Published : Mar 20, 2026, 06:59 AM ISTUpdated : Mar 20, 2026, 10:45 PM IST

Karnataka News Live: ಕಾಂಗ್ರೆಸ್‌ನಿಂದ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಿ - ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ

ಸಾರಾಂಶ

ಯುಗಾದಿ ಹಬ್ಬವನ್ನು ರಾಜ್ಯದಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ. ಇಂದು ಹೊಸತಡಕು ಹಬ್ಬದ ಹಿನ್ನಲೆಯಲ್ಲಿ ಮಾಂಸದ ಅಂಗಡಿಗಳ ಮುಂದೆ ಮಾಂಸಪ್ರಿಯರು ಕ್ಯೂನಿಂತು ಖರೀದಿಸುತ್ತಿದ್ದಾರೆ. ಬೆಂಗಲೂರಿನ ಬಹುತೇಕ ಮಾಂಸದ ಅಂಗಡಿಗಳ ಮುಂದೆ ಬೆಳಗ್ಗೆ 4 ಗಂಟೆಯಿಂದಲೇ ಜನ ಸೇರಿದ್ದಾರೆ. ಜನಪ್ರಿಯ ಬ್ಯಾಟರಾಯನಪುರ ಪಾಪಣ್ಣ ಮಟನ್ ಸ್ಟಾಲ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಮತ್ತೊಂದೆಡೆ ದಾವಣೆಗರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆ ಕಾವು ಏರತೊಡಗಿದೆ. ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಕಸರತ್ತು ತೀವ್ರಗೊಂಡಿದೆ. ಇಂದಿನ ಕ್ಷಣ ಕ್ಷಣದ ಲೈವ್ ಅಪ್‌ಡೇಟ್ ಇಲ್ಲಿದೆ.

SS Mallikarjun

10:45 PM (IST) Mar 20

ಕಾಂಗ್ರೆಸ್‌ನಿಂದ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಿ - ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ

ಬಿಜೆಪಿಯಿಂದ ಟಿಕೆಟ್ ಘೋಷಣೆಯಾಗಿದೆ. ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದರು.

Read Full Story

09:44 PM (IST) Mar 20

ಬಿಎಂಟಿಸಿ ಬಸ್ ಟಿಕೆಟ್ - ಡೈನಾಮಿಕ್ QR-ಆಧಾರಿತ UPI ಟಿಕೆಟಿಂಗ್ ವ್ಯವಸ್ಥೆ ಪ್ರಾಯೋಗಿಕ ಆರಂಭ

ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) 'ಚಲೋ' ಸಹಯೋಗದೊಂದಿಗೆ ಡೈನಾಮಿಕ್ QR-ಆಧಾರಿತ UPI ಟಿಕೆಟಿಂಗ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಈ ಹೊಸ ವ್ಯವಸ್ಥೆಯು ಪ್ರತಿ ಟಿಕೆಟ್‌ಗೆ ಕಂಡಕ್ಟರ್ ಯಂತ್ರದಿಂದಲೇ ವಿಶಿಷ್ಟ QR ಕೋಡ್ ಸೃಷ್ಟಿಸಿ, ಪಾವತಿಯನ್ನು ಪಾರದರ್ಶಕ ಮತ್ತು ಸುಲಭವಾಗಿಸುತ್ತದೆ. ವಂಚನೆ ತಡೆಗಟ್ಟುವಿಕೆ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Read Full Story

09:31 PM (IST) Mar 20

10 ಲಕ್ಷ ಕೋಟಿ ರೂ ಒಡೆಯ ಬಿಲ್‌ ಗೇಟ್ಸ್‌ನಿಂದ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಆಯ್ತಾ? ಕಂಪೆನಿ HR ಏನಂದ್ರು?

Karnataka hailstorm truth: ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಆಲಿಕಲ್ಲು ಮಳೆ ಆಯ್ತು. ಇದಕ್ಕೆ ಬಿಲ್‌ಗೇಟ್ಸ್‌ ಕಾರಣ ಎಂಬ ಪೋಸ್ಟ್‌ ವೈರಲ್‌ ಆಯ್ತು. ಈ ಬಗ್ಗೆ ಖಾಸಗಿ ಕಂಪೆನಿ ಎಚ್‌ಆರ್‌ ಸಂಕೇತ್‌ ರಾಮಕೃಷ್ಣಮೂರ್ತಿ ಅವರು ಫೇಸ್‌ಬುಕ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

Read Full Story

09:11 PM (IST) Mar 20

ಬರೋ ಸೊಸೆ ನಿಮ್‌ ಬುರುಡೆ ಒಡೆಯುತ್ತಾಳೆ - ಆರ್ಯವರ್ಧನ್‌ ಗುರೂಜಿ ಮಾತಿಗೆ ಹುಲಿಕಲ್‌ ನಟರಾಜ್‌ ತರಾಟೆ

Bigg Boss ಕನ್ನಡ ಶೋನಲ್ಲಿ ಭಾಗವಹಿಸಿದ್ದ, ಜ್ಯೋತಿಷಿ ಆರ್ಯವರ್ಧನ್‌ ಗುರೂಜಿ ಟಿವಿ ಮಾಧ್ಯಮದಲ್ಲಿ ಭವಿಷ್ಯ ಹೇಳುತ್ತಾರೆ. ಆರ್ಯವರ್ಧನ್‌ ಗುರೂಜಿ, ಮಹಿಳೆಯೋರ್ವರ ಮಗನ ಜೊತೆ ಮಾತನಾಡಿ, ಬರೋ ಸೊಸೆ ಏನು ಮಾಡುತ್ತಾಳೆ ಎಂದು ಹೇಳಿದ್ದರು. ಇದನ್ನು ನೋಡಿ ಹುಲಿಕಲ್‌ ನಟರಾಜ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

 

Read Full Story

09:06 PM (IST) Mar 20

Night Routine - ರಾತ್ರಿ ಈ ಕೆಲ್ಸ ಮಾಡಿದ್ರೆ ಸಾಕು, ನಿಮ್ಮ ಲೈಫೇ ಚೇಂಜ್ ಆಗುತ್ತೆ!

ನಮ್ಮ ದೈನಂದಿನ ಜೀವನದ ಮೇಲೆ ರಾತ್ರಿ ಹೊತ್ತು ದೊಡ್ಡ ಪ್ರಭಾವ ಬೀರುತ್ತೆ ಅಂತ ತಜ್ಞರು ಹೇಳ್ತಾರೆ. ಮಲಗೋಕೆ ಮುಂಚೆ ನಾವು ಮಾಡುವ ಸಣ್ಣಪುಟ್ಟ ಅಭ್ಯಾಸಗಳು ನಮ್ಮ ದೈಹಿಕ, ಮಾನಸಿಕ ಆರೋಗ್ಯ ಅಷ್ಟೇ ಅಲ್ಲ, ನಮ್ಮ ಯಶಸ್ಸಿನ ಮೇಲೂ ಪರಿಣಾಮ ಬೀರುತ್ತವಂತೆ.

Read Full Story

08:14 PM (IST) Mar 20

ಶೇ‌.50 ಮಹಿಳಾ ಮೀಸಲಾತಿ ಮಸೂದೆ ಅನುಮೋದಿಸಲಿ - ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯ

ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

Read Full Story

07:31 PM (IST) Mar 20

ಮದುವೆ, ಡಿವೋರ್ಸ್​ ಬಗ್ಗೆ ರಾಜ್​ ಬಿ.ಶೆಟ್ಟಿ ಓಪನ್​ ಮಾತು - ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ!

ನಟ ರಾಜ್ ಬಿ. ಶೆಟ್ಟಿ ಅವರು  ಮದುವೆ ಮತ್ತು ಡಿವೋರ್ಸ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹೊಂದಾಣಿಕೆ ಇಲ್ಲದಿದ್ದರೆ ಡಿವೋರ್ಸ್ ಪಡೆಯುವುದು ತಪ್ಪಲ್ಲ ಎಂಬ ಅವರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

Read Full Story

06:34 PM (IST) Mar 20

ಭಟ್ಕಳ - ರಸ್ತೆಯಲ್ಲೇ ರಂಜಾನ್ ಪ್ರಾರ್ಥನೆ ಸಲ್ಲಿಸಿದ ಸಾವಿರಾರು ಮುಸ್ಲಿಮರು!

ರಂಜಾನ್ ಹಬ್ಬದ ಪ್ರಯುಕ್ತ ಭಟ್ಕಳದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದಿತ್ತು. ಮೈದಾನದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ನೂರಾರು ಜನರು ಅನಿವಾರ್ಯವಾಗಿ ಮೈದಾನದ ಹೊರಗಿನ ರಸ್ತೆಯಲ್ಲೇ ಸಾಲಾಗಿ ನಿಂತು ನಮಾಜ್ ಮಾಡಿದರು.
Read Full Story

06:10 PM (IST) Mar 20

Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಮದುವೆ ಸುದ್ದಿಯ ನಡುವೆ, ನಟ ರಕ್ಷಿತ್ ಶೆಟ್ಟಿ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ತಮ್ಮಿಬ್ಬರ ಸಂಬಂಧ ಮುರಿದುಬಿದ್ದ ಬಗ್ಗೆ ಮಾತನಾಡಿದ್ದ ರಕ್ಷಿತ್, ರಶ್ಮಿಕಾರಿಂದ ಒಂದು ಪಾಠ ಕಲಿತಿದ್ದೇನೆ ಮತ್ತು ಅದಕ್ಕೆ ಅವರನ್ನು ದೂಷಿಸುವುದಿಲ್ಲ ಎಂದು ಹೇಳಿದ್ದರು.
Read Full Story

05:31 PM (IST) Mar 20

ಗೋಲ್ಡ್‌, ಕಾರ್‌, ಮನೆ ಹೇಗೆ ಬಂತು? ಕೊನೆಗೂ Youtube Income ಬಿಚ್ಚಿಟ್ಟ ನಿಖಿಲ್‌, ನಿಶಾ, ಮಧು ಗೌಡ

Kannada Youtuber Nikhil Ravindra Income: ಯುಟ್ಯೂಬರ್‌ ನಿಖಿಲ್‌ ರವೀಂದ್ರ-ನಿಶಾ, ಮಧು ಗೌಡ ಅವರು ಯುಟ್ಯೂಬ್‌ ವಿಡಿಯೋದಿಂದಲೇ ಪದೇ ಪದೇ ಮನೆ ಮಾಡ್ತಾರೆ, ಗೋಲ್ಡ್‌, ಕಾರ್‌ ತಗೊಳ್ತಾರೆ ಎಂಬ ಮಾತಿತ್ತು. ಈಗ ಈ ಬಗ್ಗೆ ನಿಶಾ ಮಾತನಾಡಿದ್ದು, ಯುಟ್ಯೂಬ್‌ ಆದಾಯ ಎಷ್ಟು ಎಂದು ರಿವೀಲ್‌ ಮಾಡಿದ್ದಾರೆ.

 

Read Full Story

05:26 PM (IST) Mar 20

ಸಿಲಿಂಡರ್ ಅಭಾವಕ್ಕೆ ಪ್ರಧಾನಿ ಮೋದಿ-ಟ್ರಂಪ್ ಸ್ನೇಹವೇ ಕಾರಣ - ಸಚಿವ ಬೋಸರಾಜು ಆರೋಪ

ದೇಶದಲ್ಲಿ ಸಿಲಿಂಡರ್ ಅಭಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಆತ್ಮೀಯ ಸ್ನೇಹವೇ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಸಚಿವ ಎನ್ ಎಸ್ ಬೋಸರಾಜು ಅವರು ಹೇಳಿದರು.

Read Full Story

04:56 PM (IST) Mar 20

Muguthi Malli Serial - ಶ್ರೀಮಂತ ಹುಡುಗನನ್ನು ಕಂಡ್ರೆ ಉರಿದು ಬೀಳೋ ಮಲ್ಲಿ; ಹಸಿವು ನೋಡದ ವಿರಾಜ್‌ ಮಧ್ಯೆ ಲವ್

Muguthi Malli Serial: ಯುಗಾದಿ ಅಂದ್ರೆ ಹೊಸತನ. ಯುಗಾದಿಯ ಶುಭ ದಿನ ಅದು ʼಸನ್‌ ಉದಯʼವಾಗಿ ಬದಲಾಗಿದೆ. ಹೊಸ ಹೊಸ ಕಾರ್ಯಕ್ರಮಗಳೂ ರೆಡಿಯಾಗ್ತಿವೆ. ಇದರ ಮೊದಲ ಹೆಜ್ಜೆಯೇ ಮುಂದಿನ ಸೋಮವಾರ, ಅಂದ್ರೆ ಮಾರ್ಚ್‌ 23ಕ್ಕೆ ರಾತ್ರಿ 8 ಗಂಟೆಗೆ ಶುರುವಾಗೋ “ಮೂಗುತಿ ಮಲ್ಲಿ." ಇದೊಂದು ಲವ್‌ ಸ್ಟೋರಿ.

 

Read Full Story

04:11 PM (IST) Mar 20

ಹನಿಮೂನ್​ ಲ್ಯಾಂಡ್​ನಲ್ಲಿ ಸಮುದ್ರಕ್ಕೆ ಧುಮುಕಿದ Nivedita Gowda! ಚಪ್ಪಲಿ ಫೋಟೋ- ನಟಿ ಹೇಳಿದ್ದೇನು?

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ವಿಚ್ಛೇದನದ ನಂತರ ಆರ್ಥಿಕವಾಗಿ ಸದೃಢರಾಗಲು ಐಟಂ ಸಾಂಗ್ ಮಾಡಲು ಸಿದ್ಧ ಎಂದಿದ್ದಾರೆ. ಇತ್ತೀಚೆಗೆ ಸಮುದ್ರಕ್ಕೆ ಜಿಗಿದು ಮಾಡಿದ ರೀಲ್ಸ್ ವೈರಲ್ ಆಗಿದ್ದು, ದಾಂಪತ್ಯದ ಬಗ್ಗೆ ಅವರು ನೀಡಿದ ಸಲಹೆಗೆ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
Read Full Story

04:11 PM (IST) Mar 20

ಪೂಜೆಯ ಹೆಸರಲ್ಲಿ ವಂಚನೆ - ಬೆಂಗಳೂರಿನ ಸರಣಿ ವಂಚಕ ಪ್ರವೀಣ್ ಭಟ್ ಬಂಧನ

ಬೆಂಗಳೂರಿನಲ್ಲಿ ಅರ್ಚಕರು ಮತ್ತು ಭಕ್ತರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಪ್ರವೀಣ್ ಭಟ್ ಎಂಬ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಪೂಜೆಯ ನೆಪದಲ್ಲಿ ಮಹಿಳೆಯರನ್ನು ಕರೆಸಿ, ಅವರ ಚಿನ್ನಾಭರಣಗಳನ್ನು ಪಡೆದು ಈತ ವಂಚಿಸುತ್ತಿದ್ದ. ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
Read Full Story

03:17 PM (IST) Mar 20

ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಗೀತಾ! ಈ ಪ್ರಭೇದದ ಮೊದಲ ಯಶಸ್ವಿ ಸಂತಾನೋತ್ಪತ್ತಿ

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಗೀತಾ ಎಂಬ ಭಾರತೀಯ ತೋಳವು ಏಳು ಮರಿಗಳಿಗೆ ಜನ್ಮ ನೀಡಿದೆ. ಇದು ಉದ್ಯಾನವನದಲ್ಲಿ ಈ ಪ್ರಭೇದದ ಮೊದಲ ಯಶಸ್ವಿ ಸಂತಾನೋತ್ಪತ್ತಿಯಾಗಿದ್ದು, ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ. ಈ ಮರಿಗಳನ್ನು ಈಗ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ.
Read Full Story

03:12 PM (IST) Mar 20

ಮಹಿಳೆಯರಿಗೆ ವಯಾಗ್ರ ಪ್ರಸಾದ, ಜ್ಯೋತಿಷಿ ಕಾಮಕೇಳಿ ವಿಡಿಯೋ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಮಹಿಳೆಯರಿಗೆ ವಯಾಗ್ರ ಪ್ರಸಾದ, ಜ್ಯೋತಿಷಿ ಕಾಮಕೇಳಿ ವಿಡಿಯೋ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು, ತನ್ನ ಬಳಿ ಪರಿಹಾರ ಕೇಳಿ ಬರುತ್ತಿದ್ದ ಮಹಿಳೆಯರಿಗೆ ವಯಾಗ್ರ ನೀಡಿ ಕಾಮಕ್ಕೆ ಬಳಸಿಕೊಳ್ಳುತ್ತಿದ್ದ. ಮಹಿಳೆ ಜೊತೆಗಿನ ಅಶ್ಲೀಲ ವಿಡಿಯೋ ಬೆನ್ನಲ್ಲೇ ಜ್ಯೋತಿಷಿ ಅರೆಸ್ಟ್ ಆಗಿದ್ದಾರೆ.

Read Full Story

02:49 PM (IST) Mar 20

1 ವರ್ಷದ ಯುಟ್ಯೂಬ್‌ ಆದಾಯವನ್ನು, ಬ್ಯುಸಿನೆಸ್‌ನಲ್ಲಿ 1 ತಿಂಗಳಿಗೆ ದುಡಿತೀನಿ - ‌ ಪ್ರಗ್ನೆನ್ಸಿ ಟ್ರೋಲ್ ಬಗ್ಗೆ ಮಧು ಗೌಡ

Youtuber Madhu Gowda: ಕನ್ನಡ ಯುಟ್ಯೂಬರ್‌ ಮಧು ಗೌಡ, ಪ್ರಗ್ನೆನ್ಸಿ ವಿಡಿಯೋ ಮಾಡಿ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದರು. ಇವರೊಬ್ಬರೇ ತಾಯಿ ಆಗ್ತಿರೋದಾ? ಮಗು ಹೆರೋದಾ ಎಂದು ಅನೇಕರು ಕಾಮೆಂಟ್‌ ಮಾಡಿದ್ದರು, ಟ್ರೋಲ್‌ ಮಾಡಿದ್ದರು. ಇದಕ್ಕೆ ಮಧು ಗೌಡ ಅವರು ತಿರುಗೇಟು ನೀಡಿದ್ದಾರೆ. 

Read Full Story

01:08 PM (IST) Mar 20

ಬೆಳಗಾವಿ ಫೋಟೋಗ್ರಾಫರ್ ಹತ್ಯೆ - ಆಸ್ತಿ ವಿವಾದ ಇಲ್ಲ, ಹಳೇ ಸೇಡು ಇಲ್ಲ, ಹಿಂಗೂ ಕೊಲೆ ಮಾಡ್ತಾರಾ!?

ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ ಫೋಟೋಗ್ರಾಫರ್ ಮಹೇಶ್ ಉಜನಿಮಠ (33) ಕ್ಷುಲ್ಲಕ ಕಾರಣಕ್ಕೆ ಭೀಕರ ಹತ್ಯೆಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡವಾಡ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.

 

Read Full Story

12:44 PM (IST) Mar 20

6 ವರ್ಷ ಒಟ್ಟಿಗಿದ್ದು ಕೈಕೊಟ್ಟಳು, ಇನ್ನೊಬ್ಬಳು ಬೇಗನೇ ಬಿಟ್ಟುಹೋದಳು - ರಾಜ್​ ಬಿ. ಶೆಟ್ಟಿ ಸೀಕ್ರೆಟ್​ ರಿವೀಲ್

ನಟ ರಾಜ್ ಬಿ. ಶೆಟ್ಟಿ 'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿ ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ಆರು ವರ್ಷಗಳ ಕಾಲ ಇದ್ದ ಸಂಬಂಧ ಮುರಿದುಬಿದ್ದಿದ್ದು ಹೇಗೆ ಮತ್ತು ಆ ಬ್ರೇಕಪ್ ತನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

Read Full Story

12:38 PM (IST) Mar 20

ಕುದುರೆಮುಖ ಉದ್ಯಾನವನದ 25ಕ್ಕೂ ಹೆಚ್ಚು ಕಡೆ ಬೆಂಕಿ - ಹೊತ್ತಿ ಉರಿಯುತ್ತಿರುವ ಅಪರೂಪದ ಶೋಲಾ ಹುಲ್ಲುಗಾವಲು

ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪರೂಪದ ಶೋಲಾ ಹುಲ್ಲುಗಾವಲು ನಾಶವಾಗುತ್ತಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Read Full Story

11:50 AM (IST) Mar 20

ಸುಳ್ಳು ಹರಡಿದ್ರು ..ಪಳನಿ ದೇವಸ್ಥಾನದಲ್ಲಿ ಹಾಗೆ ಮಾಡಿದೆ, 3 ತಿಂಗಳಿಗೆ ಜೈಲಿಗೆ ಹೋದ್ರು - ಚೈತ್ರಾ ಕುಂದಾಪುರ

ಸಾಮಾಜಿಕ ಹೋರಾಟಗಾರ್ತಿ ಎಂದು ಕರೆಸಿಕೊಂಡು, ಬಿಗ್‌ ಬಾಸ್‌ ಮನೆಯೊಳಗಡೆ ಪ್ರವೇಶ ಮಾಡಿದ್ದ Chaithra Kundapura ಅವರು ತನ್ನ ಬಗ್ಗೆ ಸುಳ್ಳು ಮಾಹಿತಿ ನೀಡುವವರ ವಿರುದ್ಧ ಏನು ರೆಮಿಡಿ ಮಾಡುತ್ತೇನೆ ಎಂದು The Powerhouse Vines ಎನ್ನುವ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Read Full Story

11:39 AM (IST) Mar 20

ರೈಲು ಪ್ರಯಾಣಿಕರ ಗಮನಕ್ಕೆ, ಬರೋಬ್ಬರಿ 35 ದಿನಗಳ ಕಾಲ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ರದ್ದು!

ನೈಋತ್ಯ ರೈಲ್ವೆ ನಿರ್ವಹಣಾ ಕಾಮಗಾರಿಯಿಂದಾಗಿ, ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ಪ್ಯಾಸೆಂಜರ್ ರೈಲುಗಳನ್ನು 35 ದಿನಗಳ ಕಾಲ ರದ್ದುಗೊಳಿಸಲಾಗಿದೆ. ಕೆಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾಗಿದ್ದು, ಯುಗಾದಿ ಮತ್ತು ರಂಜಾನ್ ಹಬ್ಬಕ್ಕಾಗಿ ವಿಶೇಷ ರೈಲು ಸೇವೆಗಳನ್ನು ಘೋಷಿಸಲಾಗಿದೆ.
Read Full Story

11:26 AM (IST) Mar 20

ಕೊಪ್ಪಳ - ರೈತನ ಕೊಟ್ಟಿಗೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, 2 ಎತ್ತು. 2 ಆಕಳು. ಆಡು. ನಾಯಿ ಸಜೀವ ದಹನ, ಹನುಮಪ್ಪ ಕಣ್ಣೀರು

ಕೊಪ್ಪಳ ತಾಲೂಕಿನ ಇರಕಲ್ ಗಡ ಗ್ರಾಮದಲ್ಲಿ, ಹಳೆ ವೈಷಮ್ಯದಿಂದ ದುಷ್ಕರ್ಮಿಗಳು ರೈತ ಹನುಮಪ್ಪ ಪಿನ್ನಿ ಎಂಬುವವರ ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಈ ಘೋರ ಕೃತ್ಯದಲ್ಲಿ ಎರಡು ಎತ್ತು, ಎರಡು ಆಕಳು, ಒಂದು ಆಡು ಹಾಗೂ ಒಂದು ನಾಯಿ ಸೇರಿದಂತೆ ಆರು ಮೂಕ ಪ್ರಾಣಿಗಳು ಜೀವಂತ ದಹನವಾಗಿವೆ.
Read Full Story

11:24 AM (IST) Mar 20

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ದುರಂತ - ಚಿಕಿತ್ಸೆ ನೀಡುತ್ತಿದ್ದ ವೇಳೆ ನೀರಾನೆ ದಾಳಿಗೆ ಪಶುವೈದ್ಯೆ ಬಲಿ

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ, ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಪ್ರಾಣಿ ದಾಳಿ ಮಾಡಿದ್ದು, ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ.

Read Full Story

11:06 AM (IST) Mar 20

Amruthadhaare Serial ಮುಗಿತಿದ್ಯಾ? ಎಲ್ಲದಕ್ಕೂ ಅಂತ್ಯ ಎನ್ನೋದಿರುತ್ತೆ - ರಾಜೇಶ್‌ ನಟರಂಗ ಹೇಳಿದ್ದೇನು?

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್‌ ಪಾತ್ರದಲ್ಲಿ ರಾಜೇಶ್‌ ನಟರಂಗ ಅವರು ಅದ್ಭುತವಾಗಿ ನಟಿಸುತ್ತಿದ್ದಾರೆ. ರಾಜೇಶ್‌ ನಟರಂಗ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕನ್ನಡಪ್ರಭದ ಯುಗಾದಿ ಹಬ್ಬ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆ ವೇಳೆ ಸೀರಿಯಲ್‌ ಬಗ್ಗೆ ಕೂಡ ಮಾತನಾಡಿದ್ದಾರೆ. 

Read Full Story

10:59 AM (IST) Mar 20

ಲಂಡನ್ ಮೆಟ್ರೋ ನೋಡಿ ಬೆಚ್ಚಿಬಿದ್ದ ಯೂಟ್ಯೂಬರ್, ಬೆಂಗಳೂರು ಮೆಟ್ರೋ ಬಗ್ಗೆ ಹೊಗಳಿಕೆ! ವಿಡಿಯೋ ಭಾರೀ ವೈರಲ್!

ಲಂಡನ್ ಅಂಡರ್‌ಗ್ರೌಂಡ್ ಮತ್ತು ಬೆಂಗಳೂರು ಮೆಟ್ರೋವನ್ನು ಹೋಲಿಸಿ ಮಹಿಳೆಯೊಬ್ಬರು ಮಾಡಿದ ವೀಡಿಯೊ ವೈರಲ್ ಆಗಿದೆ. ಲಂಡನ್ ಮೆಟ್ರೋದಲ್ಲಿ ಹವಾನಿಯಂತ್ರಣ ಇಲ್ಲದಿರುವುದು ಮತ್ತು ಕೆಟ್ಟ ವಾಸನೆಯ ಬಗ್ಗೆ ಅವರು ದೂರಿದರೆ, ಬೆಂಗಳೂರು ಮೆಟ್ರೋದ ಸ್ವಚ್ಛತೆ ಮತ್ತು ಸೌಕರ್ಯವನ್ನು ಶ್ಲಾಘಿಸಿದ್ದಾರೆ. ಈ ಹೋಲಿಕೆಯು ಜಾಗತಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

10:52 AM (IST) Mar 20

ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮೊದಲೇ ಇಂದು ನಾಮಪತ್ರ ಸಲ್ಲಿಸಲ್ಲಿರುವ ಸಮರ್ಥ ಶಾಮನೂರು

Samarth Shamanur nomination:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ. ಅಲ್ಪಸಂಖ್ಯಾತರ ಒತ್ತಡದ ನಡುವೆಯೇ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಶಾಮನೂರು ಅವರು ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

Read Full Story

10:42 AM (IST) Mar 20

Photos - ಚಾಲಕನ ನಿರ್ಲಕ್ಷ್ಯ, ತನ್ನಿಂತಾನೆ ಚಲಿಸಿ ಡಿಪೋದ ಕಟ್ಟಡಕ್ಕೆ ನುಗ್ಗಿದ BMTC ಬಸ್!

ಚಾಲಕನ ಸಣ್ಣ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿನ ಪೀಣ್ಯ ಎರಡನೇ ಹಂತದ ಡಿಪೋದಲ್ಲಿ ನಿಯಂತ್ರಣ ಕೊಠಡಿಗೆ ನುಗ್ಗಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಘಟನೆ ಹೇಗೆ ನಡೆಯಿತು, ಘಟನೆಯ ಫೋಟೋ ಇಲ್ಲಿವೆ ನೋಡಿ

Read Full Story

09:58 AM (IST) Mar 20

ಗದಗ - ರಥೋತ್ಸವದ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ದಾರಿ ಬಿಡುವಂತೆ ಹೇಳಿದ್ದಕ್ಕೆ ಹಲ್ಲೆ? ಸಲೀಂ ಗ್ಯಾಂಗ್ ಅರೆಸ್ಟ್!

Gadag Chariot Festival Clash ಗದಗ ರಥೋತ್ಸವ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ತೆಗೆಯೋಕೆ ಹೇಳಿದ್ದಕ್ಕೆ ಹಲ್ಲೆ ಭಕ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಘಟನೆ ನಡೆದಿದ್ದು ಹೇಗೆ?

 

Read Full Story

09:24 AM (IST) Mar 20

Unwanted IPL Records - ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ರೋಹಿತ್, ಮ್ಯಾಕ್ಸ್‌ವೆಲ್ ಹೆಸರಲ್ಲಿದೆ!

ಐಪಿಎಲ್ 2026 ಸೀಸನ್‌ಗೆ ಸಿದ್ಧತೆ ನಡೆದಿದೆ. ಆದರೆ, ಯಾವುದೇ ಆಟಗಾರ ಬಯಸದ ಕೆಲವು ಕೆಟ್ಟ ದಾಖಲೆಗಳು ಹಲವು ಸ್ಟಾರ್ ಆಟಗಾರರ ಹೆಸರಿನಲ್ಲಿವೆ. ರೋಹಿತ್ ಶರ್ಮಾ, ರಶೀದ್ ಖಾನ್‌ರಂತಹ ದಿಗ್ಗಜರ ಹೆಸರಲ್ಲಿರುವ ಆ ಬೇಡದ ದಾಖಲೆಗಳು ಯಾವುವು?
Read Full Story

08:38 AM (IST) Mar 20

Dhurandhar The Revenge - ವಿಲನ್ ಬಡೇ ಸಾಹೇಬ್‌ ಯಾರು? ನಿಮ್ಮ ಊಹೆಯಂತೂ ಖಂಡಿತ ತಪ್ಪು!

Dhurandhar The Revenge: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರದ ಮೊದಲ ಭಾಗದಿಂದಲೂ 'ಬಡೇ ಸಾಹಬ್' ಯಾರು ಎಂಬ ಪ್ರಶ್ನೆ ಕಾಡುತ್ತಿತ್ತು. ಈಗ 'ಧುರಂಧರ್ 2' ಆ ರಹಸ್ಯವನ್ನು ಬಯಲು ಮಾಡಿದೆ. ವಿಶೇಷ ಅಂದ್ರೆ, ಈ ಪಾತ್ರದ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳನ್ನು ಚಿತ್ರತಂಡ ಸುಳ್ಳು ಮಾಡಿದೆ.

 

Read Full Story

08:20 AM (IST) Mar 20

ಫಸ್ಟ್‌ ಡೇ 100 ಕೋಟಿ ಕಲೆಕ್ಷನ್‌ ಮಾಡಿದ್ರೂ ದಕ್ಷಿಣ ಭಾರತದ 3 ಸಿನಿಮಾ ರೆಕಾರ್ಡ್‌ ಬ್ರೇಕ್‌ ಮಾಡದ Dhurandhar 2

ರಣವೀರ್ ಸಿಂಗ್ ಅಭಿನಯದ 'Dhurandhar The Revenge' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದಿದೆ. ಮೊದಲ ದಿನವೇ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೂ, ಈ ಚಿತ್ರ ದೇಶದ ಟಾಪ್ 3 ಅತಿದೊಡ್ಡ ಓಪನರ್ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ. ಅವು ಯಾವುವು?

 

Read Full Story

08:00 AM (IST) Mar 20

ಭಾರತಕ್ಕೆ ಗ್ಯಾಸ್ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್, ಪ್ರತಿ ಲೀಟರ್‌ಗೆ 2 ರೂ ಹೆಚ್ಚಳ

ಭಾರತಕ್ಕೆ ಗ್ಯಾಸ್ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್, ಪ್ರತಿ ಲೀಟರ್‌ಗೆ 2 ರೂ ಹೆಚ್ಚಳ, ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ಬೆಂಗಳೂರು ಸೇರಿದಂತೆ ಎಲ್ಲೆಡೆ ಗ್ಯಾಸ್ ಸಮಸ್ಯೆ ಎದುರಾದ ಬೆನ್ನಲ್ಲೇ ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ.

 

Read Full Story

07:48 AM (IST) Mar 20

ನಿನ್ನೆ ಯುಗಾದಿ, ಇಂದು ಹೊಸತೊಡಕು, ಮಾಂಸ ಖರೀದಿಗೆ ಮುಗಿಬಿದ್ದ ಜನ, ಪಾಪಣ್ಣ ಮಟನ್‌ ಸ್ಟಾಲ್‌ ಮುಂದೆ ಬೆಳ್ಳಂಬೆಳಗ್ಗೆ ಕ್ಯೂ ನಿಂತ ಮಂದಿ!

ಯುಗಾದಿ ಹಬ್ಬದ ಮರುದಿನವಾದ ಹೊಸ ತೊಡಕಿನ ಪ್ರಯುಕ್ತ ಬೆಂಗಳೂರಿನಲ್ಲಿ ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಅದರಲ್ಲೂ, ಬ್ಯಾಟರಾಯನಪುರದ ಪಾಪಣ್ಣ ಮಟನ್ ಸ್ಟಾಲ್‌ನಲ್ಲಿ ಬೆಳಗಿನ ಜಾವ 4 ಗಂಟೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದು, ಹಬ್ಬದ ಸೀಸನ್‌ನಲ್ಲೂ ದರ ಏರಿಸದೆ ಮಾಲೀಕರು ಗಮನ ಸೆಳೆದಿದ್ದಾರೆ.
Read Full Story

07:32 AM (IST) Mar 20

ಉಡುಪಿ ಜಿಲ್ಲೆಗೆ ಇಂದು ಸಾರ್ವತ್ರಿಕ ರಜೆ ಘೋಷಿಸಿದ ಜಿಲ್ಲಾಧಿಕಾರಿ, ಹಬ್ಬದ ಸಂಭ್ರಮ ಡಬಲ್

ಉಡುಪಿ ಜಿಲ್ಲೆಗೆ ಇಂದು ಸಾರ್ವತ್ರಿಕ ರಜೆ ಘೋಷಿಸಿದ ಜಿಲ್ಲಾಧಿಕಾರಿ, ಹಬ್ಬದ ಹಿನ್ನಲೆಯಲ್ಲಿ ಶಾಲಾ ಕಾಲೇಜು ಸೇರಿದಂತೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಇದರಿಂದ ಉಡುಪಿ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಡಬಲ್ ಆಗಿದೆ.

Read Full Story

07:21 AM (IST) Mar 20

ಪೊಲೀಸ್ ವಶದಲ್ಲಿದ್ದಾಗಲೇ ವ್ಯಕ್ತಿ ಸಾವು; ಹುಳಿಯಾರು ಠಾಣೆಗೆ ಗ್ರಾಮಸ್ಥರ ಮುತ್ತಿಗೆ, ಬೀಗ ಜಡಿದು ಪ್ರತಿಭಟನೆ

ತುಮಕೂರಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ, ಇಸ್ಪೀಟ್ ಆಟದ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯು ಪೊಲೀಸ್ ದೌರ್ಜನ್ಯದಿಂದ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಎಸ್‌ಪಿ ಮನವೊಲಿಕೆ ಬಳಿಕ ಪ್ರತಿಭಟನೆ ಕೈಬಿಟ್ಟರು.

Read Full Story

07:00 AM (IST) Mar 20

ಎಂದಿನ ದರದಲ್ಲಿ ಮಾಂಸ ಮಾರಾಟ

ಪಾಪಣ್ಣ ಮಟನ್ ಸ್ಟಾಲ್‌ನಲ್ಲಿ ಮಟನ್ ಬೆಲೆಯಲ್ಲಿ ಯಾವುದೇ ವ್ಯತ್ಯಸವಾಗಿಲ್ಲ. ಕೆಜಿಗೆ 900 ರೂಪಾಯಿ ದರದಲ್ಲೇ ಮಾರಾಟ ಮಾಡಲಾಗುತ್ತಿದೆ. ಹಬ್ಬದ ಹಿನ್ನಲೆಯಲ್ಲಿ ಯಾವುದೇ ಬೆಲೆ ಏರಿಕೆ ಮಾಡದೆ ಜನರಿಗೆ ಮಾಂಸ ಮಾರಟ ಮಾಡಲಾಗುತ್ತಿದೆ.


More Trending News