LIVE NOW
Published : Feb 23, 2026, 06:40 AM ISTUpdated : Feb 23, 2026, 10:59 AM IST

India Latest News Live: ನೇಪಾಳದಲ್ಲಿ ತ್ರಿಶೂಲಿ ನದಿಗುರುಳಿದ ಬಸ್ 18 ಜನ ಸಾವು

ಸಾರಾಂಶ

ಪ್ರಯಾಗ್‌ರಾಜ್: ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳ ತನಿಖೆಗಾಗಿ ಬದರಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಲ್ಲಿನ ವಿಶೇಷ ಪೋಕ್ಸೋ ನ್ಯಾಯಾಲಯವು ಝುನ್ಸಿ ಪೊಲೀಸರಿಗೆ ಆದೇಶಿಸಿದೆ. ವಿದ್ಯಾಮಠ ಎಂಬ ಆಶ್ರಮದಲ್ಲಿರುವ ವೇದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಮತ್ತು ಇತರರು ದೂರು ಸಲ್ಲಿಸಿದ್ದರು. ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶಿಸಿದೆ. ‘ಇದರ ಬೆನ್ನಲ್ಲೇ ಸತ್ಯ ಗೆದ್ದಿದೆ’ ಎಂದು ಮಹಾರಾಜ್ ಪ್ರತಿಕ್ರಿಯಿಸಿದ್ದಾರೆ.

nepal bus accident

10:59 AM (IST) Feb 23

ನೇಪಾಳದಲ್ಲಿ ತ್ರಿಶೂಲಿ ನದಿಗುರುಳಿದ ಬಸ್ 18 ಜನ ಸಾವು

ನೇಪಾಳದ ಧಾಡಿಂಗ್‌ನಲ್ಲಿ ಪ್ರಯಾಣಿಕರ ಬಸ್ಸೊಂದು ತ್ರಿಶೂಲಿ ನದಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಸುಕಿನ ಜಾವ ನಡೆದ ಈ ದುರಂತದ ನಂತರ, ಭದ್ರತಾ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

Read Full Story

10:27 AM (IST) Feb 23

ಬೆಂಗಾಳಿ ರಾಜಕಾರಣದ ಚಾಣಕ್ಯ , ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಹೃದಯಾಘಾತಕ್ಕೆ ಬಲಿ

ಬಂಗಾಳ ರಾಜಕಾರಣದ ಚಾಣಕ್ಯ ಎಂದೇ ಖ್ಯಾತರಾಗಿದ್ದ ಹಿರಿಯ ರಾಜಕಾರಣಿ ಮತ್ತು ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ (71) ಹೃದಯಾಘಾತದಿಂದ ನಿಧನರಾಗಿದ್ದಾರೆ. ಟಿಎಂಸಿಯ ಸ್ಥಾಪಕ ಸದಸ್ಯರಾಗಿದ್ದ ಅವರು, ನಂತರ ಬಿಜೆಪಿಗೆ ಸೇರಿ, ಮತ್ತೆ ಟಿಎಂಸಿಗೆ ಮರಳುವ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
Read Full Story

10:22 AM (IST) Feb 23

ಸಂಜುನೇ ಬೆಸ್ಟ್; ಸೂರ್ಯಕುಮಾರ್ ಯಾದವ್ ವಾದದಲ್ಲಿ ಹುರುಳಿಲ್ಲ ಎಂದು ಮತ್ತೆ ಸಾಬೀತಾಯ್ತು!

ಸತತ ಮೂರು ಬಾರಿ ಡಕೌಟ್ ಆಗಿ ಫಾರ್ಮ್ ಕಳೆದುಕೊಂಡಿರುವ ಅಭಿಷೇಕ್ ಶರ್ಮಾ ಬದಲು ಸಂಜು ಸ್ಯಾಮ್ಸನ್‌ರನ್ನು ಆಡಿಸಬಹುದೇ ಎಂದು ಕೇಳಿದಾಗ, ಸೂರ್ಯಕುಮಾರ್ ಯಾದವ್ ನೀಡಿದ ಉತ್ತರ ಗಮನ ಸೆಳೆದಿತ್ತು. ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ, ಟೀಮ್ ಬ್ಯಾಲೆನ್ಸ್ ಆಗಿದೆ ಎಂದು ಸೂರ್ಯ ಸ್ಪಷ್ಟಪಡಿಸಿದ್ದರು.
Read Full Story

09:48 AM (IST) Feb 23

ಡ್ರಗ್ ಲಾರ್ಡ್ ಕತೆ ಮುಗಿಸಿದ ಮೆಕ್ಸಿಕನ್ ಸೇನೆ - ಆಕ್ರೋಶಗೊಂಡು ಹಿಂಸಾಚಾರಕ್ಕೆ ಇಳಿದ ಡ್ರಗ್ ಮಾಫಿಯಾ

ಮೆಕ್ಸಿಕೋದ ಸೇನೆಯು ದೇಶದ ಮಾದಕವಸ್ತು ಜಾಲದ ದೊರೆ ನೆಮೆಸಿಯೊ ಒಸೆಗುರಾ ಅಲಿಯಾಸ್ ಎಲ್ ಮೆಂಚೊನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ. ಈ ಹತ್ಯೆಯ ಪ್ರತೀಕಾರವಾಗಿ, ಅವನ ಕಾರ್ಟೆಲ್ ದೇಶಾದ್ಯಂತ ಹಿಂಸಾಚಾರವನ್ನು ಪ್ರಾರಂಭಿಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿಗಳನ್ನು ಬಂದ್ ಮಾಡಿವೆ.

Read Full Story

09:01 AM (IST) Feb 23

ರೈಲಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೆ ಸಿಗುತ್ತಾ ಟಿಕೆಟ್ ರಿಯಾಯಿತಿ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್!

ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ, ಭಾರತೀಯ ರೈಲ್ವೆಯು ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುತ್ತಿತ್ತು. ಆದರೆ, ಕೊರೊನಾ ಬಂದಾಗ ದೇಶದಲ್ಲಿದ್ದ ಆರ್ಥಿಕ ಸಂಕಷ್ಟದಿಂದಾಗಿ ಈ ಸೌಲಭ್ಯವನ್ನು ನಿಲ್ಲಿಸಲಾಗಿತ್ತು.
Read Full Story

08:35 AM (IST) Feb 23

Video - ಪೈಲಟ್ ಪತಿಯ ಕ್ಯೂಟ್ ವಿಡಿಯೋ ನೋಡಿ ಗಂಡ ಅಂದ್ರೆ ಹಿಂಗಿರಬೇಕು ಅಂದ್ರು ಮಹಿಳೆಯರು

ಪ್ರತಿ ಬಾರಿ ವಿದೇಶ ಪ್ರವಾಸ ಮುಗಿಸಿ ಬಂದಾಗಲೂ, ಪತ್ನಿಗಾಗಿ ಪ್ರೀತಿಯಿಂದ ಹೂವು ತರುವ ಇಂಡಿಗೋ ಪೈಲಟ್ ಒಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕ್ಯೂಟ್ ವಿಡಿಯೋವನ್ನು ಅವರ ಪತ್ನಿಯೇ ಶೇರ್ ಮಾಡಿಕೊಂಡಿದ್ದಾರೆ.
Read Full Story

07:35 AM (IST) Feb 23

ಜೆನ್‌ ಝೀಗಳು ಕುಡಿಯೋದು ಕಡಿಮೆ ಮಾಡಿದ್ದಕ್ಕೆ ₹75 ಲಕ್ಷ ಕೋಟಿ ಲಾಸ್‌; ಮಿಲೇನಿಯಲ್ಸ್‌ಗೆ ಹೋಲಿಸಿದ್ರೆ 20% ಕಮ್ಮಿ

ಜೆನ್‌ ಝೀ ಪೀಳಿಗೆಯವರು ಮದ್ಯಪಾನವನ್ನು ಕಡಿಮೆ ಮಾಡಿರುವುದರಿಂದ ಜಾಗತಿಕ ಮದ್ಯೋದ್ಯಮವು ಕಳೆದ 4 ವರ್ಷಗಳಲ್ಲಿ 75 ಲಕ್ಷ ಕೋಟಿ ರೂಪಾಯಿಗಳಷ್ಟು ಭಾರಿ ನಷ್ಟವನ್ನು ಅನುಭವಿಸಿದೆ. ಮಿಲೇನಿಯಲ್‌ಗಳಿಗೆ ಹೋಲಿಸಿದರೆ ಜೆನ್‌ ಝೀಗಳು ಶೇ.20ರಷ್ಟು ಕಡಿಮೆ ಕುಡಿಯುತ್ತಿದ್ದಾರೆ.

Read Full Story

More Trending News