Published : Jan 31, 2026, 07:01 AM ISTUpdated : Jan 31, 2026, 09:25 PM IST

India Latest News Live: 6,6,6,6...ಇಶಾನ್ ಕಿಶನ್ ಸ್ಫೋಟಕ ಶತಕ! ಪಾಕೆಟ್ ಡೈನಮೊ ಆಟಕ್ಕೆ ಕಿವೀಸ್ ಕಂಗಾಲು!

ಸಾರಾಂಶ

ನವದೆಹಲಿ: ದೆಹಲಿ, ಮುಂಬೈ, ಬೆಂಗಳೂರು ಮತ್ತಿತರ ಹೆಚ್ಚು ವಾಹನದಟ್ಟಣೆ ಇರುವ ನಗರಗಳಲ್ಲಿ ಬೇಡಿಕೆ ಆಧಾರಿತ ಪಾರ್ಕಿಂಗ್‌ ಮ್ಯಾನೇಜ್‌ಮೆಂಟ್‌ನಂಥ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಟ್ರಾಫಿಕ್‌ ಸಮಸ್ಯೆ ನಿವಾರಿಸಿ, ವಾಹನ ಸಂಚಾರದ ವೇಗವನ್ನು ಹೆಚ್ಚಿಸುವ ಕುರಿತು ಆರ್ಥಿಕ ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದೆ. ವಿದೇಶಗಳಲ್ಲಿ ಹೆಚ್ಚು ವಾಹನದಟ್ಟಣೆ ಅವಧಿಯಲ್ಲಿ ಹೆಚ್ಚಿನ ಟೋಲ್‌, ಹೆಚ್ಚು ಟ್ರಾಫಿಕ್‌ ಇರುವ ಪ್ರದೇಶಗಳಲ್ಲಿ ವಾಹನಗಳಿಗೆ ಪ್ರತ್ಯೇಕ ಶುಲ್ಕ ವಿಧಿಸುತ್ತಿರುವ ಕ್ರಮಗಳ ಕುರಿತೂ ಸರ್ವೆ ಪ್ರಸ್ತಾಪ ಮಾಡಿದೆ. ಇ-ಬಸ್‌ಗಳ ಬಳಕೆಗೆ ಉತ್ತೇಜನ ನೀಡಲೂ ಸಲಹೆ ನೀಡಿದೆ

Ishan Kishan Hundred

09:25 PM (IST) Jan 31

6,6,6,6...ಇಶಾನ್ ಕಿಶನ್ ಸ್ಫೋಟಕ ಶತಕ! ಪಾಕೆಟ್ ಡೈನಮೊ ಆಟಕ್ಕೆ ಕಿವೀಸ್ ಕಂಗಾಲು!

Ishan Kishan Hundred: ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಶಾನ್ ಕಿಶನ್ ಬ್ಯಾಟ್‌ನಿಂದ ಅಬ್ಬರಿಸಿದ್ದು, ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದರು. ಅವರು ತಮ್ಮ ವೃತ್ತಿಜೀವನದ ಮೊದಲ T20i ಶತಕವನ್ನು ಬಾರಿಸಿದ್ದಾರೆ.  

 

Read Full Story

08:33 PM (IST) Jan 31

ಕುಂಟುತ್ತಿದ್ದ ಬೆಕ್ಕನ್ನು 7ನೇ ಮಹಡಿಯಿಂದ ಕೆಳಗೆಸೆದು ಕೊಂದ ವಾಚ್‌ಮ್ಯಾನ್ - ಪೈಶಾಚಿಕ ಕೃತ್ಯ ಕ್ಯಾಮರಾದಲ್ಲಿ ಸೆರೆ

ಮುಂಬೈನ ಕಂಡಿವಿಲಿಯಲ್ಲಿ, ಸೆಕ್ಯುರಿಟಿ ಗಾರ್ಡ್ ಒಬ್ಬರು ಕುಂಟುತ್ತಿದ್ದ ಅಸಹಾಯಕ ಬೆಕ್ಕೊಂದನ್ನು 7ನೇ ಮಹಡಿಯಿಂದ ಕೆಳಗೆ ಎಸೆದು ಕೊಂದಿದ್ದಾರೆ. ಈ ಅಮಾನವೀಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

07:07 PM (IST) Jan 31

ಸಹೋದರನನ್ನು ಹೊರಗೆ ಕೂರಿಸಿ ‘ನನಗೆ ನಿನ್ನ ದೇಹ ನೋಡ್ಬೇಕು…' - ಆ ಡಿಮ್ಯಾಂಡ್‌ಗೆ ಬೆಚ್ಚಿಬಿದ್ದ ನಟಿ ಐಶ್ವರ್ಯ ರಾಜೇಶ್!

ದಕ್ಷಿಣ ಭಾರತದ ಅತ್ಯಂತ ಪ್ರಖ್ಯಾತ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಐಶ್ವರ್ಯ ರಾಜೇಶ್, ತಮ್ಮ ವೃತ್ತಿಜೀವನದಲ್ಲಿ ತಮಗಾದ ಅತ್ಯಂತ ಕಹಿ ಘಟನೆಯೊಂದನ್ನು ಎಲ್ಲರೆದರು ಬಹಿರಂಗ ಪಡಿಸಿದ್ದಾರೆ. ಯಾರು ಈ ನಟಿ? ಏನದು ಘಟನೆ? ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇವೆ ನೋಡಿ.

 

Read Full Story

06:43 PM (IST) Jan 31

ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಅವಕಾಶ, ಡಿ ಗ್ರೂಪ್ ಹುದ್ದೆಗೆ ಅರ್ಜಿ ಅಹ್ವಾನಿಸಿದ RRB

ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಅವಕಾಶ, ಜನವರಿ 31 ರಿಂದ ಅರ್ಜಿ ಅಹ್ವಾನ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 2, 2026. ಅರ್ಜಿ ಶುಲ್ಕ ಎಷ್ಟು, ಸಲ್ಲಿಕೆ ಹೇಗೆ? ಇಲ್ಲಿದೆ.

Read Full Story

06:26 PM (IST) Jan 31

ಕಾರ್‌ನ ಬಾನೆಟ್‌ ಮೇಲೆ ಸೋಲಾರ್‌ ಪ್ಯಾನೆಲ್‌, ಡ್ರೈವಿಂಗ್‌ನಲ್ಲಿ ಇರುವಾಗಲೇ ಚಾರ್ಜ್‌ ಆಗುತ್ತೆ ಬ್ಯಾಟರಿ!

ನಿಸ್ಸಾನ್ ಕಂಪನಿ ಸೋಲಾರ್‌ ಪ್ಯಾನೆಲ್‌ ಹೊಂದಿರುವ ಎಲೆಕ್ಟ್ರಿಕ್ ಕಾರಿನ 'ಆರಿಯಾ' ಪರಿಕಲ್ಪನೆಯನ್ನು ಅನಾವರಣಗೊಳಿಸಿದೆ. ಈ ಕಾರು ಸೂರ್ಯನ ಬೆಳಕನ್ನು ಬಳಸಿಕೊಂಡು ತನ್ನ ಬ್ಯಾಟರಿಯನ್ನು ಚಾರ್ಜ್ ಮಾಡಲಿದೆ, ಇದು ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರಬಹುದು.

 

Read Full Story

06:24 PM (IST) Jan 31

ದುಡ್ಡಿದ್ದರಷ್ಟೇ ಬಂದು-ಬಳಗ! ಸಹಾಯಕ್ಕೆ ಯಾರೂ ಇಲ್ಲದೇ ತಾಯಿಯ ಹೆಣ ಹೊತ್ತು, ಚಿತೆ ಸಿದ್ದಪಡಿಸಿದ ಇಬ್ಬರು ಹೆಣ್ಣು ಮಕ್ಕಳು! ವಿಡಿಯೋ ವೈರಲ್

ಬಿಹಾರದ ಗ್ರಾಮವೊಂದರಲ್ಲಿ, ಸಂಬಂಧಿಕರು ಮತ್ತು ಗ್ರಾಮಸ್ಥರು ಸಹಾಯ ಮಾಡಲು ನಿರಾಕರಿಸಿದಾಗ, ಹೆಣ್ಣುಮಕ್ಕಳೇ ತಮ್ಮ ತಾಯಿಯ ಶವವನ್ನು ಹೊತ್ತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಬಡತನದ ಕಾರಣಕ್ಕೆ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಿದ ಈ ಅಮಾನವೀಯ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Read Full Story

05:48 PM (IST) Jan 31

ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಗಂಡನ ಮನೆಗೆ ಕಾಲಿಟ್ಟರೆ ಗಂಡನ ಲೈಫೇ ಬದಲಾಗುತ್ತೆ! ಈ ವಿಷಯ ಗೊತ್ತಿತ್ತಾ?

ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ಜೀವನದ ಮೇಲೆ ಮಾತ್ರವಲ್ಲ, ಅವರೊಂದಿಗೆ ಸಂಬಂಧ ಹೊಂದಿರುವ ಜನರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮದುವೆಯ ನಂತರ, ಕೆಲವು ಹುಡುಗಿಯರು ತಮ್ಮ ಗಂಡನ ಜೀವನವನ್ನೇ ಬದಲಾಯಿಸುತ್ತಾರೆ.

 

Read Full Story

04:55 PM (IST) Jan 31

2025ರಲ್ಲಿ 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ಗಳಿಸಿದ್ದು ಬರೀ 1.78 ಕೋಟಿ, OTTಯಲ್ಲಿ ಬಂದ ಮೇಲೆ ಸೂಪರ್‌ಹಿಟ್‌!

2025 ರಲ್ಲಿ ಬಿಡುಗಡೆಯಾದ ವಿಜಯ್ ವರ್ಮಾ ಮತ್ತು ಫಾತಿಮಾ ಸನಾ ಶೇಖ್ ಅಭಿನಯದ 'ಗಸ್ತಾಖ್‌ ಇಷ್ಕ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಆದರೆ, OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ನಂತರ ಈ ಚಿತ್ರವು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿ, ಹೊಸ ಜೀವವನ್ನು ಪಡೆದುಕೊಂಡಿತು.
Read Full Story

04:34 PM (IST) Jan 31

ಅಂಥ ಬಟ್ಟೆ ಹಾಕಬೇಡ ಅಂದ್ರೆ ನಾನೇನ್ ಮಾಡ್ತೀನಿ ಗೊತ್ತಾ? ಐಶ್ವರ್ಯಾ ರಾಜೇಶ್ ಹೇಳಿದ್ದೇನು?

ನಟಿಯರು ಧರಿಸೋ ಬಟ್ಟೆಗಳ ಬಗ್ಗೆ ಎಷ್ಟು ದೊಡ್ಡ ವಿವಾದ ಆಯ್ತು ಅಂತ ನೋಡಿದ್ದೀವಿ. ಈ ಬಗ್ಗೆ ನಟಿ ಐಶ್ವರ್ಯಾ ರಾಜೇಶ್ ಇತ್ತೀಚೆಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅಂತ ಈ ಲೇಖನದಲ್ಲಿ ನೋಡೋಣ.

Read Full Story

03:58 PM (IST) Jan 31

ಮದ್ವೆ ಮುಗಿಯೋತನಕ ತಡ್ಕೊಳ್ರಪ್ಪಾ - ಮಂಟಪದಲ್ಲೇ ಕಿಸ್ಸಿಂಗ್​ ಶುರು- ಪುರೋಹಿತರಿಂದ ಬ್ರೇಕ್​! ವಿಡಿಯೋ ವೈರಲ್

ಮದುವೆ ಮಂಟಪದಲ್ಲಿ ವಧು-ವರರು ಎಲ್ಲರೆದುರೇ ರೊಮಾನ್ಸ್​ ಮಾಡಲು ಆರಂಭಿಸುತ್ತಾರೆ. ಇದನ್ನು ಕಂಡು ಮುಜುಗರಕ್ಕೊಳಗಾದ ಪುರೋಹಿತರು ಮಧ್ಯಪ್ರವೇಶಿಸಿ ಅವರನ್ನು ತಡೆಯುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
Read Full Story

03:58 PM (IST) Jan 31

25 ವರ್ಷದೊಳಗಿನವರಿಗೆ ಉದ್ಯಮಿ ನಿಖಿಲ್ ಕಾಮತ್ ಮಹತ್ವದ ಸಲಹೆ, ಶ್ರೀಮಂತರಾಗಲು ಇಷ್ಟು ಸಾಕು

25 ವರ್ಷದೊಳಗಿನವರಿಗೆ ಉದ್ಯಮಿ ನಿಖಿಲ್ ಕಾಮತ್ ಮಹತ್ವದ ಸಲಹೆ, ಇದು ಹೂಡಿಕೆ, ದೊಡ್ಡ ಹಣದ ಬಗ್ಗೆ ಅಲ್ಲ. ಆದರೆ ಈ ಮಹತ್ವದ ಸಲಹೆ ಪಾಲಿಸಿದರೆ ಉದ್ಯಮದಲ್ಲಿ ಯಶಸ್ಸು ಮಾತ್ರವಲ್ಲ ಹಣ ಹೊಳೆ ಹರಿಯಲಿದೆ ಎಂದಿದ್ದಾರೆ.

 

Read Full Story

02:57 PM (IST) Jan 31

ನಿಮ್ಮ ಪರ್ಸ್‌ನಲ್ಲಿ ಈ 5 ವಸ್ತುಗಳಿದ್ದರೆ ಯಾವತ್ತೂ ಹಣಕ್ಕೆ ಕೊರತೆಯಿರಲ್ಲ! ಆದ್ರೆ ಈ 3 ತಪ್ಪು ಮಾಡ್ಬೇಡಿ

ವಾಸ್ತು ಟಿಪ್ಸ್: ನಿಮ್ಮ ಪರ್ಸ್‌ನಲ್ಲಿ ಯಾವಾಗಲೂ ಹಣ ಇರಬೇಕೆಂದರೆ, ಆದಾಯ ಹೆಚ್ಚಾಗಬೇಕೆಂದರೆ ಮತ್ತು ಅನಗತ್ಯ ಖರ್ಚುಗಳು ಕಡಿಮೆಯಾಗಬೇಕೆಂದರೆ ಕೆಲವು ವಾಸ್ತು ಸಲಹೆಗಳನ್ನು ಪಾಲಿಸಬೇಕು. ಮುಖ್ಯವಾಗಿ ಐದು ವಸ್ತುಗಳನ್ನು ಇಟ್ಟುಕೊಳ್ಳಬೇಕು. ನೀವೂ ಒಮ್ಮೆ ಟ್ರೈ ಮಾಡಿ ನೋಡಿ

 

Read Full Story

02:19 PM (IST) Jan 31

'ಘಜ್ನಿ, ಲೋಧಿ ವಿದೇಶಿಯರಲ್ಲ, ಭಾರತೀಯರು' - ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೊಸ ವಿವಾದ!

Hamid Ansari Claims Ghazni & Lodi Were Indian, Not Foreigners ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮೊಹಮದ್ ಘಜ್ನಿ ಮತ್ತು ಲೋಧಿ ವಂಶಸ್ಥರನ್ನು 'ಭಾರತೀಯರು' ಎಂದು ಕರೆದಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

 

Read Full Story

02:10 PM (IST) Jan 31

ರೀಲ್ಸ್ ಮಾಡ್ತಿದ್ದಾಗ ಕಾಂಕ್ರೀಟ್ ಸ್ಲ್ಯಾಬ್ ತಲೆಮೇಲೆ ಬಿದ್ದು 22 ವರ್ಷದ ಯುವಕ ಸಾವು - ವಿಡಿಯೋ ವೈರಲ್

 ಮಾಡುವಾಗ 22 ವರ್ಷದ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ನಿರ್ಮಾಣ ಹಂತದ ಫ್ಲೈ ಓವರ್ ಬಳಿ ಕಾಂಕ್ರೀಟ್ ಸ್ಲ್ಯಾಬ್ ಮೇಲೆ ನಿಂತು ರೀಲ್ಸ್ ಮಾಡುವಾಗ, ಸ್ಲ್ಯಾಬ್ ಆತನ ಮೇಲೆಯೇ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಈ ದುರಂತ ಕ್ಯಾಮರಾದಲ್ಲಿ ಸೆರೆಯಾಗಿದೆ.

Read Full Story

01:40 PM (IST) Jan 31

ಸಮಂತಾ ಫಾರ್ಮ್‌ಹೌಸ್‌ಗಾಗಿಯೇ ರಿಸ್ಕ್ ತಗೊಂಡು ಆ ಸಿನಿಮಾ ಒಪ್ಪಿಕೊಂಡ್ರಾ?

ಸಮಂತಾ ತನ್ನ ಕ್ರೇಜ್ ಅನ್ನು ರಿಸ್ಕ್‌ನಲ್ಲಿಟ್ಟು ಒಂದು ಸಿನಿಮಾ ಮಾಡಿದ್ದರು. ಫಾರ್ಮ್‌ಹೌಸ್‌ಗಾಗಿಯೇ ಆ ಸಿನಿಮಾ ಒಪ್ಪಿಕೊಂಡ್ರಾ ಎಂಬ ಸುದ್ದಿ ಇದೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯಿರಿ.

 

Read Full Story

12:57 PM (IST) Jan 31

ಒಂದೇ ದಿನದಲ್ಲಿ 1.06 ಲಕ್ಷ ರೂಪಾಯಿ ಕುಸಿದ ಬೆಳ್ಳಿ ಬೆಲೆ, 20 ಸಾವಿರ ಕುಸಿದ ಚಿನ್ನ!

Gold & Silver Prices Crash: Silver Drops by ₹1.06 Lakh, Gold by ₹20,000 ಜನವರಿ 30 ರಂದು ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಗಳು ಭಾರೀ ಕುಸಿತವನ್ನು ಕಂಡವು. ಪ್ರಾಫಿಟ್-ಬುಕಿಂಗ್ ಮತ್ತು ಭೌತಿಕ ಬೇಡಿಕೆಯ ಕುಸಿತವು ಈ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ. 

Read Full Story

12:51 PM (IST) Jan 31

3 ಲಕ್ಷ ಪುಟಗಳ ಎಪ್‌ಸ್ಟೀನ್ ಫೈಲ್ ಕೊನೆಗೂ ಬಹಿರಂಗ! ಎಪ್‌ಸ್ಟೀನ್‌ ಫೈಲ್‌ನಲ್ಲಿವೆ 2,000 ಕ್ಕೂ ಹೆಚ್ಚು ಆ ವಿಡಿಯೊಗಳು!

ವಾಷಿಂಗ್ಟನ್: ಜೆಫ್ರಿ ಎಪ್‌ಸ್ಟೀನ್ ಜಾಗತಿಕ ಮಟ್ಟದಲ್ಲಿ ಸಂಚಲನ ಮಾಡಿಸಿತ್ತು. ದಶಕಗಳ ಕಾಲ ನಡೆದ ವ್ಯವಸ್ಥಿತ ಲೈಂ*ಗಿಕ ಶೋಷಣೆಯ ಕರಾಳ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಇದೀಗ ಈ ಫೈಲ್ ನ್ಯಾಯಾಂಗ ಇಲಾಖೆ ರಿಲೀಸ್ ಮಾಡಿದೆ.

 

Read Full Story

11:54 AM (IST) Jan 31

ಹಳೆ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದ 'ವೈಟ್ ಮೆಟಲ್'! ಬೆಳ್ಳಿ ಬೆಲೆಯಲ್ಲಿ ಏರಿಳಿತ.. ಖರೀದಿಗೆ ಸರಿಯಾದ ಸಮಯನಾ?

ಒಂದು ಕಾಲದಲ್ಲಿ ಬಡವರ ಬಂಗಾರವಾಗಿದ್ದ ಬೆಳ್ಳಿಯ ಬೆಲೆ ಈಗ ಗಗನಕ್ಕೇರುತ್ತಿದೆ. ಜಾಗತಿಕ ಯುದ್ಧದ ಭೀತಿ, ಹೂಡಿಕೆದಾರರ ಬದಲಾದ ಮನಸ್ಥಿತಿ ಮತ್ತು ಪೂರೈಕೆ ಸರಪಳಿಯ ಅಡಚಣೆಗಳು ಬೆಳ್ಳಿಯನ್ನು ಬಂಗಾರಕ್ಕಿಂತಲೂ ಅಮೂಲ್ಯವಾಗಿಸುತ್ತಿವೆ. ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ..

Read Full Story

11:23 AM (IST) Jan 31

Union Budget 2026 - ಬಜೆಟ್‌ನಲ್ಲಿ ಯಾವ ರಾಜ್ಯಕ್ಕೆ ದಂಡಿಯಾಗಿ ಸಿಗಲಿದೆ ದುಡ್ಡು?

ಈ ವರ್ಷದ ಕೊನೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ರಾಜ್ಯಗಳ ವಲಯವಾರು ಹಂಚಿಕೆ ಮತ್ತು ಅಭಿವೃದ್ಧಿ ಕೇಂದ್ರಿತ ಘೋಷಣೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

 

Read Full Story

10:39 AM (IST) Jan 31

ರಜನಿಕಾಂತ್ - 'ನರಸಿಂಹ' ಹಿಂದಿನ ರಹಸ್ಯ, ಇಷ್ಟು ದಿನಗಳ ನಂತರ ಬಯಲು ಮಾಡಿದ ಮಗಳು ಸೌಂದರ್ಯ!

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ನರಸಿಂಹ' ಸಿನಿಮಾಗೆ ಸಂಬಂಧಿಸಿದ ರಹಸ್ಯವೊಂದನ್ನು ಅವರ ಮಗಳು ಸೌಂದರ್ಯ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, 'ನರಸಿಂಹ 2' ಚಿತ್ರದ ಅಪ್‌ಡೇಟ್ ಕೂಡ ನೀಡಿದ್ದಾರೆ. ಇದು ರಜನಿಕಾಂತ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

 

Read Full Story

10:02 AM (IST) Jan 31

ಕಾಜಲ್ ಅಗರ್ವಾಲ್, ತಮನ್ನಾ ಯಾರೆಂದೇ ನನಗೆ ಗೊತ್ತಿಲ್ಲ - ಚಿರಂಜೀವಿ ಹೀಗಂದಿದ್ದೇಕೆ? ಬದಲಾದ್ರಾ ಮೆಗಾಸ್ಟಾರ್?

ಚಿರಂಜೀವಿ, ತಾವು ರೊಮ್ಯಾನ್ಸ್ ಮಾಡಿದ ಕಾಜಲ್ ಅಗರ್ವಾಲ್ ಮತ್ತು ತಮನ್ನಾ ಭಾಟಿಯಾ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತನಗೆ ಕಾಜಲ್, ತಮನ್ನಾ ಯಾರೆಂದೇ ಗೊತ್ತಿರಲಿಲ್ಲ ಎಂದಿದ್ದಾರೆ. ಇದರ ಹಿಂದಿನ ಅಸಲಿ ಕಥೆ ಏನು?

 

Read Full Story

09:37 AM (IST) Jan 31

ಇದೀಗ ಟ್ರೆಂಡಿಂಗ್ ಬಿಸಿನೆಸ್ - ನಿಮ್ಮೂರಿನಲ್ಲೇ ಇದ್ದುಕೊಂಡು 10 ಸಾವಿರ ಬಂಡವಾಳ ಹಾಕಿ ತಿಂಗಳಿಗೆ ₹20 ಸಾವಿರ ಗಳಿಸಿ!

ಅಂಚೆ ಇಲಾಖೆಯ ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಯೋಜನೆಯೊಂದಿಗೆ ತಿಂಗಳಿಗೆ 20,000 ರೂ.ಗಿಂತ ಹೆಚ್ಚು ಗಳಿಸುವ ಅವಕಾಶವಿದೆ. ಕೇವಲ 5 ರಿಂದ 10 ಸಾವಿರ ರೂ. ಭದ್ರತಾ ಠೇವಣಿಯೊಂದಿಗೆ ನಿಮ್ಮ ಸ್ವಂತ ಅಂಚೆ ಕಚೇರಿಯನ್ನು ಆರಂಭಿಸಬಹುದು. ಇದು ಹೇಗೆ ಸಾಧ್ಯ? ವಿದ್ಯಾರ್ಹತೆ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

 

Read Full Story

09:14 AM (IST) Jan 31

ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ಈ ಬಾರಿ ಜೋಕೋ vs ಆಲ್ಕರಜ್! ನೋವಾಕ್‌ ಕನಸು ಕೊನೆಗೂ ಈಡೇರುತ್ತಾ?

ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ನೋವಾಕ್‌ ಜೋಕೋವಿಚ್‌ ಮತ್ತು ಕಾರ್ಲೊಸ್ ಆಲ್ಕರಜ್‌ ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್‌ನಲ್ಲಿ ಯಾನಿಕ್ ಸಿನ್ನರ್ ವಿರುದ್ಧ ಜೋಕೋ ಮತ್ತು ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಆಲ್ಕರಜ್‌ ರೋಚಕ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

Read Full Story

08:41 AM (IST) Jan 31

Ahmedabad ಏರ್‌ ಇಂಡಿಯಾ ವಿಮಾನ ದುರಂತ - 260 ಸಾವು, ಮತ್ತೆ ದಟ್ಟವಾಯ್ತು ಅದೇ ಅನುಮಾನ!

260 ಜನರನ್ನು ಬಲಿ ಪಡೆದ ಏರ್‌ ಇಂಡಿಯಾ ವಿಮಾನ ದುರಂತದ ತನಿಖೆಯಲ್ಲಿ ಯಾವುದೇ ತಾಂತ್ರಿಕ ದೋಷ ಅಥವಾ ದುಷ್ಕೃತ್ಯದ ಸಂಚು ಕಂಡುಬಂದಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವರದಿ ಮಾಡಿದೆ.

Read Full Story

More Trending News