ಢಾಕಾ: ಅರ್ಚಕನೊಬ್ಬನನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕರೆದೊಯ್ದ 3 ದಿನಗಳ ಬಳಿಕ ಆತನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಾಂಗ್ಲಾದೇಶದ ಚಟ್ಟೋಗ್ರಾಮ ಜಿಲ್ಲೆಯಲ್ಲಿ ನಡೆದಿದೆ. ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಮಧ್ಯೆ ಈ ಘಟನೆ ಆತಂಕ ಮೂಡಿಸಿದೆ.
ದೋಹಝರಿ ನಿವಾಸಿ ನಯನ್ ಸಾಧು (40) ಮೃತ ವ್ಯಕ್ತಿ. ಏ.19ರ ಸಂಜೆ ಇಬ್ಬರು ಅಪರಿಚಿತರು ನಯನ್ರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. 3 ದಿನಗಳ ನಂತರ, ಗ್ರಾಮದ ಹೊರವಲಯದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಮರಕ್ಕೆ ನೇತಾಡುತ್ತಿರುವ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಕೊ*ಲೆಯೋ ಅಥವಾ ಆತ್ಮಹ*ತ್ಯೆಯೋ ಎಂಬುದು ಖಚಿತವಾಗಿಲ್ಲ.
11:21 PM (IST) Apr 27
07:12 PM (IST) Apr 27
ಸದ್ಯಕ್ಕೆ ಮಹೇಶ್ ಬಾಬು ಅವರು ತಮ್ಮ ಗೆಟಪ್ ಮತ್ತು ಲುಕ್ ಮೇಲೆ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. 2027ಕ್ಕೆ ರಾಜಮೌಳಿ ಸಿನಿಮಾ ಮೂಲಕ ವಿಶ್ವಾದ್ಯಂತ ಸದ್ದು ಮಾಡಿದ ನಂತರ, ಮಹೇಶ್ ಬಾಬು ಅವರ ಮಿಂಚಿನ ವೇಗದ ಸಿನಿಮಾಗಳು ಅಭಿಮಾನಿಗಳನ್ನು ರಂಜಿಸಲಿವೆ. ಮುಂದೆ ಫ್ಯಾನ್ಸ್ಗೆ ಹಬ್ಬ ಕಾದಿದೆ.
07:02 PM (IST) Apr 27
ಪಶ್ಚಿಮ ಬಂಗಾಳದ 2ನೇ ಹಂತದ ಮತದಾನಕ್ಕೂ ಮುನ್ನ ಮೋದಿ ಆಡಿಯೋ ಸಂಚಲನ ಸೃಷ್ಟಿಸಿದೆ. ಮೇ.4ರಂದು ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಮುನ್ಸೂಚನೆ ನೀಡಿದ್ರಾ? ಮೋದಿ ಹಂಚಿಕೊಂಡ ಆಡಿಯೋದಲ್ಲಿ ಏನಿದೆ
05:28 PM (IST) Apr 27
ಮಹಿಳಾ ಅಧಿಕಾರಿಯೊಬ್ಬರಿಗೆ ಹೂತು ಹಾಕುವುದಾಗಿ ಸಚಿವರೊಬ್ಬರ ಸೋದರ ಬೆದರಿಕೆ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಚಿತ್ರ ಎಂದರೆ ಈ ರೀತಿ ಬೆದರಿಕೆ ಹಾಕಿದ ಆರೋಪಿಗೆ ಬಂಧನವಾದ ಕೆಲ ಗಂಟೆಗಳಲ್ಲೇ ಬೇಲ್ ಸಿಕ್ಕಿದೆ.
05:23 PM (IST) Apr 27
ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು, ಊಟದ ಬಳಿಕ ಸಂಬಂಧಿಕರ ಜೊತೆ ಮಾತನಾಡುತ್ತಾ ಕಾಲ ಕಳೆದ ಕುಟುಂಬ ಮಲಗುವ ಮುನ್ನ ಕಲ್ಲಂಗಡಿ ತಿಂದಿದ್ದಾರೆ.
05:11 PM (IST) Apr 27
04:50 PM (IST) Apr 27
ರಿಲಯನ್ಸ್ ಜಿಯೋ ಯುವಕರು ಮತ್ತು ಗೇಮರುಗಳಿಗಾಗಿ ₹459 ರ "ಯೂತ್ ಅಂಡ್ ಗೇಮಿಂಗ್" ಪ್ಲಾನ್ ಪರಿಚಯಿಸಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ, ಸ್ನ್ಯಾಪ್ಚಾಟ್ ಪ್ಲಸ್, ಫ್ಯಾನ್ಕೋಡ್ ಮತ್ತು 18 ತಿಂಗಳ ಗೂಗಲ್ ಜೆಮಿನಿ ಪ್ರೊ ಚಂದಾದಾರಿಕೆ ಒಳಗೊಂಡಿದೆ.
04:47 PM (IST) Apr 27
04:33 PM (IST) Apr 27
ಆರಂಭದಲ್ಲಿ ವೃತ್ತಿ ಆಧರಿತವಾಗಿದ್ದ ವರ್ಣ ವ್ಯವಸ್ಥೆಯು ಕಾಲಕ್ರಮೇಣ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ. ಇದರ ನಡುವೆ, ಉತ್ತರ ಪ್ರದೇಶದಲ್ಲಿ 10,000 ದಲಿತರು ಜನಿವಾರ ಧರಿಸಿ ಬ್ರಾಹ್ಮಣ್ಯವನ್ನು ಸ್ವೀಕರಿಸಿದ್ದಾರೆ. ಸಮಾನತೆ ಮತ್ತು ರಾಜಕೀಯ ಒಡಕಿನ ವಿರುದ್ಧದ ಪ್ರತಿರೋಧವೇ ಈ ನಿರ್ಧಾರಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.
04:23 PM (IST) Apr 27
1882ರ ಕೇದಾರನಾಥ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ, ಸನಾತನ ಹಿರಿಮೆಗೆ ಸಾಟಿ ಎಲ್ಲಿ? ಬರೋಬ್ಬರಿ 144 ವರ್ಷ ಹಿಂದೆ ತೆಗೆದ ಫೋಟೋ ಇದು. ರಸ್ತೆ, ರೈಲು, ಹೆಲಿಕಾಪ್ಟರ್ ಇಲ್ಲದ ಕಾಲ. ಇದರ ನಡುವೆ ಯಾತ್ರೆ ನಿರಂತರವಾಗಿತ್ತು
03:36 PM (IST) Apr 27
03:28 PM (IST) Apr 27
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಕ್ರಮ್ ಮತ್ತು ಅವರ ಮಗ ಧ್ರುವ್ ವಿಕ್ರಮ್ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. 30ರ ಹರೆಯದಲ್ಲಿರುವ ಧ್ರುವ್ ವಿಕ್ರಮ್ ಸದ್ಯ ಕಾಲಿವುಡ್ನ ಬೇಡಿಕೆಯ ಯುವ ನಟ. ಆದರೆ ಅಚ್ಚರಿಯ ಸಂಗತಿಯೆಂದರೆ, ಮಗನ ಪಕ್ಕದಲ್ಲಿ ತಂದೆ ವಿಕ್ರಮ್ ನಿಂತರೆ ಮಗನಿಗಿಂತ ತಂದೆಯೇ ಹೆಚ್ಚು ಎನರ್ಜಿಟಿಕ್ ಮತ್ತು ಯಂಗ್ ಆಗಿ ಕಾಣುತ್ತಾರೆ.
03:20 PM (IST) Apr 27
02:55 PM (IST) Apr 27
ದಕ್ಷಿಣ ಭಾರತದ ಊಟದ ಪದ್ಧತಿಯಲ್ಲಿ 'ಮೊಸರನ್ನ'ಕ್ಕೆ (Curd Rice) ಒಂದು ವಿಶೇಷ ಸ್ಥಾನವಿದೆ. ಏನೇ ತಿಂದರೂ, ಕೊನೆಯಲ್ಲಿ ಸ್ವಲ್ಪ ಮೊಸರನ್ನ ತಿನ್ನದಿದ್ದರೆ ಊಟ ಪೂರ್ಣವಾಗುವುದಿಲ್ಲ ಎಂಬ ನಂಬಿಕೆ ನಮ್ಮದು. ಆದರೆ, ರುಚಿ ಹಾಗೂ ಕೂಲ್ ಮೊಸರನ್ನ ಮಾಡಲು ಹಲವರಿಗೆ ಬರಲ್ಲ, ಟಿಪ್ಸ್ ಇಲ್ಲಿದೆ ನೋಡಿ..
01:06 PM (IST) Apr 27
ದೇವತೆಗಳು ಮತ್ತು ಸಿದ್ಧ ಪುರುಷರ ಸಂಚಾರ ಭೂಮಿಯಲ್ಲಿ ಹೆಚ್ಚಾಗಿರುತ್ತದೆ. ಅವರು ಸೂಕ್ಷ್ಮ ರೂಪದಲ್ಲಿ ಸಂಚರಿಸುವಾಗ, ನಾವು ಎಚ್ಚರವಾಗಿದ್ದು ಪ್ರಾರ್ಥಿಸಿದರೆ ಅವರ ಆಶೀರ್ವಾದ ಸುಲಭವಾಗಿ ಸಿಗುತ್ತದೆ. ಇಂದು ಪಾಶ್ಚಿಮಾತ್ಯ ದೇಶಗಳ ಹಲವು ದೊಡ್ಡ ಉದ್ಯಮಿಗಳು ಬೆಳಗ್ಗೆ ಬೇಗ ಏಳುವುದನ್ನು ಪಾಲಿಸುತ್ತಿದ್ದಾರೆ. ನಮ್ಮ ಪೂರ್ವಜರು ಏನ್ ಹೇಳಿದ್ದಾರೆ? ನೋಡಿ..
12:48 PM (IST) Apr 27
12:39 PM (IST) Apr 27
ಬರ್ತ್ಡೇ ಪಾರ್ಟಿಗಳಲ್ಲಿ ಸ್ನೇಹಿತರು ಮುಖಕ್ಕೆ ಕೇಕ್ ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಈ ರೀತಿ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಮೂರು ಹೆಣ ಬಿದ್ದಿದೆ. ಬರ್ತ್ಡೇ ಬಾಯ್ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಆರಂಭವಾದ ಜಗಳ ಮೂವರು ಸ್ನೇಹಿತರ ಕೊಲೆಯಲ್ಲಿ ಅಂತ್ಯವಾಗಿದೆ.
12:37 PM (IST) Apr 27
12:30 PM (IST) Apr 27
ವಿದೇಶದಲ್ಲಿ ಓದಲು ಹೋಗುವ ಎಷ್ಟೋ ಭಾರತೀಯ ವಿದ್ಯಾರ್ಥಿಗಳು ದೊಡ್ಡ ಸವಾಲುಗಳನ್ನೇ ಎದುರಿಸುತ್ತಾರೆ. ಓದಿನ ಜೊತೆಗೆ ಪಾರ್ಟ್-ಟೈಮ್ ಕೆಲಸ ಮಾಡಿಕೊಂಡೇ ತಮ್ಮ ಜೀವನವನ್ನು ಸಾಗಿಸುತ್ತಾರೆ. ಇದೀಗ, ಕೆನಡಾದಲ್ಲಿರುವ ವಿದ್ಯಾರ್ಥಿನಿಯೊಬ್ಬಳ ಕಥೆ ವಿಡಿಯೋ ಮೂಲಕ ವೈರಲ್ ಆಗ್ತಿದೆ..
12:18 PM (IST) Apr 27
11:37 AM (IST) Apr 27
ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಮತ್ತೊಬ್ಬ ಕುಖ್ಯಾತ ಭಯೋತ್ಪಾದಕನ ಕತೆ ಮುಗಿಸಿದ್ದಾರೆ. ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಶೇಕ್ ಯೂಸುಫ್ ಅಫ್ರಿದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
11:34 AM (IST) Apr 27
11:13 AM (IST) Apr 27
ನ್ಯಾಷನಲ್ ಅವಾರ್ಡ್ ವಿನ್ನರ್, ಕಾಲಿವುಡ್ನ ‘ಅಸುರ’ ಧನುಷ್ ಜೊತೆ ನಾಯಕಿಯಾಗಿ ನಟಿಸುವ ಬಂಪರ್ ಆಫರ್ ಚೈತ್ರಾ ಪಾಲಿಗೆ ಬಂದಿತ್ತು. ಆದರೆ, ವಿಧಿಯ ಆಟವೇ ಬೇರೆ ಇತ್ತು. ಶೂಟಿಂಗ್ ಹಂತದವರೆಗೂ ಹೋಗಿದ್ದ ಈ ಚಾನ್ಸ್ ಕೊನೆ ಕ್ಷಣದಲ್ಲಿ ಕೈ ತಪ್ಪಿದ್ದೇಕೆ? ಇಲ್ಲಿದೆ ಅಸಲಿ ಕಾರಣ…
10:43 AM (IST) Apr 27
ಧನುಷ್ ಕೇವಲ ನಟನಲ್ಲ, ಒಬ್ಬ ಫಿಲಾಸಫರ್ ಕೂಡ ಹೌದು. ಅವರು ಹೇಳುವ ಒಂದು ಮಾತು ಎಲ್ಲರಿಗೂ ಮಾದರಿ: "ನೀವು ಏನನ್ನು ಯೋಚಿಸುತ್ತೀರೋ, ಅದೇ ನೀವು ಆಗುತ್ತೀರಿ." 2002-2003ರಲ್ಲಿ ಧನುಷ್ ತಮಗೆ ರಾಷ್ಟ್ರ ಪ್ರಶಸ್ತಿ ಬರುತ್ತದೆ ಎಂದು ಹೇಳಿಕೊಂಡಾಗ ಜನ ಹುಚ್ಚರೆಂದು ನಕ್ಕಿದ್ದರಂತೆ.
10:42 AM (IST) Apr 27
ಮದುವೆಯಾಗುವುದಾಗಿ ನಂಬಿಸಿ ಲಂಡನ್ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರಿಗೆ 9.35 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಟಾಲಿವುಡ್ ನಟಿ ತೆಲುಗಿನ ಬಿಗ್ಬಾಸ್ ಸ್ಪರ್ಧಿ ವಿರುದ್ಧ ಪ್ರಕರಣ ದಾಖಲಾಗಿದೆ. ಲಂಡನ್ ಮೂಲದ ವಿಚ್ಚೇದಿತರು ಆಗಿರುವ ಟೆಕ್ಕಿಯೊಬ್ಬರು ಈ ದೂರು ನೀಡಿದ್ದಾರೆ.
10:41 AM (IST) Apr 27
10:02 AM (IST) Apr 27
ವಾಷಿಂಗ್ಟನ್ನಲ್ಲಿ ನಡೆದ 'ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್' ವೇಳೆ ಶೂಟೌಟ್ ನಡೆಸಿದ ಥಾಮಸ್ ಅಲೆನ್ನ ವಿವಾದಾತ್ಮಕ ಮ್ಯಾನಿಫೆಸ್ಟೋ ಈಗ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಕೋಲಾಹಲ ಎದ್ದಿದೆ. ಇದರಲ್ಲಿನ ಆರೋಪಗಳಿಗೆ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
08:46 AM (IST) Apr 27
08:08 AM (IST) Apr 27
07:33 AM (IST) Apr 27
ಭವಾನಿಪುರದಲ್ಲಿ ತಮ್ಮ ರ್ಯಾಲಿ ಸಮೀಪವೇ ಬಿಜೆಪಿ ಸಭೆ ನಡೆಸಿದ್ದಕ್ಕೆ ಕೋಪಗೊಂಡ ಮಮತಾ ಬ್ಯಾನರ್ಜಿ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ನಿರ್ಗಮಿಸಿದರು. ಈ ಘಟನೆಯು ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗದ್ದಲಕ್ಕೆ ಕಾರಣವಾಯಿತು.
07:04 AM (IST) Apr 27
ಬಿಜೆಪಿ ಸೇರಿದ 7 ರಾಜ್ಯಸಭಾ ಸಂಸದರನ್ನು ಅನರ್ಹಗೊಳಿಸುವಂತೆ ಆಮ್ ಆದ್ಮಿ ಪಕ್ಷವು ರಾಜ್ಯಸಭೆ ಸಭಾಪತಿಗೆ ಮನವಿ ಸಲ್ಲಿಸಿದೆ. ಇದು ಪಕ್ಷಾಂತರ ವಿರೋಧಿ ಕಾನೂನಿನ ಉಲ್ಲಂಘನೆಯಾಗಿದ್ದು, ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಆಪ್ ನಾಯಕ ಸಂಜಯ್ ಸಿಂಗ್ ಎಚ್ಚರಿಸಿದ್ದಾರೆ.
06:56 AM (IST) Apr 27
ಛಾಯಾ ಪತ್ರಿಕೋದ್ಯಮದಲ್ಲಿ ಹೊಸ ಅಧ್ಯಾಯ ಬರೆದ, ಪದ್ಮಶ್ರೀ ಪುರಸ್ಕೃತ ಹಿರಿಯ ಛಾಯಾಗ್ರಾಹಕ ರಘು ರಾಯ್ (83) ಅವರು ಕ್ಯಾನ್ಸರ್ನಿಂದ ನಿಧನರಾದರು. ಭೋಪಾಲ್ ಅನಿಲ ದುರಂತ, ಬಾಂಗ್ಲಾ ನಿರಾಶ್ರಿತರ ಬಿಕ್ಕಟ್ಟು ಸೇರಿದಂತೆ ಹಲವು ಐತಿಹಾಸಿಕ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.
06:12 AM (IST) Apr 27
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ, ಕರ್ನಾಟಕದ ಬೈಲಕುಪ್ಪೆ ಬೌದ್ಧವಿಹಾರದ ಪ್ರಕೃತಿ ಸಂರಕ್ಷಣಾ ಕಾರ್ಯವನ್ನು ಶ್ಲಾಘಿಸಿದ್ದಾರೆ. 100 ಎಕರೆ ಕಾಡಿನಲ್ಲಿ 700ಕ್ಕೂ ಹೆಚ್ಚು ಸ್ಥಳೀಯ ಮರಗಳನ್ನು ಸಂರಕ್ಷಿಸಿ, ಪ್ರಕೃತಿಯೊಂದಿಗಿನ ಬೌದ್ಧ ಸಂಪ್ರದಾಯದ ಸಂಬಂಧಕ್ಕೆ ಉತ್ತಮ ಉದಾಹರಣೆಯಾಗಿದೆ.
05:27 AM (IST) Apr 27
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಶ್ವೇತಭವನ ಪತ್ರಕರ್ತರ ಭೋಜನಕೂಟದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಭದ್ರತಾ ಸಿಬ್ಬಂದಿ ತಕ್ಷಣವೇ ದಾಳಿಕೋರನನ್ನು ಬಂಧಿಸಿದ್ದು, ಟ್ರಂಪ್ ಸೇರಿದಂತೆ ಎಲ್ಲಾ ಗಣ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.