ಚೆನ್ನೈ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಶನಿವಾರ ನೀಟ್ ಪ್ರಶ್ನೆ ಪತ್ರಿಕೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ತಮಿಳುನಾಡಿನ ಮಾಮಲ್ಲಪುರಂನಲ್ಲಿ, ಭೇಟಿ ಮಾಡಿದ ರಾಹುಲ್, ‘ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದನ್ನು ನೋಡುವುದಕ್ಕಿಂತ ನೋವಿನ ಸಂಗತಿ ಇನ್ನೊಂದಿಲ್ಲ. ಈ ಪ್ರತಿ ಕುಟುಂಬಗಳಲ್ಲಿಯೂ ಮುರಿದ ಶಿಕ್ಷಣ ವ್ಯವಸ್ಥೆ ಬಗ್ಗೆ ಗಂಭಿರ ಪ್ರಶ್ನೆಗಳಿವೆ. ಸೋರಿಕೆ, ರದ್ದಾದ ಪ್ರಶ್ನೆಪತ್ರಿಕೆಗಳು, ರಾತ್ರೋರಾತ್ರಿ ನಾಶವಾದ ತಯಾರಿಗಳಿವೆ. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿಲ್ಲದ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಬಯಸುತ್ತಿದ್ದಾರೆ’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
09:42 AM (IST) Aug 02
08:56 AM (IST) Aug 02
08:38 AM (IST) Aug 02
07:10 AM (IST) Aug 02
ಪ್ರಧಾನಿ ಮೋದಿಯವರನ್ನು ನಿಂದಿಸಿದ್ದ ಹುಡುಗಿ ಕ್ಷಮೆಯಾಚಿಸಿದ ನಂತರ, ಮೋದಿ ಆಕೆಯನ್ನು ಕ್ಷಮಿಸುವ ವಿಡಿಯೋ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ, ಇದು ಬರೀ ರೀಲ್ಸ್ ನಾಟಕವೇ ಅಥವಾ ವಿದ್ಯಾರ್ಥಿಗಳ ಮೇಲಿನ ಕೇಸುಗಳನ್ನು ಹಿಂಪಡೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕೂಡ ಇದನ್ನು ಮೋದಿಯವರ ನಾಟಕ ಎಂದು ಟೀಕಿಸಿದೆ.