ನವದೆಹಲಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್ಕೆಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಸನ್ರೈಸರ್ಸ್ ವಿರುದ್ಧ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ತುತ್ತಾಗಿದ್ದ ತಂಡದ ಯುವ ಬ್ಯಾಟರ್ ಆಯುಶ್ ಮ್ಹಾತ್ರೆ ಈ ಬಾರಿ ಐಪಿಎಲ್ನ ಇನ್ನುಳಿದ ಪಂದ್ಯಗಳಿಗೆ ಗೈರಾಗಲಿದ್ದಾರೆ. ಇದನ್ನು ಫ್ರಾಂಚೈಸಿ ಖಚಿತಪಡಿಸಿದೆ. ಅವರಿಗೆ 6ರಿಂದ 12 ವಾರಗಳ ಕಾಲ ಪುನಶ್ಚೇತನ ಶಿಬಿರ ಅಗತ್ಯವಿದೆ ಎಂದು ಸಿಎಸ್ಕೆ ತಿಳಿಸಿದೆ. 18 ವರ್ಷದ ಬ್ಯಾಟರ್ ಆಯುಶ್ ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. 6 ಪಂದ್ಯಗಳನ್ನಾಡಿರುವ ಅವರು 177.87ರ ಸ್ಟ್ರೈಕ್ರೇಟ್ನಲ್ಲಿ 201 ರನ್ ಕಲೆಹಾಕಿದ್ದಾರೆ.
ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಗಾಯದಿಂದ ಬಳಲುತ್ತಿದ್ದು, ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಮತ್ತೊಂದೆಡೆ ವೇಗಿ ಖಲೀಲ್ ಅಹ್ಮದ್ ಕೂಡಾ ಕೆಲ ದಿನಗಳ ಹಿಂದಷ್ಟೇ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.
11:01 PM (IST) Apr 22
ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ನ ಐಆರ್ಜಿಸಿ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಸೂಚನೆ ನೀಡಿದೆ. ಸಮುದ್ರದಾಳದ ಇಂಟರ್ನೆಟ್ ಕೇಬಲ್ಗಳನ್ನು ಗುರಿಯಾಗಿಸುವ ದೊಡ್ಡ ಎಚ್ಚರಿಕೆ ನೀಡಿದೆ.
10:15 PM (IST) Apr 22
ಮುಂಬೈನ ವರ್ಲಿಯಲ್ಲಿ ರಾಜಕೀಯ ರ್ಯಾಲಿಯಿಂದಾದ ಭಾರಿ ಟ್ರಾಫಿಕ್ ಜಾಮ್ನಿಂದ ಕೋಪಗೊಂಡ ಮಹಿಳೆಯೊಬ್ಬರು, ಸಚಿವ ಗಿರೀಶ್ ಮಹಾಜನ್ ಮತ್ತು ಪೊಲೀಸರನ್ನು ನಡುರಸ್ತೆಯಲ್ಲೇ ಪ್ರಶ್ನಿಸಿದ್ದಾರೆ.
08:55 PM (IST) Apr 22
ನಟ ಸಿಂಬು ಮತ್ತೆ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಂಸಾಹಾರ ತ್ಯಜಿಸಿ, ಕಡಿಮೆ ಉಪ್ಪಿನ ಸಸ್ಯಹಾರಿ ಊಟಕ್ಕೆ ಬದಲಾಗಿದ್ದು, ಅನ್ನಕ್ಕೂ ಮುನ್ನ ಪ್ರೊಟೀನ್ ಆಹಾರ ಸೇವಿಸುತ್ತಿರುವುದೇ ಈ ಬದಲಾವಣೆಗೆ ಮುಖ್ಯ ಕಾರಣ.
08:02 PM (IST) Apr 22
ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ವರದಿ ಪ್ರಕಾರ, ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.
07:37 PM (IST) Apr 22
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ 'ರಾಕಾ' ಸಿನಿಮಾ ಶೂಟಿಂಗ್ಗಾಗಿ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ. ಇದಕ್ಕಾಗಿ ಅವರು ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!
07:10 PM (IST) Apr 22
'ನಾನು ಹೆವ್ವಿ ಎನ್ನುವಷ್ಟು ವರ್ಕ್ಔಟ್ ಮಾಡುತ್ತೀನಿ. ಆದ್ರೆ, ಜಿಮ್ ಮುಗಿಸಿದ ಬಳಿಕ ನನಗೆ ನಿಶ್ಯಕ್ತಿ ಕಾಡುತ್ತದೆ. ಕಾರಣ, ನನ್ನಲ್ಲಿರುವ ಎಲ್ಲಾ ಎನರ್ಜಿ ನನ್ನ ವರ್ಕೌಟ್ ಮೂಲಕ ವ್ಯಯವಾಗಿ ಕೊನೆಗೆ ಸುಸ್ತು ಮಾತ್ರ ಉಳಿಯುತ್ತಿದೆ. ಯಾವ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ರಶ್ಮಿಕಾ? ಮುಂದೆ ನೋಡಿ..
07:06 PM (IST) Apr 22
ಬಹುನಿರೀಕ್ಷಿತ ಸೀಕ್ವೆಲ್ಗಳಲ್ಲಿ ಒಂದಾದ 'ಜೈಲರ್ 2' ಶೂಟಿಂಗ್ ಮುಗಿದಿದೆ. ಸೂಪರ್ಸ್ಟಾರ್ ರಜನಿಕಾಂತ್ ಈ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಅಭಿಮಾನಿಗಳಿಗೆ ದೊಡ್ಡ ಅಪ್ಡೇಟ್ ನೀಡಿದ್ದಾರೆ.
06:53 PM (IST) Apr 22
ಮಹಾರಾಷ್ಟ್ರದ ಅಮರಾವತಿಯಲ್ಲಿ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಆಯಾಜ್ ಖಾನ್ ತನ್ವೀರ್ನನ್ನು ಪೊಲೀಸರು ಬಂಧಿಸಿ ನಗರದ ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಈ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
06:47 PM (IST) Apr 22
ಐ-ಪ್ಯಾಕ್ ಮೇಲಿನ ಇಡಿ ದಾಳಿಯ ವೇಳೆ ಹಸ್ತಕ್ಷೇಪ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಬಣ್ಣಿಸಿದೆ.
06:23 PM (IST) Apr 22
05:48 PM (IST) Apr 22
ಬಾಲಿವುಡ್ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ಇತ್ತೀಚಿನ ಸ್ಟೇಜ್ ಶೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅವರ ಈ ವರ್ತನೆ ಓವರ್ ಆ್ಯಕ್ಟಿಂಗ್ ಅಂತ ಹಲವರು ಟೀಕಿಸಿದ್ದಾರೆ.
05:29 PM (IST) Apr 22
ಯುರೋಪಿಯನ್ ಯೂನಿಯನ್ ಸ್ಮಾರ್ಟ್ಫೋನ್ಗಳ ಬಾಳಿಕೆ ಮತ್ತು ದುರಸ್ತಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. 2027ರಿಂದ ಬಳಕೆದಾರರೇ ಬ್ಯಾಟರಿ ಬದಲಾಯಿಸುವಂತಹ ವಿನ್ಯಾಸ ಕಡ್ಡಾಯವಾಗಲಿದೆ.
05:21 PM (IST) Apr 22
ಮಲಯಾಳಂ ಚಿತ್ರರಂಗದಲ್ಲಿ ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಯಾವುದು ಅಂತ ಕೇಳಿದ್ರೆ, ಅದಕ್ಕೆ ಒಂದೇ ಉತ್ತರ 'ಪೇಟ್ರಿಯಾಟ್'. ಯಾಕಂದ್ರೆ, ಬರೋಬ್ಬರಿ 18 ವರ್ಷಗಳ ದೊಡ್ಡ ಗ್ಯಾಪ್ ನಂತರ ಸೂಪರ್ಸ್ಟಾರ್ಗಳಾದ..
05:17 PM (IST) Apr 22
ಪ್ರಧಾನಿ ನರೇಂದ್ರ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ವಿವಾದಾತ್ಮಕ ಹೇಳಿಕೆಗೆ, ಖರ್ಗೆಯವರ ಸಮ್ಮುಖದಲ್ಲಿಯೇ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ತೀಕ್ಷ್ಣ ತಿರುಗೇಟು ನೀಡಿದ್ದು, ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
05:16 PM (IST) Apr 22
ನವದೆಹಲಿಯ ಅಮರ್ ಕಾಲೋನಿಯಲ್ಲಿ ಭಾರತೀಯ ಕಂದಾಯ ಸೇವಾ ಅಧಿಕಾರಿಯ 22 ವರ್ಷದ ಪುತ್ರಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಲೈಂಗಿಕ ದೌರ್ಜನ್ಯದ ನಂತರ ಮೊಬೈಲ್ ಚಾರ್ಜರ್ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಮನೆಗೆಲಸದಾತನ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
04:54 PM (IST) Apr 22
04:38 PM (IST) Apr 22
04:25 PM (IST) Apr 22
ರಸ್ತೆ ಅಪಘಾತದಲ್ಲಿ ಅಂಗವೈಕಲ್ಯಕ್ಕೆ ತುತ್ತಾದ ಸಂತ್ರಸ್ತರಿಗೆ ನೀಡುವ ಪರಿಹಾರದಲ್ಲಿ ಕೃತಕ ಅಂಗಾಂಗಗಳ ಖರೀದಿ ಮತ್ತು ನಿರ್ವಹಣಾ ವೆಚ್ಚವನ್ನು ಸೇರಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
03:59 PM (IST) Apr 22
03:34 PM (IST) Apr 22
02:50 PM (IST) Apr 22
ದೇಶದಲ್ಲಿ ಜಾರಿಗೆ ಬರಲಿರುವ ಹೊಸ ಕಾರ್ಮಿಕ ಸಂಹಿತೆಯು ನಿಮ್ಮ ಸಂಬಳದ ರಚನೆಯನ್ನು ಬದಲಿಸಲಿದೆ. ಈ ನಿಯಮದ ಪ್ರಕಾರ, ಸಿಟಿಸಿಯ ಕನಿಷ್ಠ 50% 'ಮೂಲ ವೇತನ' ಆಗಿರಬೇಕು, ಇದರಿಂದ ಪಿಎಫ್ ಮತ್ತು ಗ್ರಾಚ್ಯುಟಿ ಕೊಡುಗೆಗಳು ಹೆಚ್ಚಾಗಿ, ನಿಮ್ಮ ಮಾಸಿಕ ಕೈಗೆ ಬರುವ ಸಂಬಳ ಕಡಿಮೆಯಾಗಲಿದೆ.
02:50 PM (IST) Apr 22
02:45 PM (IST) Apr 22
ಇತ್ತೀಚೆಗೆ ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾ 'ರಾಮಾಯಣ'ದಲ್ಲಿ ಸೀತೆಯಾಗಿ ನಟಿಸುತ್ತಿರುವ ನಟಿ ಸಾಯಿ ಪಲ್ಲವಿ, ಈಗಾಗಲೇ ಪ್ರತಿಭಾನ್ವಿತೆ ಎಂಬುದನ್ನು ಸಾಬೀತು ಪಡಿಸಿರುವ ನಟಿ. ಇಂತಪ್ಪ ಸಾಯಿ ಪಲ್ಲವಿಗೆ ಆಗೊಮ್ಮೆ ಒಂದು ದಿನದ ರಜೆಗಾಗಿ ಕಣ್ಣೀರು ಹಾಕುವ ಸಂದರ್ಭ ಎದುರಾಗಿತ್ತು. ಹಾಗಿದ್ರೆ ಅದೇನು ಸುದ್ದಿ ಅಂತ ನೋಡಿ..
01:29 PM (IST) Apr 22
ಸದ್ಯ ಧನುಷ್ ಕೈಯಲ್ಲಿ 8-9 ಸಿನಿಮಾಗಳಿವೆ. ನಟನೆ ಮತ್ತು ನಿರ್ದೇಶನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ಅವರು, ಶೂಟಿಂಗ್ ಬಿಡುವಿನ ವೇಳೆಯಲ್ಲಿ ಈ ಮಹಿಳಾ ಪ್ರಧಾನ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಮೃಣಾಲ್ ಕೂಡ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.
01:26 PM (IST) Apr 22
01:00 PM (IST) Apr 22
12:34 PM (IST) Apr 22
11:28 AM (IST) Apr 22
10:59 AM (IST) Apr 22
ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯೊಬ್ಬಳು ಗಂಡ-ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ಕಸ ಎಸೆಯುವ ನೆಪದಲ್ಲಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿವಾಹಿತ ಮಹಿಳೆಯ ಈ ಕಿತಾಪತಿಗೆ ಗಂಡ ಮಕ್ಕಳು ಕಂಗಾಲಾಗಿದ್ದಾರೆ.
10:20 AM (IST) Apr 22
ಕ್ರಿಕೆಟರ್ ವಿರಾಟ್ ಕೊಹ್ಲಿ 1050 ಕೋಟಿ ಮೌಲ್ಯದ ನಿವ್ವಳ ಮೌಲ್ಯವನ್ನು ಹೊಂದಿರುವ ಶ್ರೀಮಂತ ಕ್ರಿಕೆಟರ್. ಆದರೂ ತನಗಿಷ್ಟವಾದುದನ್ನು ಇಷ್ಟಪಡುವ ಸ್ವಾತಂತ್ರ್ಯ ಅವರಿಗಿಲ್ಲ, ಇಂತಹದೊಂದು ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
09:55 AM (IST) Apr 22
09:18 AM (IST) Apr 22
08:42 AM (IST) Apr 22
08:09 AM (IST) Apr 22
07:48 AM (IST) Apr 22
ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಭಾರತವು ಪೆಟ್ರೋಲ್ಗೆ ಪರ್ಯಾಯವಾಗಿ ಶೇ.85ರಷ್ಟು ಎಥೆನಾಲ್ (E85) ಬಳಕೆಗೆ ಉತ್ತೇಜನ ನೀಡಲು ಚಿಂತಿಸುತ್ತಿದೆ. ಈ ಹೊಸ ಇಂಧನ ನೀತಿಯು ತೈಲ ಆಮದು ವೆಚ್ಚವನ್ನು ಕಡಿಮೆ ಮಾಡಲಿದ್ದು, ಪರಿಸರ ಸ್ನೇಹಿಯೂ ಆಗಿದೆ.
07:37 AM (IST) Apr 22