Feb 18, 2019, 5:56 PM IST
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು ನಡೆದ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ನಿವೃತ್ತ ಮೇಜರ್ ಜನರಲ್ ಜಿ.ಡಿ. ಭಕ್ಷಿ, ಘಟನೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯನ್ನು ಹೊಣೆಗಾರರನ್ನಾಗಿಸಿದ್ದಾರೆ. ಆದಿಲ್ ಅಹಮದ್ ದಾರ್ ಒಂದು ದಾಳ ಮಾತ್ರ, ಈಂಥ ಯುವಕರನ್ನು ಬಳಸುವವರು ಮಸೂದ್ ಅಜರ್ನಂಥ ಹೇಡಿಗಳು ಎಂದ ಜನರಲ್ ಭಕ್ಷಿ, ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆಯನ್ನು ಕೂಡಾ ಕೊಟ್ಟಿದ್ದಾರೆ. ಜೊತೆಗೆ ಕಮಲ್ ಹಾಸನ್ ಹಾಗೂ ಅಫ್ಜಲ್ ಗುರು ಸಮರ್ಥಕರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಭಾಷಣೆಯ ಫುಲ್ ವಿಡಿಯೋ ಇಲ್ಲಿದೆ...