ನವದೆಹಲಿ: ‘ಶಾರ್ಟ್ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು. ಆದರೆ ಎಲ್ಲದಕ್ಕೂ ಶಾರ್ಟ್ಕಟ್ (ಅಡ್ಡದಾರಿ) ಹುಡುಕುತ್ತಾ ಹೋಗುವುದು ಸಲ್ಲದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಕಿವಿಮಾತು ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆತ್ಮಚರಿತ್ರೆಯಾದ ‘ಭಾರತೀಯ ಗಣರಾಜ್ಯದ ವಿಜಯ: ನನ್ನ ಜೀವನ, ನನ್ನ ಹೋರಾಟಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದರು.
‘ಇದು ರೀಲ್ಸ್ನ ಯುಗವಾಗಿದೆ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ನಿಮ್ಮನ್ನು ಅವುಗಳತ್ತ ಆಕರ್ಷಿಸುತ್ತಾರೆ. ಹೀಗಿರುವಾಗ, ರೈಲು ನಿಲ್ದಾಣಗಳಲ್ಲಿ ಬ್ರಿಡ್ಜ್ ಬದಲು ಹಳಿ ದಾಟಿ ಸಾಗುವವರಿಗೆ ಎಚ್ಚರಿಸುವ ‘ಶಾರ್ಟ್ಕಟ್ಗಳು ಅಪಾಯಕಾರಿ’ ಎಂಬ ಸಾಲನ್ನು ನೆನಪಿಟ್ಟುಕೊಳ್ಳಬೇಕು. ಆದರೆ ಶಾರ್ಟ್ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು’ ಎಂದು ಮೋದಿ ಹೇಳಿದರು.
06:58 AM (IST) Aug 13
ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಪ್ರಕರಣದ ತನಿಖಾ ವರದಿಯು ಸಂಸತ್ತಿನಲ್ಲಿ ಮಂಡನೆಯಾಗಿದೆ. ವರದಿಯು ನ್ಯಾ. ವರ್ಮಾ ವಿರುದ್ಧದ ಮೂರೂ ಗಂಭೀರ ಆರೋಪಗಳು ಸಾಬೀತಾಗಿವೆ ಎಂದು ಸ್ಪಷ್ಟಪಡಿಸಿದೆ.
06:46 AM (IST) Aug 13