ಮಂಡ್ಯ: ಪಕ್ಷಭೇದ ಮರೆತು ಬಾಲಕರ ನೆರವಿಗೆ ಧಾವಿಸಿದ ಶಾಸಕ; ಇದು ಬಿಗ್ 3 ಇಂಪ್ಯಾಕ್ಟ್

Jun 28, 2018, 8:24 PM IST

ಮಾಧ್ಯಮ ಇತಿಹಾಸದಲ್ಲೇ ಎಂದೂ ಕೇಳರಿಯದ ಪರಿಹಾರ ಪತ್ರಿಕೋದ್ಯಮದ ಮಾದರಿಯನ್ನು ಸುವರ್ಣನ್ಯೂಸ್ ಆರಂಭಿಸಿದೆ. ‘ಬಿಗ್ 3‘ ಎಂಬ ಈ ಅಭಿಯಾನದಲ್ಲಿ ವರ್ಷಾನುಗಟ್ಟಲೆಯಿಂದ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸುವಂತಹ ಪ್ರಯತ್ನ ನಡೆಸಲಾಗುತ್ತದೆ. ಸುವರ್ಣನ್ಯೂಸ್‌ನ ಈ ವಿನೂತನ ಪ್ರಯೋಗಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಕೆಲವು ನಿಮಿಷಗಳಲ್ಲೇ ಪರಿಹಾರ ಸಿಕ್ಕಿದೆ. 

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್‌ ಪಕ್ಷದ ಸಭೆಗೆ ತಯಾರಿ ನಡೆಸುತ್ತಿದ್ದ ವೇಳೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಗ್ಯಾಸ್ ಬಲೂನ್ ಸ್ಫೋಟಗೊಂಡು ಇಬ್ಬರು ಬಾಲಕರು ಗಾಯಗೊಂಡಿದ್ದರು. ಪರಿಹಾರ ನೀಡುತ್ತೇವೆ ಎಂದು ಹೇಳಿ ಹೋದವರ ಪತ್ತೆಯಿಲ್ಲ! ಈ ವಿಷಯ ‘ಬಿಗ್ 3’ಯಲ್ಲಿ ಪ್ರಸಾರವಾದ ಬೆನ್ನಲ್ಲೇ ಏನಾಯಿತು ನೋಡೋಣ ಈ ವಿಡಿಯೋನಲ್ಲಿ....