ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಸ್ಐಟಿ ರಚಿಸಿ ನಡೆಸಿದ ತನಿಖೆ ಸಂದರ್ಭ ದುಡಿದ ಕಾರ್ಮಿಕರಿಗೆ ವೇತನ, ಜೆಸಿಬಿ ಬಾಡಿಗೆ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಎಸ್ಐಟಿ ತನಿಖೆ ಶುರುವಾಗಿ ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು 17 ಕಡೆಗಳಲ್ಲಿ ಹೊಂಡಗಳನ್ನು ತೋಡಿ ಶೋಧ ನಡೆಸಲಾಗಿತ್ತು. ಒಟ್ಟು ಹತ್ತು ದಿನ ಜೆಸಿಬಿಯಿಂದ ಕೆಲಸ ಮಾಡಲಾಗಿತ್ತು. ಒಟ್ಟು ₹71,500 ಬಿಲ್ ಮಾಡಿ ಕೊಟ್ಟಿದ್ದರು. ಆದರೆ, ಜೆಸಿಬಿ ಬಾಡಿಗೆ ಇನ್ನೂ ಬಂದಿಲ್ಲ.
ದಿನ ನಿತ್ಯ 10-12 ಕಾರ್ಮಿಕರು ಎಸ್ಐಟಿ ತಂಡಕ್ಕೆ ಸಹಾಯವಾಗಿ ದುಡಿಯುತ್ತಿದ್ದರು. ಆದರೆ, ಕಾರ್ಮಿಕರ ಕೂಲಿ ಕೊಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಕಾರ್ಮಿಕರದ್ದು ಒಟ್ಟು ₹80 ಸಾವಿರಕ್ಕೂ ಅಧಿಕ ಹಣ ಕೊಡುವುದು ಬಾಕಿ ಇದೆ. ಇದೀಗ ಕಾರ್ಮಿಕರು ದುಡಿದ ಹಣಕ್ಕಾಗಿ ಅಲೆದಾಡುವಂತಾಗಿದೆ.
ಎಸ್ಐಟಿ ತಂಡಕ್ಕೆ ಕುಳಿತುಕೊಳ್ಳಲು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಇದರ ಬಿಲ್ ಕೂಡ ಬಾಕಿ ಇದೆ. ಹಾರೆ, ಪಿಕಾಸು, ನೀರಿನ ಬಾಟಲಿ, ಕೂಲಿಯಾಳುಗಳನ್ನು ಕರೆ ತಂದ ವಾಹನ ಬಾಡಿಗೆ ಹೀಗೆ ಒಟ್ಟು ₹2 ಲಕ್ಷಕ್ಕೂ ಅಧಿಕ ಬಿಲ್ ಕೊಡಲು ಬಾಕಿ ಇದೆ.
09:31 PM (IST) May 13
ಭೂಮಿಯ ಮೇಲಿನ ಮೊದಲ ಸಸ್ಯ ಯಾವುದು ಅಂತ ಒಂದೇ ಮಾತಲ್ಲಿ ಹೇಳೋಕೆ ಆಗಲ್ಲ. ಇದು ಕೋಟ್ಯಂತರ ವರ್ಷಗಳ ವಿಕಾಸದ ಕಥೆ. ಪ್ರಾಚೀನ ಸಮುದ್ರಗಳಲ್ಲಿ ಶುರುವಾಗಿ, ಇಡೀ ಭೂಮಿಯನ್ನೇ ಬದಲಿಸಿದ ಒಂದು ಪುಟ್ಟ ಸಸ್ಯದ ರೋಚಕ ಜರ್ನಿ ಇದು.. ಯಾವುದು, ಏನ್ ಕತೆ ನೋಡಿ..
08:02 PM (IST) May 13
ಸೂರ್ಯ ಯಾವ ಬಣ್ಣದಲ್ಲಿ ಇರುತ್ತಾನೆ ಎಂದು ಕೇಳಿದ ತಕ್ಷಣ ನಾವೆಲ್ಲ ಹಳದಿ ಅಥವಾ ಕೇಸರಿ ಬಣ್ಣ ಎನ್ನುತ್ತೇವೆ. ಆದರೆ ಸೂರ್ಯನ ನಿಜವಾದ ಬಣ್ಣ ಬಿಳಿ ಎಂಬುದು ನಿಮಗೆ ಗೊತ್ತೇ? ಬಾಹ್ಯಾಕಾಶದಿಂದ ನೋಡಿದರೆ ಸೂರ್ಯ ಹಾಲು ಬಿಳುಪಿನಂತೆ ಕಾಣುತ್ತಾನೆ. ಹಾಗಾದರೆ ಸೂರ್ಯನ ಬಣ್ಣದ ಹಿಂದಿರುವ ಈ ಮ್ಯಾಜಿಕ್ ಏನು?
07:38 PM (IST) May 13
ಭೂಮಿಯ ಹವಾಮಾನವನ್ನು ನಿಯಂತ್ರಿಸುವಲ್ಲಿ ಸಮುದ್ರದ ಪಾತ್ರವೇನು? ಸಮುದ್ರದೊಳಗಿನ ಪೋಷಕಾಂಶಗಳ ಒಂದು ಸೈಕಲ್ ಮತ್ತು ಸಮುದ್ರ ತಳದಲ್ಲಿ ಕಾರ್ಬನ್ ಸಂಗ್ರಹವಾಗುವ ಪ್ರಕ್ರಿಯೆಯು, ಹಿಂದೆ ಸಂಭವಿಸಿದ್ದ 'ಹಿಮಯುಗ'ಗಳಿಗೆ ಹೇಗೆ ಕಾರಣವಾಗಿರಬಹುದು? ಹೊಸ ಸತ್ಯ ಇಲ್ಲಿದೆ ನೋಡಿ...
05:45 PM (IST) May 13
ರೈತರ ಬದುಕು ಹಸನಾಗಿಸಲು ಹೇಮಾವತಿ ನದಿ ನೀರನ್ನು ಹರಿಸುವ ಕೆಲಸ ಮಾಡಿಯೇ ತೀರುತ್ತೇವೆ. ಇದು ನಮ್ಮ ಬಲವಾದ ಸಂಕಲ್ಪ ಈ ನಿಟ್ಟಿನಲ್ಲಿ ಶ್ರಮ ಹಾಕಿ ದುಡಿಯುತ್ತಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
05:35 PM (IST) May 13
ಕೇವಲ 15-20 ದಿನಗಳ ಹಿಂದಷ್ಟೇ ದಿಲೀಪ್ ಅವರನ್ನು ಭೇಟಿಯಾಗಿದ್ದ ಗಣೇಶ್ಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲವಂತೆ. 'ಹೃದಯದ ತಪಾಸಣೆಗೆ ಹೋಗಬೇಕಿದ್ದ ವ್ಯಕ್ತಿ, ಅಲ್ಲಿಗೆ ತಲುಪುವ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದು ವಿಧಿಯ ಕ್ರೂರ ಆಟ ಎನ್ನದೆ ವಿಧಿಯಿಲ್ಲ' ಎನ್ನಲೇಬೇಕು!
05:25 PM (IST) May 13
ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ ಗ್ಯಾರಂಟಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
05:15 PM (IST) May 13
ಸಮಸಮಾಜದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಮಂಗಳ ಗ್ರಹಕ್ಕೆ ಹೋಗಿ ಬಂದರೆ, ₹100ರಿಂದ ₹1000 ಕೋಟಿ ಸಿನೆಮಾಗಳನ್ನು ಮಾಡಿದರೆ ಉತ್ತಮ ಸಮಾಜ(ದೇಶದ ಅಭಿವೃದ್ಧಿ) ಸಾಧ್ಯವಿಲ್ಲ ಎಂದು ಅಹಿಂಸಾ ಚೇತನ್ ಹೇಳಿದರು.
04:28 PM (IST) May 13
ಭಾರತೀಯ ಚಿತ್ರರಂಗದ 'ಅಧಿಪತಿ', ಸ್ಟೈಲ್ ಎನ್ನುವ ಪದಕ್ಕೆ ಹೊಸ ವ್ಯಾಖ್ಯಾನ ಬರೆದ ಸೂಪರ್ ಸ್ಟಾರ್ ರಜನಿಕಾಂತ್ ಕಂಡ್ರೆ ಇಡೀ ವಿಶ್ವವೇ ಎದ್ದು ನಿಲ್ಲುತ್ತೆ. ಆದರೆ, ಈ ಬೆಳ್ಳಿಪರದೆಯ ದೈತ್ಯ ನಟನ ಒಳಗೆ ಒಬ್ಬ ಸಾಧಾರಣ ಬೆಂಗಳೂರಿನ ಹುಡುಗ ಸದಾ ಜೀವಂತವಾಗಿದ್ದಾನೆ ಎಂಬುದಕ್ಕೆ ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದೇ ಸಾಕ್ಷಿ.
04:28 PM (IST) May 13
12:59 PM (IST) May 13
ಪ್ರಧಾನಿ ಮೋದಿ ಮತ್ತು ಬಿ.ಎಸ್. ಯಡಿಯೂರಪ್ಪ ವಿರುದ್ಧ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೀಡಿದ ಹೇಳಿಕೆಯಿಂದಾಗಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ವಾಟಾಳ್ ಅವರನ್ನು ಕಾಂಗ್ರೆಸ್ ಗುಪ್ತ ವಕ್ತಾರ ಎಂದು ಆರೋಪಿಸಿದರು.
12:25 PM (IST) May 13
ಚಿನ್ನದ ಬೆಲೆ ಏರಿಕೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆತಂಕದ ನಡುವೆ ಇದೀಗ ಮದ್ಯಪ್ರಿಯರಿಗೂ ದರ ಏರಿಕೆ ಶಾಕ್ ತಟ್ಟಿದೆ. ರಾಜ್ಯದಲ್ಲಿ ಇಂದಿನಿಂದ ಕೆಲ ಬ್ರ್ಯಾಂಡ್ ಮದ್ಯ ಬೆಲೆ ಏರಿಕೆಯಾಗಿದೆ.
12:06 PM (IST) May 13
ಮಾಡರ್ನ್ ಆಗಿ ಕಾಣುವ ಈ ಸ್ಟಾರ್ ನಟಿ, ದೇವಾಲಯಕ್ಕೆ ಸಾಂಪ್ರದಾಯಿಕ ಕೆಂಪು ಬಣ್ಣದ ಸೀರೆಯನ್ನು ಉಟ್ಟು ಬಂದಿದ್ದರು. ಹೆಗಲಮೇಲೊಂದು ಹಳದಿ ಶಾಲು ಅವರೊಳಗಿದ್ದ ಭಕ್ತಿ ಭಾವಕ್ಕೆ ಸಾಕ್ಷಿ ನುಡಿಯುವಂತಿತ್ತು. ಈ ದೇಸಿ ಲುಕ್ ಕಂಡ ಅಭಿಮಾನಿಗಳು 'ಸೌಂದರ್ಯ ಅಡಗಿರುವುದೇ ಸಂಪ್ರದಾಯದಲ್ಲಿ" ಎನ್ನುತ್ತಿದ್ದಾರೆ.
11:11 AM (IST) May 13
ಹುಬ್ಬಳ್ಳಿಯ ಜೈನ ಮಂದಿರದಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳತನವಾಗಿದೆ, ಮಧ್ಯೆರಾತ್ರಿ ಮಂದಿರಕ್ಕೆ ನುಗ್ಗಿದ ಕಳ್ಳರು, ಬಾಗಿಲು ಮುರಿದು ಸಿಸಿಟಿವಿ ಸೈರನ್ ಕಟ್ ಮಾಡಿ ಮೂರು ಕೆಜಿ ಬೆಳ್ಳಿ ದೋಚಿದ್ದಾರೆ ಸದ್ಯ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
11:06 AM (IST) May 13
Kannada Actor Dileep Raj Death Reason: ನಟ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಇವರ ಸಾವಿನ ಬಗ್ಗೆ ನಟಿ ಸುಷ್ಮಾ ಭಾರದ್ವಾಜ್ ಅವರು ಫೇಸ್ಬುಕ್ ಬರಹ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
10:40 AM (IST) May 13
Actor Dileep Raj: ಹಿಟ್ಲರ್ ಕಲ್ಯಾಣ ಧಾರಾವಾಹಿ ನಟ ದಿಲೀಪ್ ರಾಜ್ ಅವರು ಇಂದು ನೆನಪು. ಸೀರಿಯಲ್, ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಬಗ್ಗೆ ದಿಲೀಪ್ ಪತ್ನಿ ಶ್ರೀವಿದ್ಯಾ ತಂದೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
10:25 AM (IST) May 13
10:20 AM (IST) May 13
Actor Dileep Raj Death: ಹಿಟ್ಲರ್ ಕಲ್ಯಾಣ ಧಾರಾವಾಹಿ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ಇಂದು ( ಮೇ 13) 48ನೇ ವಯಸ್ಸಿಗೆ ನಿಧನರಾಗಿದ್ದಾರೆ. ಇವರ ಸಾವು ನೋಡಿ ಚಿತ್ರರಂಗ, ಜನತೆ ಎಲ್ಲರೂ ಶಾಕ್ ಆಗಿದ್ದಾರೆ. ಇವರ ಲವ್ಸ್ಟೋರಿ, ಮದುವೆ ಬಗ್ಗೆ ಮಾಹಿತಿ ಇಲ್ಲಿದೆ.
10:13 AM (IST) May 13
09:53 AM (IST) May 13
09:51 AM (IST) May 13
ನಟನೆ, ನಿರ್ಮಾಣ ಸೇರಿದಂತೆ ಸಿನಿಮಾ, ಸೀರಿಯಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ನಟ ದಿಲೀಪ್ ರಾಜ್ ನಿಧನಕ್ಕೆ ಕನ್ನಡಿಗರು ಬೆಚ್ಚಿ ಬಿದ್ದಿದ್ದಾರೆ. ಹಿಟ್ಲರ್ ಕಲ್ಯಾಣ ಮೂಲಕ ಮನೆ ಮಾತಾಗಿದ್ದ ದಿಲೀಪ್ ಕೊನೆಯ ಪೋಸ್ಟ್ ವೈರಲ್ ಆಗಿದೆ.
09:24 AM (IST) May 13
ಕಲಘಟಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜೂನ್ 15 ರಿಂದ 24/7 ಕುಡಿಯುವ ನೀರು ಸರಬರಾಜು ಮಾಡುವ ನಿರಂತರ ನೀರು ಯೋಜನೆ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಘೋಷಿಸಿದ್ದಾರೆ.
09:19 AM (IST) May 13
Kannada Actor Dileep Raj Death: ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 48ನೇ ವಯಸ್ಸಿಗೆ ಅವರು ಕೊನೆಯುಸಿರೆಳೆದಿದ್ದು, ಎಲ್ಲರಿಗೂ ಶಾಕ್ ಉಂಟು ಮಾಡಿದೆ.
09:12 AM (IST) May 13
ಬೆಳಗಾವಿಯ ವೆಂಕಟೇಶ ರಾಠೋಡ ಎಂಬುವವರು, ತಾನು ಬದುಕಿರುವಾಗಲೇ ತನ್ನ ಪತ್ನಿಯ ಕುಟುಂಬಸ್ಥರು ಆಕೆಗೆ ಬಲವಂತವಾಗಿ ಮತ್ತೊಂದು ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿಯ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ, ಅವರಿಂದಲೇ ಹಲ್ಲೆಗೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.
08:50 AM (IST) May 13
Actor Dileep Raj: ಹಿಟ್ಲರ್ ಕಲ್ಯಾಣ ಧಾರಾವಾಹಿ ನಟ ದಿಲೀಪ್ ರಾಜ್ ಅವರು ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಈಗ ಇವರು ಧಾರಾವಾಹಿಗಳ ನಿರ್ಮಾಣದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸಿದ್ದರು. ಪತ್ನಿಯ ಪ್ರತಿಭೆ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
08:14 AM (IST) May 13
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ದಿಲೀಪ್ ರಾಜ್ ನಿಧನರಾಗಿದ್ದಾರೆ. ಕನ್ನಡ ಸಿನಿಮಾಗಳ ಜೊತೆಯಲ್ಲಿ ಸೀರಿಯಲ್ಗಳಲ್ಲಿಯೂ ದಿಲೀಪ್ ರಾಜ್ ನಟಿಸಿದ್ದರು. ಝೀ ಕನ್ನಡದ ಹಿಟ್ಲರ್ ಕಲ್ಯಾಣ ಸೀರಿಯಲ್ನಲ್ಲಿ ನಾಯಕ ನಟನಾಗಿ ದಿಲೀಪ್ ರಾಜ್ ನಟಿಸಿದ್ದರು.
07:43 AM (IST) May 13
07:14 AM (IST) May 13
07:00 AM (IST) May 13
ಪ್ರಧಾನಿ ಮೋದಿ ಅವರ ಇಂಧನ ಮಿತಬಳಕೆ ಹೇಳಿಕೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ದೇಶದ ಹಿತದೃಷ್ಟಿಯಿಂದ ನೀಡಿದ ಸಲಹೆಯನ್ನು ಟೀಕಿಸುವ ಮೂಲಕ ಕಾಂಗ್ರೆಸ್ ಸಣ್ಣತನ ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
06:47 AM (IST) May 13