LIVE NOW
Published : Jan 02, 2026, 05:57 AM ISTUpdated : Jan 02, 2026, 10:38 PM IST

India Latest News Live: ಮೋದಿ ಸರ್ಕಾರ ಉರುಳಿಸಲು ಬಾಂಗ್ಲಾ, ನೇಪಾಳ ರೀತಿ ಪ್ರತಿಭಟನೆ ಅನಿವಾರ್ಯ ಎಂದು INLD ರಾಷ್ಟ್ರೀಯ ಅಧ್ಯಕ್ಷ

ಸಾರಾಂಶ

ಪುಣೆ: 2012ರಲ್ಲಿ ಪುಣೆಯಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾಗಿದ್ದ ಬಂಟಿ ಜಹಗೀರ್‌ ದಾರ್ ಅಲಿ ಯಾಸ್ ಅಸ್ಲಾಂ ಶಬ್ಬಿರ್ ಶೇಖ್‌ನನ್ನು ಅನಾಮಿಕ ವ್ಯಕ್ತಿಗಳು ಗುರುವಾರ ನಡು ರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. బంಟಿ ಜಹಗೀರ್ ದಾರ್ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ರಾಜಕೀಯ ದ್ವೇಷ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ದಾಳಿಕೋರರನ್ನು ವಶಕ್ಕೆ ಪಡೆಯಲಾಗಿದೆ. ಕೊಲೆ, ಕ್ರಿಮಿನಲ್ ಸಂಚು, ಸುಲಿಗೆ, ಭಯೋತ್ಪಾದನೆ ಸೇರಿ 18 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಶಬೀರ್, ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಶಿಕ್ಷೆಗೂ ಗುರಿಯಾಗಿದ್ದ ಶಬೀರ್, ಪುಣೆ ಸ್ಫೋಟ ಪ್ರಕರಣದಲ್ಲೂ 2023ರಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ. ಡಿ.31ರ ಬುಧವಾರ ಪುಣೆಯ ಅಹಿಲ್ಯಾನಗ ರದ ಬಳಿ ಸ್ಮಶಾನದಿಂದ ಬೈಕ್‌ನಲ್ಲಿ ಆಗಮಿಸುತ್ತಿದ್ದ ವೇಳೆ, ಮತ್ತೊಂದು ಬೈಕ್‌ನಲ್ಲಿ ಬಂದು ಇಬ್ಬರು ಅನಾಮಿಕರು ಶಬ್ಬಿರ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ವೇಳೆ ಬಂಟಿ ದೇಹಕ್ಕೆ 2 ಗುಂಡುಗಳು ಹೊಕ್ಕಿವೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ.

Abhay Singh Chautala

10:38 PM (IST) Jan 02

ಮೋದಿ ಸರ್ಕಾರ ಉರುಳಿಸಲು ಬಾಂಗ್ಲಾ, ನೇಪಾಳ ರೀತಿ ಪ್ರತಿಭಟನೆ ಅನಿವಾರ್ಯ ಎಂದು INLD ರಾಷ್ಟ್ರೀಯ ಅಧ್ಯಕ್ಷ

Abhay Chautala Sparks Row: Calls for Bangladesh-Style Protests in India ಐಎನ್‌ಎಲ್‌ಡಿ ರಾಷ್ಟ್ರೀಯ ಅಧ್ಯಕ್ಷ ಅಭಯ್ ಸಿಂಗ್ ಚೌಟಾಲಾ ಅವರ ವಿವಾದಾತ್ಮಕ ಹೇಳಿಕೆಯು ಬಿಜೆಪಿ ನಾಯಕರಿಂದ ತೀವ್ರ ವಿರೋಧಕ್ಕೆ ಕಾರಣವಾಗಿದೆ.

 

Read Full Story

10:10 PM (IST) Jan 02

ಊಹಾಪೋಹಗಳಿಗೆ ತೆರೆ, ಅವಿವಾ ಬೇಗ್‌ ಜೊತೆಗಿನ ನಿಶ್ಚಿತಾರ್ಥ ಅಧಿಕೃತವಾಗಿ ತಿಳಿಸಿದ ಪ್ರಿಯಾಂಕಾ ಗಾಂಧಿ ಪುತ್ರ!

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪುತ್ರ ರೆಹಾನ್ ವಾದ್ರಾ, ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಜಸ್ಥಾನದ ರಣಥಂಬೋರ್‌ನಲ್ಲಿ ನಡೆದಿದೆ ಎನ್ನಲಾದ ಈ ಸಮಾರಂಭದ ಮೂಲಕ, ಏಳು ವರ್ಷಗಳ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

Read Full Story

09:48 PM (IST) Jan 02

ಮದ್ವೆ ಖುಷಿಯಲ್ಲಿರೋ ರಶ್ಮಿಕಾ ಮಂದಣ್ಣ ಮತ್ತೆ ಕಿರಿಕ್‌ - ಮದುಮಗಳಿಗೆ ಇದೆಲ್ಲಾ ಬೇಕಿತ್ತಾ? ಕನ್ನಡಿಗರು ಗರಂ ಗರಂ

ಮದುವೆ ಸುದ್ದಿಯ ನಡುವೆ, ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾಕಿದ ಪೋಸ್ಟ್‌ನಿಂದ ಹೊಸ ವಿವಾದ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್​ನಲ್ಲಿ ಇರುವುದು ಏನು? ಕನ್ನಡಿಗರು ಗರಂ ಆಗಿದ್ಯಾಕೆ? ನಟಿ ಮಾಡಿಕೊಂಡ ಕಿರಿಕ್​ ಏನು?

Read Full Story

09:34 PM (IST) Jan 02

ಶಾರುಖ್​ ಖಾನ್​ ನಟನ ವೇಷದಲ್ಲಿರುವ ದೇಶದ್ರೋಹಿ- ಸಾಕ್ಷಿ ಸಹಿತ ತೆರೆದಿಟ್ಟ ಜಗದ್ಗುರು ರಾಮಭದ್ರಾಚಾರ್ಯ

ಐಪಿಎಲ್​ನಲ್ಲಿ ಬಾಂಗ್ಲಾದೇಶದ ಆಟಗಾರರನ್ನು ಖರೀದಿಸಿದ್ದಕ್ಕಾಗಿ ಕೆಕೆಆರ್ ಮಾಲೀಕ ಶಾರುಖ್ ಖಾನ್ ತೀವ್ರ ವಿವಾದಕ್ಕೆ ಸಿಲುಕಿದ್ದಾರೆ. ಜಗದ್ಗುರು ರಾಮಭದ್ರಾಚಾರ್ಯ ಸೇರಿದಂತೆ ಹಲವರು ಅವರನ್ನು ದೇಶದ್ರೋಹಿ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

07:42 PM (IST) Jan 02

Most Expensive Divorce - ವಿಶ್ವದಲ್ಲಿಯೇ ಅತ್ಯಂತ ದುಬಾರಿ 10 ವಿಚ್ಛೇದನಗಳು!

ಬಿಲ್ ಗೇಟ್ಸ್, ಜೆಫ್ ಬೆಜೋಸ್ ಸೇರಿದಂತೆ ವಿಶ್ವದ ಪ್ರಮುಖ ಉದ್ಯಮಿಗಳ ದುಬಾರಿ ವಿಚ್ಛೇದನಗಳ ಪಟ್ಟಿ ಇಲ್ಲಿದೆ. ಈ ವಿಚ್ಛೇದನಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಲಾಗಿದ್ದು, ಇದು ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಡೈವೋರ್ಸ್‌ಗಳೆಂದು ದಾಖಲಾಗಿವೆ.

Read Full Story

07:06 PM (IST) Jan 02

ವಿದಾಯ ಘೋಷಣೆ ಬೆನ್ನಲ್ಲೇ ನೋವು ತೋಡಿಕೊಂಡ ಆಸೀಸ್ ಕ್ರಿಕೆಟಿಗ ಉಸ್ಮಾನ್ ಖವಾಜ!

ಆಸ್ಟ್ರೇಲಿಯಾದ ಕ್ರಿಕೆಟಿಗ ಉಸ್ಮಾನ್ ಖವಾಜ, ಆಶಸ್ ಸರಣಿಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಜನಾಂಗೀಯ ನಿಂದನೆ ಮತ್ತು ಟೀಕೆಗಳ ಬಗ್ಗೆ ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.  

Read Full Story

06:40 PM (IST) Jan 02

ಟಿ20 ವಿಶ್ವಕಪ್ ಗೆಲ್ಲಲು ಬಲಿಷ್ಠ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟ; ಮಾರ್ಕ್‌ರಮ್‌ಗೆ ನಾಯಕ ಪಟ್ಟ!

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೆ ಏಯ್ಡನ್ ಮಾರ್ಕ್‌ರಮ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ನಿವೃತ್ತಿಯಿಂದ ವಾಪಸಾದ ಕ್ವಿಂಟನ್ ಡಿ ಕಾಕ್ ಮತ್ತು ಗಾಯದಿಂದ ಚೇತರಿಸಿಕೊಂಡ ವೇಗಿ ಏನ್ರಿಚ್ ನೋಕಿಯ ತಂಡಕ್ಕೆ ಮರಳಿದ್ದಾರೆ. 

Read Full Story

05:47 PM (IST) Jan 02

ಎರಡೇ ದಿನದಲ್ಲಿ 11,500 ಕೋಟಿ ನಷ್ಟ ಕಂಡ ಎಲ್‌ಐಸಿ, ಏನು ಕಾರಣ?

ITC Stock Crash: LIC Faces ₹11,500 Crore Notional Loss in Two Days ಐಟಿಸಿ ಷೇರುಗಳ ತೀವ್ರ ಮಾರಾಟದಿಂದಾಗಿ ಕೇವಲ ಎರಡು ದಿನಗಳಲ್ಲಿ ಮೂರು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳಿಂದ 13,740 ಕೋಟಿ ರೂಪಾಯಿ ಅಳಿಸಿಹಾಕಿದೆ.

 

Read Full Story

04:50 PM (IST) Jan 02

ದುರಾದೃಷ್ಟಕ್ಕೆ ನಮ್ಮ ನೆರೆಹೊರೆಯವರು ಕೆಟ್ಟವರು, ನಾವೇನು ಮಾಡ್ಬೇಕು ಅನ್ನೋದನ್ನ ಬೇರೆಯವರು ಹೇಳೋದು ಬೇಡ - ಜೈಶಂಕರ್‌

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಭಯೋತ್ಪಾದನೆಯನ್ನು ಬೆಂಬಲಿಸುವ ನೆರೆಹೊರೆಯ ದೇಶಕ್ಕೆ (ಪಾಕಿಸ್ತಾನ) ಖಡಕ್ ಎಚ್ಚರಿಕೆ ನೀಡಿದ್ದಾರೆ. ನಮ್ಮನ್ನು ರಕ್ಷಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತೇವೆ ಎಂದಿರುವ ಅವರು, ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವೆಂದು ಚೀನಾಕ್ಕೆ ಸ್ಪಷ್ಟಪಡಿಸಿದ್ದಾರೆ.

Read Full Story

04:47 PM (IST) Jan 02

12 ವರ್ಷಗಳ ಬಳಿಕ ಕ್ರೀಡಾಭಿಮಾನಿಗಳಿಗೆ ಭರ್ಜರಿ ವರ್ಷ, 2026ರಲ್ಲಿ 5 ವಿಶ್ವಕಪ್‌ ನೋಡುವ ಭಾಗ್ಯ!

2026ನೇ ವರ್ಷವು ಕ್ರೀಡಾಭಿಮಾನಿಗಳ ಪಾಲಿಗೆ ಮಹಾ ಸಂಭ್ರಮವನ್ನು ತರಲಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಕ್ರಿಕೆಟ್, ಫುಟ್ಬಾಲ್ ಹಾಗೂ ಹಾಕಿ ವಿಶ್ವಕಪ್‌ಗಳು ನಡೆಯಲಿದ್ದು, ಇದರ ಜೊತೆಗೆ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಬಹುರಾಷ್ಟ್ರೀಯ ಕ್ರೀಡಾಕೂಟಗಳೂ ಆಯೋಜನೆಗೊಂಡಿವೆ.
Read Full Story

04:28 PM (IST) Jan 02

ವಾರ್ಷಿಕ 2.5 ಕೋಟಿ ಪ್ಯಾಕೇಜ್‌ನ ಉದ್ಯೋಗ ಪಡೆದ ಐಐಟಿ ಹೈದರಾಬಾದ್ ವಿದ್ಯಾರ್ಥಿ

ಹೈದರಾಬಾದ್‌ ಐಐಟಿಯ ಕೊನೆಯ ವರ್ಷದ ವಿದ್ಯಾರ್ಥಿಯೊಬ್ಬರು ಡಚ್‌ ಟ್ರೇಡಿಂಗ್ ಕಂಪನಿಯೊಂದರಲ್ಲಿ 2.5 ಕೋಟಿ ಮೌಲ್ಯದ ವೇತನದ ಕೆಲಸ ಗಿಟ್ಟಿಸಿದ್ದಾರೆ.

Read Full Story

03:54 PM (IST) Jan 02

ಪ್ರಿಯಾಂಕ ಗಾಂಧಿ ಮಗನ ನಿಶ್ಚಿತಾರ್ಥದಿಂದ ಕ್ಯಾನ್ಸಲ್ ಆಗಿದ್ದ ಟ್ರಿಪ್, ಮತ್ತೆ ವಿದೇಶಕ್ಕೆ ಹಾರಿದ ರಾಹುಲ್‌ ಗಾಂಧಿ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಿಯೆಟ್ನಾಂಗೆ ಖಾಸಗಿ ಪ್ರವಾಸ ಕೈಗೊಂಡಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಅವರ ನಿಶ್ಚಿತಾರ್ಥವು ಗೆಳತಿ ಅವಿವಾ ಬೇಗ್ ಅವರೊಂದಿಗೆ ರಣಥಂಬೋರ್‌ನಲ್ಲಿ ನಡೆದಿದೆ.
Read Full Story

03:51 PM (IST) Jan 02

ದೇಶದ ಅತಿದೊಡ್ಡ QSR ಪ್ಲ್ಯಾನ್‌ ಪ್ರಕಟ, ಪಿಜಾ ಹಟ್‌ ಜೊತೆ ವಿಲೀನವಾಗಲಿದೆ ಕೆಎಫ್‌ಸಿ ರೆಸ್ಟೋರೆಂಟ್‌!

Mega Merger: KFC & Pizza Hut Operators to Create India's Largest QSR ವಿಲೀನದ ಭಾಗವಾಗಿ, ಸಫೈರ್ ಫುಡ್ಸ್ ಷೇರು ವಿನಿಮಯ ಕಾರ್ಯವಿಧಾನದ ಮೂಲಕ ದೇವಯಾನಿ ಇಂಟರ್‌ನ್ಯಾಷನಲ್‌ನಲ್ಲಿ ವಿಲೀನಗೊಳ್ಳುತ್ತದೆ.

 

Read Full Story

03:37 PM (IST) Jan 02

2025ರ ಸರ್ವಶ್ರೇಷ್ಠ ಟಿ20 ಕ್ರಿಕೆಟ್ ತಂಡ ಪ್ರಕಟ; ಮೂವರು ಭಾರತೀಯರಿಗೆ ಸ್ಥಾನ! ಆದ್ರೆ ಪಾಂಡ್ಯ ಔಟ್

ಇಎಸ್‌ಪಿಎನ್‌ಕ್ರಿಕ್‌ಇನ್ಫೋ 2025ರ ಸರ್ವಶ್ರೇಷ್ಠ ಟಿ20 ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದು, ಇದರಲ್ಲಿ ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಪಟ್ಟಿಯಿಂದ ಹೊರಗುಳಿದಿರುವುದು ಅಚ್ಚರಿಗೆ ಕಾರಣವಾಗಿದೆ.  

Read Full Story

03:06 PM (IST) Jan 02

42ರ ವ್ಯಕ್ತಿ 25ರ ಹರೆಯದ ಗರ್ಲ್‌ಫ್ರೆಂಡ್‌ - ಹೊಸ ವರ್ಷದ ಪಾರ್ಟಿಗೆ ಕರೆದು ಡೆಂಜಿ ಕಿಡ್ ಮಾಡಿದ್ದೇನು?

ಹೊಸ ವರ್ಷಾಚರಣೆಯಂದು ಪಾರ್ಟಿ ಮಾಡೋಣ ಬಾ ಎಂದು ಬಾಯ್‌ಫ್ರೆಂಡ್‌ನ ಮನೆಗೆ ಕರೆಸಿದ ಯುವತಿ ಆತನ ಖಾಸಗಿ ಅಂಗಕ್ಕೆ ಕತ್ತರಿ ಹಾಕಿದಂತಹ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

Read Full Story

01:30 PM (IST) Jan 02

ಕೊಹ್ಲಿ-ರೋಹಿತ್ ನಿವೃತ್ತಿ ಬಳಿಕ ಏಕದಿನ ಕ್ರಿಕೆಟ್ ಉಳಿಸಲು ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್

ಚೆನ್ನೈ: ಟಿ20 ಕ್ರಿಕೆಟ್, ಟಿ20 ಲೀಗ್ ಹಾಗೂ ಟೆಸ್ಟ್‌ ಕ್ರಿಕೆಟ್‌ ಮೇಲೆ ಒಲವು ಜೋರಾಗುತ್ತಿರುವ ಬೆನ್ನಲ್ಲೇ ಏಕದಿನ ಕ್ರಿಕೆಟ್ ಭವಿಷ್ಯದ ಕುರಿತಂತೆ ಪ್ರಶ್ನೆಗಳು ಏಳಲಾರಂಭಿಸಿವೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಮಾಸ್ಟರ್ ಪ್ಲಾನ್ ಹಂಚಿಕೊಂಡಿದ್ದಾರೆ. ಏನದು ನೋಡೋಣ ಬನ್ನಿ

 

Read Full Story

12:11 PM (IST) Jan 02

ಐಸಿಸಿ ರ‍್ಯಾಂಕಿಂಗ್‌ - ಟಿ20, ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಿಯಾಗಿ ಹೊಸ ವರ್ಷಕ್ಕೆ ಕಾಲಿಟ್ಟ ಟೀಂ ಇಂಡಿಯಾ!

ಹೊಸ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ ಟಿ20 ಮತ್ತು ಏಕದಿನ ಕ್ರಿಕೆಟ್ ಮಾದರಿಗಳಲ್ಲಿ ಅಗ್ರಸ್ಥಾನಕ್ಕೇರಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಟಿ20ಯಲ್ಲಿ ನಂ.1 ಆಗಿದ್ದರೆ, ಏಕದಿನದಲ್ಲೂ ಭಾರತವೇ ಮೊದಲ ಸ್ಥಾನದಲ್ಲಿದೆ. 

Read Full Story

12:01 PM (IST) Jan 02

ವಿವಾಹಿತ ಮಹಿಳೆಯ ಜೊತೆ ಮಾತು - 22 ವರ್ಷದ ಯುವಕನ ಹತ್ಯೆ

ವಿವಾಹಿತ ಮಹಿಳೆಯ ಜೊತೆ ಮಾತನಾಡಿದ್ದಕ್ಕೆ 22 ವರ್ಷದ ಯುವಕನನ್ನು ಹೊಡೆದು ಕೊಂದಂತಹ ಆಘಾತಕಾರಿ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳು ಸಂತ್ರಸ್ತ ಯುವಕನಿಗೆ ಹೊಸ ವರ್ಷದ ಪಾರ್ಟಿ ಮಾಡೋಣ ಎಂದು ನಂಬಿಸಿ ಕರೆದು ಈ ಕೃತ್ಯವೆಸಗಿದ್ದಾರೆ.

Read Full Story

10:59 AM (IST) Jan 02

2026 ರಲ್ಲಿ 10 ರಿಂದ 12 ಮಿಲಿಯನ್ ಹೊಸ ಉದ್ಯೋಗಿಗಳ ನೇಮಿಸಿಕೊಳ್ಳಲಿವೆ ಈ ಭಾರತೀಯ ಕಂಪನಿಗಳು

ಟೀಮ್‌ಲೀಸ್ ವರದಿಯ ಪ್ರಕಾರ, 2026 ರಲ್ಲಿ ಭಾರತೀಯ ಕಂಪನಿಗಳು 10 ರಿಂದ 12 ಮಿಲಿಯನ್ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ. ಇವೈ, ಟಾಟಾ ಮೋಟಾರ್ಸ್, ಮತ್ತು ಗೋದ್ರೇಜ್‌ನಂತಹ ಪ್ರಮುಖ ಸಂಸ್ಥೆಗಳು ಹೊಸ ಕೌಶಲ್ಯ ಹಾಗೂ ವೈವಿಧ್ಯಮಯ ನೇಮಕಾತಿಗೆ ಆದ್ಯತೆ ನೀಡುತ್ತಿವೆ ಎಂದು ವರದಿಯಾಗಿದೆ.

Read Full Story

10:57 AM (IST) Jan 02

ಕೊಹ್ಲಿ ಹೊಸ ವರ್ಷದ ಪೋಸ್ಟ್‌ಗೆ 80 ಲಕ್ಷ ಲೈಕ್ಸ್; ವಿರುಷ್ಕಾ ಜೋಡಿ ನೋಡಿ ದೃಷ್ಠಿ ಆಗೋದು ಗ್ಯಾರಂಟಿ ಎಂದ ಫ್ಯಾನ್ಸ್

ದುಬೈ: 2026ರನ್ನು ಅದ್ದೂರಿಯಾಗಿ ಎಲ್ಲರೂ ಸ್ವಾಗತಿಸಿದ್ದೇವೆ. ಈ ಪೈಕಿ ವಿರಾಟ್ ಕೊಹ್ಲಿ ಹೊಸ ವರ್ಷವನ್ನು ದುಬೈನಲ್ಲಿ ಸ್ವಾಗತಿಸಿದ್ದಾರೆ. ಇದರ ನಡುವೆ ಪತ್ನಿ ಅನುಷ್ಕಾ ಜತೆಗಿನ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ ಹಂಚಿಕೊಂಡಿದ್ದು, ಕೇವಲ 24 ಗಂಟೆಯೊಳಗೆ 80 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.

Read Full Story

10:08 AM (IST) Jan 02

ಮುಗಿಲು ಮುಟ್ಟಿದ ಕೊಹ್ಲಿ-ರೋಹಿತ್ ಕ್ರೇಜ್‌; ಭಾರತ-ಕಿವೀಸ್ ಮೊದಲ ಒನ್‌ಡೇ ಮ್ಯಾಚ್ ಟಿಕೆಟ್ 8 ನಿಮಿಷದಲ್ಲಿ ಸೋಲ್ಡೌಟ್

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದ ಟಿಕೆಟ್‌ಗಳು ಕೇವಲ 8 ನಿಮಿಷಗಳಲ್ಲಿ ಸೋಲ್ಡ್‌ ಔಟ್‌ ಆಗಿವೆ. ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಆಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Read Full Story

09:34 AM (IST) Jan 02

ಮದುವೆ ಭರವಸೆ ನೀಡಿ ವೈದ್ಯನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ - ಬ್ಲ್ಯಾಕ್‌ಮೇಲ್

ಮದುವೆಯ ಭರವಸೆ ನೀಡಿ ವೈದ್ಯನೇ ನರ್ಸಿಂಗ್ ವಿದ್ಯಾರ್ಥಿ ಮೇಲೆ ಅತ್ಯಾ*ಚಾರವೆಸಗಿದ ಘಟನೆ ಉತ್ತರ ಪ್ರದೇಶದ ಕಿಯಾಸರ್‌ಬಾಗ್ ಸಮೀಪ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವೈದ್ಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read Full Story

More Trending News