Published : Mar 10, 2026, 06:45 AM ISTUpdated : Mar 10, 2026, 11:31 PM IST

Karnataka News Live: ಗಂಗಾವತಿಯಲ್ಲಿ ಹಿರಿಯ ವಕೀಲರ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ - ಠಾಣೆಗೆ ಮುತ್ತಿಗೆ ಹಾಕಿದ ವಕೀಲರು

ಸಾರಾಂಶ

ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆಂದು ನಾನು ದೆಹಲಿಗೆ ಬಂದಿಲ್ಲ. ಯಾರದ್ದೋ ಕೈಕಾಲು ಹಿಡಿದು ಬಿಜೆಪಿ ಸೇರಲ್ಲ. ಬಿಜೆಪಿಗೆ ತಗೊಳ್ಳಿ ಅಂತಾ ಯಾರ ಬಳಿಯೂ ಹೋಗಲ್ಲ. ನಾವು ಸ್ವಾಭಿ‌ಮಾನದಿಂದ ಬದುಕಿರೋರು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬಿಜೆಪಿ ಸೇರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭ್ರಷ್ಟ ಕುಟುಂಬದ ನೇತೃತ್ವವನ್ನು ನಾವು ಒಪ್ಪಲ್ಲ. ರಾಜ್ಯದಲ್ಲಿ ಭ್ರಷ್ಟ ಕುಟುಂಬ ಎಲ್ಲಿವರೆಗೆ ಇರುತ್ತೋ, ಅಲ್ಲಿವರೆಗೂ ಬಿಜೆಪಿ ಸೇರುವ ಪ್ರಶ್ನೆ ಉದ್ಭವಿಸಲ್ಲ. ನಾನೇ ಪ್ರಾದೇಶಿಕ ಪಕ್ಷ ಮಾಡ್ತಿನಿ. 2028ಕ್ಕೆ ನಾನೇ ಮುಖ್ಯಮಂತ್ರಿ ಆಗ್ತಿನಿ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು. ಮಗನ ಮದುವೆ ನಿಮಿತ್ತ ದೆಹಲಿಗೆ ಬಂದಿದ್ದೇನೆ. ಕೆಲವು ಹಳೆಯ ಸ್ನೇಹಿತರ ಭೇಟಿಗೆ ಬಂದಿದ್ದೇನೆ. ಯಾವ ಬಿಜೆಪಿ ನಾಯಕರನ್ನೂ ಭೇಟಿ ಮಾಡಲ್ಲ, ಪಕ್ಷ ಸೇರುವ ಬಗ್ಗೆ ಚರ್ಚೆ ಮಾಡಲ್ಲ ಎಂದರು.

senior advocate assulted by muslim youth in Gangavati

11:31 PM (IST) Mar 10

ಗಂಗಾವತಿಯಲ್ಲಿ ಹಿರಿಯ ವಕೀಲರ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ - ಠಾಣೆಗೆ ಮುತ್ತಿಗೆ ಹಾಕಿದ ವಕೀಲರು

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವುದನ್ನು ಪ್ರಶ್ನಿಸಿದ್ದಕ್ಕೆ ಹಿರಿಯ ನ್ಯಾಯವಾದಿ ಪ್ರಭಾಕರ್ ಮತ್ತು ಅವರ ಪತ್ನಿ ಮೇಲೆ ಜುಬೇರ್ ಎಂಬ ಯುವಕ ಹಲ್ಲೆ ಮಾಡಿದ್ದಾನೆ. ಈ ಘಟನೆಯನ್ನು ಖಂಡಿಸಿ ವಕೀಲರು ಮತ್ತು ಸಾರ್ವಜನಿಕರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

Read Full Story

11:30 PM (IST) Mar 10

ಬಡವರ ಆಶ್ರಯ ಮನೆಗಳಿಗೆ ಹಣ ಇಲ್ಲ - ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಎಲ್ಲಾ ಕೊಳೆಗಳನ್ನು ಒರೆಸಿ ಬಿಸಾಕಿದ ಯಾವುದೇ ಉಪಯೋಗಕ್ಕೆ ಬಾರದ ವೆಸ್ಟ್ ಅನ್ನು ಒಟ್ಟಿಗೆ ಸೇರಿ ಕೌದಿ ರೂಪದಲ್ಲಿ ಹೊಲೆದ ಹಾಗೆ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

Read Full Story

10:54 PM (IST) Mar 10

ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ - ಸಚಿವ ಮಧು ಬಂಗಾರಪ್ಪ

ಆಯವ್ಯಯದಲ್ಲಿ ಘೋಷಿಸಿದಂತೆ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Read Full Story

10:49 PM (IST) Mar 10

ಬಿಎಸ್ಎನ್ಎಲ್ ನೇಮಕಾತಿ 2026 - 120 ಅಧಿಕಾರಿಗಳ ಅರ್ಜಿ ಆಹ್ವಾನ, 50 ಸಾವಿರಕ್ಕೂ ಹೆಚ್ಚು ವೇತನ!

ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ (BSNL) 2026ನೇ ಸಾಲಿನ ನೇಮಕಾತಿಗಾಗಿ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಲೇಖನದಲ್ಲಿ ವಿದ್ಯಾರ್ಹತೆ, ವಯೋಮಿತಿ, ವೇತನ, ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ನೀಡಲಾಗಿದೆ.
Read Full Story

10:38 PM (IST) Mar 10

ದಿ ಗರ್ಲ್‌ಫ್ರೆಂಡ್‌ ಸಿನಿಮಾದಂತೆ ರಿಯಲ್ ಲೈಫ್‌ನಲ್ಲೂ ರಶ್ಮಿಕಾ ಅನುಭವಿಸಿದ್ದು ನರಕಯಾತನೆ! ಬೆಚ್ಚಿಬೀಳಿಸುತ್ತೆ ತಾಯಿ ಬಿಚ್ಚಿಟ್ಟ ರಹಸ್ಯ!

ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ, ಮಗಳ ಬ್ರೇಕಪ್ ಕುರಿತು ಮಾತನಾಡಿದ್ದಾರೆ. ಆ ನಟ ರಶ್ಮಿಕಾ ಬೆಳವಣಿಗೆಯನ್ನು ಸಹಿಸದೆ, 'ಗೀತಾ ಗೋವಿಂದಂ' ಚಿತ್ರದ ಬಳಿಕ ವೃತ್ತಿಜೀವನವನ್ನೇ ಅಂತ್ಯಗೊಳಿಸಲು ಒತ್ತಡ ಹೇರಿದ್ದ ಮತ್ತು ಆತನ ಪೊಸೆಸಿವ್‌ನೆಸ್‌ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. 

Read Full Story

10:33 PM (IST) Mar 10

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕಲ್ಲಿನ ಕ್ವಾರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಹೊಲ, ದನದ ಕೊಟ್ಟಿಗೆ ಮತ್ತು ಮರಗಳಿಗೆ ಹಾನಿಯಾಗಿದೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Read Full Story

10:22 PM (IST) Mar 10

ಕರ್ನಾಟಕದ ವಿಶಿಷ್ಟ ಹೆರಿಟೇಜ್ ವಿಲೇಜ್ ಮ್ಯೂಸಿಯಂ, ಈ ಮಾಯಾಲೋಕದಲ್ಲಿದೆ 100 ವರ್ಷಗಳ ಹಿಂದಿನ ಜಗತ್ತು!

ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್, ದಕ್ಷಿಣ ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಪ್ರದರ್ಶಿಸುವ ಒಂದು ವಿಶಿಷ್ಟ ತೆರೆದ ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ 1 ಶತಮಾನಕ್ಕೂ ಹಳೆಯದಾದ ಸಾಂಪ್ರದಾಯಿಕ ಮನೆಗಳು, ದೇವಾಲಯಗಳನ್ನು ಪುನರ್ ನಿರ್ಮಿಸಿ, ಆ ಕಾಲದ ಜೀವನಶೈಲಿ ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ.

Read Full Story

10:21 PM (IST) Mar 10

ಇಂದು ದಕ್ಷ KAS ಅಧಿಕಾರಿಯಾಗಿರೋ 'ಸಿಲ್ಲಿ ಲಲ್ಲಿ' ಧಾರಾವಾಹಿ ಗೋವಿಂದ ಪಾತ್ರಧಾರಿ! 25 ಸಲ ವರ್ಗಾವಣೆ ಆಯ್ತು!

Silli Lalli Kannada Serial Govinda Real Name: ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಕಾಂಪೌಂಡರ್‌ ಗೋವಿಂದನ ಪಾತ್ರದಲ್ಲಿ ನಕ್ಕು ನಗಿಸಿದ್ದ ಸಂಗಪ್ಪ ಉಪಾಸೆ ಅವರು ಇಂದು ಸರ್ಕಾರಿ ಕೆಲಸದಲ್ಲಿದ್ದಾರೆ. ಸಿನಿಮಾದಲ್ಲಿ ಇವರಿಗೆ ಸಂಗಮೇಶ್‌ ಎಂದು ಕರೆಯಲಾಗುವುದಂತೆ.

 

Read Full Story

09:38 PM (IST) Mar 10

ದಾವಣಗೆರೆ ಉಪಚುನಾವಣೆ ಟಿಕೆಟ್ ಹೈಕಮಾಂಡ್ ನಿರ್ಧಾರ - ಸಚಿವ ಜಮೀರ್‌ ಅಹಮದ್‌ ತಿರುಗೇಟು

ಟಿಕೆಟ್‌ ನೀಡಬೇಕೆಂಬುದನ್ನು ನಾನೂ ನಿರ್ಧರಿಸಲಾಗಲ್ಲ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರೂ ನಿರ್ಧರಿಸಲಾಗುವುದಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ಸಚಿವ ಜಮೀರ್‌ ಅಹಮದ್‌ ತಿರುಗೇಟು ನೀಡಿದ್ದಾರೆ.

Read Full Story

09:20 PM (IST) Mar 10

ಎಐ ತಿಳಿದಿದ್ದರೆ ಹೊಸಬರಿಗೆ ಎಚ್‌ಸಿಎಲ್ ಬಂಪರ್ ಸಂಬಳ, 18 ರಿಂದ 22 ಲಕ್ಷ ರೂವರೆಗೆ ಪ್ಯಾಕೇಜ್ ಆಫರ್!

ಪ್ರಮುಖ ಐಟಿ ಸಂಸ್ಥೆ ಎಚ್‌ಸಿಎಲ್ ಟೆಕ್, ಕೃತಕ ಬುದ್ಧಿಮತ್ತೆ (AI) ಮತ್ತು ಸಂಬಂಧಿತ ಕೌಶಲ್ಯಗಳನ್ನು ಹೊಂದಿರುವ ಹೊಸಬರಿಗೆ ವಾರ್ಷಿಕ ವೇತನವನ್ನು 18 ರಿಂದ 22 ಲಕ್ಷ ರೂ.ಗೆ ಹೆಚ್ಚಿಸಿದೆ. 'ಎಲೈಟ್ ಕ್ಯಾಡರ್' ಎಂದು ಕರೆಯಲ್ಪಡುವ ಈ ವಿಶೇಷ ನೇಮಕಾತಿ ತಂತ್ರವು, ಉನ್ನತ ಪ್ರತಿಭೆಗಳನ್ನು ಆಕರ್ಷಿಸುವ ಗುರಿ ಹೊಂದಿದೆ. ಇನ್ಫೋಸಿಸ್‌ನಂತಹ ಇತರ ಕಂಪನಿಗಳು ಕೂಡ ಇದೇ ದಾರಿಯಲ್ಲಿ ಸಾಗುತ್ತಿವೆ.
Read Full Story

09:04 PM (IST) Mar 10

'ಸಿನಿಮಾ ಮಾಡಲ್ಲ ಅಂತಾ ಟ್ವೀಟ್‌ ಮಾಡು..' ಅನುಮಾನಕ್ಕೆ ಬಲಿಯಾಯ್ತು ಪ್ರೀತಿ, ರಶ್ಮಿಕಾ ಮಂದಣ್ಣ ತಾಯಿಯ ಆಡಿಯೋ ಬಾಂಬ್‌!

ರಶ್ಮಿಕಾ ಮಂದಣ್ಣ ಬ್ರೇಕಪ್‌ಗೆ ಅವರೇ ಕಾರಣವೆಂದು ಈ ಹಿಂದೆ ದೂಷಿಸಲಾಗಿತ್ತು. ಆದರೆ, ಇದೀಗ ಅವರ ತಾಯಿಯದ್ದು ಎನ್ನಲಾದ ಆಡಿಯೋವೊಂದು, ನಟನ ಅನುಮಾನ ಮತ್ತು ಸರ್ವಾಧಿಕಾರಿ ಮನಸ್ಥಿತಿಯೇ ಸಂಬಂಧ ಮುರಿಯಲು ಕಾರಣ ಎಂದು ಬಹಿರಂಗಪಡಿಸಿದೆ.

Read Full Story

08:56 PM (IST) Mar 10

ಕೊಲ್ಲಿ ಸಂಕಷ್ಟ - ಕುವೈತ್‌ನಲ್ಲಿ ಶೃಂಗೇರಿಯ ತಾಯಿ-ಮಗಳ ಪರದಾಟ, 7 ತಿಂಗಳ ಗರ್ಭಿಣಿ ಮಹಿಳೆಯ ಸುರಕ್ಷಿತ ವಾಪಸ್ಸಿಗೆ ಮನವಿ

ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧ ಪರಿಸ್ಥಿತಿಯಿಂದಾಗಿ ವಿಮಾನ ಸಂಚಾರ ವ್ಯತ್ಯಯಗೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಏಳು ತಿಂಗಳ ಗರ್ಭಿಣಿ ಮತ್ತು ಅವರ ಮಗಳು ಕುವೈತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅವರ ಕುಟುಂಬವು ಕೇಂದ್ರ ಸರ್ಕಾರದ ಸಹಾಯವನ್ನು ಕೋರಿದೆ.
Read Full Story

07:51 PM (IST) Mar 10

ವಿಡಿಯೋ ಹಾಕಿ ಮೂರೇ ಗಂಟೆಗಳಲ್ಲಿ Bigg Boss ರಘುಗೆ ಬಂದೇ ಬಿಟ್ಟು ಯುಟ್ಯೂಬ್​ ದುಡ್ಡು! ಸಿಕ್ಕಿತು ಬೆಳ್ಳಿ ಬಟನ್​

ಬಿಗ್​ಬಾಸ್​ ಖ್ಯಾತಿಯ ಮ್ಯೂಟಂಟ್​ ರಘು ತಮ್ಮ ದಶಕಗಳ ಕನಸಾಗಿದ್ದ 'ಮ್ಯೂಟೆಂಟ್​ ಶೆಫ್'​ ಯುಟ್ಯೂಬ್​ ಚಾನೆಲ್ ಆರಂಭಿಸಿದ್ದಾರೆ. ಈ ಚಾನೆಲ್, ವಿಡಿಯೋ ಹಾಕಿದ ಮೂರೇ ಗಂಟೆಗಳಲ್ಲಿ ಮಾನಿಟೈಸ್​ ಆಗಿದ್ದು, ಕೆಲವೇ ವಾರಗಳಲ್ಲಿ ಒಂದು ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಪಡೆದು ಸಿಲ್ವರ್​ ಬಟನ್​ ಗಳಿಸಿದೆ.
Read Full Story

07:50 PM (IST) Mar 10

ಆನ್‌ಲೈನ್ ಕಿರುಕುಳ ಪ್ರಕರಣ - ಕಟಕಟೆಯಲ್ಲಿ ನಿಂತ ನಟಿ ರಮ್ಯಾ, ಇದು ನನ್ನ ವೈಯಕ್ತಿಕ ಉದ್ದೇಶಕ್ಕಾಗಿ ಅಲ್ಲ ಎಂದ್ರು!

ನಟಿ ರಮ್ಯಾ ಅವರು ತಮಗೆ ಬಂದ ಅಶ್ಲೀಲ ಸಂದೇಶ ಮತ್ತು ಬೆದರಿಕೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಇದು ವೈಯಕ್ತಿಕ ಹೋರಾಟವಲ್ಲ, ಬದಲಿಗೆ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಈ ಪ್ರಕರಣವನ್ನು ಮುಂದುವರಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 12 ಆರೋಪಿಗಳ ವಿರುದ್ಧದ ಈ ಪ್ರಕರಣದ ವಿಚಾರಣೆ ಆರಂಭವಾಗಿದೆ.
Read Full Story

06:58 PM (IST) Mar 10

ದೋಸೆಗೆ ಕೇಡುಗಾಲ, ಸ್ಯಾಂಡ್‌ವಿಚ್‌ಗೆ ಶುಭಕಾಲ - LPG ಕೊರತೆಯಿಂದ ಬೆಂಗಳೂರು ರೆಸ್ಟೋರೆಂಟ್‌ಗಳಲ್ಲಿ ಬದಲಾದ ಮೆನು!

ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಬೆಂಗಳೂರಿನ ಹೋಟೆಲ್‌ಗಳು ತೀವ್ರ ಅಡುಗೆ ಅನಿಲದ ಕೊರತೆ ಎದುರಿಸುತ್ತಿವೆ. ಈ ಬಿಕ್ಕಟ್ಟಿನಿಂದಾಗಿ, ಹಲವು ಹೋಟೆಲ್‌ಗಳು ಸೌದೆ ಒಲೆಗಳನ್ನು ಬಳಸುತ್ತಿದ್ದು, ದೋಸೆಯಂತಹ ಖಾದ್ಯಗಳನ್ನು ಮೆನುವಿನಿಂದ ತೆಗೆದುಹಾಕುತ್ತಿವೆ ಮತ್ತು ಹೋಟೆಲ್‌ಗಳನ್ನು ಮುಚ್ಚುವ ಹಂತಕ್ಕೆ ತಲುಪಿವೆ.
Read Full Story

05:43 PM (IST) Mar 10

ಕರ್ನಾಟಕ ಸರ್ಕಾರಿ ವೈದ್ಯರ ಬೇಡಿಕೆಗಳಿಗೆ ಸರ್ಕಾರದ ತಾತ್ವಿಕ ಒಪ್ಪಿಗೆ, ಸಂಧಾನ ಸಭೆ ಯಶಸ್ವಿ, ಒಪಿಡಿ ಸೇವೆ ಬಂದ್?

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ವೈದ್ಯಾಧಿಕಾರಿಗಳು ಮುಷ್ಕರಕ್ಕೆ ಸಜ್ಜಾಗಿದ್ದರು. ಸರ್ಕಾರದೊಂದಿಗೆ ನಡೆದ ಸಂಧಾನ ಸಭೆಯಲ್ಲಿ, ಕೆಲವು ಬೇಡಿಕೆಗಳಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಉಳಿದವುಗಳನ್ನು ಕಾಲಮಿತಿಯೊಳಗೆ ಈಡೇರಿಸುವ ಭರವಸೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಮುಷ್ಕರದ ಕುರಿತು ವೈದ್ಯರ ಸಂಘ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
Read Full Story

05:04 PM (IST) Mar 10

ಬರ್ತ್‌ಡೇ ಪಾರ್ಟಿ ಮಾಡ್ಬೇಕು, ಒಂದು ದಿನಕ್ಕೆ ಕಿಂಗ್‌ಫಿಶರ್‌ ಟವರ್‌ ಬಾಡಿಗೆಗೆ ನೀಡಿ ಎಂದು ಮಲ್ಯಗೆ ಕೇಳಿದ ಉದ್ಯಮಿ!

ಬೆಂಗಳೂರಿನ ಸ್ಟಾರ್ಟ್‌ಅಪ್ ಉದ್ಯಮಿಯೊಬ್ಬರು ತಮ್ಮ ಹುಟ್ಟುಹಬ್ಬದ ಪಾರ್ಟಿಗಾಗಿ ವಿಜಯ್ ಮಲ್ಯರ ಕಿಂಗ್‌ಫಿಶರ್ ಟವರ್ಸ್ ಪೆಂಟ್‌ಹೌಸ್‌ ಅನ್ನು ಒಂದು ರಾತ್ರಿ ಬಾಡಿಗೆಗೆ ಕೇಳಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಕಳೆದ 10 ವರ್ಷಗಳಿಂದ ಖಾಲಿ ಬಿದ್ದಿರುವ ಈ ಐಷಾರಾಮಿ ಬಂಗಲೆಯು ಸದ್ಯಕ್ಕೆ ಅಪೂರ್ಣವಾಗಿದೆ.

Read Full Story

05:01 PM (IST) Mar 10

ಜೈಲಿನಲ್ಲಿರೋ ಅಮ್ಮನ ಬಿಟ್ಟುಬಂದು ಒಂಟಿಯಾಗಿರೋ ರಾಣಿಗೆ Bigg Boss ಗಿಲ್ಲಿ ನಟನ ಸಾಥ್​!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿಯು, ಜೈಲಿನಲ್ಲಿರುವ ತಾಯಿಯಿಂದ ಬೇರ್ಪಟ್ಟ ಮಗುವಿನ ಕಣ್ಣೀರಿನ ಕಥೆಯಾಗಿದೆ. ಆರು ವರ್ಷಗಳ ನಂತರ ಜೈಲಿನಿಂದ ಹೊರಬಂದ ರಾಣಿಯ ಒಂಟಿ ಪಯಣ ಮತ್ತು ಅವಳ ತಂದೆಯೇ ಖಳನಾಯಕನಾಗಿರುವ ಈ ಕಥೆಯು ತೆಲುಗಿನ 'ಚಿನ್ನಿ' ಧಾರಾವಾಹಿಯ ರಿಮೇಕ್ ಆಗಿದೆ.
Read Full Story

04:41 PM (IST) Mar 10

ಮೂರು ವರ್ಷದ ಮಗು ಜೊತೆ ಆಟೋ ಓಡಿಸೋ ಮಹಿಳೆ, ಬಿಟ್ಟ ಗಂಡನಿಗೆ ಇರಲಿ ಧಿಕ್ಕಾರ

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಟೋ ಚಾಲಕಿ ಪಕ್ಕದಲ್ಲೊಂದು ಪುಟಾಣಿ ಸೀಟ್ ಇದೆ. ಮೂರು ವರ್ಷದ ಮಗುವೊಂದು ಇಡೀ ದಿನ ಅಮ್ಮನ ಜೊತೆ ಕುಳಿತು ಆಟೋ ಪ್ರಯಾಣ ಬೆಳೆಸ್ತಾಳೆ. ಕಾರಣ ಏನು ಗೊತ್ತಾ?

 

Read Full Story

04:40 PM (IST) Mar 10

ಅಷ್ಟಿದ್ಮೇಲೆ ನೀವು ಮಕ್ಕಳ ಎದುರು ಯಾಕೆ ಸೀರಿಯಲ್​​ ನೋಡ್ತೀರಾ? ನಟಿ ಅಮೃತಾ ರಾಮಮೂರ್ತಿ ಗರಂ

ಸೀರಿಯಲ್‌ಗಳು ಮನೆ ಹಾಳು ಮಾಡುತ್ತವೆ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಸಾಮಾನ್ಯ ಆರೋಪಗಳಿಗೆ ನಟಿ ಅಮೃತಾ ರಾಮಮೂರ್ತಿ ಪ್ರತಿಕ್ರಿಯಿಸಿದ್ದಾರೆ.  ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಾದರೆ ಅವರ ಮುಂದೆ ಯಾಕೆ ನೋಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

Read Full Story

04:25 PM (IST) Mar 10

ಕರ್ನಾಟಕದ ಪ್ರತೀ ಜಿಲ್ಲೆಗಳಲ್ಲೂ LPG ಗ್ಯಾಸ್ ಸಿಲಿಂಡರ್ ಕೊರತೆ - ಹೋಟೆಲ್ ಮುಚ್ಚಲು ನಿರ್ಧರಿಸಿದ ಮಾಲೀಕರು!

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದೆ. ಇದರಿಂದಾಗಿ ಹೋಟೆಲ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಿಲಿಂಡರ್ ಪೂರೈಕೆ ಆಗದಿದ್ದರೆ ಹೋಟೆಲ್‌ಗಳನ್ನು ಬಂದ್ ಮಾಡುವ ಆತಂಕ ಎದುರಾಗಿದೆ.
Read Full Story

04:17 PM (IST) Mar 10

ಯುಎಸ್ ಕಾನ್ಸಲ್ ಜನರಲ್ ಆಗಿ ಚೆನ್ನೈನ ಮರಿಯಾನಾ ನೈಶುಲರ್‌ ಅಧಿಕಾರ ಸ್ವೀಕಾರ

ಮರಿಯಾನಾ ಎಲ್. ನೈಶುಲರ್ ಅವರು ಮಾರ್ಚ್ 2ರಂದು ಚೆನ್ನೈನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್‌ನ ಅಧಿಕಾರ ವಹಿಸಿಕೊಂಡರು. ಅಧಿಕಾರ ಸ್ವೀಕರಿಸಿದ ನಂತರ ಜನರಲ್‌ ನೈಶುಲರ್‌ ಮಾತನಾಡಿದರು.

Read Full Story

03:38 PM (IST) Mar 10

ಬೆಂಗಳೂರು - ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನಾಪ್ ಹಾಗೂ ಮರ್ಡರ್ ಪ್ರಕರಣ, ಮೃತನ ಸಂಬಂಧಿ ಅರೆಸ್ಟ್

ಆನೇಕಲ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅವರ ಶವ ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಈ ಸುಪಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತನ ಸಂಬಂಧಿ ಹಾಗೂ ಬ್ಯುಸಿನೆಸ್ ಪಾರ್ಟ್ನರ್ ಮೋಹನ್ ಬಾಬುವನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Read Full Story

03:37 PM (IST) Mar 10

ದೇಶದಲ್ಲಿ ಗ್ಯಾಸ್‌ ಸಿಲಿಂಡರ್ ಕೊರತೆ ಇಲ್ಲ, ಅಭಾವದ ಹಿಂದಿನ ಅಸಲಿ ಸತ್ಯ..!

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಸುದ್ದಿ ಕೇವಲ ಊಹಾಪೋಹವಾಗಿದ್ದು, 'ಡೊಮೆಸ್ಟಿಕ್' ಪದದ ಬಳಕೆಯಲ್ಲಿನ ಗೊಂದಲದಿಂದ ಇದು ಸೃಷ್ಟಿಯಾಗಿದೆ. ಈ ಗೊಂದಲದಿಂದಾಗಿ ಜನರು ವಿಪರೀತ ಖರೀದಿಗೆ ಮುಂದಾಗಿ ಕೃತಕ ಅಭಾವಕ್ಕೆ ಕಾರಣರಾಗಿದ್ದಾರೆ. 

Read Full Story

02:52 PM (IST) Mar 10

OTT Release This Week - ಒಟಿಟಿಗೆ ಬಂದ ಒಂದಕ್ಕಿಂತ ಒಂದು ರೋಚಕ ಸಿನಿಮಾಗಳು; ಕುರ್ಚಿ ತುತ್ತ ತುದಿಗೆ ಕೂರಿಸುತ್ತೆ

Netflix Top 10 Movies: ನೆಟ್‌ಫ್ಲಿಕ್ಸ್‌ನಲ್ಲಿ ಭಾರತದಾದ್ಯಂತ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ. ಮೊದಲ ಸ್ಥಾನದಲ್ಲಿ ಒಂದು ಸೆನ್ಸೇಶನಲ್‌ ಸಿನಿಮಾವಿದ್ದರೆ , ಟಾಪ್ 10 ಪಟ್ಟಿಯಲ್ಲಿ ತೆಲುಗಿನ ಕಾಮಿಡಿ ಸಿನಿಮಾವೊಂದು ಧೂಳೆಬ್ಬಿಸುತ್ತಿದೆ. ಆ ಸಿನಿಮಾಗಳು ಯಾವುವು ನೋಡೋಣ.

 

Read Full Story

02:49 PM (IST) Mar 10

Bengaluru - ಜಕ್ಕೂರು ವಿಲ್ಲಾ ಪಾರ್ಟಿ; ಗೋವಾದಿಂದ ಎಕ್ಸ್‌ಟೆಸಿ ಮಾತ್ರೆ ತರ್ತಿದ್ರು ನಿಖಿಲ್-ಡಿಕ್ಸನ್

ಬೆಂಗಳೂರಿನ ಜಕ್ಕೂರು ವಿಲ್ಲಾ ಪಾರ್ಟಿ ಪ್ರಕರಣದಲ್ಲಿ, ನಿಖಿಲ್ ಮತ್ತು ಡಿಕ್ಸನ್ ಗ್ಯಾಂಗ್ ಕಾಲೇಜು ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದರು. ಪಾರ್ಟಿಗೆ ಕರೆದು, ಡ್ರಿಂಕ್ಸ್‌ನಲ್ಲಿ ನಶೆ ಮಾತ್ರೆ ಬೆರೆಸಿ ಅತ್ಯಾ*-ಚಾರ ನಡೆಸಿ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.

Read Full Story

02:40 PM (IST) Mar 10

ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ತುರ್ತು ಪತ್ರ; ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆ ನೀಗಿಸಲು ಮನವಿ!

ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Read Full Story

02:18 PM (IST) Mar 10

ಗೆಳತಿ, ಸ್ನೇಹಿತರ ಮುಂದೆ ಯುವಕನಿಗೆ ಥಳಿಸಿದ್ದಾಗಿ ಅಪ್ರಾಪ್ತ ಬಾಲಕನ ಬಿಲ್ಡಪ್‌ - ಪ್ರಶ್ನಿಸಿದ್ದಕ್ಕೆ ಹದಿಹರೆಯದ ಯುವಕನ ಕೊಲೆ

ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ, ಗೆಳತಿ ಹಾಗೂ ಸ್ನೇಹಿತರ ಮುಂದೆ ತಾನು ಯುವಕನಿಗೆ ಥಳಿಸಿದ್ದಾಗಿ ಬಿಲ್ಡಪ್ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕನೊಬ್ಬ 19 ವರ್ಷದ ಯುವಕನನ್ನು ಕೊಲೆ ಮಾಡಿದ್ದಾನೆ. ಹೋಳಿ ಹಬ್ಬದ ವೇಳೆ ನಡೆದ ಸಣ್ಣ ಗಲಾಟೆಯ ಬಳಿಕ ಈ ಘಟನೆ ನಡೆದಿದೆ.

Read Full Story

02:15 PM (IST) Mar 10

ಮಳಿಯಾಳಿ ಕ್ಯೂಟ್​​ ಲುಕ್​ನಲ್ಲಿ Meghana Raj - ಹೊಸ ಅಧ್ಯಾಯಕ್ಕೆ ಮುನ್ನುಡಿ? ಅಭಿನಂದನೆಗಳ ಮಹಾಪೂರ

ನಟಿ ಮೇಘನಾ ರಾಜ್ ಅವರು ಮಳಿಯಾಳಿ ವಧುವಿನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿವೆ. ಪತಿ ಚಿರು ನಿಧನದ ನಂತರ ಸಿಂಗಲ್ ಮದರ್ ಆಗಿ ಮಗನನ್ನು ನೋಡಿಕೊಳ್ಳುತ್ತಿರುವ ಅವರು, ಈ ಹಿಂದೆ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದರು. ಇದೀಗ ಅವರ ಈ ಹೊಸ ರೂಪವು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
Read Full Story

01:42 PM (IST) Mar 10

ವಿಧಾನಸೌಧದ ಸಿಬ್ಬಂದಿ, ನಂತರ ಪಿಎಸ್‌ಐ, ಈಗ ಯುಪಿಎಸ್‌ಸಿ ಸಾಧಕ! ರೈತನ ಮಗನ ಛಲಕ್ಕೆ ಪೊಲೀಸ್ ಕಮಿಷನರ್ ಫಿದಾ!

ಕೋಲಾರದ ರೈತನ ಮಗನಾದ ಸಾಗರ್, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಆಗಿ ಕರ್ತವ್ಯ ನಿರ್ವಹಿಸುತ್ತಲೇ ಯುಪಿಎಸ್‌ಸಿಯಲ್ಲಿ 641ನೇ ರ್ಯಾಂಕ್ ಪಡೆದಿದ್ದಾರೆ. ವಿಧಾನಸೌಧದ ಸಿಬ್ಬಂದಿಯಾಗಿ ವೃತ್ತಿ ಆರಂಭಿಸಿ, ಇದೀಗ ಐಪಿಎಸ್/ಐಆರ್‌ಎಸ್ ಅಧಿಕಾರಿಯಾಗುವ ಮೂಲಕ ಸಾವಿರಾರು ಯುವಕರಿಗೆ ಸ್ಪೂರ್ತಿದಾಯಕವಾಗಿದೆ.

Read Full Story

01:21 PM (IST) Mar 10

Karna Serial - ಈ ಲವ್​ ಸಹವಾಸ ಸಾಕಪ್ಪಾ! ಮರ ಏರಿ ಪೇಚಿನಲ್ಲಿ ರಿಯಾ- ನಟಿಯ ಅಸಲಿ ಸ್ಟೋರಿ ಕೇಳಿ

'ಕರ್ಣ' ಧಾರಾವಾಹಿಯಲ್ಲಿ ರಿಯಾ ಮತ್ತು ಸಂಜಯ್ ನಡುವೆ ಹೊಸ ಪ್ರೇಮಕಥೆ ಶುರುವಾಗಿದೆ. ಈ ರಿಯಾ ಪಾತ್ರಧಾರಿ ಅಂಕಿತಾ ಜಯರಾಮ್, ಮರವೇರುವ ದೃಶ್ಯದ ಚಿತ್ರೀಕರಣದ ಹಿಂದಿನ ಕಷ್ಟವನ್ನು ಹಂಚಿಕೊಂಡಿದ್ದು, ಅವರ ನಟನಾ ಪಯಣದ ಬಗ್ಗೆಯೂ ಈ ಲೇಖನ ಬೆಳಕು ಚೆಲ್ಲುತ್ತದೆ.
Read Full Story

01:15 PM (IST) Mar 10

ಮದುವೆಗೆ ಸಂಬಳ, ಆಸ್ತಿ, ಅಂದ-ಚೆಂದ ಬೇಡ; ಆ ರೀತಿ ಇದ್ರೆ ಕಾಂಟ್ಯಾಕ್ಟ್‌ ಮಾಡಿ; ಹುಡುಗಿ ಡಿಮ್ಯಾಂಡ್‌ಗೆ ದಂಗಾದ ಜನರು

ಇಂದು ಎಷ್ಟೋ ಹುಡುಗರಿಗೆ ಮದುವೆಗೆ ಹೆಣ್ಣೇ ಸಿಗ್ತಿಲ್ಲ. ಅದರಲ್ಲೂ ರೈತರಿಗೆ ಹೆಣ್ಣು ಸಿಗೋದು ಕಷ್ಟ ಆಗಿದೆ. ಈ ಮಧ್ಯೆ ಕೆಲ ಹುಡುಗಿಯರು ಅಂಕಲ್‌ಗಳನ್ನು ಮದುವೆಯಾದರು, ದುಡ್ಡಿಗೋಸ್ಕರ ಎಂಥೆಂಥವರನ್ನೋ ಮದುವೆಯಾದರು ಎಂದು ಗಂಡು ಮಕ್ಕಳು ಸೋಶಿಯಲ್‌ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಲೇ ಇರುತ್ತಾರೆ.

 

Read Full Story

01:11 PM (IST) Mar 10

ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ 62 ಜನರು ಪ್ರಯಾಣಿಸುತ್ತಿದ್ದ ಕೆಕೆಆರ್‌ಟಿಸಿ ಬಸ್

ಕೂಡ್ಲಿಗಿ ಹೊರವಲಯದಲ್ಲಿ, ಬೈಕ್‌ಗೆ ದಾರಿ ಬಿಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕೆಕೆಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಚಾಲಕ, ನಿರ್ವಾಹಕ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಒಟ್ಟು 62 ಮಂದಿ ಪ್ರಯಾಣಿಸುತ್ತಿದ್ದರು.

Read Full Story

01:06 PM (IST) Mar 10

ನೀವು ವರದಿ ಮಾಡುವಂತೆಯೇ ನಾನು ಕಾಯುತ್ತಾ ಕುಳಿತ್ತಿರುವೆ - ಡಿಕೆಶಿ

ದೆಹಲಿಗೆ ಬಂದರೆ ನಾನು ಎಲ್ಲ ನಾಯಕರನ್ನೂ ಭೇಟಿ ಮಾಡುತ್ತೇನೆ. ಆದರೆ, ಯಾರನ್ನು ಭೇಟಿ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Read Full Story

12:40 PM (IST) Mar 10

LPG Gas ಕೊರತೆ ಅಂತ ಗಾಬರಿಯಾದ್ರಾ? ಅಸಲಿ ಸತ್ಯ ಬೇರೆ ಇದೆ! ಕರಾಳ ದಂಧೆಗೆ ಮೋಸ ಹೋಗ್ಬೇಡಿ!

LPG Gas ಕೊರತೆ ಆಗಲಿದೆ ಎಂದು ಒಂದಿಷ್ಟು ವಿಷಯಗಳು ಹಬ್ಬುತ್ತಿವೆ. ಎಲ್‌ಪಿಜಿ ಹೇಗೆ ಬಳಕೆ ಆಗುವುದು? ಇದಕ್ಕೆ ಕಾರಣ ಏನು? ಇಲ್ಲಿರುವ ಗೊಂದಲ ಏನು ಎಂದು ಈ ವಿಚಾರವಾಗಿ ಕೃಷ್ಣ ಭಟ್‌ ಎನ್ನುವವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಸಮಗ್ರ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

12:36 PM (IST) Mar 10

ದಾವಣಗೆರೆ - ಹಿಂದೂ ಮುಸ್ಲಿಂ ಪ್ರೇಮ - ತುಂಗಭದ್ರಾ ನದಿಗೆ ಹಾರಿದ ಜೋಡಿ

ದಾವಣಗೆರೆಯ ಹೊನ್ನಾಳಿಯಲ್ಲಿ, ವಿಭಿನ್ನ ಸಮುದಾಯದ ಪ್ರೇಮಿಗಳಾದ ಸಿಂಚನ ಮತ್ತು ಸಮೀರ್, ಪೋಷಕರ ವಿರೋಧದಿಂದಾಗಿ ತುಂಗಭದ್ರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದರು. ಈಜಿ ನದಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
Read Full Story

11:30 AM (IST) Mar 10

ಕೆಎಂಎಫ್ ಚುಕ್ಕಾಣಿ ಯಾರಿಗೆ? ರಂಗೇರಿದ ಅಧ್ಯಕ್ಷೀಯ ಕದನ

ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಅಧ್ಯಕ್ಷ ಸ್ಥಾನದ ಚುನಾವಣೆ ಮಾರ್ಚ್ ಅಂತ್ಯದೊಳಗೆ ನಡೆಯುವ ಸಾಧ್ಯತೆಯಿದೆ. ಡಿ.ಕೆ.ಸುರೇಶ್, ಕೆ.ವೈ.ನಂಜೇಗೌಡ ಮತ್ತು ರಾಘವೇಂದ್ರ ಹಿಟ್ನಾಳ್ ಪ್ರಮುಖ ಆಕಾಂಕ್ಷಿಗಳಾಗಿದ್ದು, ಒಮ್ಮತದ ಕೊರತೆಯಿಂದ ಚುನಾವಣೆ ಮುಂದೂಡಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
Read Full Story

11:30 AM (IST) Mar 10

ಹಾಯ್, ಹೆಲೋ ಅಂತಾಳೆ, ಲಾಡ್ಜ್‌ಗೆ ಕರೀತಾಳೆ; ಸ್ನಾನ ಮಾಡಿ ಅಂತ ಬಟ್ಟೆ ಬಿಚ್ಚಸ್ತಾಳೆ!

ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತರನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ದೀಪಾ ಅವಟಗಿ ಎಂಬ ಫ್ಯಾಶನ್ ಡಿಸೈನರ್‌ನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ತನ್ನ ಗೆಳೆಯ ಶಿವಾನಂದ್ ಜೊತೆ ಸೇರಿ ಉದ್ಯಮಿಗಳನ್ನು ಲಾಡ್ಜ್‌ಗೆ ಕರೆಸಿ, ಅವರ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದಳು.

Read Full Story

10:41 AM (IST) Mar 10

ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವು - ಐಸಿಯುಗೆ ದಾಖಲಿಸುವುದಾಗಿ ಶವಗಾರಕ್ಕೆ ಶಿಫ್ಟ್ ಮಾಡಿದ ಆರೋಪ

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ 28 ವರ್ಷದ ಶಿಲ್ಪಾ ಎಂಬ ಬಾಣಂತಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ.

Read Full Story

10:21 AM (IST) Mar 10

ಅದೊಂದು ಫೋಟೋದಿಂದಾಗಿ ಜನರ ನಿಂದನೆ ಕೇಳಿದ ನಟಿ ಸಾಯಿ ಪಲ್ಲವಿ - ಈ ಸತ್ಯ ಬಯಲು!

Ramayana Movie: ಬಹಳ ನಿರೀಕ್ಷೆ ಹುಟ್ಟಿಸಿರುವ 'ರಾಮಾಯಣ' ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ.

 

Read Full Story

More Trending News