LIVE NOW
Published : Jul 12, 2026, 06:48 AM ISTUpdated : Jul 12, 2026, 09:39 AM IST

India Latest News Live: ಕೋಚ್-ಕ್ಯಾಪ್ಟನ್ ಮಧ್ಯೆ ಸ್ಪಷ್ಟತೆಯೇ ಇರಲಿಲ್ಲ - ಹೀನಾಯ ಸೋಲಿಗೆ ಈ ಐದು ಬ್ಲಂಡರ್‍‌ಗಳೇ ಕಾರಣ..!

ಸಾರಾಂಶ

ನವದೆಹಲಿ: 2047ರ ವೇಳೆಗೆ ಭಾರತವನ್ನುಇಸ್ಲಾಮಿಕ್‌ ಖಿಲಾಫತ್‌ ಆಗಿಸುವ ಪಿತೂರಿ ಹಿನ್ನೆಲೆಯಲ್ಲಿ, ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದರ 20 ಹಿರಿಯ ನಾಯಕರ ಮೇಲೆ ದೆಹಲಿಯ ಎನ್‌ಐಎ ಕೋರ್ಟ್‌ ಶುಕ್ರವಾರ ಆರೋಪಪಟ್ಟಿ ಹೊರಿಸಿದೆ. ಇದರ ವಿಚಾರಣೆ ಜು.29ರಂದು ಪ್ರಾರಂಭವಾಗಲಿದೆ.

ಆರೋಪಿತರಲ್ಲಿಪಿಎಫ್‌ಐ ಅಧ್ಯಕ್ಷ ಒ.ಎಂ.ಎ. ಸಲಾಂ, ಉಪಾಧ್ಯಕ್ಷ ಇ.ಎಂ. ಅಬ್ದುಲ್ ರಹೀಮಾನ್, ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್, ಕಾರ್ಯದರ್ಶಿ ಅಫ್ಸರ್ ಪಾಷಾ ಮತ್ತು ಸಂಸ್ಥಾಪಕ ಅಧ್ಯಕ್ಷ ಇ. ಅಬುಬಕ್ಕರ್ ಮೊದಲಾದವರು ಸೇರಿದ್ದಾರೆ.

‘ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಆರೋಪಿತರು ಪಿಎಫ್‌ಐ ಮತ್ತು ಅದರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮೂಲಕ ದೊಡ್ಡ ಪಿತೂರಿಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಅನುಮಾನವಿದೆ. ಅವರು ಭಾರತದ ಪ್ರಜಾಪ್ರಭುತ್ವ ಸರ್ಕಾರವನ್ನು ಕೆಳಗುರುಳಿಸಿ, 2047ರೊಳಗೆ ಭಾರತದಲ್ಲಿ ಶರಿಯಾ ಆಧರಿತ ಇಸ್ಲಾಮಿಕ್ ಖಿಲಾಫತ್ ಸ್ಥಾಪಿಸುವ ಗುರಿ ಹೊಂದಿದ್ದರು. ದೇಶದ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಸಂಚು ರೂಪಿಸಿದ್ದರು’ ಎಂದು ಕೋರ್ಟ್‌ ತಿಳಿಸಿದೆ.

ಕೇಂದ್ರ ಸರ್ಕಾರವು 2022ರ ಸೆಪ್ಟೆಂಬರ್‌ನಲ್ಲಿ ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳು ಐಸಿಸ್‌ನಂತಹ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿವೆ ಎಂದು ಆರೋಪಿಸಿ, 5 ವರ್ಷಗಳ ಕಾಲ ನಿಷೇಧ ಹೇರಿತ್ತು.

09:39 AM (IST) Jul 12

ಕೋಚ್-ಕ್ಯಾಪ್ಟನ್ ಮಧ್ಯೆ ಸ್ಪಷ್ಟತೆಯೇ ಇರಲಿಲ್ಲ - ಹೀನಾಯ ಸೋಲಿಗೆ ಈ ಐದು ಬ್ಲಂಡರ್‍‌ಗಳೇ ಕಾರಣ..!

ಟಿ-20 ಸರಣಿಯ ಹೀನಾಯ ಸೋಲಿಗೆ ಪ್ರಮುಖ ಕಾರಣ ಕೋಚ್ ಗಂಭೀರ್ ಮತ್ತು ಕ್ಯಾಪ್ಟನ್ ಅಯ್ಯರ್ ತೆಗೆದುಕೊಂಡ ಪ್ರಮುಖ ನಿರ್ಧಾರಗಳೇ ಕಾರಣ. ಈ ಮಧ್ಯೆ ಗಂಭೀರ್ ಮತ್ತು ಅಯ್ಯರ್ ನಡುವೆ ಸಮನ್ವಯತೆ ಇರಲಿಲ್ವಾ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಭಾರತ ತಂಡದ ಮಾಡಿದ ಬ್ಲಂಡರ್‍‌ಗಳು ಏನು ಅನ್ನೋ ವಿವರ ಇಲ್ಲಿದೆ..

Read Full Story

09:21 AM (IST) Jul 12

FIFA World Cup 2026 ಕ್ವಾರ್ಟರ್‌ ಫೈನಲ್‌ - ಬೆಲ್ಜಿಯಂ ಮಣಿಸಿ ಸೆಮೀಸ್‌ಗೆ ಸ್ಪೇನ್‌ ಲಗ್ಗೆ

ಬೆಲ್ಜಿಯಂ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಸ್ಪೇನ್‌, 16 ವರ್ಷಗಳ ಬಳಿಕ ಫುಟ್ಬಾಲ್‌ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿತು. ಬದಲಿ ಆಟಗಾರನಾಗಿ ಕಣಕ್ಕಿಳಿದ ಮಿಕೆಲ್‌ ಮೆರಿನೊ 88ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸಿ ತಂಡದ ಗೆಲುವಿನ ಹೀರೋ ಎನಿಸಿದರು.
Read Full Story

07:04 AM (IST) Jul 12

ಆಕಾಶಕ್ಕೆ ಕನ್ನಡಿ ಹಾಕಿ ಭೂಮಿಗೆ ಟಾರ್ಚ್‌ ಹಿಡಿಯುವ ಪ್ರಯೋಗಕ್ಕೆ ಅಮೆರಿಕಾ ಒಪ್ಪಿಗೆ

ರಿಫ್ಲೆಕ್ಟ್‌ ಆರ್ಬಿಟಲ್‌ ಕಂಪನಿಯು ಬಾಹ್ಯಾಕಾಶದಲ್ಲಿ ಬೃಹತ್ ಕನ್ನಡಿಗಳನ್ನು ಅಳವಡಿಸಿ, ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಯೋಜನೆಗೆ ಅನುಮತಿ ಪಡೆದಿದೆ. ಈ ತಂತ್ರಜ್ಞಾನವು ಕೃಷಿ ಮತ್ತು ತುರ್ತು ಸಂದರ್ಭಗಳಲ್ಲಿ ನೆರವಾಗುವ ಗುರಿ ಹೊಂದಿದ್ದರೂ, ಖಗೋಳ ತಜ್ಞರು ಇದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Read Full Story

More Trending News