ನವದೆಹಲಿ: ‘ಶಾರ್ಟ್ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು. ಆದರೆ ಎಲ್ಲದಕ್ಕೂ ಶಾರ್ಟ್ಕಟ್ (ಅಡ್ಡದಾರಿ) ಹುಡುಕುತ್ತಾ ಹೋಗುವುದು ಸಲ್ಲದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಕಿವಿಮಾತು ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆತ್ಮಚರಿತ್ರೆಯಾದ ‘ಭಾರತೀಯ ಗಣರಾಜ್ಯದ ವಿಜಯ: ನನ್ನ ಜೀವನ, ನನ್ನ ಹೋರಾಟಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದರು.
‘ಇದು ರೀಲ್ಸ್ನ ಯುಗವಾಗಿದೆ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ನಿಮ್ಮನ್ನು ಅವುಗಳತ್ತ ಆಕರ್ಷಿಸುತ್ತಾರೆ. ಹೀಗಿರುವಾಗ, ರೈಲು ನಿಲ್ದಾಣಗಳಲ್ಲಿ ಬ್ರಿಡ್ಜ್ ಬದಲು ಹಳಿ ದಾಟಿ ಸಾಗುವವರಿಗೆ ಎಚ್ಚರಿಸುವ ‘ಶಾರ್ಟ್ಕಟ್ಗಳು ಅಪಾಯಕಾರಿ’ ಎಂಬ ಸಾಲನ್ನು ನೆನಪಿಟ್ಟುಕೊಳ್ಳಬೇಕು. ಆದರೆ ಶಾರ್ಟ್ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು’ ಎಂದು ಮೋದಿ ಹೇಳಿದರು.
08:53 PM (IST) Aug 13
ಸೋಷಿಯಲ್ ಮೀಡಿಯಾದಲ್ಲಿ ಪ್ರವಾಸದ ಸ್ಟೇಟಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಇದು ಕಳ್ಳರಿಗೆ ನಿಮ್ಮ ಮನೆ ಖಾಲಿ ಇದೆ ಎಂದು ನೀವೇ ಮಾಹಿತಿ ನೀಡಿದಂತೆ ಎಂದು ಡಿವೈಎಸ್ಪಿ ಎಚ್ಚರಿಸಿದ್ದಾರೆ. ಆದ್ದರಿಂದ, ಪ್ರವಾಸ ಮುಗಿಸಿ ಬಂದ ನಂತರ ಫೋಟೋಗಳನ್ನು ಹಂಚಿಕೊಳ್ಳುವುದು ಸುರಕ್ಷಿತ.
08:38 PM (IST) Aug 13
2008ರ ಐಪಿಎಲ್ 'ಸ್ಲ್ಯಾಪ್ಗೇಟ್' ವಿವಾದದ ಬಳಿಕ, ಇತ್ತೀಚೆಗೆ ಶ್ರೀಶಾಂತ್ ಅವರು ಹರ್ಭಜನ್ ಸಿಂಗ್ಗೆ ಬಾಕ್ಸಿಂಗ್ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್, ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಿದ್ದ ಎಂದಿದ್ದಾರೆ.
07:54 PM (IST) Aug 13
ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸಿದ ರಾಹುಲ್ ಗಾಂಧಿ, ನಾಯಕರನ್ನು ಅಪ್ಪಿಕೊಳ್ಳುವುದೇ ರಾಜತಾಂತ್ರಿಕತೆಯಲ್ಲ ಎಂದರು. ವೇದಿಕೆಯಲ್ಲೇ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡು ಅವರು ವ್ಯಂಗ್ಯವಾಡಿದ್ದಾರೆ.
07:29 PM (IST) Aug 13
Sridevi Biography Book: ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು, ಪ್ರಿಯಾಂಕಾ ಚೋಪ್ರಾ ಅವರು 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ.
07:05 PM (IST) Aug 13
ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಮುಂಗಡವಾಗಿ 'ಟಿಪ್ಸ್' ನೀಡುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸಾರಿಗೆ ಸಚಿವಾಲಯವು ವಾಹನ ಅಗ್ರಿಗೇಟರ್ಗಳಿಗೆ ಖಡಕ್ ಸೂಚನೆ ನೀಡಿದೆ.
05:47 PM (IST) Aug 13
05:45 PM (IST) Aug 13
ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ 'ದೇವುರ್ ಕೊಠಾರ್' ಬೌದ್ಧ ಸ್ತೂಪವು ವಿಶ್ವಪ್ರಸಿದ್ಧ ಸಾಂಚಿ ಸ್ತೂಪಕ್ಕಿಂತಲೂ ಹಳೆಯದು ಮತ್ತು ಬೃಹತ್ತಾದುದು ಎಂಬ ಚರ್ಚೆ ಹುಟ್ಟುಹಾಕಿದೆ.
04:58 PM (IST) Aug 13
04:20 PM (IST) Aug 13
03:52 PM (IST) Aug 13
03:51 PM (IST) Aug 13
ಹಿರಿಯರು ನೋಡಿ ನಿರ್ಧರಿಸಿದ ಮದುವೆ ಸಂಬಂಧಗಳನ್ನು ಸುಲಭವಾಗಿ ನಿರ್ವಹಿಸಲು ಪುಣೆ ಮೂಲದ ವಿಕಾಸ್ ಲೋಹಿಯಾ ಎಂಬ ಯುವಕ ಒಂದು ಎಕ್ಸ್ ಎಲ್ ಶೀಟ್ ತಯಾರಿಸಿದ್ದರು. ಪೋಷಕರು ಬಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಉತ್ತರಿಸಲು, ಈಗಾಗಲೇ ನೀಡಿದ ಉತ್ತರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ಶೀಟ್ಅನ್ನು ಬಳಕೆ ಮಾಡುತ್ತಿದ್ದ.
02:53 PM (IST) Aug 13
02:51 PM (IST) Aug 13
ಮುಂಗಡ ಟಿಪ್ ನೀಡಿದರೆ ಬೇಗ ರೈಡ್ ಸಿಗುತ್ತದೆ ಎಂಬ ಭಾವನೆ ಮೂಡಿಸಿ ಗ್ರಾಹಕರ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಚ್ಚರಿಕೆ ನೀಡಿದೆ.
01:33 PM (IST) Aug 13
12:42 PM (IST) Aug 13
ಎನ್. ಚಂದ್ರಶೇಖರನ್ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಟಾಟಾ ಸಮೂಹದಲ್ಲಿ ತೀವ್ರ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಗಿದೆ. ಟಾಟಾ ಗ್ರೂಪ್ ಮತ್ತು ನೋಯೆಲ್ ಟಾಟಾ ನೇತೃತ್ವದ ಟಾಟಾ ಟ್ರಸ್ಟ್ಗಳ ನಡುವಿನ ಹೂಡಿಕೆ ಯೋಜನೆಗಳು, ಆಡಳಿತಾತ್ಮಕ ಭಿನ್ನಾಭಿಪ್ರಾಯಗಳೇ ಈ ಅಧಿಕಾರ ಹೋರಾಟಕ್ಕೆ ಮುಖ್ಯ ಕಾರಣ.
12:14 PM (IST) Aug 13
12:02 PM (IST) Aug 13
ಸ್ಮಾರ್ಟ್ಫೋನ್ ಕೈಯಲ್ಲಿದೆ ಎಂದ ತಕ್ಷಣ ಯಾರದ್ದೇ ವಿಡಿಯೋ ಮಾಡುವುದು ಕಾನೂನುಬದ್ಧವಲ್ಲ. ಇತರರ ವೈಯಕ್ತಿಕ ಗೌರವ ಮತ್ತು ಖಾಸಗಿತನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
11:49 AM (IST) Aug 13
11:35 AM (IST) Aug 13
10:56 AM (IST) Aug 13
ಭಾರತದಲ್ಲಿ ಚಿನ್ನದ ದರ ಮಂಗಳವಾರ 3 ಸಾವಿರ ರೂಪಾಯಿಗಿಂತ ಹೆಚ್ಚು ಹೆಚ್ಚಾಗಿತ್ತು, ಇಂದು ಮತ್ತೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ದರ ದಾಖಲಿಸಿದೆ. ಜಾಗತಿಕ ವಿದ್ಯಮಾನಗಳು ಮತ್ತು ಡಾಲರ್ ಮೌಲ್ಯ ಕುಸಿತದಿಂದಾಗಿ ಭವಿಷ್ಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
10:39 AM (IST) Aug 13
09:59 AM (IST) Aug 13
ಕೇರಳದಲ್ಲಿ 2021ರಲ್ಲಿ ನಡೆದ ಸತ್ಯ ಘಟನೆಯಾಧಾರಿತ ತಮಿಳಿನ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಅವಕಾಶದ ಆಮಿಷವೊಡ್ಡಿ ಯುವತಿಯರನ್ನು ಕೊಲ್ಲುವ ಸೀರಿಯಲ್ ಕಿಲ್ಲರ್ ಮತ್ತು ಪೊಲೀಸ್ ತನಿಖೆಯ ಸುತ್ತ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಸಾಗುತ್ತದೆ.
09:51 AM (IST) Aug 13
ಆಗಸ್ಟ್ 10 ರಂದು ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ, ಪ್ರಯಾಣಿಕರೊಬ್ಬರ ಬ್ಯಾಗ್ನಲ್ಲಿ ತಲೆಬುರುಡೆಯೊಂದನ್ನು ಪತ್ತೆ ಮಾಡಿದ್ದಾರೆ. ಹೈದರಾಬಾದ್ಗೆ ಹೊರಟಿದ್ದ ಈ ಪ್ರಯಾಣಿಕ, ಅದು ಕೋತಿಯ ತಲೆಬುರುಡೆ ಎಂದು ಹೇಳಿಕೊಂಡಿದ್ದಾನೆ.
09:47 AM (IST) Aug 13
09:30 AM (IST) Aug 13
08:59 AM (IST) Aug 13
Abhijeet Dipke: ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ, 'ಜಂತರ್ ಮಂತರ್ ಹೋರಾಟದ 2ನೇ ಸೀಸನ್' ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಆದರೆ, ಹೋರಾಟದ ಸ್ವರೂಪವನ್ನು ಬಹಿರಂಗಪಡಿಸಿಲ್ಲ, ಬದಲಾಗಿ ದೇಶವ್ಯಾಪಿ 'ಲಿಸನಿಂಗ್ ಟೂರ್' ನಡೆಸುವುದಾಗಿ ತಿಳಿಸಿದ್ದಾರೆ.
08:55 AM (IST) Aug 13
ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಸಜ್ಜಾಗಿದ್ದು, ಆಡುವ ಬಳಗದ ಆಯ್ಕೆ ಗೊಂದಲ ಎದುರಾಗಿದೆ. 6ನೇ ಕ್ರಮಾಂಕಕ್ಕೆ ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ನಡುವೆ ಪೈಪೋಟಿ ಇದ್ದರೆ, ಸ್ಪಿನ್ ಸ್ನೇಹಿ ಪಿಚ್ನಲ್ಲಿ ಹೆಚ್ಚುವರಿ ಸ್ಪಿನ್ನರ್ ಆಡಿಸಬೇಕೇ ಎಂಬ ಚಿಂತೆಯೂ ತಂಡಕ್ಕಿದೆ.
06:58 AM (IST) Aug 13
ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಪ್ರಕರಣದ ತನಿಖಾ ವರದಿಯು ಸಂಸತ್ತಿನಲ್ಲಿ ಮಂಡನೆಯಾಗಿದೆ. ವರದಿಯು ನ್ಯಾ. ವರ್ಮಾ ವಿರುದ್ಧದ ಮೂರೂ ಗಂಭೀರ ಆರೋಪಗಳು ಸಾಬೀತಾಗಿವೆ ಎಂದು ಸ್ಪಷ್ಟಪಡಿಸಿದೆ.
06:46 AM (IST) Aug 13