Published : May 13, 2026, 06:33 AM ISTUpdated : May 13, 2026, 09:31 PM IST

Karnataka News Live: ಭೂಮಿಯ ಮೇಲಿನ ಮೊದಲ ಗಿಡ ಇದು.. ಇಡೀ ಗ್ರಹವನ್ನೇ ಬದಲಿಸಿದ ಆ ಕಥೆ ಗೊತ್ತಾ?

ಸಾರಾಂಶ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಸ್‌ಐಟಿ ರಚಿಸಿ ನಡೆಸಿದ ತನಿಖೆ ಸಂದರ್ಭ ದುಡಿದ ಕಾರ್ಮಿಕರಿಗೆ ವೇತನ, ಜೆಸಿಬಿ ಬಾಡಿಗೆ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಎಸ್‌ಐಟಿ ತನಿಖೆ ಶುರುವಾಗಿ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು 17 ಕಡೆಗಳಲ್ಲಿ ಹೊಂಡಗಳನ್ನು ತೋಡಿ ಶೋಧ ನಡೆಸಲಾಗಿತ್ತು. ಒಟ್ಟು ಹತ್ತು ದಿನ ಜೆಸಿಬಿಯಿಂದ ಕೆಲಸ ಮಾಡಲಾಗಿತ್ತು. ಒಟ್ಟು ₹71,500 ಬಿಲ್ ಮಾಡಿ ಕೊಟ್ಟಿದ್ದರು. ಆದರೆ, ಜೆಸಿಬಿ ಬಾಡಿಗೆ ಇನ್ನೂ ಬಂದಿಲ್ಲ.

ದಿನ ನಿತ್ಯ 10-12 ಕಾರ್ಮಿಕರು ಎಸ್‌ಐಟಿ ತಂಡಕ್ಕೆ ಸಹಾಯವಾಗಿ ದುಡಿಯುತ್ತಿದ್ದರು. ಆದರೆ, ಕಾರ್ಮಿಕರ ಕೂಲಿ ಕೊಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಕಾರ್ಮಿಕರದ್ದು ಒಟ್ಟು ₹80 ಸಾವಿರಕ್ಕೂ ಅಧಿಕ ಹಣ ಕೊಡುವುದು ಬಾಕಿ ಇದೆ. ಇದೀಗ ಕಾರ್ಮಿಕರು ದುಡಿದ ಹಣಕ್ಕಾಗಿ ಅಲೆದಾಡುವಂತಾಗಿದೆ.

ಎಸ್‌ಐಟಿ ತಂಡಕ್ಕೆ ಕುಳಿತುಕೊಳ್ಳಲು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಇದರ ಬಿಲ್ ಕೂಡ ಬಾಕಿ ಇದೆ. ಹಾರೆ, ಪಿಕಾಸು, ನೀರಿನ ಬಾಟಲಿ, ಕೂಲಿಯಾಳುಗಳನ್ನು ಕರೆ ತಂದ ವಾಹನ ಬಾಡಿಗೆ ಹೀಗೆ ಒಟ್ಟು ₹2 ಲಕ್ಷಕ್ಕೂ ಅಧಿಕ ಬಿಲ್ ಕೊಡಲು ಬಾಕಿ ಇದೆ.

09:31 PM (IST) May 13

ಭೂಮಿಯ ಮೇಲಿನ ಮೊದಲ ಗಿಡ ಇದು.. ಇಡೀ ಗ್ರಹವನ್ನೇ ಬದಲಿಸಿದ ಆ ಕಥೆ ಗೊತ್ತಾ?

ಭೂಮಿಯ ಮೇಲಿನ ಮೊದಲ ಸಸ್ಯ ಯಾವುದು ಅಂತ ಒಂದೇ ಮಾತಲ್ಲಿ ಹೇಳೋಕೆ ಆಗಲ್ಲ. ಇದು ಕೋಟ್ಯಂತರ ವರ್ಷಗಳ ವಿಕಾಸದ ಕಥೆ. ಪ್ರಾಚೀನ ಸಮುದ್ರಗಳಲ್ಲಿ ಶುರುವಾಗಿ, ಇಡೀ ಭೂಮಿಯನ್ನೇ ಬದಲಿಸಿದ ಒಂದು ಪುಟ್ಟ ಸಸ್ಯದ ರೋಚಕ ಜರ್ನಿ ಇದು.. ಯಾವುದು, ಏನ್ ಕತೆ ನೋಡಿ.. 

Read Full Story

08:02 PM (IST) May 13

ಸೂರ್ಯನ ನಿಜವಾದ ಬಣ್ಣ ಯಾವುದು? ನಮಗೆ ಯಾಕೆ ಹಳದಿ/ಕೇಸರಿ ಬಣ್ಣದಲ್ಲಿ ಕಾಣ್ತಾನೆ?

ಸೂರ್ಯ ಯಾವ ಬಣ್ಣದಲ್ಲಿ ಇರುತ್ತಾನೆ ಎಂದು ಕೇಳಿದ ತಕ್ಷಣ ನಾವೆಲ್ಲ ಹಳದಿ ಅಥವಾ ಕೇಸರಿ ಬಣ್ಣ ಎನ್ನುತ್ತೇವೆ. ಆದರೆ ಸೂರ್ಯನ ನಿಜವಾದ ಬಣ್ಣ ಬಿಳಿ ಎಂಬುದು ನಿಮಗೆ ಗೊತ್ತೇ? ಬಾಹ್ಯಾಕಾಶದಿಂದ ನೋಡಿದರೆ ಸೂರ್ಯ ಹಾಲು ಬಿಳುಪಿನಂತೆ ಕಾಣುತ್ತಾನೆ. ಹಾಗಾದರೆ ಸೂರ್ಯನ ಬಣ್ಣದ ಹಿಂದಿರುವ ಈ ಮ್ಯಾಜಿಕ್ ಏನು?

Read Full Story

07:38 PM (IST) May 13

ಬೇರೆ ಎಲ್ಲಾನೂ ಬಿಟ್ಟಾಕ್ರೀ.. ಮತ್ತೆ ಹಿಮಯುಗ ಶುರುವಾಗುತ್ತಾ? ವಿಜ್ಞಾನಿಗಳೇ ಶಾಕ್ ಆಗಿದಾರೆ, ಮುಂದೇನು?

ಭೂಮಿಯ ಹವಾಮಾನವನ್ನು ನಿಯಂತ್ರಿಸುವಲ್ಲಿ ಸಮುದ್ರದ ಪಾತ್ರವೇನು? ಸಮುದ್ರದೊಳಗಿನ ಪೋಷಕಾಂಶಗಳ ಒಂದು ಸೈಕಲ್ ಮತ್ತು ಸಮುದ್ರ ತಳದಲ್ಲಿ ಕಾರ್ಬನ್ ಸಂಗ್ರಹವಾಗುವ ಪ್ರಕ್ರಿಯೆಯು, ಹಿಂದೆ ಸಂಭವಿಸಿದ್ದ 'ಹಿಮಯುಗ'ಗಳಿಗೆ ಹೇಗೆ ಕಾರಣವಾಗಿರಬಹುದು? ಹೊಸ ಸತ್ಯ ಇಲ್ಲಿದೆ ನೋಡಿ...

Read Full Story

05:45 PM (IST) May 13

ರೈತರ ಬದುಕು ಹಸನಾಗಿಸಲು ಹೇಮಾವತಿ ನೀರು ಹರಿಸಿಯೇ ತೀರುತ್ತೇವೆ - ಶಾಸಕ ಎಚ್.ಸಿ.ಬಾಲಕೃಷ್ಣ

ರೈತರ ಬದುಕು ಹಸನಾಗಿಸಲು ಹೇಮಾವತಿ ನದಿ ನೀರನ್ನು ಹರಿಸುವ ಕೆಲಸ ಮಾಡಿಯೇ ತೀರುತ್ತೇವೆ. ಇದು ನಮ್ಮ ಬಲವಾದ ಸಂಕಲ್ಪ ಈ ನಿಟ್ಟಿನಲ್ಲಿ ಶ್ರಮ ಹಾಕಿ ದುಡಿಯುತ್ತಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

Read Full Story

05:35 PM (IST) May 13

"ಅವನೇ ನಮ್ಮ ತಂಡದಲ್ಲಿ ಮೊದಲು ಹೀರೋ ಆಗಿದ್ದು'.. ಗೆಳೆಯ ದಿಲೀಪ್ ರಾಜ್ ಅಗಲಿಕೆಗೆ 'ಗೋಲ್ಡನ್ ಸ್ಟಾರ್' ಗಣೇಶ್ ಕಣ್ಣೀರು!

ಕೇವಲ 15-20 ದಿನಗಳ ಹಿಂದಷ್ಟೇ ದಿಲೀಪ್ ಅವರನ್ನು ಭೇಟಿಯಾಗಿದ್ದ ಗಣೇಶ್‌ಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲವಂತೆ. 'ಹೃದಯದ ತಪಾಸಣೆಗೆ ಹೋಗಬೇಕಿದ್ದ ವ್ಯಕ್ತಿ, ಅಲ್ಲಿಗೆ ತಲುಪುವ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದು ವಿಧಿಯ ಕ್ರೂರ ಆಟ ಎನ್ನದೆ ವಿಧಿಯಿಲ್ಲ' ಎನ್ನಲೇಬೇಕು!

Read Full Story

05:25 PM (IST) May 13

ಮಹಿಳೆಯರಿಗೆ ಸ್ವಾವಲಂಬನೆ ನೀಡುವುದೇ ದೊಡ್ಡ ಗ್ಯಾರಂಟಿ - ಸಂಸದ ಡಾ.ಕೆ.ಸುಧಾಕರ್

ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ ಗ್ಯಾರಂಟಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

Read Full Story

05:15 PM (IST) May 13

1000 ಕೋಟಿ ಸಿನಿಮಾಗಳಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ - ಚೇತನ್ ಅಹಿಂಸಾ

ಸಮಸಮಾಜದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಮಂಗಳ ಗ್ರಹಕ್ಕೆ ಹೋಗಿ ಬಂದರೆ, ₹100ರಿಂದ ₹1000 ಕೋಟಿ ಸಿನೆಮಾಗಳನ್ನು ಮಾಡಿದರೆ ಉತ್ತಮ ಸಮಾಜ(ದೇಶದ ಅಭಿವೃದ್ಧಿ) ಸಾಧ್ಯವಿಲ್ಲ ಎಂದು ಅಹಿಂಸಾ ಚೇತನ್‌ ಹೇಳಿದರು.

Read Full Story

04:28 PM (IST) May 13

'ಕನ್ನಡ ಮರೆತಿಲ್ಲ, ಟಚ್ ಬಿಟ್ಟುಹೋಗಿದೆ ಅಷ್ಟೇ' ಎಂದ ರಜನಿಕಾಂತ್; ರವಿಶಂಕರ್ ಗುರೂಜಿ ಸತ್ಸಂಗದಲ್ಲಿ 'ತಲೈವಾ' ಮತ್ತೇನು ಹೇಳಿದ್ರು?

ಭಾರತೀಯ ಚಿತ್ರರಂಗದ 'ಅಧಿಪತಿ', ಸ್ಟೈಲ್ ಎನ್ನುವ ಪದಕ್ಕೆ ಹೊಸ ವ್ಯಾಖ್ಯಾನ ಬರೆದ ಸೂಪರ್ ಸ್ಟಾರ್ ರಜನಿಕಾಂತ್ ಕಂಡ್ರೆ ಇಡೀ ವಿಶ್ವವೇ ಎದ್ದು ನಿಲ್ಲುತ್ತೆ. ಆದರೆ, ಈ ಬೆಳ್ಳಿಪರದೆಯ ದೈತ್ಯ ನಟನ ಒಳಗೆ ಒಬ್ಬ ಸಾಧಾರಣ ಬೆಂಗಳೂರಿನ ಹುಡುಗ ಸದಾ ಜೀವಂತವಾಗಿದ್ದಾನೆ ಎಂಬುದಕ್ಕೆ ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದೇ ಸಾಕ್ಷಿ.

Read Full Story

04:28 PM (IST) May 13

ಸ್ಮಾರ್ಟ್​ವಾಚ್​ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್​ ರಾಜ್​? ಮಧ್ಯರಾತ್ರಿ ಆಗಿದ್ದೇನು

ಕಿರುತೆರೆ ಹಾಗೂ ಬೆಳ್ಳಿತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆನೋವು ಕಾಣಿಸಿಕೊಂಡಾಗ ಸ್ಮಾರ್ಟ್‌ವಾಚ್‌ನಲ್ಲಿ ಪರೀಕ್ಷಿಸಿ ನಿರ್ಲಕ್ಷಿಸಿದ್ದರು ಎನ್ನಲಾಗಿದ್ದು, ಇದು ತಂತ್ರಜ್ಞಾನದ ಮೇಲಿನ ಅವಲಂಬನೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

12:59 PM (IST) May 13

ಕನ್ನಡ ಹೋರಾಟಗಾರನೋ? ಕಾಂಗ್ರೆಸ್ ಪಕ್ಷದ ಗುಪ್ತ ವಕ್ತಾರನೋ.? ಮೋದಿ-ಬಿಎಸ್‌ವೈ ವಿರುದ್ಧ ಹೇಳಿಕೆ, ವಾಟಾಳ್‌ಗೆ ಮಂಡ್ಯ ಬಿಜೆಪಿ ಎಚ್ಚರಿಕೆ!

ಪ್ರಧಾನಿ ಮೋದಿ ಮತ್ತು ಬಿ.ಎಸ್. ಯಡಿಯೂರಪ್ಪ ವಿರುದ್ಧ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೀಡಿದ ಹೇಳಿಕೆಯಿಂದಾಗಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ವಾಟಾಳ್ ಅವರನ್ನು ಕಾಂಗ್ರೆಸ್ ಗುಪ್ತ ವಕ್ತಾರ ಎಂದು ಆರೋಪಿಸಿದರು.

Read Full Story

12:25 PM (IST) May 13

ಮದ್ಯಪ್ರಿಯರಿಗೆ ಬೆಲೆ ಏರಿಕೆ ಶಾಕ್ ಕೊಟ್ಟ ರಾಜ್ಯ ಸರ್ಕಾರ, ಇಂದಿನಿಂದ ದರ ಹೆಚ್ಚಳ, ಇಲ್ಲಿದೆ ಲಿಸ್ಟ್

ಚಿನ್ನದ ಬೆಲೆ ಏರಿಕೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆತಂಕದ ನಡುವೆ ಇದೀಗ ಮದ್ಯಪ್ರಿಯರಿಗೂ ದರ ಏರಿಕೆ ಶಾಕ್ ತಟ್ಟಿದೆ. ರಾಜ್ಯದಲ್ಲಿ ಇಂದಿನಿಂದ ಕೆಲ ಬ್ರ್ಯಾಂಡ್ ಮದ್ಯ ಬೆಲೆ ಏರಿಕೆಯಾಗಿದೆ.

Read Full Story

12:06 PM (IST) May 13

ಮಹಾಕಾಳನ ಸನ್ನಿಧಿಗೆ ಬಂದ 'ಆವಂತಿಕಾ'.. 'ದೇವರ ಕರೆ ಬಂದಾಗ ಬಂದೆ' ಎಂದ ಬ್ಯೂಟಿ ಬೊಂಬೆ ತಮನ್ನಾ!

ಮಾಡರ್ನ್ ಆಗಿ ಕಾಣುವ ಈ ಸ್ಟಾರ್ ನಟಿ, ದೇವಾಲಯಕ್ಕೆ ಸಾಂಪ್ರದಾಯಿಕ ಕೆಂಪು ಬಣ್ಣದ ಸೀರೆಯನ್ನು ಉಟ್ಟು ಬಂದಿದ್ದರು. ಹೆಗಲಮೇಲೊಂದು ಹಳದಿ ಶಾಲು ಅವರೊಳಗಿದ್ದ ಭಕ್ತಿ ಭಾವಕ್ಕೆ ಸಾಕ್ಷಿ ನುಡಿಯುವಂತಿತ್ತು. ಈ ದೇಸಿ ಲುಕ್ ಕಂಡ ಅಭಿಮಾನಿಗಳು 'ಸೌಂದರ್ಯ ಅಡಗಿರುವುದೇ ಸಂಪ್ರದಾಯದಲ್ಲಿ" ಎನ್ನುತ್ತಿದ್ದಾರೆ.

Read Full Story

11:11 AM (IST) May 13

ಸೈರನ್ ಬಂದ್.. ಸಿಸಿ ಕ್ಯಾಮೆರಾ ಕಟ್, ಮಧ್ಯರಾತ್ರಿ ಹುಬ್ಬಳ್ಳಿ ಜೈನ ಮಂದಿರ ನುಗ್ಗಿ 3 ಕೆಜಿ ಬೆಳ್ಳಿ ಚಿನ್ನಾಭರಣ ದೋಚಿದ ಖದೀಮರು!

ಹುಬ್ಬಳ್ಳಿಯ ಜೈನ ಮಂದಿರದಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳತನವಾಗಿದೆ, ಮಧ್ಯೆರಾತ್ರಿ ಮಂದಿರಕ್ಕೆ ನುಗ್ಗಿದ ಕಳ್ಳರು, ಬಾಗಿಲು ಮುರಿದು ಸಿಸಿಟಿವಿ ಸೈರನ್ ಕಟ್ ಮಾಡಿ ಮೂರು ಕೆಜಿ ಬೆಳ್ಳಿ ದೋಚಿದ್ದಾರೆ ಸದ್ಯ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Read Full Story

11:06 AM (IST) May 13

Dileep Raj Death - ದಿಲೀಪ್‌ ರಾಜ್‌ ಹೀಗೆ ಹೋದ್ರೆ, ನಿನ್ನನ್ನು ನಂಬಿಕೊಂಡೋರ್‌ ಕಥೆ ಏನೋ! - ಸುಷ್ಮಾ ಭಾರದ್ವಾಜ್

Kannada Actor Dileep Raj Death Reason: ನಟ ದಿಲೀಪ್‌ ರಾಜ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಇವರ ಸಾವಿನ ಬಗ್ಗೆ ನಟಿ ಸುಷ್ಮಾ ಭಾರದ್ವಾಜ್‌ ಅವರು ಫೇಸ್‌ಬುಕ್‌ ಬರಹ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

10:40 AM (IST) May 13

Dileep Raj Death ಆದ್ಮೇಲೂ ನಗುಮುಖದಲ್ಲಿ ಮಲಗಿದಂತೆ ಕಾಣ್ತಿದೆ, ನನ್ನ ಮಗಳು ಹೇಗ್‌ ಇರ್ತಾಳೋ; ಮಾವನ ಕಣ್ಣೀರು

Actor Dileep Raj: ಹಿಟ್ಲರ್‌ ಕಲ್ಯಾಣ ಧಾರಾವಾಹಿ ನಟ ದಿಲೀಪ್‌ ರಾಜ್‌ ಅವರು ಇಂದು ನೆನಪು. ಸೀರಿಯಲ್‌, ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ರಾಜ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಬಗ್ಗೆ ದಿಲೀಪ್‌ ಪತ್ನಿ ಶ್ರೀವಿದ್ಯಾ ತಂದೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

 

Read Full Story

10:25 AM (IST) May 13

ಸಿಲಿಕಾನ್‌ ಸಿಟಿ ಬೆಂಗಳೂರಿಗಿಂತ ಚಿಕ್ಕಮಗಳೂರು ಕಸದ ಶುಲ್ಕವೇ ದುಬಾರಿ; ಯಾಕಿಷ್ಟು ಹೆಚ್ಚು?

ಸಿಲಿಕಾನ್ ಸಿಟಿ ಬೆಂಗಳೂರಿಗಿಂತ ಚಿಕ್ಕಮಗಳೂರಿನಲ್ಲಿ ಕಸ ವಿಲೇವಾರಿ ಶುಲ್ಕ ದುಬಾರಿಯಾಗಿದ್ದು, ನಗರ ಸಭೆಯು ದುಬಾರಿ ಶುಲ್ಕ ವಿಧಿಸುತ್ತಿದೆ. ಆದರೆ, ಹಳೆಯ ವಾಹನಗಳಿಂದಾಗಿ ಪ್ರತಿದಿನ ಕಸ ಸಂಗ್ರಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ, ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
Read Full Story

10:20 AM (IST) May 13

Dileep Raj Death - ಹೊಸ ಮನೆಗೆ ಕಾಲಿಟ್ಟಿದ್ರು..ಬೇಡ ಎಂದ್ರೂ ದಿಲೀಪ್‌ ರಾಜ್‌ರನ್ನೇ ಮದುವೆಯಾಗಿದ್ದ ವಿದ್ಯಾ

Actor Dileep Raj Death: ಹಿಟ್ಲರ್‌ ಕಲ್ಯಾಣ ಧಾರಾವಾಹಿ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್‌ ರಾಜ್‌ ಅವರು ಹೃದಯಾಘಾತದಿಂದ ಇಂದು ( ಮೇ 13) 48ನೇ ವಯಸ್ಸಿಗೆ ನಿಧನರಾಗಿದ್ದಾರೆ. ಇವರ ಸಾವು ನೋಡಿ ಚಿತ್ರರಂಗ, ಜನತೆ ಎಲ್ಲರೂ ಶಾಕ್‌ ಆಗಿದ್ದಾರೆ. ಇವರ ಲವ್‌ಸ್ಟೋರಿ, ಮದುವೆ ಬಗ್ಗೆ ಮಾಹಿತಿ ಇಲ್ಲಿದೆ. 

 

Read Full Story

10:13 AM (IST) May 13

ಶಿವಮೊಗ್ಗ ಜನತೆಯ ಬೇಡಿಕೆ ಈಡೇರಿಕೆ - ಯಶವಂತಪುರ-ತಾಳಗುಪ್ಪ ರೈಲು ಪ್ರಯಾಣಿಕರಿಗೆ ಹ್ಯಾಪಿ ನ್ಯೂಸ್

ಇದುವರೆಗೆ ವಿಶೇಷ ರೈಲಾಗಿದ್ದ ಯಶವಂತಪುರ-ತಾಳಗುಪ್ಪ ರೈಲು (16555/16556) ಈಗ ಕಾಯಂ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಾಗಿ ಸಂಚರಿಸಲಿದೆ. ಈ ಹೊಸ ಸೇವೆಯು ಮೇ 15 ರಿಂದ ಆರಂಭವಾಗಲಿದ್ದು, ಶಿವಮೊಗ್ಗ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೆ ಹಾಗೂ ಸ್ಥಳೀಯ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.
Read Full Story

09:53 AM (IST) May 13

ಸಚಿವ ಡಿ ಸುಧಾಕರ್ ಸಾವಿಗೆ ಬಿಗ್ ಟ್ವಿಸ್ಟ್, ಅನಾರೋಗ್ಯವಾ? ನಿಗೂಢ ಶಕ್ತಿಗಳ ಆಟವಾ? ನಿವಾಸದ ಬಳಿ ತಾಮ್ರದ ಪತ್ರ, ನಿಂಬೆಹಣ್ಣು, ಮಾಂಸದ ತುಂಡು ಪತ್ತೆ!

ಮಾಜಿ ಸಚಿವ ಸುಧಾಕರ್ ಅವರು ಅನಾರೋಗ್ಯದಿಂದ ನಿಧನರಾದರು. ಆದರೆ, ಅವರ ನಿವಾಸದ ಬಳಿ ತಾಮ್ರದ ಪತ್ರ, ನಿಂಬೆಹಣ್ಣುಗಳಂತಹ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದ್ದು, ಇದು ಅವರ ಸಾವಿನ ಕುರಿತು ವಾಮಾಚಾರದ ಶಂಕೆಗಳನ್ನು ಹುಟ್ಟುಹಾಕಿದೆ ಮತ್ತು ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
Read Full Story

09:51 AM (IST) May 13

ಹೃದಯಾಘಾತಕ್ಕೆ ಬಲಿಯಾದ ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್ ಕೊನೆಯ ಪೋಸ್ಟ್ ವೈರಲ್

ನಟನೆ, ನಿರ್ಮಾಣ ಸೇರಿದಂತೆ ಸಿನಿಮಾ, ಸೀರಿಯಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ನಟ ದಿಲೀಪ್ ರಾಜ್ ನಿಧನಕ್ಕೆ ಕನ್ನಡಿಗರು ಬೆಚ್ಚಿ ಬಿದ್ದಿದ್ದಾರೆ. ಹಿಟ್ಲರ್ ಕಲ್ಯಾಣ ಮೂಲಕ ಮನೆ ಮಾತಾಗಿದ್ದ ದಿಲೀಪ್ ಕೊನೆಯ ಪೋಸ್ಟ್ ವೈರಲ್ ಆಗಿದೆ.

Read Full Story

09:24 AM (IST) May 13

ಕಲಘಟಗಿ ಪಟ್ಟಣ ಪಂಚಾಯ್ತಿ ಜನರಿಗೆ ಗುಡ್ ನ್ಯೂಸ್ ಕೊಟ್ರು ಸಂತೋಷ್ ಲಾಡ್; ಜೂ.15ರಂದು ಮಹತ್ವದ ದಿನ

ಕಲಘಟಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜೂನ್ 15 ರಿಂದ 24/7 ಕುಡಿಯುವ ನೀರು ಸರಬರಾಜು ಮಾಡುವ ನಿರಂತರ ನೀರು ಯೋಜನೆ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಘೋಷಿಸಿದ್ದಾರೆ. 

Read Full Story

09:19 AM (IST) May 13

Actor Dileep Raj Death - ‌ ದಿಲೀಪ್‌ ರಾಜ್... ನಿಮ್ಮ ಆಸೆ ಪೂರ್ಣ ಆಗೋದನ್ನು ನೋಡದೆ ಹೋದ್ರಿ - ಶ್ವೇತಾ ಆರ್‌ ಪ್ರಸಾದ್

Kannada Actor Dileep Raj Death: ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ದಿಲೀಪ್‌ ರಾಜ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 48ನೇ ವಯಸ್ಸಿಗೆ ಅವರು ಕೊನೆಯುಸಿರೆಳೆದಿದ್ದು, ಎಲ್ಲರಿಗೂ ಶಾಕ್‌ ಉಂಟು ಮಾಡಿದೆ.

Read Full Story

09:12 AM (IST) May 13

Belagavi - ಗಂಡನಿರುವಾಗಲೇ ಪತ್ನಿಗೆ ಮತ್ತೊಂದು ಮದುವೆಯ ಸಂಚು? ದೂರು ದಾಖಲಿಸಿದ ಪತಿ

ಬೆಳಗಾವಿಯ ವೆಂಕಟೇಶ ರಾಠೋಡ ಎಂಬುವವರು, ತಾನು ಬದುಕಿರುವಾಗಲೇ ತನ್ನ ಪತ್ನಿಯ ಕುಟುಂಬಸ್ಥರು ಆಕೆಗೆ ಬಲವಂತವಾಗಿ ಮತ್ತೊಂದು ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿಯ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ, ಅವರಿಂದಲೇ ಹಲ್ಲೆಗೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.

Read Full Story

08:50 AM (IST) May 13

Dileep Raj Death - ಪತ್ನಿಗೆ ಆ ಟ್ಯಾಲೆಂಟ್‌ ಇರೋದಿಕ್ಕೆ ಸೀರಿಯಲ್‌ ನಿರ್ಮಾಣ ಮಾಡ್ತಿದ್ದೀವಿ ಎಂದಿದ್ದ ದಿಲೀಪ್‌ ರಾಜ್

Actor Dileep Raj: ಹಿಟ್ಲರ್‌ ಕಲ್ಯಾಣ ಧಾರಾವಾಹಿ ನಟ ದಿಲೀಪ್‌ ರಾಜ್‌ ಅವರು ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಈಗ ಇವರು ಧಾರಾವಾಹಿಗಳ ನಿರ್ಮಾಣದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಲವ್‌ ಮಾಕ್ಟೇಲ್‌ ಸಿನಿಮಾದಲ್ಲಿ ನಟಿಸಿದ್ದರು. ಪತ್ನಿಯ ಪ್ರತಿಭೆ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

 

Read Full Story

08:14 AM (IST) May 13

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟನಟ ದಿಲೀಪ್ ರಾಜ್ ನಿಧನ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ದಿಲೀಪ್ ರಾಜ್ ನಿಧನರಾಗಿದ್ದಾರೆ. ಕನ್ನಡ ಸಿನಿಮಾಗಳ ಜೊತೆಯಲ್ಲಿ ಸೀರಿಯಲ್‌ಗಳಲ್ಲಿಯೂ ದಿಲೀಪ್ ರಾಜ್ ನಟಿಸಿದ್ದರು. ಝೀ ಕನ್ನಡದ ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲಿ ನಾಯಕ ನಟನಾಗಿ ದಿಲೀಪ್ ರಾಜ್ ನಟಿಸಿದ್ದರು.

 

Read Full Story

07:43 AM (IST) May 13

ನೀಟ್ ಪರೀಕ್ಷೆ ರದ್ದು ಬೆನ್ನಲ್ಲೇ ರಾಜಕೀಯ ಕದನ! ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸಚಿವರು ವಾಗ್ದಾಳಿ

ನೀಟ್‌ ಪರೀಕ್ಷೆ ರದ್ದುಪಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸಚಿವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪರೀಕ್ಷಾ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಮತ್ತು ಈ ಹಿಂದೆ ಇದ್ದಂತೆ ರಾಜ್ಯಗಳಿಗೇ ಪರೀಕ್ಷೆ ನಡೆಸುವ ಅಧಿಕಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
Read Full Story

07:14 AM (IST) May 13

IMD forecasts - ಈ ವರ್ಷ ಒಂದು ವಾರ ಮೊದಲೇ, ಮೇ 17ಕ್ಕೆ ಅಂಡಮಾನ್‌ಗೆ ಮಾನ್ಸೂನ್‌ ಪ್ರವೇಶ

ಈ ವರ್ಷ ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚಿತವಾಗಿ ಆಗಮಿಸುವ ಸಾಧ್ಯತೆಯಿದೆ. ಯುರೋಪ್‌ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರ, ಮೇ 17ರಂದು ಅಂಡಮಾನ್‌ ಮತ್ತು ಮೇ 25ರ ಸುಮಾರಿಗೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದ್ದು, ದಕ್ಷಿಣ ಭಾರತಕ್ಕೆ ಬಿಸಿಲಿನಿಂದ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.
Read Full Story

07:00 AM (IST) May 13

HD Kumaraswamy - ಇಂಧನ ಮಿತಬಳಕೆ ಕುರಿತು ಮೋದಿ ಹೇಳಿಕೆ ಟೀಕಿಸಿದ ಕಾಂಗ್ರೆಸ್‌ಗೆ ಹೆಚ್‌ಡಿಕೆ ತಿರುಗೇಟು

ಪ್ರಧಾನಿ ಮೋದಿ ಅವರ ಇಂಧನ ಮಿತಬಳಕೆ ಹೇಳಿಕೆಯನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ದೇಶದ ಹಿತದೃಷ್ಟಿಯಿಂದ ನೀಡಿದ ಸಲಹೆಯನ್ನು ಟೀಕಿಸುವ ಮೂಲಕ ಕಾಂಗ್ರೆಸ್ ಸಣ್ಣತನ ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

Read Full Story

06:47 AM (IST) May 13

Bengaluru - ಮನೆಯಲ್ಲಿ ಚಾರ್ಜ್‌ ಹಾಕಿದ್ದಾಗ ಇವಿ ಬೈಕ್‌ ಬ್ಯಾಟರಿ ಸ್ಫೋಟ - ವ್ಯಕ್ತಿ ಸಾವು

ಬೆಂಗಳೂರಿನ ಹಲಸೂರಿನಲ್ಲಿ, ಮನೆಯೊಳಗೆ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಮಧ್ಯರಾತ್ರಿ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ 65 ವರ್ಷದ ಲೂರ್ದ್ ನಾಥನ್ ಎಂಬುವವರು ಸುಟ್ಟಗಾಯಗಳಿಂದ ಮೃತಪಟ್ಟಿದ್ದು, ಬ್ಯಾಟರಿ ಓವರ್‌ಫ್ಲೋನಿಂದ ಸ್ಫೋಟ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
Read Full Story

More Trending News