಳೂರಿನ ರಸ್ತೆಗಳಿಗೆ ಕೇವಲ 3 ಕಿ.ಮೀ ಪಾದಚಾರಿ ರಸ್ತೆ, ಬಿಬಿಎಂಪಿ ಬಳಿ ಲೆಕ್ಕವಿಲ್ಲ!

ಬೆಂಗಳೂರಿನಲ್ಲಿ 14,000 ಕಿ.ಮೀ ರಸ್ತೆಗಳಿದ್ದರೂ, ಪಾದಚಾರಿ ಮಾರ್ಗಗಳ ಕೊರತೆ ತೀವ್ರವಾಗಿದೆ. ಟೆಂಡರ್‌ಶ್ಯೂರ್ ರಸ್ತೆಗಳು ಮಾತ್ರ ಉತ್ತಮವಾಗಿದ್ದು, ಉಳಿದ ರಸ್ತೆಗಳಲ್ಲಿ ಪಾದಚಾರಿಗಳಿಗೆ ಸ್ಥಳವಿಲ್ಲದಂತಾಗಿದೆ. ಹೊಸ ಯೋಜನೆಗಳಲ್ಲೂ ಪಾದಚಾರಿ ಮಾರ್ಗಗಳಿಗೆ ಸೂಕ್ತ ಗಮನ ನೀಡುತ್ತಿಲ್ಲ ಎಂಬುದು ಆತಂಕಕಾರಿ.
Read Full Story

05:31 PM (IST) Jun 16

ನನ್ನ ಇಡೀ ವೃತ್ತಿಜೀವನದ ಅತ್ಯಂತ ಕರಾಳ ಘಟನೆ, ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಮರುಗಿದ ಟಾಟಾ ಚೇರ್ಮನ್‌ ಚಂದ್ರಶೇಖರನ್‌

ಏರ್ ಇಂಡಿಯಾ ಅಪಘಾತದ ನಂತರ, ಅಧ್ಯಕ್ಷ ಎನ್ ಚಂದ್ರಶೇಖರನ್ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿ, ದುಃಖ ವ್ಯಕ್ತಪಡಿಸಿದರು ಮತ್ತು ಘಟನೆಯ ತನಿಖೆ ನಡೆಯುವವರೆಗೂ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಒತ್ತಾಯಿಸಿದರು.

 

Read Full Story

04:43 PM (IST) Jun 16

ಭಾರತದ ಜೊತೆ ಯುದ್ಧ ಬಿಟ್ಟು ಬೇರೆ ಆಯ್ಕೆ ನಮ್ಮಲ್ಲಿಲ್ಲ ಎಂದ ಪಾಕಿಸ್ತಾನದ ಬಿಲಾವಲ್‌ ಭುಟ್ಟೋ!

ಪಾಕಿಸ್ತಾನ ಮತ್ತು ಭಾರತ ನಡುವಿನ ಎಲ್ಲಾ ಬಾಕಿ ಇರುವ ಸಮಸ್ಯೆಗಳನ್ನು ಸಮಗ್ರ ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ಭುಟ್ಟೋ ಹೇಳಿದ್ದಾರೆ.

 

Read Full Story

04:10 PM (IST) Jun 16

"ನನಗೊಂದು ಶೆಡ್ ನೀಡಿ" ಚಿಕ್ಕೋಡಿ ಗ್ರಾಮ ಪಂಚಾಯ್ತಿ ಮುಂದೆ ಎಮ್ಮೆ ಪ್ರತಿಭಟನೆ!

ಸಂಬರಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಮಂಜೂರಾದ ದನದ ಶೆಡ್‌ಗಳು ಇನ್ನೂ ನಿರ್ಮಾಣವಾಗದ ಕಾರಣ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್‌ನ ನಿರ್ಲಕ್ಷ್ಯದಿಂದಾಗಿ ಶೆಡ್ ವಿತರಣೆಯಲ್ಲಿ ಗೊಂದಲ ಉಂಟಾಗಿದೆ. 

Read Full Story

04:08 PM (IST) Jun 16

ಮೋದಿಗೆ ಸೈಪ್ರಸ್‌ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ, ವಿಶ್ವದ 21 ದೇಶಗಳಿಂದ ಪ್ರಧಾನಿಗೆ ಗೌರವ!

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೈಪ್ರಸ್‌ನ ಅತ್ಯುನ್ನತ ಗೌರವ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III' ಪ್ರದಾನ. ಈ ಗೌರವವು 140 ಕೋಟಿ ಭಾರತೀಯರಿಗೆ ಸಂದ ಗೌರವ ಎಂದು ಮೋದಿ ಹೇಳಿದರು. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಸೈಪ್ರಸ್ ಭಾರತದ ಜೊತೆಗಿದೆ ಎಂದು ಘೋಷಿಸಲಾಯಿತು.
Read Full Story

04:01 PM (IST) Jun 16

ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಕೆ ಸ್ಥಗಿತ! ಯಾವ ಏರಿಯಾಗೂ ಒಂದು ಹನಿ ನೀರು ಬರೋದಿಲ್ಲ!

ಜೂನ್ 19 ರಿಂದ 20 ರವರೆಗೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ 5ನೇ ಹಂತದ ಕಾಮಗಾರಿ ಹಾಗೂ ವಿದ್ಯುತ್ ನಿರ್ವಹಣೆ ಕಾರಣದಿಂದಾಗಿ ಈ ಸ್ಥಗಿತ ಅನಿವಾರ್ಯವಾಗಿದೆ. ನಾಗರಿಕರು ಮುಂಜಾಗ್ರತೆಯಾಗಿ ನೀರು ಸಂಗ್ರಹಿಸಿಕೊಳ್ಳುವಂತೆ BWSSB ಮನವಿ ಮಾಡಿದೆ.
Read Full Story

03:34 PM (IST) Jun 16

ಡೆಡ್‌ಲೈನ್‌ ನಂತರ ರಿಟರ್ನ್‌ ಫೈಲ್‌ ಮಾಡಿದ್ರೂ ಇನ್ನು ಸಿಗುತ್ತೆ ಐಟಿ ರೀಫಂಡ್‌, ಬದಲಾವಣೆಗೆ ಮುಂದಾದ ಕೇಂದ್ರ!

ಡೆಡ್‌ಲೈನ್‌ ನಂತರ ತೆರಿಗೆದಾರರು ತಮ್ಮ ರಿಟರ್ನ್ಸ್ ಸಲ್ಲಿಸಿದರೆ ಮರುಪಾವತಿಯನ್ನು ನಿರಾಕರಿಸುವ ವಿವಾದಾತ್ಮಕ ನಿಬಂಧನೆ ಈವರೆಗೂ ಜಾರಿಯಲ್ಲಿದೆ ಎಂದು ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

Read Full Story

03:34 PM (IST) Jun 16

ಮೈಸೂರು ಹನಿಟ್ರ್ಯಾಪ್ ದಂಧೆ, ₹10 ಲಕ್ಷ ಸುಲಿಗೆ ಯತ್ನ; ಪೊಲೀಸ್ ಪೇದೆ, ಯುವತಿ ಸೇರಿ ಐವರ ಬಂಧನ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಪೊಲೀಸ್ ಪೇದೆಯೊಬ್ಬ ಹನಿಟ್ರ್ಯಾಪ್‌ನಲ್ಲಿ ಭಾಗಿಯಾಗಿ ವ್ಯಾಪಾರಿಯೊಬ್ಬರಿಂದ ₹10 ಲಕ್ಷ ಸುಲಿಗೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಒಬ್ಬ ಯುವತಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

Read Full Story

02:56 PM (IST) Jun 16

ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸುವ ಪೋಷಕರಿಗೆ ಎಚ್ಚರಿಕೆ! ಕುಡಿದು ಬರ್ತಾರೆ ಚಾಲಕರು

ಬೆಂಗಳೂರಿನಲ್ಲಿ ಶಾಲಾ ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ. ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, 58 ಚಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮಕ್ಕಳ ಸುರಕ್ಷತೆಗೆ ಪೋಷಕರು ಜಾಗೃತಿ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Read Full Story

02:36 PM (IST) Jun 16

ಸಿಎಂ ಸಿದ್ದರಾಮಯ್ಯ ಕಾರಿಗೆ ಅಡ್ಡ ಮಲಗಿ ರೈತನ ಆಕ್ರೋಶ; ಕಾಲಿನಿಂದ ಒದ್ದ ಪೊಲೀಸರು!

ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಕಾರಿಗೆ ರೈತ ಮುಖಂಡ ಬಲ್ಲೂರು ರವಿಕುಮಾರ್ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮನವಿ ಸಲ್ಲಿಸಲು ಅವಕಾಶ ನೀಡದೆ ಅವರ ಮೇಲೆ ಹಲ್ಲೆ ನಡೆಸಿದ್ದಕ್ಕೆ ರೈತ ಮುಖಂಡ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ರೈತರ ಮನವಿ ಸ್ವೀಕರಿಸಿದರು.

Read Full Story

01:19 PM (IST) Jun 16

Plance Crash - ಪಾಪ ಎಂದು ಆ ಲೇಡಿ ಒಳಬಿಟ್ಟಿದ್ದರೆ ಸುಟ್ಟು ಕರಕಲಾಗುತ್ತಿದ್ದೆ! ಪ್ರಾಣ ಉಳಿಸಿಕೊಂಡವಳ ಕಥೆ ಕೇಳಿ..

ಆಯಸ್ಸು ಗಟ್ಟಿಯಿದ್ದರೆ, ವಿಧಿ ಎನ್ನುವುದು ಯಾವುದೋ ರೂಪದಲ್ಲಿ ಬಂದು ಜೀವ ಕಾಪಾಡುತ್ತದೆ ಎನ್ನುವುದಕ್ಕೆ ಮೊನ್ನೆ ನಡೆದ ವಿಮಾನ ದುರಂತದಲ್ಲಿ ಲೇಟಾಗಿ ಬಂದು ವಿಮಾನ ತಪ್ಪಿಸಿಕೊಂಡಿರುವ ಭೂಮಿಯೇ ಸಾಕ್ಷಿ. ಅವರು ಹೇಳಿದ್ದೇನು ಕೇಳಿ...

 

Read Full Story

01:19 PM (IST) Jun 16

ಒಂದು ವರ್ಷ ಕಳೆದ್ರೂ ಜೈಲೇ ಗತಿ, ಮತ್ತೊಮ್ಮೆ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾ*ಚಾರ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಲಾಗಿದೆ. ಐದು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಸಿಲುಕಿದ್ದಾರೆ ಎಂದು  ವಕೀಲರು ವಾದಿಸಿದರು. ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.

Read Full Story

12:59 PM (IST) Jun 16

ಕಲಬುರಗಿ ಜಿಲ್ಲಾ ಕೋರ್ಟ್‌ನಲ್ಲಿ ನ್ಯಾಯಾಧೀಶರಿಗೆ ಹಾರ್ಟ್ ಅಟ್ಯಾಕ್; ಚೇಂಬರ್‌ನಲ್ಲಿದ್ದಾಗಲೇ ಸಾವು!

ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶ ವಿಶ್ವನಾಥ್ ಮುಗುಟಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಚೇಂಬರ್‌ನಲ್ಲಿದ್ದಾಗಲೇ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೇವಲ 15 ದಿನಗಳ ಹಿಂದಷ್ಟೇ ವರ್ಗಾವಣೆಗೊಂಡಿದ್ದರು.

Read Full Story

12:21 PM (IST) Jun 16

ರ‍್ಯಾಪಿಡೋ ಚಾಲಕನಿಂದ ಮಹಿಳೆಗೆ ಹಲ್ಲೆ - NCR ದಾಖಲಿಸಿ ಕೈತೊಳೆದುಕೊಂಡ ಜಯನಗರ ಪೊಲೀಸರು!

ಜಯನಗರದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಚಾಲಕನ ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಪೊಲೀಸರು NCR ದಾಖಲಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

11:33 AM (IST) Jun 16

ಜಾತಿಗಣತಿ ಏಕೆ ಅನುಷ್ಠಾನ ಆಗಲಿಲ್ಲ; ಸತ್ಯಾಂಶ ಬಾಯ್ಬಿಟ್ಟ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ

ಜಾತಿಗಣತಿ ವರದಿ ಬಿಡುಗಡೆಯಾಗದಿರುವುದು ಹಿಂದುಳಿದ ವರ್ಗಗಳಿಗೆ ಹೆಚ್ಚುವರಿ ಶಕ್ತಿ ಮತ್ತು ಮೀಸಲಾತಿ ಹೆಚ್ಚಳದ ಅವಕಾಶ ಕಸಿದಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಪ್ರಬಲ ವರ್ಗದ ವಿರೋಧ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

Read Full Story

10:51 AM (IST) Jun 16

ಮೊದಲನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಯನಾ ನಾಗರಾಜ್… ಪತಿಗಾಗಿ ಬರೆದ್ರು ಪ್ರೇಮದ ಓಲೆ

ಗಿಣಿರಾಮ ಧಾರಾವಾಹಿಯಲ್ಲಿ ನಾಯಕಿ ಮಹತಿಯಾಗಿ ಮಿಂಚಿದ ನಟಿ ನಯನಾ ನಾಗರಾಜ್ ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

Read Full Story

09:22 AM (IST) Jun 16

ಖಂಡ್ರೆಗೆ ನೈತಿಕತೆಯಿದ್ದರೆ ಸಿಎಂ, ಡಿಸಿಎಂಗೆ ರಾಜೀನಾಮೆ ಕೊಡಲು ಹೇಳಲಿ - ಅಶ್ವತ್ಥ್ ನಾರಾಯಣ್

ವಿಮಾನ ದುರಂತದ ಹೊಣೆಹೊತ್ತು ಪ್ರಧಾನಮಂತ್ರಿ ರಾಜೀನಾಮೆ ನೀಡಲಿ ಎಂದು ಹೇಳಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಠಕ್ಕರ್‌ ಕೊಟ್ಟಿರುವ ಮಾಜಿ ಸಚಿವ ಅಶ್ವತ್ಥ್ ನಾರಾಯಣ್‌.

Read Full Story

09:07 AM (IST) Jun 16

Bengaluru - ಮಹಿಳೆ ಖಾಸಗಿ ವಿಡಿಯೋ ಇಟ್ಕೊಂಡು ಕಿರುಕುಳ - ಪ್ರತಿಷ್ಠಿತ ದೇವಾಲಯದ ಅರ್ಚಕ ಅರೆಸ್ಟ್

ಬೆಂಗಳೂರು ಕ್ರೈಂ ನ್ಯೂಸ್: ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ದೇವಾಲಯದ ಅರ್ಚಕನನ್ನು ಬಂಧಿಸಲಾಗಿದೆ. 

Read Full Story

08:44 AM (IST) Jun 16

ಒಂದೇ ದಿನ 2 ಲಕ್ಷ ಭಕ್ತರು - ಮಂತ್ರಾಲಯದಲ್ಲಿ ಭಾನುವಾರ ಭಕ್ತಸಾಗರ

ವಾರದ ರಜೆ ಪರಿಣಾಮ ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾನುವಾರ ಒಂದೇ ದಿನ ಎರಡು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ದಾಖಲೆ ನಿರ್ಮಿಸಿದ್ದಾರೆ.

Read Full Story

More Trending News