Published : Mar 17, 2026, 06:43 AM ISTUpdated : Mar 17, 2026, 11:04 PM IST

India Latest News Live: ರಾಜಸ್ಥಾನ್ ರಾಯಲ್ಸ್ ಖರೀದಿಗೆ 'ಉಕ್ಕಿನ ಮನುಷ್ಯ' ಎಂಟ್ರಿ - ಬಿರ್ಲಾ ಗ್ರೂಪ್‌ಗೆ ಟಕ್ಕರ್ ಕೊಡಲು ಬಂದ ಮಿತ್ತಲ್ ಫ್ಯಾಮಿಲಿ!

ಸಾರಾಂಶ

ನವದೆಹಲಿ: ಭಾರತದ ಹಡಗುಗಳನ್ನು ಹೋರ್ಮಜ್‌ ಜಲಸಂಧಿ ಮೂಲಕ ಸಾಗಲು ಇರಾನ್‌ ಬಿಟ್ಟಿದ್ದಕ್ಕೆ ಆ ದೇಶದ ಜೊತೆಗೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದು ಅಮೆರಿಕ ಆರೋಪ ಮಾಡಿದೆ. ಆದರೆ ಅಮೆರಿಕದ ಇಂಧನ ಸಚಿವ ಕ್ರಿಸ್‌ ರೈಟ್‌ ಅವರ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್‌, ‘ಇದು ನಮ್ಮ ರಾಜತಾಂತ್ರಿಕ ಮಾತುಕತೆಯ ಫಲವೇ ಹೊರತು, ಭಾರತ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Rajasthan Royals

11:04 PM (IST) Mar 17

ರಾಜಸ್ಥಾನ್ ರಾಯಲ್ಸ್ ಖರೀದಿಗೆ 'ಉಕ್ಕಿನ ಮನುಷ್ಯ' ಎಂಟ್ರಿ - ಬಿರ್ಲಾ ಗ್ರೂಪ್‌ಗೆ ಟಕ್ಕರ್ ಕೊಡಲು ಬಂದ ಮಿತ್ತಲ್ ಫ್ಯಾಮಿಲಿ!

ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ಮಾರಾಟ ಪ್ರಕ್ರಿಯೆಯಲ್ಲಿ ಹೊಸ ತಿರುವು ಉಂಟಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಜೊತೆಗೆ, ಇದೀಗ ಜಾಗತಿಕ ಉಕ್ಕಿನ ದೈತ್ಯ 'ಆರ್ಸೆಲರ್ ಮಿತ್ತಲ್' ಕುಟುಂಬವೂ ಫ್ರಾಂಚೈಸಿ ಖರೀದಿಸಲು ಆಸಕ್ತಿ ತೋರಿದೆ. 

Read Full Story

10:46 PM (IST) Mar 17

ಇದು ರಿಲಯನ್ಸ್‌ ಜಿಯೋದ ಅತ್ಯಂತ ದುಬಾರಿ 30 ದಿನದ ರಿಚಾರ್ಜ್‌ ಪ್ಲ್ಯಾನ್‌, ಇದರಲ್ಲಿ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ₹1,549 ಮೌಲ್ಯದ ದುಬಾರಿ ಪೋಸ್ಟ್‌ಪೇಯ್ಡ್ ಯೋಜನೆಯನ್ನು ನೀಡುತ್ತದೆ. 30 ದಿನಗಳ ಮಾನ್ಯತೆಯ ಈ ಯೋಜನೆಯಲ್ಲಿ 300GB ಡೇಟಾ, ಅನಿಯಮಿತ 5G, ಕರೆಗಳು ಹಾಗೂ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಲೈಟ್‌ನಂತಹ OTT ಪ್ರಯೋಜನಗಳು ಸೇರಿವೆ.
Read Full Story

09:49 PM (IST) Mar 17

ಕೆಡಿ ನಟ ಸಂಜಯ್ ದತ್ ನಿಜವಾದ ಹೆಸರು ಏನು? ಅವರ ಮಿಡಲ್ ನೇಮ್ 'ಬಲರಾಜ್' ಹಿಂದಿನ ಕಥೆ ಗೊತ್ತಾ?

ಸಂಜಯ್ ದತ್ ಅವರು 55 ವರ್ಷಗಳ ಹಿಂದೆಯೇ, ಅಂದರೆ ತಮ್ಮ 11ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ಚಿತ್ರದ ಹೆಸರು 'ರೇಷ್ಮಾ ಔರ್ ಶೇರಾ'. ಇದನ್ನು ಸಂಜು ಬಾಬಾ ಅವರ ತಂದೆ ಸುನೀಲ್ ದತ್ ನಿರ್ದೇಶಿಸಿದ್ದರು.

Read Full Story

09:09 PM (IST) Mar 17

ಬಂಪರ್‌ ನ್ಯೂಸ್‌ - ತಕ್ಷಣದಿಂದಲೇ EPF ಪಿಂಚಣಿ ಹೆಚ್ಚಳಕ್ಕೆ ಶಿಫಾರಸು ಮಾಡಿದ ಸಂಸದೀಯ ಸಮಿತಿ, ಎಷ್ಟಾಗಲಿದೆ ಪೆನ್ಶನ್‌?

ಕೇಂದ್ರ ಸರ್ಕಾರದ ಸಂಸದೀಯ ಸ್ಥಾಯಿ ಸಮಿತಿಯು, ಇಪಿಎಸ್-95 ಯೋಜನೆಯಡಿ ನೀಡಲಾಗುತ್ತಿರುವ ₹1,000 ಕನಿಷ್ಠ ಮಾಸಿಕ ಪೆನ್ಶನ್ ಅನ್ನು ತುರ್ತಾಗಿ ಹೆಚ್ಚಿಸಲು ಶಿಫಾರಸು ಮಾಡಿದೆ. ಪ್ರಸ್ತುತ ಮೊತ್ತವು ಜೀವನ ವೆಚ್ಚಕ್ಕೆ ಸಾಕಾಗುವುದಿಲ್ಲ ಎಂದು ವರದಿ ಹೇಳಿದೆ.

Read Full Story

07:40 PM (IST) Mar 17

JSW ಇಂಡಿಯನ್ ಓಪನ್ ಸ್ಕ್ವಾಷ್ ಸಂಭ್ರಮ; ಮುಂಬೈನಲ್ಲಿ ನಾಳೆಯಿಂದ ಹೈ-ವೋಲ್ಟೇಜ್ ಪಂದ್ಯ!

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಸ್ಕ್ವಾಷ್ ಪಂದ್ಯಾವಳಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಅನಾಹತ್ ಸಿಂಗ್, ರಮಿತ್ ಟಂಡನ್, ಜೋಷ್ನಾ ಚಿನಪ್ಪ ಸೇರಿದಂತೆ ಭಾರತದ ಪ್ರಮುಖ ಆಟಗಾರರು ಮತ್ತು ಅಂತರಾಷ್ಟ್ರೀಯ ಸ್ಪರ್ಧಿಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ. 

Read Full Story

07:16 PM (IST) Mar 17

ಸೈಫ್‌ ಅಲಿ ಖಾನ್‌ ಪುತ್ರಿ ಸಾರಾ ಅಲಿ ಖಾನ್‌ಗೆ ಇನ್ಮುಂದೆ ಬದ್ರಿನಾಥ್‌ ದೇವಸ್ಥಾನಕ್ಕೆ ಹೋಗೋದು ಕಷ್ಟ ಕಷ್ಟ!

ಚಾರ್ ಧಾಮ್ ಯಾತ್ರೆ 2026 ಕ್ಕೆ ಶ್ರೀ ಬದರಿನಾಥ ಕೇದಾರನಾಥ ಮಂದಿರ ಸಮಿತಿಯು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸನಾತನೇತರ ಭಕ್ತರು, ಉದಾಹರಣೆಗೆ ನಟಿ ಸಾರಾ ಅಲಿ ಖಾನ್, ದೇವಸ್ಥಾನ ಪ್ರವೇಶಿಸಲು "ನಾನು ಸನಾತನಿ" ಎಂದು ಘೋಷಿಸುವ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ.

Read Full Story

06:43 PM (IST) Mar 17

ಚುನಾವಣೆ ಜಟಾಪಟಿ ನಡುವೆ ಮೂವರು ಕಾಂಗ್ರೆಸ್ ನಾಯಕರು ಸಸ್ಪೆಂಡ್, ಕೋಲಾಹಲ ಶುರು

ಚುನಾವಣೆ ಜಟಾಪಟಿ ನಡುವೆ ಮೂವರು ಕಾಂಗ್ರೆಸ್ ನಾಯಕರು ಸಸ್ಪೆಂಡ್, ಕೋಲಾಹಲ ಶುರು, ಬಿಜೆಪಿಗೆ ಅಡ್ಡಮತದಾನ ಮಾಡಿದ್ದಾರೆ ಎಂದು ಮೂವರು ನಾಯಕರನ್ನು ಅಮಾನತು ಮಾಡಲಾಗಿದೆ. ಇದೀಗ ಈ ನಾಯಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ.

 

Read Full Story

06:28 PM (IST) Mar 17

ರೈಲ್ವೆ ಪ್ರಯಾಣಿಕರಿಗೆ ಗುಡ್​ನ್ಯೂಸ್​ - ಬುಕಿಂಗ್​ ಸಮಸ್ಯೆಗೆ ಭರ್ಜರಿ ಪರಿಹಾರ- ನಿಮಿಷಕ್ಕೆ ಒಂದೂವರೆ ಲಕ್ಷ ಟಿಕೆಟ್​ ಲಭ್ಯ

ರೈಲ್ವೆ ಪ್ರಯಾಣಿಕರು ತತ್ಕಾಲ್ ಮತ್ತು ಪೀಕ್ ಅವರ್‌ನಲ್ಲಿ ಟಿಕೆಟ್ ಬುಕ್ ಮಾಡಲು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. 'ಸೂಪರ್ ಫಾಸ್ಟ್ ಟಿಕೆಟಿಂಗ್ ಸಿಸ್ಟಮ್' ಎಂಬ ಹೊಸ ವ್ಯವಸ್ಥೆಯನ್ನು ಜೂನ್ ವೇಳೆಗೆ ಜಾರಿಗೆ ತರಲಾಗುತ್ತಿದ್ದು, ಇದು ಪ್ರತಿ ನಿಮಿಷಕ್ಕೆ ಒಂದೂವರೆ ಲಕ್ಷ ಟಿಕೆಟ್‌ಗಳನ್ನು ಬುಕ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರಿಂದ ಕನ್ಫರ್ಮ್ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಲಿವೆ.
Read Full Story

06:10 PM (IST) Mar 17

'ಮನೆ ಮೇಲೆ ಫೈಟರ್‌ ಜೆಟ್‌ ಹಾರಾಡ್ತಿದ್ದವು..' ಮಗನ ಶಾಲೆಗೆ ವಾರ ಇರುವಾಗಲೇ ದುಬೈ ಬಿಟ್ಟು ಓಡಿ ಬಂದ ಸಾನಿಯಾ ಮಿರ್ಜಾ!

ಸಾನಿಯಾ ಮಿರ್ಜಾ, ದುಬೈನಲ್ಲಿನ ಉದ್ವಿಗ್ನ ರಾಜಕೀಯ ಪರಿಸ್ಥಿತಿ ಮತ್ತು ಮಗನ ಸುರಕ್ಷತೆಯ ಕಾಳಜಿಯಿಂದಾಗಿ ಹೈದರಾಬಾದ್‌ಗೆ ಮರಳಿದ್ದಾರೆ. ತಮ್ಮ ಮನೆಯ ಬಳಿ ಫೈಟರ್ ಜೆಟ್‌ಗಳ ಹಾರಾಟದ ಅನುಭವದ ನಂತರ, ಅವರು ಈದ್ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಭಾರತಕ್ಕೆ ವಾಪಸಾಗುವ ನಿರ್ಧಾರ ಮಾಡಿದ್ದಾರೆ.

Read Full Story

06:08 PM (IST) Mar 17

ಸರ್ಸೆ ನಿನ್ನ ಸೆರಗ ಹಾಡು ಎಲ್ಲಾ ಪ್ಲಾಟ್‌ಫಾರ್ಮ್‌ನಿಂದ ತೆಗೆಯಿರಿ, ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್

ಸರ್ಸೆ ನಿನ್ನ ಸೆರಗ ಹಾಡು ಎಲ್ಲಾ ಪ್ಲಾಟ್‌ಫಾರ್ಮ್‌ನಿಂದ ತೆಗೆಯಿರಿ, ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್, ಕನ್ನಡ ಚಿತ್ರರಂಗ ಮಾನ ದೇಶದಲ್ಲಿ ಹರಾಜಾಗಿದೆ. ಅತ್ಯಂತ ಕೀಳುಮಟ್ಟದ ಸಾಹಿತ್ಯ ಬರೆದ ನಿರ್ದೇಶಕ ಪ್ರೇಮ್ ಹಾಗೂ ಕೆಡಿ ಸಿನಿಮಾಗೆ ಭಾರಿ ಹೊಡೆತ ಬಿದ್ದಿದೆ.

Read Full Story

05:54 PM (IST) Mar 17

ಮೋಹನ್‌ಲಾಲ್‌ ಜೊತೆಗಿನ 'ಆಪರೇಷನ್ ಸಿಂದೂರ್' ಸಿನಿಮಾ ನಿಂತು ಹೋಯ್ತಾ? ಮೇಜರ್ ರವಿ ಕೊಟ್ಟ ಸ್ಪಷ್ಟನೆಯೇನು?

ಮೋಹನ್‌ಲಾಲ್ ಜೊತೆಗಿನ ತಮ್ಮ ಹೊಸ ಮಿಲಿಟರಿ ಸಿನಿಮಾ 'ಆಪರೇಷನ್ ಸಿಂದೂರ್' ನಿಂತು ಹೋಗಿದೆ ಎಂಬ ವದಂತಿಗಳಿಗೆ ನಿರ್ದೇಶಕ ಮೇಜರ್ ರವಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ಕೈಬಿಟ್ಟಿಲ್ಲ, ಆದರೆ ಸ್ವಲ್ಪ ತಡವಾಗಿದೆ ಎಂದಿದ್ದಾರೆ.

Read Full Story

05:37 PM (IST) Mar 17

ಷೇರು ಮಾರುಕಟ್ಟೆಯಲ್ಲಿ 90 ಪೈಸೆಯ 'ಪಲ್ಸರ್' ಅಬ್ಬರ - ಐದೇ ದಿನದಲ್ಲಿ ಶೇ.20ರಷ್ಟು ಲಾಭ; 90 ಕೋಟಿ ಆದಾಯ ಗಳಿಸಿದ ಸಣ್ಣ ಕಂಪನಿ!

ಒಂದು ರೂಪಾಯಿಗಿಂತ ಕಡಿಮೆ ಬೆಲೆಯ ಪೆನ್ನಿ ಸ್ಟಾಕ್ ಆದ ಪಲ್ಸರ್ ಇಂಟರ್ನ್ಯಾಷನಲ್, 90 ಕೋಟಿ ರೂಪಾಯಿ ಆದಾಯ ಗಳಿಸಿದ ನಂತರ ಭಾರಿ ಏರಿಕೆ ಕಂಡಿದೆ. ಕಳೆದ ಐದು ದಿನಗಳಲ್ಲಿ 20% ಲಾಭ ನೀಡಿರುವ ಈ ಕಂಪನಿಯು, ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಕೃಷಿ ಕ್ಷೇತ್ರಕ್ಕೆ ಕಾಲಿಡಲಿದೆ.
Read Full Story

05:31 PM (IST) Mar 17

Suriya Movie - 'ಗಜನಿ' ವೈಬ್ಸ್.. 20 ವರ್ಷ ಚಿಕ್ಕ ನಟಿ ಜೊತೆ ಸೂರ್ಯ ಲವ್ ಸ್ಟೋರಿ? ಟೀಸರ್ ಸಖತ್ ವೈರಲ್!

ಸಿನಿಮಾ ಪ್ರೇಕ್ಷಕರಿಗೆ ನಟ ಸೂರ್ಯ ಅಂದ್ರೆ ಒಂದು ವಿಶೇಷ ಪ್ರೀತಿ. ಅವರಿಗಿಂತ ದೊಡ್ಡ ಸ್ಟಾರ್‌ಗಳು ತಮಿಳಿನಲ್ಲಿ ಹಲವರಿದ್ದರೂ, ಜನರಿಗೆ ಹತ್ತಿರದ ಹೀರೋ ಅಂದ್ರೆ ಅದು ಸೂರ್ಯನೇ. ತೆರೆ ಮೇಲೆ ಮಾತ್ರವಲ್ಲ..

Read Full Story

04:40 PM (IST) Mar 17

ನನಗೆ ನಟಿ ನಯನತಾರ ಬೇಕು, ಕೊಡಿಸ್ತೀರಾ? ತಮಿಳುನಾಡು ಸಂಸದನ ಭಾರಿ ವಿವಾದ

ನನಗೆ ನಟಿ ನಯನತಾರ ಬೇಕು, ಕೊಡಿಸ್ತೀರಾ? ತಮಿಳುನಾಡು ಸಂಸದನ ಭಾರಿ ವಿವಾದ, ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲೇ ಈ ಮಾತುಗಳನ್ನಾಡಿ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಂಸದನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

 

Read Full Story

04:39 PM (IST) Mar 17

ಸೂರ್ಯನ ಬೆಳಕನ್ನೂ ಸೇಲ್‌ ಮಾಡೋ ಕಂಪನಿ ಬಂತು.. ರಾತ್ರಿಯಲ್ಲೂ ಸನ್‌ಲೈಟ್‌ ಬೇಕಂದ್ರೆ ಗಂಟೆಗೆ 4.6 ಲಕ್ಷ ರೂಪಾಯಿ ಚಾರ್ಜ್‌!

ಕ್ಯಾಲಿಫೋರ್ನಿಯಾ ಮೂಲದ 'ರಿಫ್ಲೆಕ್ಟ್ ಆರ್ಬಿಟಲ್' ಕಂಪನಿಯು, ಬಾಹ್ಯಾಕಾಶದಲ್ಲಿ ಬೃಹತ್ ಕನ್ನಡಿಗಳಿರುವ ಉಪಗ್ರಹಗಳನ್ನು ಬಳಸಿ ರಾತ್ರಿಯ ಸಮಯದಲ್ಲಿ ಭೂಮಿಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಯೋಜನೆ ರೂಪಿಸಿದೆ. 

Read Full Story

04:26 PM (IST) Mar 17

Mohanlal - ಆ ಮಗುವಿನ ಮುಖವನ್ನಾದ್ರೂ ನೋಡ್ಬಹುದಿತ್ತು - ಫ್ಯಾನ್ಸ್ ಜೊತೆಗಿನ ಫೋಟೋಶೂಟ್ ವಿಡಿಯೋ ವೈರಲ್, ನಟನಿಗೆ ಟೀಕೆ

ತರುಣ್ ಮೂರ್ತಿ ನಿರ್ದೇಶನದ ಸಿನಿಮಾ ಶೂಟಿಂಗ್ ವೇಳೆ ನಟ ಮೋಹನ್‌ಲಾಲ್ ಅಭಿಮಾನಿಗಳ ಜೊತೆ ಫೋಟೋಶೂಟ್ ನಡೆಸಿದ್ದರು. ಈ ವೇಳೆ ತೆಗೆದ ಒಂದು ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದ್ದು, ವೈರಲ್ ಆಗಿವೆ.

 

Read Full Story

03:56 PM (IST) Mar 17

ರೈಲ್ವೆ ಟಿಕೆಟ್‌ನ ಎರಡೂ ಅಂಚಿನಲ್ಲಿ ತೂತುಗಳು ಏಕಿರುತ್ತವೆ? ಶೇ.99ರಷ್ಟು ಮಂದಿಗೆ ಇದು ಗೊತ್ತಿಲ್ಲ..

ರೈಲ್ವೆ ಟಿಕೆಟ್‌ಗಳ ಬದಿಗಳಲ್ಲಿ ಕಂಡುಬರುವ ರಂಧ್ರಗಳು 'ಡಾಟ್ ಮ್ಯಾಟ್ರಿಕ್ಸ್ ಪ್ರಿಂಟಿಂಗ್ ಸಿಸ್ಟಮ್'ನಿಂದ ಉಂಟಾಗುತ್ತವೆ. ಈ 'ಸ್ಪ್ರೋಕೆಟ್ ಹೋಲ್ಸ್' ಗಳು, 'ಕಂಟಿನ್ಯೂಯಸ್ ಪೇಪರ್' ಅನ್ನು ಪ್ರಿಂಟರ್‌ನಲ್ಲಿ ಸಮಾನವಾಗಿ ಚಲಿಸಲು ಸಹಾಯ ಮಾಡುತ್ತವೆ.

Read Full Story

03:48 PM (IST) Mar 17

ಸರ್ಕಾರಿ ಮಹಿಳಾ ಉದ್ಯೋಗಿಗೆ ಸಂಕಷ್ಟ ತಂದ ಬೆತ್ತಲೆ ಸ್ನಾನ, ಗಂಡನ ವಿರುದ್ಧವೇ ದೂರು ದಾಖಲಿಸಿದ ಪತ್ನಿ

ಸರ್ಕಾರಿ ಮಹಿಳಾ ಉದ್ಯೋಗಿಗೆ ಸಂಕಷ್ಟ ತಂದ ಬೆತ್ತಲೆ ಸ್ನಾನ, ಗಂಡನ ವಿರುದ್ಧವೇ ದೂರು ದಾಖಲಿಸಿದ ಪತ್ನಿ, ಪತ್ನಿಯ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದ ಗಂಡ ಲೀಕ್ ಮಾಡಲು ಮುಂದಾಗಿದ್ದಾನೆ. ಇಷ್ಟೇ ಅಲ್ಲ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

Read Full Story

03:10 PM (IST) Mar 17

ಮದುವೆ ಮನೆಯಲ್ಲಿ ಊಟ ಮಾಡ್ತಿದ್ದಾಗ ದುರಂತ - ಗಂಟಲಿನಲ್ಲಿ ರಸಗುಲ್ಲಾ ಸಿಲುಕಿ ವ್ಯಕ್ತಿ ಸಾವು

ಜಾರ್ಖಂಡ್‌ನ ಜೆಮ್ಶೆಡ್‌ಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಊಟ ಮಾಡುತ್ತಿದ್ದಾಗ 41 ವರ್ಷದ ಲಲಿತ್ ಸಿಂಗ್ ಎಂಬುವವರು  ಗಂಟಲಿನಲ್ಲಿ ರಸಗುಲ್ಲಾ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

Read Full Story

02:29 PM (IST) Mar 17

ನಾನು ಕೂಡ ನಿನ್ನ ಅಮ್ಮನ ಹಾಲು ಕುಡಿದೇ ಬೆಳೆದಿದ್ದು - ಹಠ ಮಾಡಿದ ಎಮ್ಮೆ ಕರುವಿಗೆ ಬಾಲಕಿಯ ಸವಾಲು - ವೀಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿಯೊಬ್ಬಳ ವೀಡಿಯೋ ವೈರಲ್ ಆಗಿದ್ದು, ಹೊಲಕ್ಕೆ ಹೋಗಲು ಹಠ ಮಾಡುವ ಎಮ್ಮೆ ಕರುವಿಗೆ ಬಾಲಕಿ ಸವಾಲು ಹಾಕಿದ್ದು, ಆಕೆಯ ಮಾತು ನೆಟ್ಟಿಗರ ಮನಗೆದ್ದಿದೆ. ಹಳ್ಳಿಯ ಮುಗ್ಧ ಜೀವನದ ಚಿತ್ರಣವನ್ನು ಕಟ್ಟಿಕೊಡುವ ಈ ವಿಡಿಯೋಗೆ ಹಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

Read Full Story

02:20 PM (IST) Mar 17

Sri Lanka Crisis - ವಾರಕ್ಕೆ 4 ದಿನ ಕೆಲಸ, 15 ಲೀಟರ್ ಪೆಟ್ರೋಲ್! ಶ್ರೀಲಂಕಾದಲ್ಲಿ ಮತ್ತೆ ಆರ್ಥಿಕ ಸಂಕಷ್ಟ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಶ್ರೀಲಂಕಾ ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು, ಸರ್ಕಾರವು ವಾರಕ್ಕೆ ನಾಲ್ಕು ದಿನಗಳ ಕೆಲಸವನ್ನು ಜಾರಿಗೆ ತಂದಿದ್ದು, ಖಾಸಗಿ ವಾಹನಗಳಿಗೆ ವಾರಕ್ಕೆ 15 ಲೀಟರ್ ಇಂಧನವನ್ನು ನಿಗದಿಪಡಿಸಿದೆ.

Read Full Story

01:41 PM (IST) Mar 17

ಕೆಡಿ ಸಿನಿಮಾದ ಅಶ್ಲೀಲ ಸರ್ಸೆ ಸೆರಗ ಹಾಡು ಯೂಟ್ಯೂಬ್‌ನಿಂದ ಡಿಲೀಟ್, ಸಿನಿ ತಂಡಕ್ಕೆ NHRC ನೋಟಿಸ್

ಕೆಡಿ ಸಿನಿಮಾದ ಅಶ್ಲೀಲ ಸರ್ಸೆ ಸೆರಗ ಹಾಡು ಯೂಟ್ಯೂಬ್‌ನಿಂದ ಡಿಲೀಟ್, ಸಿನಿ ತಂಡಕ್ಕೆ NHRC ನೋಟಿಸ್, ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಹಾಡಿಗೆ ಬಾರಿ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಸಿನಿಮಾ ತಂಡಕ್ಕೆ ಸಂಕಷ್ಟ ತೀವ್ರಗೊಂಡಿದೆ.

 

Read Full Story

01:39 PM (IST) Mar 17

Offer for sale - 66.76 ಲಕ್ಷ ಈಕ್ವಿಟಿ ಷೇರುಗಳ ಮಾರಾಟಕ್ಕೆ ಮುಂದಾದ ಸಿಮೆಂಟ್ ಕಂಪನಿ

ದಕ್ಷಿಣ ಭಾರತದ ಸಿಮೆಂಟ್ ಕಂಪನಿ  66.76 ಲಕ್ಷ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಸೆಬಿ ನಿಯಮಾವಳಿಗಳನ್ನು ಪಾಲಿಸಲು, ಕಂಪನಿಯು ತನ್ನ ಪಾಲುದಾರಿಕೆಯನ್ನು ಕಡಿಮೆ ಮಾಡಲು ಈ ಆಫರ್-ಫಾರ್-ಸೇಲ್ (OFS) ಪ್ರಕ್ರಿಯೆಯನ್ನು ಕೈಗೊಂಡಿದೆ.

Read Full Story

01:13 PM (IST) Mar 17

ಮುಖಕ್ಕೆ ಫೇಸ್ ಪ್ಯಾಕ್ ಹಾಕಿ ಮೀಟಿಂಗ್‌ ಹಾಜರು, ಜೆನ್‌ಜಿ ಉದ್ಯೋಗಿ ನೋಡಿ ಬಾಸ್ ರಿಯಾಕ್ಷನ್ ವೈರಲ್

ಮುಖಕ್ಕೆ ಫೇಸ್ ಪ್ಯಾಕ್ ಹಾಕಿ ಮೀಟಿಂಗ್‌ ಹಾಜರು, ಜೆನ್‌ಜಿ ಉದ್ಯೋಗಿ ನೋಡಿ ಬಾಸ್ ರಿಯಾಕ್ಷನ್ ವೈರಲ್, ಯುವತಿಯೊಬ್ಬಳು ಆಫೀಸ್ ವಿಡಿಯೋ ಕಾಲ್ ಮೀಟಿಂಗ್‌ಗೆ ಮುಖಕ್ಕೆ ಹಸಿರು ಬಣ್ಣದ 'ನೀಮ್ ಫೇಸ್ ಪ್ಯಾಕ್' ಹಾಕಿಕೊಂಡು ಬಂದಿದ್ದಾಳೆ.

 

Read Full Story

01:08 PM (IST) Mar 17

Kabul Airstrike - ಸೇನಾ ಕಾರ್ಯಾಚರಣೆ ಹೆಸರಲ್ಲಿ ನರಮೇಧ - ಕಾಬೂಲ್ ಆಸ್ಪತ್ರೆ ದಾಳಿಗೆ ಪಾಕ್ ವಿರುದ್ಧ ಭಾರತ ಕೆಂಡಾಮಂಡಲ

ಕಾಬೂಲ್‌ನ ವ್ಯಸನಮುಕ್ತ ಕೇಂದ್ರದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಅಮಾನವೀಯ ಕೃತ್ಯದಲ್ಲಿ 400ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ತಾಲಿಬಾನ್ ಎಚ್ಚರಿಸಿದೆ. 

Read Full Story

12:29 PM (IST) Mar 17

ಪೆಟ್ರೋಲ್ ಟೆನ್ಶನ್ ಬಿಡಿ! ದಿನನಿತ್ಯದ ಓಡಾಟಕ್ಕೆ ಈ ಸೈಕಲ್ ಇದ್ರೆ ಸಾಕು, ಜೇಬಿಗೂ ಹಗುರ!

ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ, ದಿನನಿತ್ಯದ ಓಡಾಟಕ್ಕೆ ಎಲೆಕ್ಟ್ರಿಕ್ ಸೈಕಲ್‌ಗಳು ಉತ್ತಮ ಪರ್ಯಾಯವಾಗಿವೆ. ₹50,000ದೊಳಗಿನ ಈ ಇ-ಬೈಕ್‌ಗಳು ಒಂದೇ ಚಾರ್ಜ್‌ನಲ್ಲಿ 60 ಕಿ.ಮೀ ವರೆಗೆ ಮೈಲೇಜ್ ನೀಡಿ, ಖರ್ಚು ಕಡಿಮೆ ಮಾಡಿ ಪರಿಸರವನ್ನೂ ಉಳಿಸುತ್ತವೆ.
Read Full Story

12:26 PM (IST) Mar 17

ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್, ಗೆಳೆಯನ ಮುಂದೆ ದುರಂತ ಅಂತ್ಯ

ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್, ಗೆಳೆಯನ ಮುಂದೆ ದುರಂತ ಅಂತ್ಯ ಕಂಡ ಯುವಕ, ವಿಡಿಯೋ ಮಾಡುತ್ತಿದ್ದ ಗೆಳೆಯ ತಪ್ಪಿಯೂ ಟ್ರಿಗರ್ ಒತ್ತಬೇಡ ಎಂದು ಸೂಚಿಸಿದ ಬೆನ್ನಲ್ಲೇ ದುರಂತ ನಡೆದಿದೆ.

 

Read Full Story

11:17 AM (IST) Mar 17

ಮಾತು ಮುಗಿಸುವ ಮುನ್ನವೇ ಕೊನೆಯುಸಿರೆಳೆದ ಮಹಿಳೆ - ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ದುರಂತ - ವೀಡಿಯೋ

heart attack at housewarming party: ಗೃಹ ಪ್ರವೇಶ ಸಮಾರಂಭದಲ್ಲಿ, 40 ವರ್ಷದ ಮಹಿಳೆಯೊಬ್ಬರು ಮಾತನಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಆಘಾತಕಾರಿ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

09:39 AM (IST) Mar 17

ಆರ್‌ಎಸ್‌ಎಸ್‌ ನಿಷೇಧಿಸಿ ಎಂದ ಅಮೆರಿಕ ಆಯೋಗದ ವರದಿ ತಿರಸ್ಕರಿಸಿ ಭಾರತದ ಖಡಕ್ ಉತ್ತರ

ಆರ್‌ಎಸ್‌ಎಸ್‌ ನಿಷೇಧ ಮತ್ತು 'ರಾ'ಗೆ ನಿರ್ಬಂಧ ಹೇರಬೇಕೆಂಬ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (USCIRF) ವರದಿಯನ್ನು ಭಾರತ  ತಿರಸ್ಕರಿಸಿದ್ದು ಈ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವರದಿಯು ಪ್ರೇರಿತ ಹಾಗೂ ಪಕ್ಷಪಾತದಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

Read Full Story

09:11 AM (IST) Mar 17

ಅಪ್ಪ ಸತ್ತಾಗ ತಾಯಿಗೆ 21 ವರ್ಷ, ನಮಗಾಗಿ ಎರಡನೇ ಮದುವೆ ಆಗಲಿಲ್ಲ; ಹಾಸ್ಯನಟ ಸುನೀಲ್

ಕಾಮಿಡಿಯನ್ ಸುನೀಲ್ ಇಂದು ಸ್ಟಾರ್ ಹಾಸ್ಯನಟ ಮತ್ತು ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿದ್ದಾರೆ. ಆದರೆ ಈ ಯಶಸ್ಸಿನ ಹಿಂದೆ ಅವರ ತಾಯಿಯ ಕಠಿಣ ಪರಿಶ್ರಮ ಮತ್ತು ದೊಡ್ಡ ತ್ಯಾಗವಿದೆ. ಸುನೀಲ್ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ.

Read Full Story

07:07 AM (IST) Mar 17

ಪಶ್ಚಿಮ ಬಂಗಾಳ ಚುನಾವಣೆಗೆ ಮೊದಲೇ ಅಧಿಕಾರಿಗಳ ವರ್ಗಾವಣೆ - ಚುನಾವಣಾ ಆಯೋಗದ ವಿರುದ್ಧ ಮಮತಾ ಆಕ್ರೋಶ

ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಕ್ಕೆ ಸಿಎಂ ಮಮತಾ ಬ್ಯಾನರ್ಜಿ, ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 5 ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Read Full Story

More Trending News