ಚೆನ್ನೈ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಶನಿವಾರ ನೀಟ್ ಪ್ರಶ್ನೆ ಪತ್ರಿಕೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ತಮಿಳುನಾಡಿನ ಮಾಮಲ್ಲಪುರಂನಲ್ಲಿ, ಭೇಟಿ ಮಾಡಿದ ರಾಹುಲ್, ‘ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದನ್ನು ನೋಡುವುದಕ್ಕಿಂತ ನೋವಿನ ಸಂಗತಿ ಇನ್ನೊಂದಿಲ್ಲ. ಈ ಪ್ರತಿ ಕುಟುಂಬಗಳಲ್ಲಿಯೂ ಮುರಿದ ಶಿಕ್ಷಣ ವ್ಯವಸ್ಥೆ ಬಗ್ಗೆ ಗಂಭಿರ ಪ್ರಶ್ನೆಗಳಿವೆ. ಸೋರಿಕೆ, ರದ್ದಾದ ಪ್ರಶ್ನೆಪತ್ರಿಕೆಗಳು, ರಾತ್ರೋರಾತ್ರಿ ನಾಶವಾದ ತಯಾರಿಗಳಿವೆ. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿಲ್ಲದ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಬಯಸುತ್ತಿದ್ದಾರೆ’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
11:32 PM (IST) Aug 02
ಖ್ಯಾತ ನಿರೂಪಕಿ ಸುಮಾ ಮತ್ತು ನಟ ರಾಜೀವ್ ಕನಕಾಲ ಸುಮಾರು 30 ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಇವರ ಮದುವೆಗೂ ಮುನ್ನ ನಡೆದ ಒಂದು ಘಟನೆ ನಿಮಗೆ ಗೊತ್ತಾ? ಸುಮಾ ಅವರಿಗೆ ರಾಜೀವ್ ಹಾಕಿದ್ದ ಆ ಕಂಡೀಷನ್ ಯಾವುದು?
10:02 PM (IST) Aug 02
ಭೀಕರ ಕಾಡ್ಗಿಚ್ಚು ನಿಯಂತ್ರಸಲು ಹೆಲಿಕಾಪ್ಟರ್ ಮೂಲಕ ನೀರು ಹಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಪರಿಣಾಮ ಒಂದು ಹೆಲಿಕಾಪ್ಟರ್ ಸಂಪೂರ್ಣ ಪತನಗೊಂಡಿದೆ. ರಕ್ಷಣಾ ತಂಡಗಳು ಕ್ಯಾಪ್ಟನ್ ಹುಡುಕಾಟದಲ್ಲಿ ನಿರತವಾಗಿದೆ.
09:35 PM (IST) Aug 02
Soundarya Last Interview: ದಿವಂಗತ ನಟಿ ಸೌಂದರ್ಯ ಅವರು ಸಿನಿಮಾದಿಂದ ರಾಜಕೀಯಕ್ಕೆ ಬಂದು ಏನಾದರೂ ಸಾಧಿಸಬೇಕೆಂದು ಬಯಸಿದ್ದರು. ಅದರಲ್ಲೂ ಜನರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಅವರಿಗಿತ್ತು.
08:54 PM (IST) Aug 02
Shri Ramlila Mahasangh: ಯಶ್, ರಣಬೀರ್ ಕಪೂರ್ ನಟನೆಯ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರವನ್ನು ಬಿಡುಗಡೆಗೂ ಮುನ್ನ ತಮಗೆ ತೋರಿಸಬೇಕೆಂದು ಶ್ರೀ ರಾಮಲೀಲಾ ಮಹಾಸಂಘ ಆಗ್ರಹಿಸಿದೆ.
08:53 PM (IST) Aug 02
ಕಾಕ್ರೋಚ್ ಹೋರಾಟದಲ್ಲಿ ಪ್ರಧಾನಿ ಮೋದಿ ತಾಯಿ ವಿರುದ್ಧ ಅವಾಚ್ಯ ಶಬ್ದ ಪ್ರಯೋಗಿಸಲಾಗಿತ್ತು. ಇದೀಗ ಕಾಂಗ್ರೆಸ್ ನಾಯಕ ಮೋದಿಯ ಸೀತೆ ಯಾರು ಎಂದು ಪ್ರಶ್ನಿಸುವ ಮೂಲಕ ರಾಮಾಯಣ ಎಳೆದುತಂದು ಆಕ್ರೋಶಕ್ಕೆ ಗುರಿಯಾಗಿದ್ದಾರೆ.
08:19 PM (IST) Aug 02
07:56 PM (IST) Aug 02
ಭಾರತೀಯ ರೈಲ್ವೆ ಇತಿಹಾಸದಲ್ಲಿ ಮೊದಲ ಬಾರಿಗೆ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಜೀವಂತ ಹೃದಯವನ್ನು ಸೂರತ್ನಿಂದ ಅಹಮದಾಬಾದ್ಗೆ ಯಶಸ್ವಿಯಾಗಿ ಸಾಗಿಸಲಾಗಿದೆ. ಈ ಕ್ಷಿಪ್ರ ಸಾರಿಗೆ ಮತ್ತು ಗ್ರೀನ್ ಕಾರಿಡಾರ್ ವ್ಯವಸ್ಥೆಯಿಂದಾಗಿ, ಗಂಭೀರ ಹೃದಯ ರೋಗಿಯೊಬ್ಬರಿಗೆ ಹೊಸ ಜೀವನ ನೀಡಲು ಸಾಧ್ಯವಾಯಿತು.
07:17 PM (IST) Aug 02
ಷೇರು ವಹಿವಾಟು, ಷೇರುಗಳ ಮೇಲೆ ಹೂಡಿಕೆ ಮಾಡಿರುವ ಮಂದಿ ಇಲ್ಲಿ ಗಮನಿಸಿ. ಸೋಮವಾರದಿಂದ ಷೇರು ವಹಿವಾಟಿನ ಸಮಯ ಬದಲಾಗುತ್ತಿದೆ. ಯಾವೆಲ್ಲಾ ಸಮಯದಲ್ಲಿ ಷೇರು ವಹಿವಾಟು ನಡೆಸಲು ಸಾಧ್ಯ, ಭಾರತದ ಷೇರು ಮಾರುಕಟ್ಟೆ ಹೊಸ ಸಮಯದ ವಿವರ ಇಲ್ಲಿದೆ.
06:39 PM (IST) Aug 02
06:35 PM (IST) Aug 02
ನೀಟ್ ಪಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಹೋರಾಟದ ಮೂಲಕ ಕ್ರಾಂತಿ ಮಾಡಿರುವ ಅಭಿಜಿತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ ಮುಂದಿನ ನಡೆ ಕುರಿತು ಆಗಸ್ಟ್ 5ರಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ. ಮುಂದಿನ ಹೋರಾಟ ಏನು?
05:54 PM (IST) Aug 02
05:38 PM (IST) Aug 02
ಸುಮಾರು ₹4,000 ಕೋಟಿ ಬಜೆಟ್ನಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿದೆ ಎನ್ನಲಾಗುತ್ತಿರುವ ರಾಮಾಯಣ ಸಿನಿಮಾ, ಭಾರತೀಯ ಚಿತ್ರರಂಗದ ಅತಿದೊಡ್ಡ ಪೌರಾಣಿಕ ಚಿತ್ರವಾಗುವ ಗುರಿಯೊಂದಿಗೆ ಸಿದ್ಧವಾಗುತ್ತಿದೆ.
04:58 PM (IST) Aug 02
ನಟಿ ಸಾಯಿ ಪಲ್ಲವಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ. ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಅವರ ಆಯ್ಕೆ ಆಗಿರುವುದು.
04:23 PM (IST) Aug 02
ಚಾಯ್ವಾಲಾಝ್ ಕೆಫೆ ಸ್ಟಾರ್ಟ್ಅಫ್ ಉದ್ಯಮಿ ಆರಂಭಿಸಿ ಭಾರಿ ಯಶಸ್ಸು ಕಂಡ ರೋಹಿತ್ ಶರ್ಮಾ ಬಾಳಲ್ಲಿ ಬಿರುಗಾಳಿ ಎದ್ದು ಕೆಲ ದಿನಗಳು ಉರುಳಿತ್ತು. ಇದೀಗ 30ರ ಹರೆಯದ ಉದ್ಯಮಿ ಶವವಾಗಿ ಪತ್ತೆಯಾಗಿದ್ದಾರೆ.
02:35 PM (IST) Aug 02
ಪುರಾತತ್ವ ಇಲಾಖೆ ನಿರ್ವಹಿಸುವ ಪ್ರಾಚೀನ ತಾಣ ವೀಕ್ಷಿಸಲು ತೆರಳಿದ ಪ್ರವಾಸಿಗರಿದ್ದ ವಿಮಾನ ಪತನಗೊಂಡಿದೆ. ಪರಿಣಾಮ ವಿಮಾನದಲ್ಲಿ 13 ಪ್ರವಾಸಿಗರು ಜೀವಂತ ದಹನವಾಗಿದ್ದಾರೆ. ಘಟನೆ ದೃಶ್ಯಗಳು ಹೊರಬಂದಿದ್ದು, ಭೀಕರತೆಯ ಸಾರುತ್ತಿದೆ.
01:47 PM (IST) Aug 02
ಸೋಷಿಯಲ್ ಮೀಡಿಯಾದಿಂದ ಪ್ರಭಾವಿತಳಾಗಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿದ್ದ 15 ವರ್ಷದ ಬಾಲಕಿಯ ಮೇಲೆ ಎಫ್ಐಆರ್ ದಾಖಲಾಗಿತ್ತು. ನಂತರ ತನ್ನ ತಪ್ಪು ಅರಿತು ಕ್ಷಮೆ ಕೋರಿದ ಬಳಿಕ, ಪ್ರಕರಣವನ್ನು ಹಿಂಪಡೆಯಲಾಗಿದೆ. ಮಗಳ ತಪ್ಪನ್ನು ಕ್ಷಮಿಸಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಸಲ್ಲಿಸಿರುವ ತಾಯಿ, 20 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾ ನಿಷೇಧಿಸುವಂತೆ ಮನವಿ ಮಾಡಿದ್ದಾರೆ.
01:43 PM (IST) Aug 02
ನೀಟ್ ಪೇಪರ್ ಸೋರಿಕೆ ಪ್ರತಿಭಟನೆಯನ್ನು ಬಳಸಿಕೊಂಡು ದೆಹಲಿಯಲ್ಲಿ ಹಿಂಸಾಚಾರ ಸೃಷ್ಟಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರ ಹಮೀಮ್ ಮಂಡಲ್ನ ಗೆಳತಿ ಅರ್ಪಿತಾ ಸರ್ಕಾರ್ನನ್ನು ಪಶ್ಚಿಮ ಬಂಗಾಳ ಎಸ್ಟಿಎಫ್ ಬಂಧಿಸಿದೆ.
01:36 PM (IST) Aug 02
ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ನ ದೊಡ್ಡ ಸ್ಟಾರ್ಗಳ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗುತ್ತಿವೆ. ಇಂತಹ ಸಂದರ್ಭದಲ್ಲಿ ನಟರು ನೂರಾರು ಕೋಟಿ ಸಂಭಾವನೆ ಕೇಳುವುದು ನಿರ್ಮಾಪಕರಿಗೆ ಹೊರೆಯಾಗುತ್ತಿದೆ. ಸಲ್ಮಾನ್ ಖಾನ್ ಕಡಿಮೆ ಮಾಡಿದ್ದು ಇದಕ್ಕೇನಾ? ಅಥವಾ.. ಇನ್ನೇನು ಕಾರಣ?
01:11 PM (IST) Aug 02
12:46 PM (IST) Aug 02
12:04 PM (IST) Aug 02
11:39 AM (IST) Aug 02
11:19 AM (IST) Aug 02
ಗುರುಗ್ರಾಮದಲ್ಲಿ MNC ಉದ್ಯೋಗಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ 7 ವರ್ಷದ ಮಗ ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾನೆ. ಇದು ಆತ್ಮ*ತ್ಯೆಯಲ್ಲ, ಪತ್ನಿಯೇ ಮಾಡಿದ ಕೊಲೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದು, ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
10:38 AM (IST) Aug 02
09:42 AM (IST) Aug 02
08:56 AM (IST) Aug 02
08:38 AM (IST) Aug 02
07:10 AM (IST) Aug 02
ಪ್ರಧಾನಿ ಮೋದಿಯವರನ್ನು ನಿಂದಿಸಿದ್ದ ಹುಡುಗಿ ಕ್ಷಮೆಯಾಚಿಸಿದ ನಂತರ, ಮೋದಿ ಆಕೆಯನ್ನು ಕ್ಷಮಿಸುವ ವಿಡಿಯೋ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ, ಇದು ಬರೀ ರೀಲ್ಸ್ ನಾಟಕವೇ ಅಥವಾ ವಿದ್ಯಾರ್ಥಿಗಳ ಮೇಲಿನ ಕೇಸುಗಳನ್ನು ಹಿಂಪಡೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕೂಡ ಇದನ್ನು ಮೋದಿಯವರ ನಾಟಕ ಎಂದು ಟೀಕಿಸಿದೆ.