ನವದೆಹಲಿ: ‘ಸ್ವಾತಂತ್ರ್ಯ ಹೋರಾಟಗಾರರು ಬಂದೂಕಿಗೆ ಎದೆಯೊಡ್ಡಿ ನಿಲ್ಲುತ್ತಿದ್ದರು, ಆದರೆ ನೀವು ಸಂಸದರಾಗಿ ಮೊಟ್ಟೆಗೆ ಯಾಕೆ ಹೆದರುತ್ತೀರಿ?’ ಎಂದು ಸುಪ್ರೀಂ ಕೋರ್ಟ್ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಪ್ರಶ್ನಿಸಿದೆ.
ದ್ವೇಷಭಾಷಣ ಪ್ರಕರಣವೊಂದರಲ್ಲಿ ಕೋಲ್ಕತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸರು ಆ.15ರೊಳಗೆ ವಿಚಾರಣೆ ಬರುವಂತೆ ಮಹುವಾಗೆ ನೋಟಿಸ್ ನೀಡಿದ್ದರು. ಇದರ ರದ್ದು ಕೋರಿ ಸಂಸದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
‘ಪೊಲೀಸರು ನಾನು ನನ್ನ ಸ್ವಂತ ಕ್ಷೇತ್ರದಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಹೇಳಿದ್ದಾರೆ. ಆದರೆ ನಾನು ಹಿಂದೆ 2 ಸಲ ಅಲ್ಲಿಗೆ ಹೋದಾಗ ಬೆದರಿಕೆಗಳನ್ನು ಹಾಕಲಾಯಿತು. ಮೊಟ್ಟೆ ಎಸೆಯಲಾಯಿತು’ ಎಂದು ಅವರು ಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ದ್ವಿಸದಸ್ಯ ಪೀಠ, ‘ನೀವು ಸಂಸದರು. ರಾಜಕೀಯಕ್ಕೆ ಧುಮುಕಿದ ಮೇಲೆ ಮೊಟ್ಟೆಗೆ ಹೆದರುತ್ತೀರಾ? ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಎದೆಯೊಡ್ಡಿ ನಿಂತಿದ್ದರು. ಇಂತಹ ಅರ್ಜಿಗಳು ವಿಚಾರಣೆಗೆ ಬರಬಾರದು’ ಎಂದು ಹೇಳಿ ಅರ್ಜಿ ವಜಾ ಮಾಡಿತು,
11:02 AM (IST) Aug 08
ಇಲ್ಲಿ ಇಬ್ಬರು ನಿರಾಪರಾಧಿಗಳ ಬದುಕು ಕಿತ್ತುಕೊಂಡಿದ್ದ ಪ್ರಕರಣಕ್ಕೆ ಕೊನೆಗೂ ಹೈಕೋರ್ಟ್ ನ್ಯಾಯ ನೀಡಿದೆ. ಆದರೆ 14 ವರ್ಷಗಳ ಕಾಲ ತಪ್ಪೇ ಮಾಡದೇ ಶಿಕ್ಷೆ ಅನುಭವಿಸಿ ಅಮೂಲ್ಯ ಬದುಕು ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ? ಎಲ್ಲಿ ನಡೆದಿರೋದು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..
10:45 AM (IST) Aug 08
ತಿರುಮಲ ಶ್ರೀವಾರಿ ವಾರ್ಷಿಕ ಪುಷ್ಪಯಾಗ ಸೇವೆಗೆ ಸಂಬಂಧಿಸಿದ 2026ನೇ ಸಾಲಿನ ಟಿಕೆಟ್ಗಳು ಇದೇ ತಿಂಗಳ 21ರಂದು ಬಿಡುಗಡೆಯಾಗಲಿದೆ. ನವೆಂಬರ್ 16ರಂದು ನಡೆಯಲಿರುವ ಪ್ರತ್ಯೇಕ ಸೇವೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಎರಡು ಬಾರಿ ಶ್ರೀವಾರಿ ದರ್ಶನ ಸಿಗುವುದು ವಿಶೇಷ ಸಂಗತಿಯಾಗಿದೆ.
10:30 AM (IST) Aug 08
10:21 AM (IST) Aug 08
ಪ್ರಸ್ತುತ ಸ್ವಿಗ್ಗಿ, ಜೊಮ್ಯಾಟೋ ಅಂತಹ ಕಂಪನಿಗಳು ಕೇಂದ್ರ ಸರ್ಕಾರದ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿವೆ. ಆದರೆ ರಾಜ್ಯದಲ್ಲಿ ಇವುಗಳ ಮೇಲೆ ಯಾವುದೇ ಪ್ರತ್ಯೇಕ ನಿಯಂತ್ರಣ ಇರಲಿಲ್ಲ. ಈಗ ಮಹಾರಾಷ್ಟ್ರ ಸರ್ಕಾರ ಇವುಗಳನ್ನು ರಾಜ್ಯ ಸಾರಿಗೆ ನಿಯಮಗಳ ಅಡಿಯಲ್ಲಿ ತರುತ್ತಿರುವುದರಿಂದ, ಚಾಲಕರ ದೂರುಗಳು ಅಥವಾ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಸಿಗಲಿದೆ.
09:46 AM (IST) Aug 08
08:41 AM (IST) Aug 08
ಮೈದಾನದ ಹೊರಗೆ, ಮೈದಾನದ ಒಳಗೆ ಎಲ್ಲಿದ್ದರೂ ಅವರು ಜಾಲಿಜಾಲಿ. ತಮ್ಮ ಜೊತೆಗೆ ಇರೋರಿಗೆ ಕೊಡುವ ಕ್ವಾಟ್ಲೆ ಅಷ್ಟಿಷ್ಟಲ್ಲ. ಇಷ್ಟು ದಿನ ಜೊತೆಗಾರರ ಗೋಳು ಹೋಯ್ದುಕೊಳ್ತಿದ್ದ ಪಂತ್, ಕಣ್ಣು ಈಗ ನೇರವಾಗಿ ತಮ್ಮ ಮುಖ್ಯಮಂತ್ರಿಗಳ ಮೇಲೆ ಬಿದ್ದಿದೆ. ಕಗ್ಗತ್ತಲೆಯ ಮಧ್ಯರಾತ್ರಿ ಸ್ಫೋಟಕ ಟ್ವೀಟ್ ಮಾಡಿ ಗಾಬರಿ ಹುಟ್ಟಿಸಿದ್ದಾರೆ. ಏನದು ಈ ಸ್ಟೋರಿ ಓದಿ..
07:35 AM (IST) Aug 08
ರಾಹುಲ್ ಗಾಂಧಿ, ಇ20 (ಎಥನಾಲ್) ಇಂಧನ ಮಿಶ್ರಣ ನೀತಿಯು ಒಂದು ದೊಡ್ಡ ಹಗರಣವಾಗಿದ್ದು, ಜನರ ವಾಹನಗಳನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಭ್ರಷ್ಟಾಚಾರದಿಂದ ಸಾರ್ವಜನಿಕರಿಗೆ ನೇರ ನಷ್ಟವಾಗುತ್ತಿದೆ ಎಂದ ಅವರು, ತೈಲ ಕಂಪನಿಗಳು ಇಂಧನ ಮಾಲಿನ್ಯದ ವರದಿಗಳನ್ನು ತಳ್ಳಿಹಾಕಿವೆ.
07:26 AM (IST) Aug 08