LIVE NOW
Published : Mar 17, 2026, 06:43 AM ISTUpdated : Mar 17, 2026, 09:39 AM IST

India Latest News Live: ಆರ್‌ಎಸ್‌ಎಸ್‌ ನಿಷೇಧಿಸಿ ಎಂದ ಅಮೆರಿಕ ಆಯೋಗದ ವರದಿ ತಿರಸ್ಕರಿಸಿ ಭಾರತದ ಖಡಕ್ ಉತ್ತರ

ಸಾರಾಂಶ

ನವದೆಹಲಿ: ಭಾರತದ ಹಡಗುಗಳನ್ನು ಹೋರ್ಮಜ್‌ ಜಲಸಂಧಿ ಮೂಲಕ ಸಾಗಲು ಇರಾನ್‌ ಬಿಟ್ಟಿದ್ದಕ್ಕೆ ಆ ದೇಶದ ಜೊತೆಗೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದು ಅಮೆರಿಕ ಆರೋಪ ಮಾಡಿದೆ. ಆದರೆ ಅಮೆರಿಕದ ಇಂಧನ ಸಚಿವ ಕ್ರಿಸ್‌ ರೈಟ್‌ ಅವರ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್‌, ‘ಇದು ನಮ್ಮ ರಾಜತಾಂತ್ರಿಕ ಮಾತುಕತೆಯ ಫಲವೇ ಹೊರತು, ಭಾರತ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

09:39 AM (IST) Mar 17

ಆರ್‌ಎಸ್‌ಎಸ್‌ ನಿಷೇಧಿಸಿ ಎಂದ ಅಮೆರಿಕ ಆಯೋಗದ ವರದಿ ತಿರಸ್ಕರಿಸಿ ಭಾರತದ ಖಡಕ್ ಉತ್ತರ

ಆರ್‌ಎಸ್‌ಎಸ್‌ ನಿಷೇಧ ಮತ್ತು 'ರಾ'ಗೆ ನಿರ್ಬಂಧ ಹೇರಬೇಕೆಂಬ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (USCIRF) ವರದಿಯನ್ನು ಭಾರತ  ತಿರಸ್ಕರಿಸಿದ್ದು ಈ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವರದಿಯು ಪ್ರೇರಿತ ಹಾಗೂ ಪಕ್ಷಪಾತದಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

Read Full Story

09:11 AM (IST) Mar 17

ಅಪ್ಪ ಸತ್ತಾಗ ತಾಯಿಗೆ 21 ವರ್ಷ, ನಮಗಾಗಿ ಎರಡನೇ ಮದುವೆ ಆಗಲಿಲ್ಲ; ಹಾಸ್ಯನಟ ಸುನೀಲ್

ಕಾಮಿಡಿಯನ್ ಸುನೀಲ್ ಇಂದು ಸ್ಟಾರ್ ಹಾಸ್ಯನಟ ಮತ್ತು ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿದ್ದಾರೆ. ಆದರೆ ಈ ಯಶಸ್ಸಿನ ಹಿಂದೆ ಅವರ ತಾಯಿಯ ಕಠಿಣ ಪರಿಶ್ರಮ ಮತ್ತು ದೊಡ್ಡ ತ್ಯಾಗವಿದೆ. ಸುನೀಲ್ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ.

Read Full Story

07:07 AM (IST) Mar 17

ಪಶ್ಚಿಮ ಬಂಗಾಳ ಚುನಾವಣೆಗೆ ಮೊದಲೇ ಅಧಿಕಾರಿಗಳ ವರ್ಗಾವಣೆ - ಚುನಾವಣಾ ಆಯೋಗದ ವಿರುದ್ಧ ಮಮತಾ ಆಕ್ರೋಶ

ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಕ್ಕೆ ಸಿಎಂ ಮಮತಾ ಬ್ಯಾನರ್ಜಿ, ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 5 ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Read Full Story

More Trending News