ಪಾಟ್ನಾ(ಅ.31) ಬಿಹಾರ ಚುನಾವಣೆ ಕಾವು ರಂಗೇರಿದೆ. ಬಿರುಸಿನ ಪ್ರಚಾರ, ವಾಕ್ಸಮರ, ವಾಗ್ದಾಳಿಗಳು ನಡೆಯುತ್ತಿದೆ. ಈ ಬಾರಿ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಮತ್ತಷ್ಟು ಕಠಿಣವಾಗಿದೆ. ಕಾರಣ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಕ್ಷ ಎಲ್ಲಾ ಸ್ಥಾನಗಳಲ್ಲೂ ಸ್ಪರ್ಧಿಸುತ್ತಿದೆ. ಮತದಾನ ದಿನಾಂಕ ಸಮೀಪಿಸುತ್ತದ್ದಂತೆ ಆಘಾತಕಾರಿ ಬೆಳವಣಿಗೆ ನಡೆದಿದೆ. ಪ್ರಶಾಂತ್ ಕಿಶೋರ್ ಅರ ಜನ ಸುರಾಜ್ ಪಕ್ಷದ ಬೆಂಬಲಿಗ ದುಲಾರ್ಚಂದ್ ಯಾದವ್ನನ್ನು ಗುಂಡಿಕ್ಕೆ ಹತ್ಯೆ ಮಾಡಲಾಗಿದೆ. ಬಿಹಾರದ ಮೊಕಮಾ ತಾಲ್ನಲ್ಲಿ ಘಟನೆ ನಡೆದಿದೆ. ದೇಶದ ಪ್ರಮುಖ ಸುದ್ದಿಯ ಕ್ಷಣ ಕ್ಷಣದ ನ್ಯೂಸ್ ಅಪ್ಡೇಟ್ ಇಲ್ಲಿದೆ.

11:08 PM (IST) Oct 31
Sanjay Raut Takes Break from Politics Due to Serious Health Issue PM Modi Wishes Speedy Recovery ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಬಣದ ಪ್ರಮುಖ ಮುಖವಾಗಿರುವ ಸಂಜಯ್ ರಾವತ್, ಮುಂಬರುವ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳಿಂದ ತಾತ್ಕಾಲಿಕವಾಗಿ ದೂರ ಉಳಿಯಲಿದ್ದಾರೆ.
09:55 PM (IST) Oct 31
Dabang Delhi Beats Puneri Paltan (31-28) to Win Second Pro Kabaddi League Title ಪ್ರೋ ಕಬಡ್ಡಿ ಲೀಗ್ 12ನೇ ಆವೃತ್ತಿಯ ರೋಚಕ ಫೈನಲ್ನಲ್ಲಿ ದಬಾಂಗ್ ಡೆಲ್ಲಿ ಕೆ.ಸಿ ತಂಡವು ಪುಣೇರಿ ಪಲ್ಟನ್ ತಂಡವನ್ನು 31-28 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು.
08:40 PM (IST) Oct 31
Investment Plan For Married Couple: ಪಿಪಿಎಫ್ ಯೋಜನೆಯು ದಂಪತಿಗಳಿಗೆ ಸುರಕ್ಷಿತ ಹೂಡಿಕೆಯ ಮಾರ್ಗವಾಗಿದೆ. ಗಂಡ ಮತ್ತು ಹೆಂಡತಿ ಪ್ರತ್ಯೇಕ ಖಾತೆಗಳಲ್ಲಿ ವಾರ್ಷಿಕವಾಗಿ ತಲಾ ₹1.50 ಲಕ್ಷ ಹೂಡಿಕೆ ಮಾಡುವ ಮೂಲಕ, 20 ವರ್ಷಗಳಲ್ಲಿ ಯಾವುದೇ ತೆರಿಗೆ ಇಲ್ಲದೆ ₹1.33 ಕೋಟಿಗೂ ಹೆಚ್ಚು ಹಣವನ್ನು ಗಳಿಸಬಹುದು.
08:08 PM (IST) Oct 31
Kashi Vishwanath Priests to Get ₹90000 Salary ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗೆ ಶ್ರೀ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್ ಹೊಸ ಸೇವಾ ನಿಯಮಗಳನ್ನು ಜಾರಿಗೆ ತಂದಿದೆ.
07:14 PM (IST) Oct 31
Udayasthamana Pooja controversy: ಗುರುವಾಯೂರು ದೇವಸ್ಥಾನದ ಉದಯಾಸ್ತಮಾನ ಪೂಜೆಯ ಸಮಯ ಬದಲಾವಣೆ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಭಕ್ತರ ಅನುಕೂಲಕ್ಕಾಗಿ ಆಚರಣೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ವೃಶ್ಚಿಕ ಏಕಾದಶಿಯಂದೇ ಪೂಜೆ ನಡೆಸುವಂತೆ ಆದೇಶಿಸಿದೆ.
06:17 PM (IST) Oct 31
Jemimah Rodrigues Family Conversion Row Resurfaces ಕಳೆದ ವರ್ಷ ಜೆಮಿಮಾ ತಂದೆಯ ಧಾರ್ಮಿಕ ಚಟುವಟಿಕೆಗಳ ಆರೋಪದ ಮೇಲೆ ಖಾರ್ ಜಿಮ್ಖಾನಾ ಕ್ಲಬ್ ಅವರ ಗೌರವ ಸದಸ್ಯತ್ವವನ್ನು ರದ್ದುಗೊಳಿಸಿದ್ದ ಘಟನೆ ಮತ್ತೆ ಚರ್ಚೆಗೆ ಬಂದಿದೆ.
05:21 PM (IST) Oct 31
Katrina Kaif Private Photos Leaked Pregnant Actress's Privacy Violated ನಟಿ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾಗ ಅವರ ಅಪಾರ್ಟ್ಮೆಂಟ್ನ ಬಾಲ್ಕನಿಯಲ್ಲಿದ್ದ ಖಾಸಗಿ ಫೋಟೋಗಳು ಸೋರಿಕೆಯಾಗಿವೆ. ಅನುಮತಿಯಿಲ್ಲದೆ ತೆಗೆದ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
04:42 PM (IST) Oct 31
Rohit Arya Called Marathi Actress Richita Jadhav for Audition ಆರ್ಎ ಸ್ಟುಡಿಯೋದಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿರಿಸಿದ್ದ ರೋಹಿತ್ ಆರ್ಯನನ್ನು ಎನ್ಕೌಂಟರ್ ಮಾಡಲಾಗಿದೆ. ಈ ಪ್ರಕರಣದಲ್ಲಿ, ಆತ ನಟಿ ರಿಚಿತಾ ಜಾಧವ್ ಅವರನ್ನೂ ಇದೇ ಸಂಚಿನಲ್ಲಿ ಸಿಲುಕಿಸಲು ಯತ್ನಿಸಿದ್ದ ಎಂಬ ಮಾಹಿತಿ ಬಂದಿದೆ.
03:43 PM (IST) Oct 31
ದೇಶದಿಂದ RSS ನಿಷೇಧಿಸಬೇಕು, ಪ್ರಿಯಾಂಕ್ಗಿಂತ ಒಂದು ಹೆಜ್ಜೆ ಮುಂದಹೋದ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿನ ಕಾನೂನು ಸುವ್ಯವಸ್ಥೆ ಹದೆಗೆಡಲು ಆರ್ಎಸ್ಎಸ್ ಕಾರಣವಾಗಿದೆ. ನನ್ನ ಪ್ರಕಾರ ಆರ್ಎಸ್ಎಸ್ ನಿಷೇಧಿಸಬೇಕು ಎಂದಿದ್ದಾರೆ.
03:25 PM (IST) Oct 31
Azharuddin minister: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರು ತೆಲಂಗಾಣದ ರೇವಂತ್ ರೆಡ್ಡಿ ಸಂಪುಟಕ್ಕೆ 16ನೇ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಇನ್ನೂ ಶಾಸಕರಾಗಿ ಆಯ್ಕೆಯಾಗದಿದ್ದರೂ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಲಾಗಿದ್ದು, ಜ್ಯುಬಿಲ್ಹಿಲ್ಸ್ ಉಪಚುನಾವಣೆಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.
02:50 PM (IST) Oct 31
ಅಹಮ್ಮದಾಬಾದ್ ದುರಂತ ಬಳಿಕ 10,000 ಕೋಟಿ ನಷ್ಟ, ಟಾಟಾ ನೆರವು ಕೇಳಿದ ಏರ್ ಇಂಡಿಯಾ, ಆಗಸದಲ್ಲಿ ಏರ್ ಇಂಡಿಯಾ ಹಾರಾಟ ಮುಂದುವರಿಸಲು ಆರ್ಥಿಕ ನೆರವು ಅನಿವಾರ್ಯ ಎಂದಿದೆ. ಏನಾಗುತ್ತೆ ಏರ್ ಇಂಡಿಯಾ ಭವಿಷ್ಯ?
02:30 PM (IST) Oct 31
childhood school memories: ಶಾಲೆಗೆ ಹೋಗಲು ಹಠ ಹಿಡಿದ ಬಾಲಕನೊಬ್ಬನನ್ನು, ಆತ ಹಿಡಿದುಕೊಂಡಿದ್ದ ಮಂಚದ ಸಮೇತ ಪೋಷಕರು ಶಾಲೆಗೆ ಹೊತ್ತು ತಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ತಮ್ಮ ಬಾಲ್ಯದ ದಿನಗಳನ್ನು, ತಾವು ಹೇಳುತ್ತಿದ್ದ ನೆಪಗಳನ್ನು ನೆನಪಿಸಿಕೊಂಡಿದ್ದಾರೆ.
01:52 PM (IST) Oct 31
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೆಲ್ಬರ್ನ್ನಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಮ್ಯಾಥ್ಯೂ ಶಾರ್ಟ್ ರೂಪದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
01:34 PM (IST) Oct 31
ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಎರಡನೇ ಸೆಮಿಫೈನಲ್ನಲ್ಲಿ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಅನಾಯಾಸವಾಗಿ ಬಗ್ಗುಬಡಿಯುವಲ್ಲಿ ಭಾರತ ಯಶಸ್ವಿಯಾಗಿದೆ. ಇದರ ಜತೆಗೆ ಅಪರೂಪದ ದಾಖಲೆಗಳನ್ನು ಮುರಿಯುವಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ ಯಶಸ್ವಿಯಾಗಿದೆ.
01:00 PM (IST) Oct 31
ಫೆಡ್ ರೇಟ್ ಕಡಿತದಿಂದ ಬಂಪರ್, ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಇಳಿಕೆ, ಇಂದು ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಬೆಲೆ ಇಳಿಕೆಯಾಗಿದೆ. ಅಮೆರಿಕ ಚೀನಾ ನಡುವಿನ ಟೆನ್ಶನ್ ಕಡಿಮೆಯಾದಲ್ಲಿ ಮತ್ತಷ್ಟು ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
12:58 PM (IST) Oct 31
Lioness Sirga: ಸಿಂಹಿಣಿಯೊಂದು ತಾನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ತನ್ನ ಸಾಕಿದ ಯುವಕನೊಂದಿಗೆ ಹಂಚಿಕೊಳ್ಳುವ ಅಪರೂಪದ ವಿಡಿಯೋ ವೈರಲ್ ಆಗಿದೆ. ತಾಯಿ ತೊರೆದಿದ್ದ ಈ ಸಿಂಹದ ಮರಿಯನ್ನು ವ್ಯಾಲೆಂಟಿನ್ ಗ್ರೂನರ್ ಎಂಬುವವರು ಸಾಕಿದ್ದಾರೆ.
12:15 PM (IST) Oct 31
ಮದುವೆ ಸಮಾರಂಭಗಳಲ್ಲಿ ಶೋಕಿಗಾಗಿ ಹೆಚ್ಚು ಚಿನ್ನಾಭರಣ ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳೆಯರು ಮೂರು ಆಭರಣಗಳನ್ನು ಮಾತ್ರ ಧರಿಸಬಹುದು ಮತ್ತು ನಿಯಮ ಮೀರಿದರೆ 50,000 ರೂ. ದಂಡ ವಿಧಿಸಲಾಗುತ್ತದೆ. ಎಲ್ಲಿ ಹೊರಟಿದೆ ಈ ಆದೇಶ?
11:47 AM (IST) Oct 31
ನವಿ ಮುಂಬೈನಲ್ಲಿ ನಡೆದ ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತೀಯ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದೆ. 339 ರನ್ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ, ಜೆಮಿಮಾ ರೋಡ್ರಿಗ್ಸ್ ಅವರ ಶತಕದ ನೆರವಿನಿಂದ ಫೈನಲ್ಗೆ ಪ್ರವೇಶಿಸಿದೆ.
11:44 AM (IST) Oct 31
ಮನೆ ಕ್ಲೀನ್ ಮಾಡುವಾಗ ಸಿಕ್ತು ಅಜ್ಜನ 2.5 ಕೋಟಿ ರೂ ಷೇರು, ಮೊಮ್ಮಗನ ಕನಸಿಗೆ ಕೊಳ್ಳಿ ಇಟ್ಟ ಕುಟುಂಬ, ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಮೊಮ್ಮಗ ಹಾಗೂ ಕುಟುಂಬ ಇನ್ನೇನು ಸಮಸ್ಯೆ ದೂರವಾಯಿತು ಅನ್ನೋವಷ್ಟರಲ್ಲೇ ಇಡೀ ಕುಟುಂಬ ಕನಸಿಗೆ ಕೊಳ್ಳಿ ಇಟ್ಟಿದೆ.
11:23 AM (IST) Oct 31
Pregnant Job Scam: ನನಗೆ ತಾಯ್ತನದ ಸುಖ ನೀಡುವ ನನ್ನ ಗರ್ಭಿಣಿ ಮಾಡುವ ಪುರುಷ ಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿನ ನಕಲಿ ಜಾಹೀರಾತನ್ನು ನಂಬಿ ಮೋಸದ ಜಾಲಕ್ಕೆ ಬಲಿಯಾದ ವ್ಯಕ್ತಿಯೊಬ್ಬರು ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
11:05 AM (IST) Oct 31
1 ಕೋಟಿ ಸರ್ಕಾರಿ ಉದ್ಯೋಗ, 1 ಕೋಟಿ ಲಕ್ಪತಿ ದೀದಿ, ಬಿಹಾರ ಚುನಾವಣೆಗೆ ಎನ್ಡಿಎ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಭರ್ಜರಿ ಭರವಸೆ ನೀಡಿರುವ ಬಿಜೆಪಿ ನೇತೃತ್ವದ ಎನ್ಡಿಎ ಪ್ರಣಾಳಿಕೆಯಲ್ಲಿ ಏನಿದೆ?
10:24 AM (IST) Oct 31
ರಿಷಭ್ ಪಂತ್ ನಾಯಕನಾಗಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ 4 ದಿನಗಳ ಪಂದ್ಯದಲ್ಲಿ, ಭಾರತ 'ಎ' ತಂಡವು ಮೊದಲ ದಿನವೇ ಮೇಲುಗೈ ಸಾಧಿಸಿದೆ. ಸ್ಪಿನ್ನರ್ಗಳಾದ ತನುಶ್ ಕೋಟ್ಯಾನ್ ಹಾಗೂ ಮಾನವ ಸುಥಾರ್ ಅವರ ಪರಿಣಾಮಕಾರಿ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ 'ಎ' ತಂಡ.
09:29 AM (IST) Oct 31
ಏಕದಿನ ಸರಣಿ ಸೋಲಿನ ಬಳಿಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಮೆಲ್ಬರ್ನ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ಮೊದಲ ಪಂದ್ಯದಲ್ಲಿ ಲಯ ಕಂಡುಕೊಂಡ ನಾಯಕ ಸೂರ್ಯಕುಮಾರ್ ಯಾದವ್ ಮೇಲೆ ನಿರೀಕ್ಷೆ ಹೆಚ್ಚಿದ್ದು, ತಂಡವು ಸರಣಿ ಗೆಲ್ಲುವ ಗುರಿ ಹೊಂದಿದೆ.
07:14 AM (IST) Oct 31
ಜನ ಸುರಾಜ್ ಪಕ್ಷದ ಅಭ್ಯರ್ಥಿ ಪಿಯುಷಿ ಪ್ರಿಯದರ್ಶಿ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಜಟಾಪಟಿ ನಡೆದಿದೆ. ಎರಡು ಪಕ್ಷಗಳ ಬೆಂಬಲಿಗರ ನಡುವೆ ಮಾರಾಮಾರಿಯಾಗಿದೆ. ಈ ವೇಳೆ ಗುಂಡಿನ ದಾಳಿಯಲ್ಲಿ ದುರಾಲ್ಚಂದ್ ಹತ್ಯೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.