ನವದೆಹಲಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್ಕೆಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಸನ್ರೈಸರ್ಸ್ ವಿರುದ್ಧ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ತುತ್ತಾಗಿದ್ದ ತಂಡದ ಯುವ ಬ್ಯಾಟರ್ ಆಯುಶ್ ಮ್ಹಾತ್ರೆ ಈ ಬಾರಿ ಐಪಿಎಲ್ನ ಇನ್ನುಳಿದ ಪಂದ್ಯಗಳಿಗೆ ಗೈರಾಗಲಿದ್ದಾರೆ. ಇದನ್ನು ಫ್ರಾಂಚೈಸಿ ಖಚಿತಪಡಿಸಿದೆ. ಅವರಿಗೆ 6ರಿಂದ 12 ವಾರಗಳ ಕಾಲ ಪುನಶ್ಚೇತನ ಶಿಬಿರ ಅಗತ್ಯವಿದೆ ಎಂದು ಸಿಎಸ್ಕೆ ತಿಳಿಸಿದೆ. 18 ವರ್ಷದ ಬ್ಯಾಟರ್ ಆಯುಶ್ ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. 6 ಪಂದ್ಯಗಳನ್ನಾಡಿರುವ ಅವರು 177.87ರ ಸ್ಟ್ರೈಕ್ರೇಟ್ನಲ್ಲಿ 201 ರನ್ ಕಲೆಹಾಕಿದ್ದಾರೆ.
ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಗಾಯದಿಂದ ಬಳಲುತ್ತಿದ್ದು, ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಮತ್ತೊಂದೆಡೆ ವೇಗಿ ಖಲೀಲ್ ಅಹ್ಮದ್ ಕೂಡಾ ಕೆಲ ದಿನಗಳ ಹಿಂದಷ್ಟೇ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.
09:55 AM (IST) Apr 22
09:18 AM (IST) Apr 22
08:42 AM (IST) Apr 22
08:09 AM (IST) Apr 22
07:48 AM (IST) Apr 22
ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಭಾರತವು ಪೆಟ್ರೋಲ್ಗೆ ಪರ್ಯಾಯವಾಗಿ ಶೇ.85ರಷ್ಟು ಎಥೆನಾಲ್ (E85) ಬಳಕೆಗೆ ಉತ್ತೇಜನ ನೀಡಲು ಚಿಂತಿಸುತ್ತಿದೆ. ಈ ಹೊಸ ಇಂಧನ ನೀತಿಯು ತೈಲ ಆಮದು ವೆಚ್ಚವನ್ನು ಕಡಿಮೆ ಮಾಡಲಿದ್ದು, ಪರಿಸರ ಸ್ನೇಹಿಯೂ ಆಗಿದೆ.
07:37 AM (IST) Apr 22