Karnataka Assembly Election- 2018
Apr 21, 2018, 1:57 PM IST
ಗದಗ: ಶಾಸಕ ಜಿ ಎಸ್ ಪಾಟೀಲ್ ಮನೆಗೆ ನಾಗಾಸಾಧುಗಳು ದಿಢೀರ್ ಭೇಟಿ ಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೋಣ ವಿಧಾನಸಭಾ ಶಾಸಕ ಜಿ ಎಸ್ ಪಾಟೀಲ್’ಗೆ ನಾಗಾಸಾಧುಗಳು ಗೆಲುವಿನ ಆಶೀರ್ವಾದ ಮಾಡಿದ್ದಾರೆ. ಧನ ಮತ್ತು ಫಲ ಪ್ರಾಪ್ತಿಯ ಜೊತೆಗೆ ಬಡವರ ಸೇವೆ ಮಾಡಬೇಕೆಂದು ಪಾಟೀಲರಿಗೆ ಸೂಚನೆ ನೀಡಿದ್ದಾರೆ.