LIVE NOW
Published : Dec 24, 2025, 06:59 AM ISTUpdated : Dec 24, 2025, 10:50 PM IST

India Latest News Live: ದೇವರ ನೆನೆಸ್ಕೊಂಡೇ ಈ ಹಾರರ್‌ ವೆಬ್‌ ಸಿರೀಸ್‌ ನೋಡಿ, IMDBಯಲ್ಲೂ ಭರ್ಜರಿ ರೇಟಿಂಗ್‌

ಸಾರಾಂಶ

ನವದೆಹಲಿ: ಆಂತರಿಕ ಸಂಘರ್ಷ ಭುಗಿಲೆದ್ದಿರುವ ಬಾಂಗ್ಲಾದೇಶದಲ್ಲಿ ಭಾರತವಿರೋಧಿ ಮನಃಸ್ಥಿತಿಗೆ ತುಪ್ಪ ಸುರಿದು, ಭಾರತವು ಬಾಂಗ್ಲಾ ಮೇಲೆ ದಾಳಿ ಮಾಡುವಂತೆ ಪ್ರಚೋದಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂಬ ಸ್ಫೋಟಕ ವಿಚಾರವನ್ನು ಭಾರತದ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ.

ಪಾಕ್‌ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಬೆಂಬಲಿತ ಶಕ್ತಿಗಳು ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಮತ್ತು ಅವರ ಅವಾಮಿ ಲೀಗ್‌ ಪಕ್ಷಕ್ಕೆ ಭಾರತ ಬೆನ್ನೆಲುಬಾಗಿ ನಿಂತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಬಾಂಗ್ಲಾ ನಾಗರಿಕರನ್ನು ಭಾರತದ ವಿರುದ್ಧ ಎತ್ತಿಕಟ್ಟಿ, ಭಾರತವು ಬಾಂಗ್ಲಾ ಮೇಲೆ ದಾಳಿ ಮಾಡುವಂತೆ ಪ್ರಚೋದಿಸುವುದು ಇವರ ಉದ್ದೇಶ. ಕಳೆದ ವರ್ಷ ಹಸೀನಾ ಭಾರತಕ್ಕೆ ಪಲಾಯನಗೈದ ದಿನಗಳಿಂದಲೇ ಐಎಸ್‌ಐ ಈ ಕೆಲಸದಲ್ಲಿ ನಿರತವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಈ ಮೂಲಕ ಭಾರತದ ವಿರುದ್ಧ ಇತರ ದೇಶಗಳನ್ನು ಎತ್ತಿಕಟ್ಟಿ ಮೈಕಾಯಿಸಿಕೊಳ್ಳುವ ಪಾಕಿಸ್ತಾನದ ಚಾಳಿ ಮತ್ತೊಮ್ಮೆ ಬಹಿರಂಗವಾಗಿದೆ.

10:50 PM (IST) Dec 24

ದೇವರ ನೆನೆಸ್ಕೊಂಡೇ ಈ ಹಾರರ್‌ ವೆಬ್‌ ಸಿರೀಸ್‌ ನೋಡಿ, IMDBಯಲ್ಲೂ ಭರ್ಜರಿ ರೇಟಿಂಗ್‌

Bhay: The Gaurav Tiwari Mystery Review - Chilling Horror on OTT ಈ ಎಂಟು ಎಪಿಸೋಡ್‌ನ ಹಾರರ್ ಥ್ರಿಲ್ಲರ್ ವೆಬ್ ಸರಣಿಯ ಬಗ್ಗೆ ಪ್ರಸ್ತುತ OTT ವೇದಿಕೆಯಲ್ಲಿ ಚರ್ಚೆಯಾಗುತ್ತಿದೆ. ಈ ಸಿರೀಸ್‌ನಲ್ಲಿ ಕೆಲವು ಭಯಾನಕ ದೃಶ್ಯಗಳಿವೆ.

 

Read Full Story

10:27 PM (IST) Dec 24

ಪಾಕಿಸ್ತಾನ ಸೇನೆಯಲ್ಲಿರುವ ಮಹಿಳಾ ಸೇನಾಧಿಕಾರಿಗಳ ಸಂಖ್ಯೆ ಎಷ್ಟು?

Women in Pakistan Army: ಪಾಕಿಸ್ತಾನದಲ್ಲಿ ಮಹಿಳೆಯರು ಸೆಕೆಂಡ್‌ ಕ್ಲಾಸ್‌ ಸಿಟಿಜನ್ಸ್‌. ಸಾರ್ವಜನಿಕ ಸ್ಥಳಗಳಲ್ಲಿಯೂ ಅವರ ಉಪಸ್ಥಿತಿ ಸೀಮಿತವಾಗಿದೆ. ಪಾಕಿಸ್ತಾನ ಸೇನೆಯಲ್ಲಿ ಎಷ್ಟು ಮಹಿಳೆಯರು ಇದ್ದಾರೆ ಎನ್ನುವುದರ ವಿವರ ಇಲ್ಲಿದೆ.

 

Read Full Story

10:17 PM (IST) Dec 24

Swiggy Report 2025 - ಸೆಕೆಂಡಿಗೆ 3ರಂತೆ, 93 ಮಿಲಿಯನ್ ಬಿರಿಯಾನಿ ಆರ್ಡರ್‌ ಬಂದಿವೆ! ಬೆಚ್ಚಿಬೀಳಿಸುತ್ತೆ ವರದಿ!

ಸ್ವಿಗ್ಗಿಯ 2025ರ ವರದಿಯ ಪ್ರಕಾರ, ಬಿರಿಯಾನಿ ಸತತ 10ನೇ ವರ್ಷವೂ ಭಾರತೀಯರ ಅಚ್ಚುಮೆಚ್ಚಿನ ಖಾದ್ಯವಾಗಿ ಅಗ್ರಸ್ಥಾನದಲ್ಲಿದೆ. ಬರೋಬ್ಬರಿ 93 ಮಿಲಿಯನ್ ಆರ್ಡರ್‌ಗಳೊಂದಿಗೆ, ಚಿಕನ್ ಬಿರಿಯಾನಿ ಪ್ರಾಬಲ್ಯ ಮೆರೆದಿದ್ದು, ಬರ್ಗರ್ ಮತ್ತು ಪಿಜ್ಜಾಗಳು ನಂತರದ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆಸಿವೆ.
Read Full Story

09:42 PM (IST) Dec 24

ಗಿಗ್‌, ಡೆಲಿವರಿ ಏಜೆಂಟ್‌ ರಾಷ್ಟ್ರವ್ಯಾಪಿ ಮುಷ್ಕರ - ಕ್ರಿಸ್‌ಮಸ್‌, ಹೊಸ ವರ್ಷಕ್ಕೆ ಶಾಕ್‌, ಫುಡ್‌ ಆರ್ಡರ್‌ ಮನೆಗೆ ಬರೋದಿಲ್ಲ!

ಸ್ವಿಗ್ಗಿ, ಜೊಮಾಟೊ, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಫ್ಲಾಟ್‌ಫಾರ್ಮ್‌ಗಳ ಕಾರ್ಮಿಕರು ಕುಸಿತದ ಆದಾಯ, ಅಸುರಕ್ಷಿತ ಕೆಲಸದ ಮಾದರಿಗಳು ಮತ್ತು ಸಾಮಾಜಿಕ ಭದ್ರತೆಯ ಕೊರತೆಯ ಸಲುವಾಗಿ ಪ್ರತಿಭಟನೆ ಮಾಡಲಿದ್ದಾರೆ.

 

Read Full Story

09:40 PM (IST) Dec 24

ಭಾರತಕ್ಕೆ ಮರಳಿ ಯಾವಾಗ ಬರುತ್ತೀರಿ? ಪರಾರಿಯಾಗಿರುವ ವಿಜಯ್‌ ಮಲ್ಯಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

ಭಾರತಕ್ಕೆ ಯಾವಾಗ ಮರಳುತ್ತೀರಿ ಎಂದು ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ನೇರವಾಗಿ ಪ್ರಶ್ನಿಸಿದೆ. ನ್ಯಾಯಾಲಯಕ್ಕೆ ಶರಣಾಗದೆ 'ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ' (FEO) ವಿರುದ್ಧದ ಅರ್ಜಿಯನ್ನು ವಿಚಾರಣೆ ನಡೆಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ಮಲ್ಯಗೆ ಕಠಿಣ ಸಂದೇಶ ರವಾನಿಸಿದೆ.
Read Full Story

09:20 PM (IST) Dec 24

ಪ್ರಖ್ಯಾತ ಎಲೆಕ್ಟ್ರಿಕ್‌ ಸ್ಕೂಟರ್‌ಅನ್ನು ಈಗಲೇ ಖರೀದಿಸಿ, ಜನವರಿ 1 ರಿಂದ ಇದರ ಬೆಲೆ ಆಗಲಿದೆ ದುಬಾರಿ!

ಈ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳ ಬೆಲೆಗಳು ಜನವರಿ 1 ರಿಂದ ಹೆಚ್ಚಾಗಲಿವೆ. ಮತ್ತೊಂದೆಡೆ, ಕಂಪನಿಯು ಪ್ರಸ್ತುತ "ಎಲೆಕ್ಟ್ರಿಕ್ ಡಿಸೆಂಬರ್" ಎಂಬ ಕೊಡುಗೆಯನ್ನು ಪ್ರಾರಂಭಿಸಿದ್ದು, ಇದರಲ್ಲಿ ಗ್ರಾಹಕರು ರೂ. 20,000 ವರೆಗಿನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

 

Read Full Story

09:03 PM (IST) Dec 24

ಬಂಗಾಳ ಕೊಲ್ಲಿಯಲ್ಲಿ ಮಾರಕ ಆಯುಧ ಪರೀಕ್ಷೆ ಮಾಡಿದ ಭಾರತ, ಚೀನಾ-ಪಾಕಿಸ್ತಾನಕ್ಕೆ ನಡುಕ ಶುರು!

ಬಂಗಾಳ ಕೊಲ್ಲಿಯಲ್ಲಿ ಭಾರತವು ಸಮುದ್ರದಿಂದ ಉಡಾಯಿಸಬಹುದಾದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಪರೀಕ್ಷೆಯು ಭಾರತಕ್ಕೆ ಭೂಮಿ, ವಾಯು ಮತ್ತು ಸಮುದ್ರದಿಂದ ಪರಮಾಣು ದಾಳಿ ನಡೆಸುವ ಸಾಮರ್ಥ್ಯವನ್ನು ನೀಡಿದೆ.

Read Full Story

09:01 PM (IST) Dec 24

ರಾಹುಲ್ ಗಾಂಧಿ ಭೇಟಿಯಾದ ಉನ್ನಾವ್ ಸಂತ್ರಸ್ತೆ, ಜೀವಭಯವಿದೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಕ್ಕೆ ಸ್ಥಳಾಂತರಕ್ಕೆ ಮನವಿ

ಉನ್ನಾವ್ ಅತ್ಯಾ*ಚಾರ ಸಂತ್ರಸ್ತೆ ಮತ್ತು ಆಕೆಯ ತಾಯಿ, ದೆಹಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದು, ಅತ್ಯಾ*ಚಾರಿ ಕುಲದೀಪ್ ಸೆಂಗಾರ್‌ಗೆ ನೀಡಿದ ಜಾಮೀನು ವಿರೋಧಿಸಿ ಸುಪ್ರೀಂನಲ್ಲಿ ಹೋರಾಡಲು ಸಹಾಯದ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

Read Full Story

07:53 PM (IST) Dec 24

ಮುಂಬೈನಲ್ಲಿ ಬೃಹತ್ ಸೈಬರ್ ವಂಚನೆ, ಡಿಜಿಟಲ್ ಬಂಧನಕ್ಕೆ ಒಳಗಾಗಿ 9 ಕೋಟಿ ಕಳೆದುಕೊಂಡ 85ರ ವೃದ್ಧ!

ಮುಂಬೈನ 85 ವರ್ಷದ ವೃದ್ಧರೊಬ್ಬರನ್ನು 'ಡಿಜಿಟಲ್ ಬಂಧನ'ದಲ್ಲಿರಿಸಿ, ಪೊಲೀಸ್ ಅಧಿಕಾರಿಗಳೆಂದು ನಟಿಸಿದ ವಂಚಕರು 9 ಕೋಟಿ ರೂ. ವಂಚಿಸಿದ್ದಾರೆ. ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಸುಳ್ಳು ಆರೋಪ ಹೊರಿಸಿ, ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದರು. 

Read Full Story

07:31 PM (IST) Dec 24

ಶಿಶು ಮಾರಾಟ ಜಾಲ ಬೇಧಿಸಿದ ಪೊಲೀಸರು - ಒಂದು ಮಗುವಿಗೆ 15 ಲಕ್ಷ - ಆಸ್ಪತ್ರೆಗಳ ಜೊತೆ ಖದೀಮರ ಸಂಪರ್ಕ

ಬೃಹತ್‌ ಹಾಗೂ ಅತ್ಯಾಧುನಿಕ ಶಿಶು ಮಾರಾಟ ಜಾಲವನ್ನು ತೆಲಂಗಾಣ ಪೊಲೀಸರು ಬೇಧಿಸಿದ್ದು, ಹಲವು ಸ್ಫೋಟಕ ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ಈ ಜಾಲವೂ ರಾಜ್ಯದುದ್ದಕ್ಕೂ ಕಾರ್ಯಾಚರಿಸಿ ಲಕ್ಷಾಂತರ ರೂಪಾಯಿಗಳಿಗೆ ಮಕ್ಕಳ ಮಾರಾಟ ಹಾಗೂ ಕೊಳ್ಳುವ ವ್ಯವಹಾರ ನಡೆಸುತ್ತಿತ್ತು.

Read Full Story

06:46 PM (IST) Dec 24

ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿ ಸಾವು

ಮಹಾರಾಷ್ಟ್ರದ ಥಾಣೆಯಲ್ಲಿ, ನಾಯಿ ಕಚ್ಚಿದ ನಂತರ ರೇಬಿಸ್ ವಿರೋಧಿ ಲಸಿಕೆ ಸೇರಿದಂತೆ ಚಿಕಿತ್ಸೆ ಪಡೆದರೂ 6 ವರ್ಷದ ಬಾಲಕಿ ಒಂದು ತಿಂಗಳ ನಂತರ ರೇಬಿಸ್‌ನಿಂದ ಸಾವನ್ನಪ್ಪಿದ್ದು, ಕುಟುಂಬದವರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Read Full Story

06:29 PM (IST) Dec 24

ಗಂಡನ ಕೊಲೆ ಮಾಡಿ, ಶವವನ್ನು ಗ್ರೈಂಡರ್‌ನಲ್ಲಿ ರುಬ್ಬಿ ಚರಂಡಿಗೆ ಎಸೆದ ಹೆಂಡ್ತಿ!

ಸಂಭಾಲ್‌ನಲ್ಲಿ, ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ರೂಬಿ ಮತ್ತು ಆಕೆಯ ಪ್ರಿಯಕರ ಗೌರವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ, ಪತಿಯನ್ನು ಕೊಂದು, ದೇಹವನ್ನು ವುಡ್‌ ಗ್ರೈಂಡರ್‌ನಲ್ಲಿ ರುಬ್ಬಿ ಚರಂಡಿಗೆ ಎಸೆದಿದ್ದಾಳೆ.

Read Full Story

05:53 PM (IST) Dec 24

ಯಾರೂ ನನಗೆ ಸಹಾಯ ಮಾಡುತ್ತಿಲ್ಲ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮೊರೆ ಹೋದ ಮುಂಬೈ ಡಾನ್ ಹಾಜಿ ಮಸ್ತಾನ್ ಪುತ್ರಿ!

ದಿವಂಗತ ಭೂಗತ ದೊರೆ ಹಾಜಿ ಮಸ್ತಾನ್ ಅವರ ಪುತ್ರಿ ಹಸೀನ್ ಮಸ್ತಾನ್ ಮಿರ್ಜಾ, ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಲೈಂಗಿಕ ದೌರ್ಜನ್ಯ, ಬಲವಂತದ ಮದುವೆ ಹಾಗೂ ಆಸ್ತಿ ಕಬಳಿಕೆಯಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಡಲು,  ಪ್ರಧಾನಿ  ಮೋದಿಗೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

Read Full Story

05:10 PM (IST) Dec 24

ವಲಸಿಗರ ಸಂಖ್ಯೆ ಶೇ.10 ರಷ್ಟು ಹೆಚ್ಚಾದರೂ ಅಸ್ಸಾಂ ಬಾಂಗ್ಲಾದೇಶದ ಭಾಗವಾಗಲಿದೆ - ಅಸ್ಸಾಂ ಸಿಎಂ

ಅಸ್ಸಾಂನಲ್ಲಿ ಈಗಾಗಲೇ ರಾಜ್ಯದ ಜನಸಂಖ್ಯೆಯ ಶೇ. 40ರಷ್ಟು ಬಾಂಗ್ಲಾದೇಶಿಗರಿದ್ದುಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಶೇ. 10ರಷ್ಟು ಹೆಚ್ಚಾದರೆ, ರಾಜ್ಯವು ಸ್ವಯಂಚಾಲಿತವಾಗಿ ಬಾಂಗ್ಲಾದೇಶದ ಭಾಗವಾಗಲಿದೆ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಮಾ ಎಚ್ಚರಿಸಿದ್ದಾರೆ. 

Read Full Story

05:04 PM (IST) Dec 24

‘ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಗಳ ಬಗ್ಗೆ ಬರೆಯಿರಿ..’ - ಜಾಮಿಯಾ ಸೆಮಿಸ್ಟರ್ ಪರೀಕ್ಷೆ ಪ್ರಶ್ನೆ ಈಗ ವಿವಾದ, ಪ್ರೊಫೆಸರ್‌ ಅಮಾನತು

Jamia Millia Professor Suspended Over Controversial Exam Question ಅಮಾನತುಗೊಂಡ ವ್ಯಕ್ತಿ, ಸೋಶಿಯಲ್‌ ವರ್ಕ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಜಾಮಿಯಾ ವಿಶ್ವವಿದ್ಯಾಲಯ ದೃಢಪಡಿಸಿದೆ.

 

Read Full Story

05:02 PM (IST) Dec 24

ವಿಜಯ್ ಹಜಾರೆ ಟ್ರೋಫಿ ಕಮ್‌ಬ್ಯಾಕ್‌ ಪಂದ್ಯದಲ್ಲಿ ಶತಕ ಚಚ್ಚಿದ ಕಿಂಗ್ ಕೊಹ್ಲಿ! ವಿರಾಟ್‌ಗಿದು ಕಳೆದ 4 ಪಂದ್ಯಗಳಲ್ಲಿ 3ನೇ ಶತಕ

2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯ ಮೊದಲ ದಿನವೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶತಕ ಸಿಡಿಸಿ ಮಿಂಚಿದ್ದಾರೆ. 15 ವರ್ಷಗಳ ಬಳಿಕ ಕಣಕ್ಕಿಳಿದ ಕೊಹ್ಲಿ ಡೆಲ್ಲಿ ಪರ 131 ರನ್ ಗಳಿಸಿದರೆ, ರೋಹಿತ್ ಮುಂಬೈ ಪರ 155 ರನ್ ಚಚ್ಚಿ ತಮ್ಮ ತಂಡಗಳ ಗೆಲುವಿಗೆ ಕಾರಣರಾದರು.
Read Full Story

04:42 PM (IST) Dec 24

ಇಂಡಿಗೋ ಬಿಕ್ಕಟ್ಟಿನ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರ, ಎರಡು ಹೊಸ ಏರ್‌ಲೈನ್ಸ್‌ಗೆ ಸಿಕ್ತು NOC

ಇಂಡಿಗೋ ವಿಮಾನಯಾನದ ಬಿಕ್ಕಟ್ಟಿನ ನಂತರ, ಭಾರತದ ವಾಯುಯಾನ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆಲ್‌ ಹಿಂದ್‌ ಏರ್‌ ಮತ್ತು ಫ್ಲೈ ಎಕ್ಸ್‌ಪ್ರೆಸ್‌ ಎಂಬ ಎರಡು ಹೊಸ ಕಂಪನಿಗಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಓಸಿ) ನೀಡಿದೆ.

Read Full Story

03:34 PM (IST) Dec 24

ಲೈಂಗಿಕ ಕಿರುಕುಳದ ಆರೋಪದ ನಂತರ ವಿದ್ಯಾರ್ಥಿ ಸಾವು - 4ನೇ ಮಹಡಿಯಿಂದ ಕೆಳಗೆ ಹಾರಿರುವ ಶಂಕೆ

ಅನುಮಾನಾಸ್ಪದ ರೀತಿಯಲ್ಲಿ ವಿದೇಶಿ ವಿದ್ಯಾರ್ಥಿಯೋರ್ವ ಸಾವಿಗೀಡಾಗಿದ್ದು, ಸಾವಿಗೂ ಮೊದಲು ಆತ ಮಹಿಳೆಯೊಬ್ಬಳ ಜೊತೆ ವಾಗ್ವಾದ ನಡೆಸಿದ್ದಾನೆ ಎಂದು ನೋಡುಗರು ಹೇಳಿದ್ದು, ಆತನ ಸಾವಿನ ಬಗ್ಗೆ ಈಗ ಅನುಮಾನ ಮೂಡಿದೆ. ಈತನ ಬಗ್ಗೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

Read Full Story

03:27 PM (IST) Dec 24

ಒಂದು ಗಂಟೆಯೂ ಉಳಿಯಲಿಲ್ಲ ಇಶಾನ್ ಕಿಶನ್ ಅತಿವೇಗದ ಶತಕದ ರೆಕಾರ್ಡ್; ವೈಭವ್ ಸೂರ್ಯವಂಶಿ ಕ್ಯಾಪ್ಟನ್ ಪಾಲಾದ ಹೊಸ ದಾಖಲೆ

2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಗಳ ಸುರಿಮಳೆಯಾಗಿದೆ. ಬಿಹಾರದ ವೈಭವ್ ಸೂರ್ಯವಂಶಿ, ಜಾರ್ಖಂಡ್‌ನ ಇಶಾನ್ ಕಿಶನ್ ಮತ್ತು ಅಂತಿಮವಾಗಿ ಬಿಹಾರದ ನಾಯಕ ಸಕೀಬುಲ್ ಘನಿ ಕೆಲವೇ ಗಂಟೆಗಳ ಅಂತರದಲ್ಲಿ ಅತಿವೇಗದ ಶತಕದ ದಾಖಲೆಗಳನ್ನು ಮುರಿದರು.  

Read Full Story

01:54 PM (IST) Dec 24

ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಬೆನ್ನಲ್ಲೇ ಖಡಕ್ ವಾರ್ನಿಂಗ್ ಕೊಟ್ಟ ಇಶಾನ್ ಕಿಶನ್! ವೈಭವ್ ಸೂರ್ಯವಂಶಿ ರೆಕಾರ್ಡ್ ಧೂಳೀಪಟ

ಟೀಂ ಇಂಡಿಯಾಗೆ ಮರಳಿರುವ ಇಶಾನ್ ಕಿಶನ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ವಿರುದ್ಧ ಅಬ್ಬರಿಸಿದ್ದಾರೆ. ಜಾರ್ಖಂಡ್ ನಾಯಕರಾಗಿ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಅತಿವೇಗದ ಶತಕದ ಹೊಸ ದಾಖಲೆ ನಿರ್ಮಿಸಿದ್ದಾರೆ.
Read Full Story

01:34 PM (IST) Dec 24

ಲಕ್ಸುರಿ ಕಾರು, 1 ಕೇಜಿ ಚಿನ್ನ 100 ಕೋಟಿ ಆಸ್ತಿ - ಟ್ರಾನ್ಸ್‌ಪೋರ್ಟ್ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಎಸಿಬಿ

ಮೆಹಾಬೂಬಾನಗರ ಜಿಲ್ಲೆಯ ಉಪ ಸಾರಿಗೆ ಕಮೀಷನರ್‌ ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಅಲ್ಲಿ 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

Read Full Story

01:22 PM (IST) Dec 24

ಕರ್ನಾಟಕದ ದಾನಿಯಿಂದ ಅಯೋಧ್ಯೆಗೆ 30 ಕೋಟಿ ರೂ. ವಜ್ರಖಚಿತ ರಾಮನ ವಿಗ್ರಹ - ಯಾರಿವರು? ಏನಿದರ ವಿಶೇಷತೆ?

ಅಯೋಧ್ಯೆಯ ರಾಮ ಮಂದಿರಕ್ಕೆ ಕರ್ನಾಟಕದಿಂದ ಮತ್ತೊಂದು ಭವ್ಯ ಕೊಡುಗೆ ಬಂದಿದೆ. ಅನಾಮಧೇಯ ಭಕ್ತರೊಬ್ಬರು ದಾನ ಮಾಡಿದ 10 ಅಡಿ ಎತ್ತರದ, ಚಿನ್ನದ ವರ್ಣದ, ರತ್ನಖಚಿತ ಶ್ರೀರಾಮನ ವಿಗ್ರಹವು ದೇವಾಲಯದ ಆವರಣದಲ್ಲಿ ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿದೆ.
Read Full Story

12:56 PM (IST) Dec 24

ವೈಭವ್ ಸೂರ್ಯವಂಶಿ ಆಟಕ್ಕೆ ಎಬಿಡಿ ದಾಖಲೆ ನುಚ್ಚುನೂರು! 14 ವರ್ಷದ ಬ್ಯಾಟರ್ ಪಾಲಾದ ಅಪರೂಪದ ದಾಖಲೆ

14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ಪರ ಸ್ಪೋಟಕ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅತಿವೇಗದ 150 ರನ್ ಬಾರಿಸಿ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಮುರಿದು, 190 ರನ್‌ಗಳಿಗೆ ಔಟಾದರು.

Read Full Story

12:42 PM (IST) Dec 24

ಜೀವ ನೀಡಿದವಳೇ ಉಸಿರು ತೆಗೆದಳು - ಅಡ್ಡದಾರಿ ಹಿಡಿದ ತಾಯಿ - ಬುದ್ದಿ ಹೇಳಿದ 16ರ ಹರೆಯದ ಮಗಳ ಕೊಲೆ

ಮಕ್ಕಳು ಕೆಟ್ಟ ಚಟಗಳಿಗೆ ದಾಸರಾದಾಗ ಅತೀ ಹೆಚ್ಚು ನೊಂದುಕೊಳ್ಳುವುದು ಪೋಷಕರು. ಮಕ್ಕಳ ಕೆಟ್ಟ ಚಟ ಬಿಡಿಸುವುದಕ್ಕೆ ಪೋಷಕರು ಬುದ್ದಿ ಹೇಳುವ ಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಮಕ್ಕಳ ಸರಿ ದಾರಿಗೆ ತರಬೇಕಾದ ತಾಯಿಯೇ ದಾರಿ ತಪ್ಪಿದ್ದಾಳೆ.

Read Full Story

12:01 PM (IST) Dec 24

ರೋಟಿ ಬಡಿಸಲು ತಡ ಮಾಡಿದಳು ಅಂತ ಬಿಸಿ ತವಾದಿಂದ ಹೆಂಡ್ತಿ, 4 ವರ್ಷದ ಮಗನ ಮೇಲೆ ಹಲ್ಲೆ

ರೊಟ್ಟಿ ಬಡಿಸುವುದು ತಡವಾಯಿತೆಂದು ಕುಡಿದ ಮತ್ತಿನಲ್ಲಿದ್ದ ಪತಿಯೊಬ್ಬ, ತನ್ನ ಪತ್ನಿ ಹಾಗೂ 4 ವರ್ಷದ ಮಗನ ತಲೆಗೆ ತವಾದಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಈ ಘಟನೆಯಲ್ಲಿ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಪತ್ನಿ ದೂರು ನೀಡಿದ ಬಳಿಕ ಆರೋಪಿ ಪತಿ ಪರಾರಿಯಾಗಿದ್ದಾನೆ.

Read Full Story

11:49 AM (IST) Dec 24

ಮಾಜಿ ಸಿಎಂ ಪುತ್ರನಿಗೆ ₹250 ಕೋಟಿ ಲಂಚ; ಇತ್ತ UP ಸರ್ಕಾರದ ಮನವಿ ತಿರಸ್ಕರಿಸಿದ ಕೋರ್ಟ್

ಛತ್ತೀಸ್‌ಗಢದ ಮದ್ಯ ಹಗರಣದಲ್ಲಿ ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರನಿಗೆ ₹250 ಕೋಟಿ ಲಂಚ ಸಂದಾಯವಾಗಿದೆ ಎಂದು ಎಸಿಬಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.  ಅಖಲಾಕ್‌ ಹತ್ಯೆ ಪ್ರಕರಣದ ಆರೋಪಿಗಳ ಮೇಲಿನ ಮೊಕದ್ದಮೆ ರದ್ದುಗೊಳಿಸುವ ಸರ್ಕಾರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

Read Full Story

11:07 AM (IST) Dec 24

ಈ ರಾಜ್ಯದ ಶೇ.70ರಷ್ಟು ಬಾಂಗ್ಲಾ ಅಕ್ರಮ ವಲಸಿಗರ ಬಳಿ ಇದೆ ವೋಟರ್‌ ಐಡಿ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆಯಿಂದಾಗಿ ಅನೇಕ ರಾಜ್ಯಗಳಲ್ಲಿ ಲಕ್ಷಕ್ಕೂ ಅಧಿಕ ಅಕ್ರಮ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆ ಹೀಗಿರುವಾಗ ದೇಶದ ಈ ಮಹಾನಗರಿಯಲ್ಲಿ ಶೇ.70ರಷ್ಟು ಅಕ್ರಮ ವಲಸಿಗರ ಬಳಿ ವೋಟರ್ ಐಡಿ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ

Read Full Story

10:20 AM (IST) Dec 24

ಭಾರತ ಎದುರಿನ ಏಕದಿನ, ಟಿ20 ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ; ಇದೊಂದು ಕಾರಣಕ್ಕೆ ಕೇನ್‌ ವಿಲಿಯಮ್ಸನ್‌ಗಿಲ್ಲ ಸ್ಥಾನ!

ಭಾರತ ವಿರುದ್ಧದ ಜನವರಿ 11ರಿಂದ ಆರಂಭವಾಗಲಿರುವ ಏಕದಿನ ಮತ್ತು ಟಿ20 ಸರಣಿಗಾಗಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಕೇನ್ ವಿಲಿಯಮ್ಸನ್ ಅವರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದ್ದು, ಮೈಕಲ್ ಬ್ರೇಸ್‌ವೆಲ್ ತಂಡವನ್ನು ಮುನ್ನಡೆಸಲಿದ್ದಾರೆ.  

Read Full Story

09:34 AM (IST) Dec 24

ನ್ಯಾ. ಕುನ್ಹಾ ಆಯೋಗದ ಶಿಫಾರಸು ಪಾಲಿಸಿದ್ರೆ ಕ್ರಿಕೆಟ್‌ಗೆ ಒಪ್ಪಿಗೆ - ಸಿಎಂ ಸಿದ್ದರಾಮಯ್ಯ

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ನ್ಯಾ.ಮೈಕಲ್‌ ಡಿ.ಕುನ್ಹಾ ಆಯೋಗದ ಶಿಫarಸುಗಳನ್ನು ಅಳವಡಿಸಿಕೊಂಡರೆ ಮಾತ್ರ ಕ್ರಿಕೆಟ್‌ ಪಂದ್ಯಗಳಿಗೆ ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  

Read Full Story

09:20 AM (IST) Dec 24

ವಿಜಯ್ ಹಜಾರೆ ಟ್ರೋಫಿ - ಇಂದು ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲೆ!

ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯು ಆರಂಭವಾಗಲಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಭಾಗವಹಿಸಲಿದ್ದಾರೆ. ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ತನ್ನ ಮೊದಲ ಪಂದ್ಯವನ್ನು ಜಾರ್ಖಂಡ್ ವಿರುದ್ಧ ಆಡಲಿದೆ.
Read Full Story

09:18 AM (IST) Dec 24

ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶದಿಂದ ಬ್ರಾಡ್‌ಬ್ಯಾಂಡ್ ಸಂಪರ್ಕ - ನಭಕ್ಕೆ ಚಿಮ್ಮಿದ LVM3 M6

ಇಸ್ರೋ, ತನ್ನ LVM3-M6 ರಾಕೆಟ್ ಮೂಲಕ ಅಮೆರಿಕದ ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಉಪಗ್ರಹವು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶದಿಂದ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುವ ಗುರಿ ಹೊಂದಿದೆ.

Read Full Story

09:00 AM (IST) Dec 24

ಬ್ಯಾಕ್ ಟು ಬ್ಯಾಕ್ ಎರಡೆರಡು ಬೊಗಳೆ ಬಿಟ್ಟು ನಗೆಪಾಟಲಿಗೀಡಾದ ಪಾಕಿಸ್ತಾನದ ಆಸೀಂ ಮುನೀರ್

ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್, ಭಾರತದ ರಫೇಲ್, ಸುಖೋಯ್, ಎಸ್-400 ವ್ಯವಸ್ಥೆಗಳನ್ನು ಹೊಡೆದುರುಳಿಸಿದ್ದೇವೆ ಎಂದು ಬ್ಯಾಕ್ ಟು ಬ್ಯಾಕ್ ಎರಡೆರಡು ಬೊಗಳೆ ಬಿಟ್ಟು ನಗೆಪಾಟಲಿಗೀಡಾಗಿದ್ದಾರೆ. 

Read Full Story

08:50 AM (IST) Dec 24

Extreme fast-food consumer - ಸಿಕ್ಕಾಪಟ್ಟೆ ಫಾಸ್ಟ್‌ಫುಡ್‌ ತಿನ್ನುತ್ತಿದ್ದ 16ರ ಬಾಲಕಿ ಅನಾರೋಗ್ಯಕ್ಕೆ ಸಾವು

ಅತಿಯಾದ ಫಾಸ್ಟ್‌ಫುಡ್‌ ಸೇವನೆಯಿಂದ 16 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.  ಬರ್ಗರ್‌, ಪಿಜ್ಜಾ, ಮ್ಯಾಗಿ ಮೊದಲಾದ ಫಾಸ್ಟ್‌ ಫುಡ್‌ಗಳನ್ನೇ ಹೆಚ್ಚಾಗಿ ಸೇವಿಸುತ್ತಿದ್ದಳು.

Read Full Story

08:36 AM (IST) Dec 24

ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಪದಚ್ಯುತಗೊಳಿಸುವ ಎಚ್ಚರಿಕೆ

ಭಾರತ ವಿರೋಧಿ ಯುವ ಮುಖಂಡ ಉಸ್ಮಾನ್‌ ಹದಿ ಹತ್ಯೆಯು ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಹತ್ಯೆಯ ಪಾರದರ್ಶಕ ತನಿಖೆಗೆ ಆಗ್ರಹಿಸಿರುವ ಇನ್‌ಕಿಲಾಬ್‌ ಮಂಚ್‌ ಪಕ್ಷ, ಮಧ್ಯಂತರ ಸರ್ಕಾರವನ್ನು ಪದಚ್ಯುತಗೊಳಿಸುವ ಎಚ್ಚರಿಕೆ ನೀಡಿದೆ. 

Read Full Story

08:18 AM (IST) Dec 24

ಕಾಂಗ್ರೆಸ್ ನಾಯಕರ ಕುಟುಂಬಕ್ಕೆ ಸಂಕಷ್ಟ - ಏನಿದು ಕೇಸ್?

ಚೀನಾ ಪ್ರಜೆಗಳಿಗೆ ಅಕ್ರಮವಾಗಿ ವೀಸಾ ನೀಡಿದ ಹಗರಣದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿರುದ್ಧ ದೋಷಾರೋಪ ಹೊರಿಸಲು ದೆಹಲಿ ಕೋರ್ಟ್ ಆದೇಶಿಸಿದೆ. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ವಿರುದ್ಧ ಇ.ಡಿ. ಸಲ್ಲಿಸಿದ್ದ ಆರೋಪಪಟ್ಟಿಯನ್ನು ಲಖನೌ ಕೋರ್ಟ್ ಸ್ವೀಕರಿಸಿದೆ.

Read Full Story

08:05 AM (IST) Dec 24

ದೇಶದಲ್ಲಿ ಬಂಗಾರ, ಬೆಳ್ಳಿ ದಾಖಲೆ - ಬೆಲೆ ಏರಿಕೆ ಪರ್ವದ ಹಿಂದಿನ ರಹಸ್ಯ ಏನು?

ದೇಶದಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆ ಪರ್ವ ಮುಂದುವರಿದಿದ್ದು, 10 ಗ್ರಾಂ ಚಿನ್ನದ ಬೆಲೆ 1,40,850 ರು. ಹಾಗೂ 1 ಕೆಜಿ ಬೆಳ್ಳಿಯ ಬೆಲೆ 2,17,250 ರು.ಗೆ ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಆರ್ಥಿಕ ಅನಿಶ್ಚಿತತೆ, ಅಮೆರಿಕದ ಬಡ್ಡಿ ದರ ಇಳಿಕೆ ಚಿನ್ನದತ್ತ ಹೂಡಿಕೆದಾರರನ್ನು ಸೆಳೆಯುತ್ತಿದೆ

Read Full Story

More Trending News