ತನಿಖಾ ಕೇಂದ್ರವಾಗಬೇಕಿದ್ದ ಲೋಕಾಯುಕ್ತ ದೇವಸ್ಥಾನವಾಯ್ತಾ?

Jul 25, 2018, 2:52 PM IST

ಬೆಂಗಳೂರು(ಜು.25): ಇದು ಲೋಕಾಯುಕ್ತ ಕಚೇರಿನಾ ಅಥವಾ ಭಜನಾ ಮಂಡಳಿಯೋ ಗೊತ್ತಿಲ್ಲ. ಕಾರಣ ಲೋಕಾಯುಕ್ತ ಕಚೇರಿನಲ್ಲಿ ತನಿಖೆ ನಡೆಯಬೇಕು ಬೇಕು. ಭ್ರಷ್ಟಾಚಾರದ ಬಗ್ಗೆ  ಹಗರಣದ ಬಗ್ಗೆ ಮಾತುಕತೆ ನಡೆಯಬೇಕು. ಆದರೆ ಲೋಕಾಯುಕ್ತ ಕಚೇರಿನಲ್ಲಿ ದೇವರನಾಮ ಪಠನೆ, ಭಜನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಲೋಕಾಯುಕ್ತ ಕಚೇರಿಯ ಐದನೇ ಮಹಡಿಯಲ್ಲಿ ಮಹಿಳಾ ಸಿಬ್ಬಂದಿ ಕೆಲಸ ಮಾಡೋದು ಬಿಟ್ಟು  ಭಜನೆ ಮಾಡಲು ಶುರು ಮಾಡಿಕೊಂಡಿದ್ದಾರೆ. ಕಚೇರಿಯಲ್ಲಿ  ಮಧ್ಯಾಹ್ನ ಊಟದ ಸಮಯ ಹಾಗೂ ಸಂಜೆ ವೇಳೆ ದೇವರ ಭಜನೆ ನಡೆಯುತ್ತಿದೆ.  ಇನ್ನು, ಗ್ರೌಂಡ್ ಫ್ಲೋರ್‌ನಲ್ಲಿ ದೇವರ ಫೋಟೊ ಇಟ್ಟು ಪೂಜೆ ಮಾಡಿ ನಂತರ ಭಜನೆ ಕೂಡ ಮಾಡಿದ್ದಾರೆ.  

ಲೊಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿಯವರಿಗೆ ಚಾಕು ಇರಿತದ ಬಳಿಕ ಬದಲಾಯ್ತಾ ಲೋಕಾಯುಕ್ತ ಅನ್ನೊ ಪ್ರಶ್ನೆ ಕಾಡುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..