Published : Apr 29, 2026, 05:25 AM ISTUpdated : Apr 29, 2026, 10:36 PM IST

India Latest News Live: Viral Video - ಮಗನ ಉಳಿಸಲು ರೈಲ್ವೆ ಹಳಿ ಮೇಲೆ ಜಿಗಿದ ಅಪ್ಪ- ಸಿನಿಮಾದಲ್ಲೂ ತೋರಿಸದ ಕ್ಲೈಮ್ಯಾಕ್ಸ್​

ಸಾರಾಂಶ

ಕೋಲ್ಕತಾ:‘ ಪಶ್ಚಿಮ ಬಂಗಾಳದಲ್ಲಿ ಬುಧವಾರ ನಡೆಯಲಿರುವ 2ನೇ ಹಂತದ ಚುನಾವಣೆಯಲ್ಲಿ ನಕಲಿ ಮತದಾನಕ್ಕಾಗಿ ಟಿಎಂಸಿ 700 ಕ್ಕೂ ಹೆಚ್ಚು ಕೃತಕ ಬೆರಳುಗಳನ್ನು ಖರೀದಿಸಿದೆ’ ಎಂದು ಭವಾನಿಪುರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೃಣಮೂಲ ಕಾಂಗ್ರೆಸ್‌ನ ಕೌನ್ಸಿಲರ್‌ ಒಬ್ಬರು ನಕಲಿ ಮತದಾನಕ್ಕಾಗಿ 700ಕ್ಕೂ ಹೆಚ್ಚು ಕೃತಕ ಬೆರಳುಗಳನ್ನು ಖರೀದಿಸಿದ್ದಾರೆ. ಇದು ಚುನಾವಣೆ ತಿರುಗಿಸುವ ಪ್ರಯತ್ನ. ನಾವು ಅಂತಹ ಪದ್ಧತಿಗಳನ್ನು ಅನುಮತಿಸುವುದಿಲ್ಲ’ ಎಂದಿದ್ದಾರೆ. ಇದಕ್ಕೆ ಟಿಎಂಸಿ ಪ್ರತಿಕ್ರಿಯಿಸಿದ್ದು, ‘ ಇದೊಂದು ಆಧಾರರಹಿತ ಆರೋಪ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತಹದ್ದು ಸಾಧ್ಯವಿಲ್ಲ’ ಎಂದಿದೆ.

10:36 PM (IST) Apr 29

Viral Video - ಮಗನ ಉಳಿಸಲು ರೈಲ್ವೆ ಹಳಿ ಮೇಲೆ ಜಿಗಿದ ಅಪ್ಪ- ಸಿನಿಮಾದಲ್ಲೂ ತೋರಿಸದ ಕ್ಲೈಮ್ಯಾಕ್ಸ್​

ರೈಲ್ವೆ ಹಳಿಯ ಮೇಲೆ ಆಕಸ್ಮಿಕವಾಗಿ ಬಿದ್ದ ಮಗುವನ್ನು, ವೇಗವಾಗಿ ಬರುತ್ತಿದ್ದ ರೈಲಿನಿಂದ ರಕ್ಷಿಸಲು ತಂದೆಯೊಬ್ಬರು ಪ್ರಾಣ ಪಣಕ್ಕಿಟ್ಟಿದ್ದಾರೆ. ಅರೆಕ್ಷಣವೂ ಯೋಚಿಸದೆ ಹಳಿಗೆ ಜಿಗಿದು ಮಗುವನ್ನು ಅಪ್ಪಿಕೊಂಡು ಮಲಗಿದ್ದರಿಂದ, ಇಬ್ಬರೂ ಪವಾಡಸದೃಶವಾಗಿ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
Read Full Story

10:32 PM (IST) Apr 29

ಮಾತಿನಿಂದಲೇ ಕೋಟಿ ಕೋಟಿ ಗಳಿಕೆ.. ಮೈಕ್‌ ಸಿಕ್ಕರೆ ಪಟಪಟನೆ ಮಾತನಾಡೋ ಈ ಸ್ಟಾರ್‌ ಆಂಕರ್‌ ಸಂಭಾವನೆ ಇಷ್ಟೊಂದಾ?

ದಶಕಗಳಿಂದ ಕಿರುತೆರೆಯಲ್ಲಿ ಸ್ಟಾರ್ ಆಂಕರ್ ಆಗಿ ಮೆರೆಯುತ್ತಿರುವ ಸುಮಾ ಕನಕಾಲ, ತಮ್ಮ ಮಾತಿನ ಚಾತುರ್ಯದಿಂದಲೇ ಪ್ರಸಿದ್ಧರಾಗಿದ್ದಾರೆ. ಅವರು ಪ್ರತಿ ಟಿವಿ ಶೋ, ಸಿನಿಮಾ ಕಾರ್ಯಕ್ರಮಗಳಿಗೆ ಪಡೆಯುವ ಲಕ್ಷಾಂತರ ರೂಪಾಯಿ ಸಂಭಾವನೆ ಮತ್ತು ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

09:59 PM (IST) Apr 29

ಪುದುಚೇರಿಯಲ್ಲಿ ಕಮಲ-ಕೈ ನಡುವೆ ಬಿಗ್ ಫೈಟ್ - ಸಮೀಕ್ಷೆಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮೇಲುಗೈ!

ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದ್ದು, ಎನ್‌ಡಿಎ ಮತ್ತು ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಇದೆ. ನಟ ವಿಜಯ್ ಅವರ ಟಿವಿಕೆ ಪಕ್ಷದ ಪ್ರವೇಶದಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿವಿಧ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎಗೆ ಮುನ್ನಡೆ ನೀಡಿವೆ.

Read Full Story

09:18 PM (IST) Apr 29

Exit Polls ತಮಿಳುನಾಡಿನಲ್ಲಿ ಬಿರುಗಾಳಿ, ನಟ ವಿಜಯ್ ಪಕ್ಷಕ್ಕೆ 120 ಸ್ಥಾನ ಜೊತೆಗೆ ಸಿಎಂ ಎಂದ ಸಮೀಕ್ಷೆ

Exit Polls ತಮಿಳುನಾಡಿನಲ್ಲಿ ಬಿರುಗಾಳಿ, ನಟ ವಿಜಯ್ ಪಕ್ಷಕ್ಕೆ 120 ಸ್ಥಾನ ಜೊತೆಗೆ ಸಿಎಂ ಎಂದ ಸಮೀಕ್ಷೆ, ಎಂಕೆ ಸ್ಟಾಲಿನ್ ಅಧಿಕಾರ ಅಂತ್ಯಗೊಳಿಸಿ ನಟ ವಿಜಯ್ ಮುಖ್ಯಮಂತ್ರಿ ಸಾಧ್ಯತೆಗಳನ್ನು ಸಮೀಕ್ಷೆ ಹೇಳುತ್ತಿದೆ.

 

Read Full Story

08:59 PM (IST) Apr 29

ಕೇವಲ 87 ಸಾವಿರಕ್ಕೆ ಪವರ್‌ಫುಲ್ ಎಲೆಕ್ಟ್ರಿಕ್ ಸ್ಕೂಟರ್ - ಒಮ್ಮೆ ಚಾರ್ಜ್ ಮಾಡಿದರೆ 118 ಕಿಮೀ ಮೈಲೇಜ್!

ಅಂಫೇರ್ ಎಲೆಕ್ಟ್ರಿಕ್, ಮಧ್ಯಮ ವರ್ಗವನ್ನು ಗುರಿಯಾಗಿಸಿಕೊಂಡು 'ಮ್ಯಾಗ್ನಸ್ ನಿಯೋ' ಎಂಬ ಹೊಸ ಸ್ಕೂಟರ್ ಅನ್ನು ₹86,999 ಬೆಲೆಗೆ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಒಂದು ಚಾರ್ಜ್‌ಗೆ 118 ಕಿ.ಮೀ. ರೇಂಜ್ ನೀಡಲಿದ್ದು, ಸುಧಾರಿತ ತಂತ್ರಜ್ಞಾನ ಮತ್ತು ಆರಾಮದಾಯಕ ವಿನ್ಯಾಸವನ್ನು ಹೊಂದಿದೆ.
Read Full Story

08:44 PM (IST) Apr 29

ನೀನು ಯಾವ ದೇಗುಲ ಹೊಕ್ರೂ ಬಿಡೋಳಲ್ಲ, ಓಡಿ ಹೋಗಲು ಕೊನೆ ಅವಕಾಶ ಇದು - ಪ್ರಧಾನಿಗೆ ಧಮ್ಕಿ- ವಿಡಿಯೋ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಹಾಕುತ್ತಿರುವ ಮಹಿಳೆಯ ವಿಡಿಯೋವೊಂದು ವೈರಲ್ ಆಗಿದೆ. ಅಧಿಕಾರದಿಂದ ಕೆಳಗಿಳಿಯದಿದ್ದರೆ ದೇವಸ್ಥಾನದಲ್ಲಿಯೇ ಮುಗಿಸುವುದಾಗಿ ಆಕೆ ಎಚ್ಚರಿಸಿದ್ದಾಳೆ. ಈ ವಿಡಿಯೋದ ಸತ್ಯಾಸತ್ಯತೆ ಮತ್ತು ಮಹಿಳೆಯ ಗುರುತು ಇನ್ನೂ ದೃಢಪಟ್ಟಿಲ್ಲ.
Read Full Story

07:51 PM (IST) Apr 29

Keralam Exit Poll 2026 - ದೇವರ ನಾಡಿನಲ್ಲಿ ಧ್ವಜ ಹಾರಿಸಲಿದೆ ಕಾಂಗ್ರೆಸ್ ನೇತೃತ್ವದ ಯುಡಿಎಫ್‌!

ಕೇರಳದ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಆಡಳಿತಾರೂಢ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಅಧಿಕಾರ ಕಳೆದುಕೊಳ್ಳಲಿದೆ ಎನ್ನಲಾಗಿದೆ.

Read Full Story

07:25 PM (IST) Apr 29

Exit poll ತಮಿಳುನಾಡಿನಲ್ಲಿ ಸ್ಟಾಲಿನ್ ಪಕ್ಷಕ್ಕೆ ಅಧಿಕಾರ, ವಿಜಯ್ ಅಲೆಯಲ್ಲಿ ಸೊರಗಿದ ಬಿಜೆಪಿ

Exit poll ತಮಿಳುನಾಡಿನಲ್ಲಿ ಸ್ಟಾಲಿನ್ ಪಕ್ಷಕ್ಕೆ ಅಧಿಕಾರ, ವಿಜಯ್ ಅಲೆಯಲ್ಲಿ ಸೊರಗಿದ ಬಿಜೆಪಿ, ಎನ್‌ಡಿಎ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಡಿಎಂಗೆ ಅತೀ ದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದೆ.

 

Read Full Story

06:56 PM (IST) Apr 29

ಮನೆಯ ಡ್ರಾಯರ್‌ನಲ್ಲಿದ್ದ ಚಿನ್ನದ ಉಂಗುರ ಕದ್ದು ಮೈಗೆ ಹಾಕಿಕೊಂಡ ಹಾವು; ಬಳಿಕ ನಡೆದಿದ್ದೇ ರಣ ರೋಚಕ ಕಥೆ!

ಕಾಸರಗೋಡಿನ ಮನೆಯೊಂದರ ಟೇಬಲ್ ಡ್ರಾಯರ್‌ನಲ್ಲಿ ಇಟ್ಟಿದ್ದ ಚಿನ್ನದ ಉಂಗುರ, ಅಲ್ಲಿಗೆ ಬಂದಿದ್ದ ಕೇರೆ ಹಾವಿನ ಮೈಗೆ ಸಿಕ್ಕಿಹಾಕಿಕೊಂಡಿತ್ತು. ಮಕ್ಕಳು ಡ್ರಾಯರ್ ತೆರೆದಾಗ ಹಾವು ಕಂಡರೂ, ಅದೃಷ್ಟವಶಾತ್ ಏನೂ ಅನಾಹುತ ಆಗಿಲ್ಲ.

Read Full Story

06:54 PM (IST) Apr 29

ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್‌, ಸತತ ಮೂರನೇ ಬಾರಿಗೆ ಕಮಲ ಅರಳುವ ಸೂಚನೆ ನೀಡಿದ ಎಕ್ಸಿಟ್‌ ಪೋಲ್‌

ಅಸ್ಸಾಮ್ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಬಹುಮತವನ್ನು ಮುನ್ಸೂಚಿಸಿವೆ. ಆಕ್ಸಿಸ್ ಮೈ ಇಂಡಿಯಾ ಮತ್ತು ಮ್ಯಾಟ್ರಿಜ್‌ನಂತಹ ಪ್ರಮುಖ ಸಮೀಕ್ಷೆಗಳು, ಹಿಮಂತ ಬಿಸ್ವ ಶರ್ಮಾ ನೇತೃತ್ವದ ಸರ್ಕಾರವು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.

Read Full Story

06:27 PM (IST) Apr 29

ಅತ್ಯಂತ ವೇಗದ ಪ್ರಾಣಿ ಚೀತಾ ಜೀವಿತಾವಧಿಯ ಶೇಕಡಾ 90ರಷ್ಟು ಕಾಲ ವಿಶ್ರಾಂತಿಯಲ್ಲೇ ಕಳೆಯುದೇಕೆ?

ಭೂಮಿಯ ಮೇಲಿನ ಅತಿ ವೇಗದ ಪ್ರಾಣಿಯಾದ ಚೀತಾ, ತನ್ನ ಬೇಟೆಯ ನಂತರ ದೀರ್ಘಕಾಲ ವಿಶ್ರಾಂತಿ ಪಡೆಯುತ್ತದೆ. ಈ ಚೇತರಿಕೆಯ ಸಮಯವು ಅದರ ಮುಂದಿನ ಯಶಸ್ವಿ ಬೇಟೆಗೆ ಅತ್ಯಗತ್ಯವಾಗಿದೆ. ಇದೇ ರೀತಿ, ಮನುಷ್ಯರು ಕೂಡ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಸೋಲಿನ ನಂತರ ಚೇತರಿಸಿಕೊಳ್ಳುವುದು ಎಷ್ಟು ಮುಖ್ಯ ಗೊತ್ತಾ?

Read Full Story

06:23 PM (IST) Apr 29

ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಶೇ.90ರಷ್ಟು ವೋಟಿಂಗ್‌, ಕೇಂದ್ರದ ಮೇಲೆ ಮಮತಾ ಕಿಡಿ!

ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನವು ದಾಖಲೆಯ ಮತದಾನದ ಜೊತೆಗೆ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಕೇಂದ್ರ ಪಡೆಗಳು ಟಿಎಂಸಿ ಬೆಂಬಲಿಗರ ಮೇಲೆ ಹಲ್ಲೆ ನಡೆಸುತ್ತಿವೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರೆ, ಲಾಠಿ ಪ್ರಹಾರ, ಸಾವು ಮತ್ತು ಬಾಂಬ್ ಪತ್ತೆಯಂತಹ ಹಲವು ಅಹಿತಕರ ಘಟನೆಗಳು ವರದಿಯಾಗಿವೆ.
Read Full Story

06:06 PM (IST) Apr 29

ವಿಚ್ಛೇದನಕ್ಕಾಗಿ ಗಂಡನ ಸಹೋದರಿಯನ್ನೇ 'ಸವತಿ' ಮಾಡಿದ ಕಿಲಾಡಿ ಪತ್ನಿ! ಹೈಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಕೇಸ್!

ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬರು ವಿಚ್ಛೇದನ ಪಡೆಯಲು, ಪತಿಯ ತಂಗಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ನ್ಯಾಯಾಲಯಕ್ಕೆ ದಾರಿ ತಪ್ಪಿಸಿದ್ದಾರೆ. ಕೌಟುಂಬಿಕ ಫೋಟೋವನ್ನು ಸುಳ್ಳು ಸಾಕ್ಷ್ಯವಾಗಿ ಬಳಸಿ ಏಕಪಕ್ಷೀಯ ವಿಚ್ಛೇದನ ಪಡೆದಿದ್ದಾರೆ.

Read Full Story

06:03 PM (IST) Apr 29

ನಾಲ್ಕು ಹೆಂಡಿರ ಗಂಡನ ಜೊತೆ ಲಿವ್​-ಇನ್​ - ಮಗುವಾದ್ಮೇಲೆ ರೇ*ಪ್​ ಕೇಸ್​- 'ಸುಪ್ರೀಂ' ಮಹತ್ವದ ತೀರ್ಪು

ಯುವಕನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದು, ಮಗುವಾದ ಬಳಿಕ ಆತ ಮದುವೆಗೆ ನಿರಾಕರಿಸಿದಾಗ ಯುವತಿ ಅ*ತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಒಪ್ಪಿಗೆಯ ಸಹಬಾಳ್ವೆಯಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಅಂತಹ ಸಂಬಂಧದಿಂದ ಜನಿಸಿದ ಮಗುವಿಗೆ ಜೀವನಾಂಶ ಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ತಿಳಿಸಿದೆ.

Read Full Story

05:59 PM (IST) Apr 29

'ಆ ನಟನಿಗೆ ನನ್ನ ಹೃದಯದಲ್ಲಿ 'ಸ್ಪೆಷಲ್' ಸ್ಥಾನ ಇದೆ'.. ಸ್ವತಃ ತಾವೇ ಗುಟ್ಟು ಬಿಟ್ಟುಕೊಟ್ಟ ನಟಿ ಅನುಷ್ಕಾ ಶೆಟ್ಟಿ!

ಸಾಮಾನ್ಯವಾಗಿ ಹೊಸ ನಟಿಯರು ಚಿತ್ರರಂಗಕ್ಕೆ ಕಾಲಿಡುವಾಗ ಬಣ್ಣ ಬಣ್ಣದ ಪೋರ್ಟ್‌ಫೋಲಿಯೋ, ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡು ನಿರ್ದೇಶಕರ ಮುಂದೆ ನಿಲ್ಲುತ್ತಾರೆ. ಆದರೆ ಅನುಷ್ಕಾ ಕಥೆಯೇ ಬೇರೆ! ಚಿತ್ರರಂಗಕ್ಕೆ ಬರುವ ಮೊದಲು ಅವರು ಮುಂಬೈನಲ್ಲಿ ಇದ್ದರು. ಮುಂದೇನಾಯ್ತು ನೋಡಿ..

Read Full Story

05:19 PM (IST) Apr 29

ಪೆಟ್ರೋಲ್ ಡೀಸೆಲ್ ಕಾರಿಗೆ ಭವಿಷ್ಯವಿಲ್ಲ, ಶೀಘ್ರದಲ್ಲೇ ಯುಗಾಂತ್ಯ, ಸಂಚಲನ ಸೃಷ್ಟಿಸಿದ ನಿತಿನ್ ಗಡ್ಕರಿ

ಪೆಟ್ರೋಲ್ ಡೀಸೆಲ್ ಕಾರಿಗೆ ಭವಿಷ್ಯವಿಲ್ಲ, ಶೀಘ್ರದಲ್ಲೇ ಯುಗಾಂತ್ಯ, ಸಂಚಲನ ಸೃಷ್ಟಿಸಿದ ನಿತಿನ್ ಗಡ್ಕರಿ, ಗಡ್ಕರಿ ಹೇಳಿದಂತೆ ಇಂಧನ ಕಾರುಗಳು ಮ್ಯೂಸಿಯಂ ಸೇರಿಕೊಳ್ಳುತ್ತಾ? ಈ ಕಾರುಗಳನ್ನು ಗುಜುರಿ ಹಾಕಬೇಕಾ?

Read Full Story

05:09 PM (IST) Apr 29

ಕೋಳಿ ಸಾರು ಮಾಡ್ಲಿಲ್ಲ ಎಂದು ಹೆಂಡ್ತಿ ಮೇಲೆ ರೇಗಾಡಿದ ಗಂಡ, ಕೊಡಲಿಯಿಂದ ಕೊಚ್ಚಿ ಕೊಂದ ಪತ್ನಿ!

ತೆಲಂಗಾಣದ ಕಾಮರೆಡ್ಡಿಯಲ್ಲಿ, ಕೋಳಿ ಸಾರು ಮಾಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯು ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ. ಆರು ವರ್ಷಗಳ ದಾಂಪತ್ಯದ ನಡುವೆ ಆಗಾಗ್ಗೆ ನಡೆಯುತ್ತಿದ್ದ ಕೌಟುಂಬಿಕ ಕಲಹವು ಈ ಭೀಕರ ದುರಂತಕ್ಕೆ ಕಾರಣವಾಗಿದೆ.ರೆ.

Read Full Story

04:22 PM (IST) Apr 29

'ಇದು ಅಹಂಕಾರದ ಹೋರಾಟ' - 90 ವರ್ಷದ ವೃದ್ಧೆಗೆ 20 ವರ್ಷ ಕಾಯುವಂತೆ ಹೇಳಿದ ಬಾಂಬೆ ಹೈಕೋರ್ಟ್!

ವೈಯಕ್ತಿಕ ಪ್ರತಿಷ್ಠೆಗಾಗಿ 90 ವರ್ಷದ ವೃದ್ಧೆಯೊಬ್ಬರು ಹೂಡಿದ್ದ 20 ಕೋಟಿ ರೂ. ಮಾನನಷ್ಟ ಮೊಕದ್ದಮೆಯಿಂದ ಬಾಂಬೆ ಹೈಕೋರ್ಟ್ ಅಸಮಾಧಾನಗೊಂಡಿದೆ. ನ್ಯಾಯಾಂಗ ವ್ಯವಸ್ಥೆಯ ಸಮಯವನ್ನು ವ್ಯರ್ಥ ಮಾಡುವ ಇಂತಹ ಪ್ರಕರಣಗಳಿಂದಾಗಿ, ನ್ಯಾಯಾಲಯವು ವಿಚಾರಣೆಯನ್ನು 20 ವರ್ಷಗಳ ಕಾಲ ಮುಂದೂಡಿದೆ.

Read Full Story

03:43 PM (IST) Apr 29

ಭಾರತದಲ್ಲಿ ನೆಮ್ಮದಿಯ ನಿವೃತ್ತ ಜೀವನಕ್ಕೆ ಬೇಕು 40 ಕೋಟಿ ರೂಪಾಯಿ! ಸ್ಟಾರ್ಟ್ಅಪ್ ಸಂಸ್ಥಾಪಕನ ಲೆಕ್ಕಾಚಾರಕ್ಕೆ ಬೆಚ್ಚಿಬಿದ್ದ ನೆಟ್ಟಿಗರು

ಸಂಪತ್ತು ನಿರ್ವಹಣಾ ಸಂಸ್ಥೆ 'ಡೆಸರ್ವ್' ಸಹ-ಸಂಸ್ಥಾಪಕ ಸಂದೀಪ್ ಜೆತ್ವಾನಿ, ಮೆಟ್ರೋ ನಗರಗಳಲ್ಲಿ ಆರಾಮದಾಯಕ ನಿವೃತ್ತಿ ಜೀವನಕ್ಕೆ 60ನೇ ವಯಸ್ಸಿನಲ್ಲಿ 40 ಕೋಟಿ ರೂ. ನಿಧಿ ಬೇಕು ಎಂದು ಹೇಳಿದ್ದಾರೆ.

Read Full Story

03:36 PM (IST) Apr 29

ಬೀಚ್‌ನಲ್ಲಿ ಶವವಾಗಿ ಪತ್ತೆಯಾದ 22ರ ಫಾತಿಮಾ ಕೇಸ್‌ಗೆ ಟ್ವಿಸ್ಟ್, ರೈಲಿಗೆ ತಲೆಕೊಡಲು ಹೋದ ಪತಿ ಅರೆಸ್ಟ್

ಬೀಚ್‌ನಲ್ಲಿ ಶವವಾಗಿ ಪತ್ತೆಯಾದ 22ರ ಫಾತಿಮಾ ಕೇಸ್‌ಗೆ ಟ್ವಿಸ್ಟ್, ರೈಲಿಗೆ ತಲೆಕೊಡಲು ಹೋದ ಪತಿ ಅರೆಸ್ಟ್, ಆರಂಭದಲ್ಲಿ ಬದುಕು ಅಂತ್ಯಗೊಳಿಸಿದ ಅಥವಾ ಬೀಚ್‌ನಲ್ಲಿ ದುರಂತ ಅಂತ್ಯ ಎಂದೇ ಹೇಳಲಾಗಿತ್ತು. ಆದರೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

 

Read Full Story

03:35 PM (IST) Apr 29

ಪತ್ನಿಗೆ ಬೇರೊಬ್ಬ ವ್ಯಕ್ತಿಯ ಜತೆ ಅಫೇರ್‌ ಇದೆ, ಆದ್ರೂ ಜೊತೆಗಿದೀನಿ ಎಂದ ಪತಿ - ಕಾರಣ ಕೇಳಿದ್ರೆ.. OMG..!

ಜೀವನಶೈಲಿ ಎಂಬುದು ಕೇವಲ ಬಟ್ಟೆ ಅಥವಾ ಮನೆಗೆ ಸೀಮಿತವಲ್ಲ, ನಾವು ತೆಗೆದುಕೊಳ್ಳುವ ಕಠಿಣ ನಿರ್ಧಾರಗಳ ಮೇಲೆ ಅದು ನಿಂತಿರುತ್ತದೆ. ಈ ಪತಿಯ ಮುಂದಿರುವ ಪ್ರಶ್ನೆ ದೊಡ್ಡದಿದೆ: ಮಕ್ಕಳಿಗಾಗಿ ತನ್ನ ಸುಖವನ್ನು ಬಲಿ ಕೊಡಬೇಕೇ? ಅಥವಾ ಹೊಸ ಪ್ರೀತಿಯ ಬೆನ್ನೇರಿ ತನ್ನ ದಾರಿ ತಾನು ನೋಡಬೇಕೇ? ಈ ಕಥೆ ನಮಗೆ ಕಲಿಸುವ ಪಾಠವೇನು?

Read Full Story

02:02 PM (IST) Apr 29

ಸನ್‌ರೈಸರ್ಸ್ ಎದುರು ಮಾಡು ಇಲ್ಲವೇ ಮಡಿ ಮ್ಯಾಚ್‌ಗೆ ಸಜ್ಜಾದ ಮುಂಬೈ ಇಂಡಿಯನ್ಸ್! ಇಂದು ಕಣಕ್ಕಿಳೀತಾರಾ ರೋಹಿತ್ ಶರ್ಮಾ?

ಐಪಿಎಲ್‌ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಹಾರ್ದಿಕ್ ಪಾಂಡ್ಯ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಭರ್ಜರಿ ಫಾರ್ಮ್‌ನಲ್ಲಿರುವ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕೆ ರೋಹಿತ್ ಶರ್ಮಾ ಕಣಕ್ಕಿಳಿಯುತ್ತಾರಾ ಎಂಬ ಕುತೂಹಲ ಜೋರಾಗಿದೆ.
Read Full Story

01:32 PM (IST) Apr 29

ಹನಿಮೂನ್‌ನಲ್ಲಿ ಗಂಡನ ಕೊಂದ ಪತ್ನಿಗೆ ವರ್ಷದೊಳಗೆ ಸಿಕ್ತು ಜಾಮೀನು - ಜೈಲಿನಿಂದ ಬಿಡುಗಡೆಯಾದ ಸೋನಮ್

ಹನಿಮೂನ್‌ ವೇಳೆ ಗಂಡನ ಕೊಲೆ ಮಾಡಿ ಬಳಿಕ ನಾಟಕವಾಡಿ ದೇಶದೆಲ್ಲೆಡೆ ಸುದ್ದಿಯಾಗಿದ್ದ ಮೇಘಾಲಯ ಹನಿಮೂನ್ ಪ್ರಕರಣದ ಆರೋಪಿ ಸೋನಮ್ ರಘುವಂಶಿ ಘಟನೆ ನಡೆದು 10 ತಿಂಗಳ ಬಳಿಕ ಜೈಲಿನಿಂದ ಹೊರ ಬಂದಿದ್ದಾಳೆ.

Read Full Story

01:30 PM (IST) Apr 29

ರಿಯಾನ್ ಪರಾಗ್ ಅರೆಸ್ಟ್ ಆಗ್ತಾರಾ? ಇ-ಸಿಗರೇಟ್ ಸೇದಿದ್ದಕ್ಕೆ ಭಾರತದ ಕಾನೂನು ಹೇಳೋದೇನು?

ಪಂದ್ಯದ ಮಧ್ಯೆ ಡ್ರೆಸ್ಸಿಂಗ್ ರೂಮ್‌ನಲ್ಲೇ ಇ-ಸಿಗರೇಟ್ ಸೇದಿದ ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ರಿಯಾನ್ ಪರಾಗ್ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು? ಐಪಿಎಲ್, ಬಿಸಿಸಿಐ ನಿಯಮಗಳು ಹಾಗೂ ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತೆ? ನೋಡೋಣ ಬನ್ನಿ

Read Full Story

01:26 PM (IST) Apr 29

ಜಗತ್ತಿನ ಟಾಪ್ 10 ಅತಿದೊಡ್ಡ ಸಿನಿಮಾ ಇಂಡಸ್ಟ್ರಿಗಳು ಯಾವವು, ಭಾರತಕ್ಕೆ ಎಷ್ಟೇ ಸ್ಥಾನ? ಇಲ್ಲಿದೆ ಅಚ್ಚರಿಯ ಮಾಹಿತಿ!

ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ, ಅದೊಂದು ಬೃಹತ್ ಉದ್ಯಮ. ಜಗತ್ತಿನ ಪ್ರತಿಯೊಂದು ದೇಶವೂ ತನ್ನದೇ ಆದ ವಿಶಿಷ್ಟ ಶೈಲಿಯ ಸಿನಿಮಾಗಳನ್ನು ತಯಾರಿಸುತ್ತದೆ. ಆದರೆ, ಬಾಕ್ಸ್ ಆಫೀಸ್ ಗಳಿಕೆ, ನಿರ್ಮಾಣದ ವೇಗ ಮತ್ತು ಜಾಗತಿಕ ಪ್ರಭಾವದ ಆಧಾರದ ಮೇಲೆ ವಿಶ್ವದ ಟಾಪ್ 10 ಸಿನಿಮಾ ಇಂಡಸ್ಟ್ರಿಗಳು ಯಾವುವು? ಈ ಸ್ಟೋರಿ ನೋಡಿ..

Read Full Story

12:49 PM (IST) Apr 29

ಬೆಚ್ಚಿಬೀಳಿಸೋ ಘಟನೆ.. ಕುಡಿಯೋ ನೀರಿನ ಟ್ಯಾಂಕನ್ನು ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಜೋಡಿ; ಇಡೀ ಊರಿಗೇ ಗಂಡಾಂತರ!

ಇಷ್ಟು ಎತ್ತರದ ಟ್ಯಾಂಕ್ ಏರುವಾಗ ಅಕಸ್ಮಾತ್ ಕಾಲು ಜಾರಿದ್ದರೆ ಭೀಕರ ದುರಂತ ಸಂಭವಿಸುತ್ತಿತ್ತು. ಇಂತಹ ಕೃತ್ಯಗಳು ಕೇವಲ ಕಿಡಿಗೇಡಿಗಳ ಪ್ರಾಣಕ್ಕೆ ಅಪಾಯ ತರುವುದಲ್ಲದೆ, ಇಡೀ ಸಮುದಾಯದ ನೆಮ್ಮದಿಯನ್ನು ಕೆಡಿಸುತ್ತವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ಕೋಪಗೊಂಡಿದ್ದಾರೆ.. ಮುಂದೇನು?

Read Full Story

11:09 AM (IST) Apr 29

ಸೋಶಿಯಲ್ ಮೀಡಿಯಾದಲ್ಲಿ ತನ್ನ ಮೊದಲ ಸ್ಯಾಲರಿ ತೋರಿಸಿದ ಬ್ಯಾಂಕ್ ಆಫ್ ಬರೋಡಾ ಪ್ರೊಬೇಷನರಿ ಅಧಿಕಾರಿ - ಆಮೇಲೇನಾಯ್ತು?

ಬ್ಯಾಂಕ್ ಆಫ್ ಬರೋಡಾದ ಪ್ರೊಬೆಷನರಿ ಅಧಿಕಾರಿಯೊಬ್ಬರು ತಮ್ಮ 40 ದಿನಗಳ ಮೊದಲ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದು, ಅವರ ವೇತನ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಪ್ರೊಬೆಷನರಿ ಅಧಿಕಾರಿಗೆ ಇರುವ ವೇತನ ಹಾಗೂ ಸವಲತ್ತುಗಳೇನು ಇಲ್ಲಿದೆ ಡಿಟೇಲ್ ಸ್ಟೋರಿ…

Read Full Story

10:40 AM (IST) Apr 29

ನೀವು ಹಸಿವು ಎಂದೊಡನೆ ನಿಮ್ಮಿಷ್ಟದ ಊಟ ಆರ್ಡರ್ - ಸ್ವಿಗ್ಗಿಯಿಂದ ಹೊಸ ಕ್ರಾಂತಿ, 'ಬಿಲ್ಡರ್ಸ್ ಕ್ಲಬ್' ಶುರು!

ಸ್ವಿಗ್ಗಿ ಸಂಸ್ಥೆಯು 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದ್ದು, ಡೆವಲಪರ್‌ಗಳು ಎಐ ಏಜೆಂಟ್‌ಗಳನ್ನು ನಿರ್ಮಿಸಲು ಆಹ್ವಾನಿಸಿದೆ. ಈ ತಂತ್ರಜ್ಞಾನವು ಗ್ರಾಹಕರ ಇಷ್ಟಗಳನ್ನು ಅರಿತು, 'ನನಗೆ ಹಸಿವಾಗ್ತಿದೆ' ಎಂದು ಟೈಪ್ ಮಾಡಿದರೆ ಸಾಕು, ತಾನಾಗಿಯೇ ಊಟವನ್ನು ಆರ್ಡರ್ ಮಾಡಲಿದೆ.

Read Full Story

09:43 AM (IST) Apr 29

IPL 2026 - ನಿನ್ನೆ ನಡೆದ ಪಂಜಾಬ್ ಕಿಂಗ್ಸ್ - ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಮುಲ್ಲಾನ್‌ಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಅದರ ಅಜೇಯ ಓಟಕ್ಕೆ ಅಂತ್ಯ ಹಾಡಿದೆ. ಪಂಜಾಬ್ ನೀಡಿದ 223 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ ಯಶಸ್ವಿಯಾಗಿ ಬೆನ್ನಟ್ಟಿದ್ದು, ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ವೇಗದ 400 ರನ್‌ಗಳ ದಾಖಲೆ ನಿರ್ಮಿಸಿದರು.
Read Full Story

09:07 AM (IST) Apr 29

ರಷ್ಯಾದಿಂದ ಬಂತು ನಾಲ್ಕನೇ ಅಸ್ತ್ರ - ಭಾರತದ ಶತ್ರು ರಾಷ್ಟ್ರಗಳಿಗೆ ಶುರುವಾಯ್ತು ನಡುಕ

ರಷ್ಯಾದಿಂದ ಭಾರತ ಖರೀದಿಸಿರುವ ಐದು ಎಸ್-400 ಕ್ಷಿಪಣಿ ವ್ಯವಸ್ಥೆಗಳ ಪೈಕಿ ನಾಲ್ಕನೆಯದು ಶೀಘ್ರದಲ್ಲೇ ಬರಲಿದೆ. ಈ ಹಿಂದೆ 'ಆಪರೇಷನ್ ಸಿಂದೂರ'ದ ಯಶಸ್ಸಿಗೆ ಕಾರಣವಾಗಿದ್ದ ಈ ವ್ಯವಸ್ಥೆಯು, ಭಾರತದ ವಾಯುರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.
Read Full Story

07:52 AM (IST) Apr 29

ಪಂಚರಾಜ್ಯ ಚುನಾವಣೆ ಮುಗಿಯುವ ಮುನ್ನವೇ 7 ರಾಜ್ಯಗಳಲ್ಲಿ ಕಮಲ ಅರಳಿಸಲು ಮುಂದಾದ ಬಿಜೆಪಿ

ಪಂಚರಾಜ್ಯ ಚುನಾವಣೆ ಫಲಿತಾಂಶಕ್ಕೆ ಕಾಯದೆ ಬಿಜೆಪಿ 2027ರಲ್ಲಿ ನಡೆಯಲಿರುವ 7 ರಾಜ್ಯಗಳ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಮತ್ತೊಂದೆಡೆ, ಪ್ರಧಾನಿ ಮೋದಿ ವಾರಾಣಸಿಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಭರವಸೆ ನೀಡಿದ್ದು, ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
Read Full Story

07:49 AM (IST) Apr 29

ಯುದ್ಧದ ಮಧ್ಯೆ ‘ಒಪೆಕ್‌’ಗೆ ಯುಎಇ ಗುಡ್‌ಬೈ! ತೈಲಬೆಲೆ ಮೇಲೆ ಎಫೆಕ್ಟ್?

ಜಾಗತಿಕ ತೈಲ ಬಿಕ್ಕಟ್ಟಿನ ನಡುವೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಪೆಕ್ ಮತ್ತು ಒಪೆಕ್+ ಕೂಟದಿಂದ ಹೊರಬರಲು ನಿರ್ಧರಿಸಿದೆ. ತನ್ನ ಆರ್ಥಿಕ ಹಿತಾಸಕ್ತಿ, ಉತ್ಪಾದನಾ ಗುರಿಗಳು ಮತ್ತು ಸೌದಿ ಅರೇಬಿಯಾದೊಂದಿಗಿನ ಹದಗೆಟ್ಟ ಸಂಬಂಧಗಳು ಈ ನಿರ್ಧಾರಕ್ಕೆ ಕಾರಣವಾಗಿದ್ದು, ಇದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
Read Full Story

07:30 AM (IST) Apr 29

ಬ್ರಹ್ಮಾಸ್ತ್ರವೇ ಆಯ್ತು ಇರಾನ್‌ಗೆ ಹೊಸ ತಲೆನೋವು; ಅಮೆರಿಕ ಚಕ್ರವ್ಯೂಹದಲ್ಲಿ ಖಮೇನಿ?

ಅಮೆರಿಕದ ನೌಕಾ ನಿರ್ಬಂಧದಿಂದಾಗಿ ಇರಾನ್‌ಗೆ ತೈಲ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಂಗ್ರಹಾಗಾರಗಳು ತುಂಬಿದ್ದು, ಉತ್ಪಾದನೆ ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ದೇಶದ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದ್ದು, ಜನ ದಂಗೆ ಏಳುವ ಸಾಧ್ಯತೆಯನ್ನೂ ಸೃಷ್ಟಿಸಿದೆ

07:18 AM (IST) Apr 29

ಪಾಕಿಸ್ತಾನ ಬಳಿ ಒಂದು ದಿನಕ್ಕೂ ಆಗುವಷ್ಟು ತೈಲ ದಾಸ್ತಾನು ಇಲ್ಲ! ಖುದ್ದು ಪಾಕ್‌ ತೈಲ ಸಚಿವನಿಂದ ದೇಶದ ದುಸ್ಥಿತಿ ಬಹಿರಂಗ

ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಮಲಿಕ್‌, ಭಾರತದ ಬೃಹತ್ ವ್ಯೂಹಾತ್ಮಕ ತೈಲ ಸಂಗ್ರಹ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ 60-70 ದಿನಗಳ ಬೇಡಿಕೆ ಪೂರೈಸಬಲ್ಲದು, ಆದರೆ ಪಾಕಿಸ್ತಾನದಲ್ಲಿ ಒಂದು ದಿನದ ಸಂಗ್ರಹವೂ ಇಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
Read Full Story

06:55 AM (IST) Apr 29

ಪ್ಲೀಸ್ ಒಂದು ಸಹಿ ಮಾಡಿ ಪುಣ್ಯ ಕಟ್ಕೊಳ್ಳಿ - ಭಾರತದ ಮುಂದೆ ಮತ್ತೆ ಕೈ ಚಾಚಿದ ಪಾಕಿಸ್ತಾನ

ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಮಲಿಕ್‌, ಭಾರತದ ಬೃಹತ್ ವ್ಯೂಹಾತ್ಮಕ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ತಮ್ಮ ದೇಶದಲ್ಲಿ ಕನಿಷ್ಠ ಒಂದು ದಿನದ ಅಗತ್ಯ ಪೂರೈಸುವ ಸಂಗ್ರಹಾಗಾರವೂ ಇಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದಾರೆ.

Read Full Story

06:39 AM (IST) Apr 29

ಇರಾನ್‌ ಶಾಂತಿ ಪ್ರಸ್ತಾಪಗಳಿಗೆ ಡೊನಾಲ್ಡ್ ಟ್ರಂಪ್‌ ನಕಾರ; ಅಣ್ವಸ್ತ್ರ ಬಿಟ್ಟು ಚರ್ಚೆ ಇಲ್ಲ

ಮಧ್ಯಪ್ರಾಚ್ಯ ಯುದ್ಧ ಸ್ಥಗಿತಗೊಳಿಸಲು ಇರಾನ್ ಮುಂದಿಟ್ಟಿದ್ದ ಮೂರು ಹಂತದ ಶಾಂತಿ ಪ್ರಸ್ತಾಪವನ್ನು ಅಮೆರಿಕ ತಿರಸ್ಕರಿಸಿದೆ. ಅಣ್ವಸ್ತ್ರ ವಿಷಯವನ್ನು ಕೊನೆಯ ಹಂತಕ್ಕೆ ಸೇರಿಸಿದ್ದೇ ಅಮೆರಿಕದ ನಕಾರಕ್ಕೆ ಕಾರಣವಾಗಿದ್ದು, ಇದರಿಂದಾಗಿ ಉಭಯ ದೇಶಗಳ ನಡುವೆ ಸಂಧಾನದ ಆಸೆ ದೂರವಾಗಿದೆ.
Read Full Story

05:34 AM (IST) Apr 29

ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು - ಇಂದು ಸಮೀಕ್ಷೆ ಪ್ರಕಟ, ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ

ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನದೊಂದಿಗೆ ಪಂಚರಾಜ್ಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೇ 4 ರ ಅಧಿಕೃತ ಫಲಿತಾಂಶಕ್ಕೂ ಮುನ್ನ, ಇಂದು ಸಂಜೆ ಪ್ರಕಟವಾಗಲಿರುವ ಮತದಾನೋತ್ತರ ಸಮೀಕ್ಷೆಗಳು ಸಂಭವನೀಯ ಗೆಲುವಿನ ಸುಳಿವು ನೀಡಲಿವೆ.
Read Full Story

More Trending News