ಪ್ರಯಾಗ್ರಾಜ್: ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳ ತನಿಖೆಗಾಗಿ ಬದರಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಇಲ್ಲಿನ ವಿಶೇಷ ಪೋಕ್ಸೋ ನ್ಯಾಯಾಲಯವು ಝುನ್ಸಿ ಪೊಲೀಸರಿಗೆ ಆದೇಶಿಸಿದೆ. ವಿದ್ಯಾಮಠ ಎಂಬ ಆಶ್ರಮದಲ್ಲಿರುವ ವೇದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಮತ್ತು ಇತರರು ದೂರು ಸಲ್ಲಿಸಿದ್ದರು. ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶಿಸಿದೆ. ‘ಇದರ ಬೆನ್ನಲ್ಲೇ ಸತ್ಯ ಗೆದ್ದಿದೆ’ ಎಂದು ಮಹಾರಾಜ್ ಪ್ರತಿಕ್ರಿಯಿಸಿದ್ದಾರೆ.

10:59 AM (IST) Feb 23
ನೇಪಾಳದ ಧಾಡಿಂಗ್ನಲ್ಲಿ ಪ್ರಯಾಣಿಕರ ಬಸ್ಸೊಂದು ತ್ರಿಶೂಲಿ ನದಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಸುಕಿನ ಜಾವ ನಡೆದ ಈ ದುರಂತದ ನಂತರ, ಭದ್ರತಾ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
10:27 AM (IST) Feb 23
10:22 AM (IST) Feb 23
09:48 AM (IST) Feb 23
ಮೆಕ್ಸಿಕೋದ ಸೇನೆಯು ದೇಶದ ಮಾದಕವಸ್ತು ಜಾಲದ ದೊರೆ ನೆಮೆಸಿಯೊ ಒಸೆಗುರಾ ಅಲಿಯಾಸ್ ಎಲ್ ಮೆಂಚೊನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದೆ. ಈ ಹತ್ಯೆಯ ಪ್ರತೀಕಾರವಾಗಿ, ಅವನ ಕಾರ್ಟೆಲ್ ದೇಶಾದ್ಯಂತ ಹಿಂಸಾಚಾರವನ್ನು ಪ್ರಾರಂಭಿಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿಗಳನ್ನು ಬಂದ್ ಮಾಡಿವೆ.
09:01 AM (IST) Feb 23
08:35 AM (IST) Feb 23
07:35 AM (IST) Feb 23
ಜೆನ್ ಝೀ ಪೀಳಿಗೆಯವರು ಮದ್ಯಪಾನವನ್ನು ಕಡಿಮೆ ಮಾಡಿರುವುದರಿಂದ ಜಾಗತಿಕ ಮದ್ಯೋದ್ಯಮವು ಕಳೆದ 4 ವರ್ಷಗಳಲ್ಲಿ 75 ಲಕ್ಷ ಕೋಟಿ ರೂಪಾಯಿಗಳಷ್ಟು ಭಾರಿ ನಷ್ಟವನ್ನು ಅನುಭವಿಸಿದೆ. ಮಿಲೇನಿಯಲ್ಗಳಿಗೆ ಹೋಲಿಸಿದರೆ ಜೆನ್ ಝೀಗಳು ಶೇ.20ರಷ್ಟು ಕಡಿಮೆ ಕುಡಿಯುತ್ತಿದ್ದಾರೆ.