Published : Aug 31, 2025, 07:18 AM ISTUpdated : Aug 31, 2025, 09:43 PM IST

India Latest News Live: SCO ಶೃಂಗಸಭೆ 2025 - ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ ನಡೆದಿದ್ದೇನು? ಗುಂಪು ಫೋಟೋ ಅಸಲಿಯತ್ತು ನೋಡಿ!

ಸಾರಾಂಶ

ರಾಯ್ಪುರ: ತಮಗೆ ಬಂದ ಸಂಕಷ್ಟಕ್ಕೆ ಭಗವಂತನನ್ನು ದೂಷಿಸುವವರೇ ಜಾಸ್ತಿ. ಅದೇ ರೀತಿ ಛತ್ತೀಸ್‌ ಗಢದಲ್ಲಿ ಎಚ್‌ಐವಿ ರೋಗಿಯೊಬ್ಬ, 'ದೇವರಿಂದಲೇ ನನಗೆ ಸೋಂಕು ಅಂಟಿದೆ' ಎಂದು ಸಿಟ್ಟಿಗೆದ್ದು, ದೇವಸ್ಥಾನಗಳಲ್ಲೇ ಕಳ್ಳತನ ಮಾಡಿದ ವಿಚಿತ್ರ ಘಟನೆ ನಡೆದಿದೆ. ಕಳೆದ 1 ದಶಕದಲ್ಲಿ ಛತ್ತೀಸ್‌ಗಡದ ದುರ್ಗ ಮತ್ತು ಕೆಲ ದೇಗಲ ಗಳಲ್ಲಿ ಸದ್ದಿಲ್ಲದೆ ಹುಂಡಿ ಕಳ್ಳತನ ನಡೆಯುತ್ತಿತ್ತು. ಪೊಲೀಸರು ಕಡೆಗೂ ವ್ಯಕ್ತಿಯೋರ್ವನನ್ನು ಇತ್ತೀಚೆಗೆ ಬಂಧಿಸಿದ್ದರು. ಆತ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈ ವೇಳೆ ಬೆಳಕಿಗೆ ಬಂದಿದೆ ಹಾಗೂ ವಿಚಾರಣೆ ವೇಳೆ ಬಾಯ್ದಿಟ್ಟ ವಿಚಾರ ಪೊಲೀಸರನ್ನೇ ದಂಗಾಗಿಸಿದೆ. ಬಂಧಿತ ಕಳ್ಳ 2012ರಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಈ ಸಂದರ್ಭದಲ್ಲಿ ಆತನಿಗೆ ಎಚ್‌ಐವಿ ಸೋಂಕು ತಗುಲಿತ್ತು. ಇದಕ್ಕೆ ದೇವರೇ ಕಾರಣ ಎಂದು ಭಾವಿಸಿದ್ದ ಆತ, 'ಭಗವಂತನಿಗೆ ಆತನ ಸ್ಥಾನ ತೋರಿಸಲು ಕೃತ್ಯ ಎಸಗಿದ್ದೇನೆ' ಎಂದು ಪೊಲೀಸರ ಮುಂದೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

09:43 PM (IST) Aug 31

SCO ಶೃಂಗಸಭೆ 2025 - ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ ನಡೆದಿದ್ದೇನು? ಗುಂಪು ಫೋಟೋ ಅಸಲಿಯತ್ತು ನೋಡಿ!

SCO ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ ಏನು ಸೂಚಿಸುತ್ತದೆ? ಭಾರತ-ಚೀನಾ ಸಂಬಂಧ, ಗಡಿ ವಿವಾದ ಮತ್ತು ಜಾಗತಿಕ ರಾಜತಾಂತ್ರಿಕತೆಯ ಮೇಲೆ ಚರ್ಚೆ. ಈ ಭೇಟಿ ಪ್ರಾದೇಶಿಕ ಮೈತ್ರಿಗಳನ್ನು ಬದಲಾಯಿಸುತ್ತದೆಯೇ ಅಥವಾ ಕೇವಲ ಸಾಂಕೇತಿಕ ರಾಜತಾಂತ್ರಿಕತೆಯೇ?

Read Full Story

09:36 PM (IST) Aug 31

ಅಮ್ಮ, ಅಮ್ಮಾ... ಎಂದು ಕೈಮುಗಿದು ಗೋಗರೆದರೂ ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಹೋದ ಮಹಿಳೆ!

ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಹೋಗಲು ನಿರ್ಧರಿಸಿದ ತಾಯಿಯೊಬ್ಬಳ ವೈರಲ್ ವಿಡಿಯೋ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಮ್ಮ, ಅಮ್ಮಾ…, ಎಂದು ಮಕ್ಕಳು ಕಣ್ಣೀರಿಟ್ಟು ಗೋಗರೆಯುತ್ತಿದ್ದರೂ ಲೆಕ್ಕಿಸದೇ, ಮಕ್ಕಳನ್ನು ದೂಡಿ ಪ್ರಿಯಕರನೊಂದಿಗೆ ಹೋದ ತಾಯಿ ನಡೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read Full Story

08:39 PM (IST) Aug 31

ಆಪರೇಷನ್ ಸಿಂಧೂರ ಹಿನ್ನೆಲೆ - ಕಾಶ್ಮೀರ ತೀತ್ವಾಲ್ ಗಡಿಯಲ್ಲಿ ಶಾಂತಿಯುತ ಗಣೇಶ ವಿಸರ್ಜನೆ!

ಭಾರತ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ಗ್ರಾಮ ತೀತ್ವಾಲ್ ನಲ್ಲಿ ಭಾನುವಾರ ಗಣಪತಿ ವಿಗ್ರಹ ಸಾರ್ವಜನಿಕ ಮೆರವಣಿಗೆ ವಿಜೃಂಭಣೆಯಿಂದ ಶಾಂತಿಯುತವಾಗಿ ಯಶಸ್ವಿಯಾಗಿ ನಡೆಯಿತು.

Read Full Story

08:13 PM (IST) Aug 31

ಗಿಳಿಯಿಂದ ಬಯಲಾಯ್ತು ಅಕ್ರಮ ಸಂಬಂಧದ ಗುಟ್ಟು - ಪತಿಗೆ ಕೋರ್ಟ್​ ಕೊಟ್ಟಿತು ಶಿಕ್ಷೆ!

ಮನೆ ಕೆಲಸದವಳ ಜೊತೆ ಯಜಮಾನನ ಅಕ್ರಮ ಸಂಬಂಧವನ್ನು ಗಿಳಿಯೊಂದು ಬಯಲು ಮಾಡಿರುವ ಕುತೂಹಲದ ಘಟನೆ ನಡೆದಿದೆ. ಮನೆಯೊಡತಿಗೆ ಈ ವಿಷಯವನ್ನು ಗಿಳಿ ತಿಳಿಸಿದ್ದು ಹೇಗೆ?

 

Read Full Story

07:06 PM (IST) Aug 31

ಪತ್ನಿಯ ಕಣ್ಣುತಪ್ಪಿಸಿ ಹೋಗೋ ಗಂಡನಿಗೆ ಹೈಕೋರ್ಟ್ ಶಾಕ್​! ಪುರುಷರು ಕಂಗಾಲು - ಮಹತ್ವದ ತೀರ್ಪಲ್ಲಿ ಏನಿದೆ?

ಪತ್ನಿಯ ಕಣ್ಣುತಪ್ಪಿಸಿ ಮತ್ತೊಬ್ಬಳ ಬಳಿ ಹೋಗುವ ಗಂಡಸಿಗೆ ಹೈಕೋರ್ಟ್ ಶಾಕ್ ನೀಡಿದೆ​! ಈ ತೀರ್ಪಿನಿಂದ ಪುರುಷರು ಕಂಗಾಲಾಗಿದ್ದಾರೆ. ಅಷ್ಟಕ್ಕೂ ಕೋರ್ಟ್​ ನೀಡಿರುವ ಈ ಮಹತ್ವದ ತೀರ್ಪಲ್ಲಿ ಏನಿದೆ?

 

Read Full Story

06:10 PM (IST) Aug 31

ಆನೆಗೆ ಬಿಯರ್ ಕುಡಿಸಿದ ಪ್ರವಾಸಿಗ - ವಿಡಿಯೋ ವೈರಲ್ ಆಗ್ತಿದ್ದಂಗೆ ತೀವ್ರ ಆಕ್ರೋಶ

ವನ್ಯಜೀವಿ ಅಭಯಾರಣ್ಯದಲ್ಲಿ ಸ್ಪ್ಯಾನಿಷ್ ಪ್ರವಾಸಿಗನೊಬ್ಬ ಆನೆಗೆ ಬಿಯರ್ ಕುಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Read Full Story

04:57 PM (IST) Aug 31

ಖಾಸಗಿ ಸ್ಥಳದಲ್ಲಿ ವಾಹನ ಬಳಸ್ತಿದ್ರೆ ತೆರಿಗೆ ವಿಧಿಸುವಂತಿಲ್ಲ! ಸುಪ್ರೀಂಕೋರ್ಟ್​ನಿಂದ ಮಹತ್ವದ ತೀರ್ಪು

ಖಾಸಗಿ ಸ್ಥಳದಲ್ಲಿ ವಾಹನವನ್ನು ಬಳಕೆ ಮಾಡುತ್ತಿದ್ದರೆ ಅಂಥವರಿಗೆ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಹಾಗಿದ್ದರೆ ಏನಿದು ತೀರ್ಪು? ಡಿಟೇಲ್ಸ್​ ಇಲ್ಲಿದೆ...

 

Read Full Story

04:56 PM (IST) Aug 31

ಪ್ರವಾಹ ಪೀಡಿತ ಪ್ರದೇಶದಲ್ಲಿ ಕೇವಲ 12 ಗಂಟೆಯಲ್ಲಿ ಸೇತುವೆ ನಿರ್ಮಿಸಿದ ಭಾರತೀಯ ಸೇನೆ

ಜಮ್ಮು ಕಾಶ್ಮೀರದಲ್ಲಿ ಪ್ರವಾಹದಿಂದ ಕೊಚ್ಚಿ ಹೋದ ಸೇತುವೆಯನ್ನು ಭಾರತೀಯ ಸೇನೆ ಕೇವಲ 12 ಗಂಟೆಗಳಲ್ಲಿ ಪುನರ್ನಿರ್ಮಿಸಿದೆ. ಈ ಸಾಧನೆಯಿಂದ ಸಂಚಾರ ವ್ಯವಸ್ಥೆ ಸುಗಮಗೊಂಡಿದೆ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೆ ಅನುಕೂಲವಾಗಿದೆ. ಸೇನೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Read Full Story

03:44 PM (IST) Aug 31

HALನಲ್ಲಿ 42 ವರ್ಷಗಳ ಸೇವೆಯ ಬಳಿಕ ನಿವೃತ್ತಿ - ಬದುಕು ನೀಡಿದ ಸಂಸ್ಥೆಗೆ ಉದ್ಯೋಗಿಯ ಭಾವುಕ ವಿದಾಯ

42 ವರ್ಷಗಳ ಸೇವೆಯ ನಂತರ ಹೆಚ್‌ಎಎಲ್ ಉದ್ಯೋಗಿಯೊಬ್ಬರು ಕಂಪನಿಗೆ ಭಾವುಕ ನಮನ ಸಲ್ಲಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

02:30 PM (IST) Aug 31

ಎಗ್‌ಪ್ರೀಜ್‌ಗೆಂದು ಡಾಕ್ಟರ್ ಬಳಿ ಹೋದ ನಟಿಗೆ ಶಾಕ್‌ - ಎಗ್‌ಪ್ರೀಜ್ ಮಾಡಲು ಬಯಸಿದ್ರೆ ಯಾವ ಏಜ್ ಬೆಸ್ಟ್?

ಬಾಲಿವುಡ್ ನಟಿ ಸೋಹಾ ಅಲಿಖಾನ್ ಅವರು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಎಗ್ ಫ್ರೀಜಿಂಗ್ ಬಗ್ಗೆ ಮಾತನಾಡಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

Read Full Story

02:28 PM (IST) Aug 31

ಇಬ್ಬರು ಬಾಲಕರನ್ನ ಅಪಹರಿಸಿ ಮಸೀದಿಯಲ್ಲಿ ರೇ*ಪ್ - ಪಾಕಿಸ್ತಾನಿ ಸೋದರರಿಗೆ ಶಿಕ್ಷೆ ಪ್ರಕಟ

ಪಾಕಿಸ್ತಾನ ಮೂಲದ ಮೂವರು ಮಿಯಾ ಸಹೋದರರಿಗೆ ಬಾಲಕಿಯ ಮೇಲಿನ ಅತ್ಯಾ*ಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ. 7 ವರ್ಷದ ಬಾಲಕಿ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಮೂವರನ್ನು ದೋಷಿಗಳೆಂದು ಘೋಷಿಸಲಾಗಿದೆ.

Read Full Story

01:35 PM (IST) Aug 31

ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್, 2025ರ ಅತೀಹೆಚ್ಚು ಬೇಡಿಕೆಯ ಉದ್ಯೋಗಗಳಿವು!

ಉದ್ಯೋಗ ಮಾರುಕಟ್ಟೆಯಲ್ಲಿ ಮಾನಸಿಕ ಆರೋಗ್ಯ ತಜ್ಞರ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದೆ. ಲಿಂಕ್ಡ್‌ಇನ್ ವರದಿಯ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ಈ ಬೇಡಿಕೆ ಮೂರು ಪಟ್ಟು ಹೆಚ್ಚಾಗಿದೆ. ಈ ಬೆಳವಣಿಗೆಯು ಕಂಪನಿಗಳು ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಸೂಚಿಸುತ್ತದೆ.
Read Full Story

12:53 PM (IST) Aug 31

ಮದುವೆ ಮಾತುಕತೆಗೆಂದು ಯುವಕನ ಮನೆಗೆ ಕರೆಸಿ ಕೊಂದ ಯುವತಿ ಮನೆಯವರು

ಮದುವೆ ಮಾತುಕತೆಗೆಂದು ಯುವಕನನ್ನು ಮನೆಗೆ ಕರೆಸಿ ಬಳಿಕ ಆತನನ್ನು ಸರಿಯಾಗಿ ಥಳಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡ್ ಪ್ರದೇಶದಲ್ಲಿ ನಡೆದಿದೆ.

Read Full Story

12:17 PM (IST) Aug 31

ಉಚಿತವಾಗಿ ಕಾಂಡೋಮ್ ಪೂರೈಕೆ ಮಾಡುವ ದೇಶ - ಸರ್ಕಾರದಿಂದಲೇ ಹಣ ಮೀಸಲು

Which Country Condoms Are Free: ಇಲ್ಲಿ ಯುವಕರಿಗೆ ಉಚಿತ ಕಾಂಡೋಮ್‌ಗಳನ್ನು ವಿತರಿಸುತ್ತಿದೆ. ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ.

Read Full Story

11:41 AM (IST) Aug 31

ಪೆಪ್ಸಿಯಿಂದ ಮ್ಯಾಕ್‌ಡೋನಲ್ಡ್‌ವರೆಗೆ - ಟ್ರಂಪ್ ತೆರಿಗೆಯಿಂದಾಗಿ ಅಮರಿಕನ್ ಕಂಪನಿಗಳಿಗೆ ಭಾರತೀಯರ ಸ್ವದೇಶಿ ಬಿಸಿ

ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೇರಿರುವ ಶೇ.50ರಷ್ಟು ತೆರಿಗೆಯಿಂದಾಗಿ ಈಗ ಭಾರತದಲ್ಲಿರುವ ಅಮೆರಿಕನ್ ಕಂಪನಿಗಲಿಗೆ ಸಂಕಷ್ಟ ಎದುರಾಗಿದೆ. ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಗಳಾದ ಪೆಪ್ಸಿ, ಕೋಕಾ ಕೋಲಾ, ಸಬ್ವೇ, ಕೆಎಫ್‌ಸಿ, ಮ್ಯಾಕ್‌ಡೋನಾಲ್ಡ್ ಈಗ ದೇಶದಲ್ಲಿ ಬಹಿಷ್ಕಾರದ ಬಿಸಿ ಎದುರಿಸುತ್ತಿವೆ.

Read Full Story

11:22 AM (IST) Aug 31

ಭಾರತದ ಈ ನಿರ್ಧಾರದಿಂದ ಅಮೆರಿಕನ್ ಉತ್ಪನ್ನಗಳ ಮೇಲೆ ಜಾಗತಿಕ ಬಹಿಷ್ಕಾರದ ಅಲೆ! ಬಾಬಾ ರಾಮ್‌ದೇವ್ ಹೇಳಿದ್ದೇನು?

ಅಮೆರಿಕದ ಸುಂಕ ವಿಧಿಸುವಿಕೆಗೆ ಪ್ರತಿಯಾಗಿ ಬಾಬಾ ರಾಮದೇವ್ ಅವರು ಅಮೆರಿಕನ್ ಬ್ರ್ಯಾಂಡ್‌ಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಈ ಬಹಿಷ್ಕಾರವು ಜಾಗತಿಕ ಮಟ್ಟದಲ್ಲಿ ಹರಡುತ್ತಿದ್ದು, ಭಾರತದ ಆರ್ಥಿಕ ಸ್ವಾತಂತ್ರ್ಯಕ್ಕೆ ಹೊಸ ದಿಕ್ಕು ನೀಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
Read Full Story

10:46 AM (IST) Aug 31

Air India AI2913 - ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ; ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ, ದೆಹಲಿಯಲ್ಲಿ ತುರ್ತು ಭೂಸ್ಪರ್ಶ

ದೆಹಲಿಯಿಂದ ಇಂದೋರ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಲಾಯಿತು. ಪೈಲಟ್‌ನ ಸಮಯಪ್ರಜ್ಞೆಯಿಂದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು.
Read Full Story

10:31 AM (IST) Aug 31

ಕುಡಿದು ರಸ್ತೆಯಲ್ಲೇ ಬಿದ್ದು ಹೊರಳಾಡಿದ ಸರ್ಕಾರಿ ಶಾಲೆ ಶಿಕ್ಷಕ

ಮಧ್ಯಪ್ರದೇಶದಲ್ಲಿ ಶಿಕ್ಷಕನೊಬ್ಬ ಕುಡಿದು ರಸ್ತೆಯಲ್ಲಿ ಬಿದ್ದ ಘಟನೆ ನಡೆದಿದೆ. ವೈರಲ್ ವಿಡಿಯೋದಲ್ಲಿ ಶಿಕ್ಷಕನ  ವರ್ತನೆ ಸೆರೆಯಾಗಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

Read Full Story

08:40 AM (IST) Aug 31

ವಾರ್ಷಿಕ ವರದಿಯಲ್ಲಿ ಅದಾನಿ ಗ್ರೂಪ್‌ನ ವಿವಿಧ ಸೆಕ್ಟರ್‌ಗಳ CEOಗಳ ಸಂಬಳ ಬಹಿರಂಗ

ಅದಾನಿ ಗ್ರೂಪ್‌ನ 2025ರ ವಾರ್ಷಿಕ ವರದಿಯಲ್ಲಿ CEOಗಳ ಸಂಬಳದ ವಿವರ ಬಹಿರಂಗವಾಗಿದೆ. ಅದಾನಿ ಎಂಟರ್‌ಪ್ರೈಸಸ್‌ನ CEO ವಿನಯ್ ಪ್ರಕಾಶ್ ಪಡಯುತ್ತಿರುವ ಸಂಬಳ ಕೇಳಿ ಜನರು  ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

Read Full Story

08:07 AM (IST) Aug 31

ಗಂಟಲಿನಲ್ಲಿ ಎದೆಹಾಲು ಸಿಲುಕಿ 4 ತಿಂಗಳ ಮಗು ಸಾವು - ಅಮ್ಮನ ಮಡಿಲಿನಲ್ಲಿಯೇ ಪ್ರಾಣಬಿಟ್ಟ ಕಂದಮ್ಮ

ಮೀನಾಕ್ಷಿಪುರಂನಲ್ಲಿ ನಾಲ್ಕು ತಿಂಗಳ ಮಗು ಹಾಲು ಉಸಿರುಗಟ್ಟಿ ಸಾವನ್ನಪ್ಪಿದೆ. ಮೀನಾಕ್ಷಿಪುರಂ ಸರ್ಕಾರಿ ಆದಿವಾಸಿ ವಸತಿಗೃಹದಲ್ಲಿ ವಾಸಿಸುತ್ತಿದ್ದ ಪಾರ್ಥಿಪನ್-ಸಂಗೀತ ದಂಪತಿಯ ಮಗಳೇ ಮೃತಪಟ್ಟ ಮಗು.

Read Full Story

More Trending News