LIVE NOW
Published : Feb 28, 2026, 05:21 AM ISTUpdated : Feb 28, 2026, 08:01 AM IST

India Latest News Live: ಕೋಟ್ಯಂತರ ಹಣ ಹೊತ್ತೊಯ್ಯುತ್ತಿದ್ದ ವಿಮಾನ ಹೆದ್ದಾರಿಯಲ್ಲಿ ಪತನ, ರಸ್ತೆಯುದ್ದಕ್ಕೂ ನೋಟುಗಳ ರಾಶಿ!

ಸಾರಾಂಶ

ನವದೆಹಲಿ: ಸುದರ್ಶನ ಚಕ್ರ ಎಂದೇ ಖ್ಯಾತಿ ಪಡೆದ ಭಾರತದ ‘ಎಸ್‌-400’ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯು ಶತ್ರು ಕ್ಷಿಪಣಿಯನ್ನು 300 ಕಿ.ಮೀ. ದೂರದಿಂದಲೇ ಪತ್ತೆಹಚ್ಚಿ, ನಾಶ ಮಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಸೇನೆ ಇದೀಗ ಬಿಡುಗಡೆ ಮಾಡಿದೆ. ಇಷ್ಟೊಂದು ದೂರದ ಗುರಿ ಭೇದಿಸುವ ವಿಡಿಯೋ ರೆಕಾರ್ಡ್‌ ಮಾಡಿದ್ದು ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

Bolivia Plane Crash

08:01 AM (IST) Feb 28

ಕೋಟ್ಯಂತರ ಹಣ ಹೊತ್ತೊಯ್ಯುತ್ತಿದ್ದ ವಿಮಾನ ಹೆದ್ದಾರಿಯಲ್ಲಿ ಪತನ, ರಸ್ತೆಯುದ್ದಕ್ಕೂ ನೋಟುಗಳ ರಾಶಿ!

ಬೊಲಿವಿಯಾ ರಾಜಧಾನಿ ಸಮೀಪ ಹೊಸ ನೋಟುಗಳನ್ನು ಸಾಗಿಸುತ್ತಿದ್ದ ಕಾರ್ಗೋ ವಿಮಾನ ಪತನಗೊಂಡು ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ರನ್-ವೇಯಿಂದ ಜಾರಿದ ವಿಮಾನ ಹೆದ್ದಾರಿಗೆ ನುಗ್ಗಿದ್ದರಿಂದ, ರಸ್ತೆಯುದ್ದಕ್ಕೂ ಚಲಾವಣೆಯಲ್ಲಿಲ್ಲದ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
Read Full Story

07:08 AM (IST) Feb 28

₹91 ಲಕ್ಷ ಕನ್ನ ಹಾಕಿದವರ ಸುಳಿವು ನೀಡಿದ ಬ್ಯಾಗ್‌! ಸಿನಿಮೀಯ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದ ಕಳ್ಳರು!

ಬೆಂಗಳೂರಿನ ಸದಾಶಿವನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಕಚೇರಿಯಿಂದ 91 ಲಕ್ಷ ರೂ. ದೋಚಿದ್ದ ಕ್ಯಾಷಿಯರ್ ಧನಂಜಯ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 81 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

Read Full Story

06:35 AM (IST) Feb 28

ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣ ಪ್ರವೇಶ?

ಭಟ್ಕಳ ನಗರದ ಹಿಂದೂ ಸಮ್ಮೇಳನ ಸಮಿತಿಯಿಂದ ಮಾರ್ಚ್‌ 8ರಂದು ಸಂಜೆ ನಡೆಯುವ ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪಾಲ್ಗೊಳ್ಳಲಿದ್ದಾರೆ.

Read Full Story

06:26 AM (IST) Feb 28

ಅಂಡಾಣು ಮಾರಾಟ ದಂಧೆ - ಬೆಂಗಳೂರಿನಲ್ಲಿ ತೀವ್ರ ನಿಗಾ - ಐವಿಎಫ್‌ ಕೇಂದ್ರಗಳ ಮೇಲೆ ಕಣ್ಗಾವಲು

ಬೆಂಗಳೂರಿನಲ್ಲೂ ಅಂಡಾಣು ಮಾರಾಟ ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಗರದ ಐವಿಎಫ್‌ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

Read Full Story

06:14 AM (IST) Feb 28

ಯಾವ ಶಾಸಕರೂ ನನ್ನ ಪರ ದೆಹಲಿಗೆ ಹೋಗಬೇಡಿ - ಡಿಕೆ ಶಿವಕುಮಾರ್‌

ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ. ಅವರಿಗೆ ಸಮಸ್ಯೆಯಿದ್ದರೆ ಹೋಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಪರವಾಗಿರುವ ಶಾಸಕರು ಡಿನ್ನರ್‌ ಸಭೆ ನಡೆಸಿ, ದೆಹಲಿಗೆ ಹೋಗುವ ಸಾಧ್ಯತೆ ಕುರಿತು ಸುಳಿವು ನೀಡುತ್ತಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

Read Full Story

06:06 AM (IST) Feb 28

ಅಚ್ಚರಿಯ ನಡೆಯೊಂದರಲ್ಲಿ ಜಯಲಲಿತಾ ಶಿಷ್ಯ ಪನ್ನೀರ್‌ಸೆಲ್ವಂ ಡಿಎಂಕೆಗೆ !

ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ, ಅಚ್ಚರಿಯ ನಡೆಯೊಂದರಲ್ಲಿ ಅಣ್ಣಾ ಡಿಎಂಕೆ ಮಾಜಿ ಅಧಿನಾಯಕಿ ದಿ. ಜೆ. ಜಯಲಲಿತಾ ಅವರ ಕಟ್ಟಾ ಶಿಷ್ಯ, 3 ಬಾರಿಯ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಶುಕ್ರವಾರ ಆಡಳಿತಾರೂಢ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ.

Read Full Story

06:01 AM (IST) Feb 28

ಪಾಕಿಸ್ತಾನ- ಅಫಘಾನಿಸ್ತಾನ ಮಧ್ಯೆ ಉಗ್ರ ಯುದ್ಧ - ಯುದ್ಧಕ್ಕೆ 200 ಸಾವು

ಗಡಿ ಸಮಸ್ಯೆ ಹಾಗೂ ಗಡಿಯಲ್ಲಿನ ತಾಲಿಬಾನ್‌ ಭಯೋತ್ಪಾದನೆ ಸಮಸ್ಯೆ ಮುಂದಿಟ್ಟುಕೊಂಡು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಇದೀಗ ಮತ್ತೊಮ್ಮೆ ನೇರಾನೇರ ಸಂಘರ್ಷಕ್ಕಿಳಿದಿದ್ದು, ಶುಕ್ರವಾರ ಭಾರೀ ದಾಳಿ-ಪ್ರತಿ ದಾಳಿ ನಡೆಸಿವೆ. ಇದರಿಂದಾಗಿ ಒಟ್ಟು ಎರಡೂ ಕಡೆ ಸೇರಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

Read Full Story

05:49 AM (IST) Feb 28

‘ಡಾಲ್ಫಿನ್ ಹಂಟರ್’ ಐಎನ್ಎಸ್ ಅಂಜದೀಪ್ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ

ಶತ್ರು ಜಲಾಂತರ್ಗಾಮಿ ನೌಕೆಗಳ ಪತ್ತೆ, ಟ್ರ್ಯಾಕಿಂಗ್ ಮತ್ತು ನಾಶಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ, ಡಾಲ್ಫಿನ್‌ ಹಂಟರ್‌ ಎಂದೇ ಪ್ರಸಿದ್ಧವಾದ ಐಎನ್‌ಎಸ್‌ ಅಂಜದೀಪ್ ಯುದ್ಧನೌಕೆ ಶುಕ್ರವಾರ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ.

Read Full Story

More Trending News