LIVE NOW
Published : Aug 02, 2026, 06:47 AM ISTUpdated : Aug 02, 2026, 09:42 AM IST

India Latest News Live: ಸಾಲು ಸಾಲು ಸೋಲು, ಅವಮಾನ.. ತಿರುಪತಿಗೆ ಬಂದು ಹರಕೆ ತೀರಿಸಿದ ಪಾಂಡ್ಯ

ಸಾರಾಂಶ

ಚೆನ್ನೈ: ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಶನಿವಾರ ನೀಟ್‌ ಪ್ರಶ್ನೆ ಪತ್ರಿಕೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ತಮಿಳುನಾಡಿನ ಮಾಮಲ್ಲಪುರಂನಲ್ಲಿ, ಭೇಟಿ ಮಾಡಿದ ರಾಹುಲ್, ‘ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದನ್ನು ನೋಡುವುದಕ್ಕಿಂತ ನೋವಿನ ಸಂಗತಿ ಇನ್ನೊಂದಿಲ್ಲ. ಈ ಪ್ರತಿ ಕುಟುಂಬಗಳಲ್ಲಿಯೂ ಮುರಿದ ಶಿಕ್ಷಣ ವ್ಯವಸ್ಥೆ ಬಗ್ಗೆ ಗಂಭಿರ ಪ್ರಶ್ನೆಗಳಿವೆ. ಸೋರಿಕೆ, ರದ್ದಾದ ಪ್ರಶ್ನೆಪತ್ರಿಕೆಗಳು, ರಾತ್ರೋರಾತ್ರಿ ನಾಶವಾದ ತಯಾರಿಗಳಿವೆ. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿಲ್ಲದ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಬಯಸುತ್ತಿದ್ದಾರೆ’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

09:42 AM (IST) Aug 02

ಸಾಲು ಸಾಲು ಸೋಲು, ಅವಮಾನ.. ತಿರುಪತಿಗೆ ಬಂದು ಹರಕೆ ತೀರಿಸಿದ ಪಾಂಡ್ಯ

ವೃತ್ತಿಬದುಕಿನ ಸಂಕಷ್ಟಗಳಿಂದ ಕಂಗೆಟ್ಟಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತೊರೆದು ಕೆಕೆಆರ್ ಸೇರುವ ವದಂತಿಗಳ ನಡುವೆ, ಅವರ ಈ ದೈವಭಕ್ತಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
Read Full Story

08:56 AM (IST) Aug 02

RCB ಕ್ಯಾಪ್ಟನ್‌ ಪಾಟಿದಾರ್‍‌ಗೆ ದೊಡ್ಡ ಜವಾಬ್ದಾರಿ.. ಬೆಂಗಳೂರು ಅಭಿಮಾನಿಗಳಲ್ಲಿ ಮೂಡಿದ ಕುತೂಹಲ

ಆರ್‌ಸಿಬಿ ಆಟಗಾರ ರಜತ್ ಪಾಟಿದಾರ್ ಅವರು ದುಲೀಪ್ ಟ್ರೋಫಿ 2026ರಲ್ಲಿ ಹಾಲಿ ಚಾಂಪಿಯನ್ ಸೆಂಟ್ರಲ್ ಜೋನ್ ತಂಡವನ್ನು ಮುನ್ನಡೆಸಲಿದ್ದಾರೆ. ರಿಂಕು ಸಿಂಗ್ ಉಪನಾಯಕರಾಗಿದ್ದು, ಈ ತಂಡವು ನೇರವಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಆಡಲಿದೆ.
Read Full Story

08:38 AM (IST) Aug 02

ಕಾಕ್ರೋಚ್ ಜನತಾ ಪಕ್ಷದ ಹೋರಾಟ ಹಳಿತಪ್ಪಿಸುವ ಸಂಚು - ಓರ್ವ ಮಹಿಳೆ ಸೇರಿ ಇಬ್ಬರ ಬಂಧನ

ಪಾಕಿಸ್ತಾನ ಮೂಲದ ಜೈಷ್‌ ಎ ಮೊಹಮ್ಮದ್‌ ಸಂಘಟನೆಯು ಭಾರತದ ರಾಜಕಾರಣಿಗಳ ಹತ್ಯೆ ಮತ್ತು ಹನಿಟ್ರ್ಯಾಪ್‌ಗೆ ರೂಪಿಸಿದ್ದ ಸಂಚು ಬಯಲಾಗಿದೆ. ಈ ಸಂಬಂಧ, ಪಶ್ಚಿಮ ಬಂಗಾಳದ ರಾಜಕಾರಣಿ ಸುವೇಂದು ಅಧಿಕಾರಿ ಹತ್ಯೆಗೆ ಸಂಚು ರೂಪಿಸಿದ್ದ ಮೊಹಮ್ಮದ್‌ ಹಮೀಂ ಮಂಡಲ್‌ ಮತ್ತು ರಾಜಕಾರಣಿಗಳಿಗೆ ಹನಿಟ್ರ್ಯಾಪ್ ಮಾಡುತ್ತಿದ್ದ ಅರ್ಪಿತಾ ಸರ್ಕಾರ್ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.
Read Full Story

07:10 AM (IST) Aug 02

ಫ್ರೆಂಡ್, ಕೇಸ್‌ ವಾಪಸ್ ಪಡೀತೀರಾ? ಮೋದಿ ಕ್ಷಮೆಯಾಚನೆ ವಿಡಿಯೋಗೆ ದೀಪ್ಕೆ ವ್ಯಂಗ್ಯ!

ಪ್ರಧಾನಿ ಮೋದಿಯವರನ್ನು ನಿಂದಿಸಿದ್ದ ಹುಡುಗಿ ಕ್ಷಮೆಯಾಚಿಸಿದ ನಂತರ, ಮೋದಿ ಆಕೆಯನ್ನು ಕ್ಷಮಿಸುವ ವಿಡಿಯೋ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ, ಇದು ಬರೀ ರೀಲ್ಸ್ ನಾಟಕವೇ ಅಥವಾ ವಿದ್ಯಾರ್ಥಿಗಳ ಮೇಲಿನ ಕೇಸುಗಳನ್ನು ಹಿಂಪಡೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕೂಡ ಇದನ್ನು ಮೋದಿಯವರ ನಾಟಕ ಎಂದು ಟೀಕಿಸಿದೆ.

Read Full Story

More Trending News