ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು 26 ಸಾಮಾಜಿಕ ಜಾಲತಾಣ ವೇದಿಕೆಗಳ ನಿಷೇಧ ವಿರೋಧಿಸಿ 'ಜೆನ್-ಝೀ' ಯುವಕರು ಹಾಗೂ ಜನತೆಯ ಹಿಂಸಾತ್ಮಕ ಪ್ರತಿಭಟನೆ ಮಂಗಳವಾರ ಮತ್ತೊಂದು ದಿಕ್ಕಿಗೆ ಹೊರಳಿದೆ. ಪ್ರಧಾನಿ ಹಾಗೂ ಜನಪ್ರತಿನಿಧಿಗಳ ಮೇಲೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಆರೋಪ ಹೊರಿಸಿದ ಜನತೆ ಸಂಸತ್ ಭವನ, ಅಧ್ಯಕ್ಷರ ಕಚೇರಿ, ಹಾಗೂ ಪ್ರಧಾನಿ ಖಾಸಗಿ ನಿವಾಸ, ಸಚಿವರ ಮನೆಗಳು, ಅಧ್ಯಕ್ಷೀಯ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸೇನೆಯು ಪ್ರಧಾನಿ ಅನುಪಸ್ಥಿತಿಯಲ್ಲಿ ದೇಶದ ಭದ್ರತೆ ಹೊಣೆ ಹೊತ್ತಿದ್ದೇವೆ ಎಂದು ಸೇನೆ ಘೋಷಿಸಿದೆ. ಈ ದಂಗೆ ಇತ್ತೀಚಿನ ಬಾಂಗ್ಲಾದೇಶ, ಸಿರಿಯಾ ಹಾಗೂ ಶ್ರೀಲಂಕಾ ದಂಗೆ ನೆನಪಿಸಿದೆ. ಘಟನೆಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಪಾಳಿಗರೇ, ಶಾಂತಿ ಕಾಪಾಡಿಕೊಳ್ಳಿ ನೇಪಾಳದಲ್ಲಿ ಸಂಭವಿಸಿದ ಹಿಂಸಾಚಾರವು ಹೃದಯ ವಿದ್ರಾವಕ. ಅನೇಕ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಸಂಗತಿಯಿಂದ ನನ್ನ ಮನಸ್ಸಿಗೆ ನೋವಾಗಿದೆ. ನೇಪಾಳದ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿ ಅತ್ಯಂತ ಮಹತ್ವದ್ದಾಗಿದೆ. ನೇಪಾಳದಲ್ಲಿರುವ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಮನವಿ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

11:12 PM (IST) Sep 10
ನೇಪಾಳದ ಜೆನ್ಜಿ ಪ್ರತಿಭಟನಕಾರರು ಇದೀಗ ನೇಪಾಳ ಸರ್ಕಾರ ಮುನ್ನಡೆಸಲು ಸುಶೀಲ್ ಕರ್ಕಿ ಹೆಸರು ಸೂಚಿಸಿದ್ದಾರೆ. ಪ್ರಧಾನಿ ಮೋದಿ, ಗಂಗಾ ಮಾತೆ ಸೇರಿದಂತೆ ಭಾರತ ಬಗ್ಗೆ ಉತ್ತಮ ಅಭಿಪ್ರಾಯ, ಸಂಬಂಧ ಇಟ್ಟುಕೊಂಡಿರುವ ಸುಶೀಲಾ ಕರ್ಕಿ ಯಾರು?
10:51 PM (IST) Sep 10
ಭಾರತ ಸೇರಿದಂತೆ ಜಾಗತಿಕ ಮಟ್ಟದ ಅನೇಕ ರಾಷ್ಟ್ರಗಳ ಮೇಲೆ ಸುಂಕ ಭಾರ ಹೇರಿದ್ದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ನ ಆಪ್ತ ಸ್ನೇಹಿತ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇದೀಗ ನಂ.1 ಶ್ರೀಮಂತ ಪಟ್ಟ ಕಳೆದುಕೊಂಡಿದ್ದಾರೆ. ಇದೀಗ ವಿಶ್ವದ ಶ್ರೀಮಂತ ವ್ಯಕ್ತಿ ಯಾರು, ಆತನ ಆಸ್ತಿ ಎಷ್ಟಿದೆ? ನೋಡಿ.
07:58 PM (IST) Sep 10
ನೇಪಾಳದಲ್ಲಿ ಆರಂಭವಾದ ಜೆನ್ ಝೀ ಕಿಡ್ಗಳ ಆಕ್ರೋಶದಿಂದ ಜನರೇಶನ್ ಝೆಡ್ಗಳ ಬಗ್ಗೆ ಹುಡುಕಾಟ ಆರಂಭವಾಗಿದೆ. 1997 ರಿಂದ 2012 ರ ನಡುವೆ ಜನಿಸಿದ ಈ ತಲೆಮಾರಿನವರು ತಂತ್ರಜ್ಞಾನದಲ್ಲಿ ನಿಪುಣರಾಗಿದ್ದು, ಪ್ರಾಯೋಗಿಕ ಮತ್ತು ಮೌಲ್ಯ-ಚಾಲಿತ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.
06:25 PM (IST) Sep 10
2023ರಲ್ಲೇ ಭಾರತದ ಜ್ಯೋತಿಷಿ ನೇಪಾಳ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದರು. ಇದೀಗ ಈ ಜ್ಯೋತಿಷಿ ನುಡಿದಂತೆ ನೇಪಾಳದಲ್ಲಿ ಸರ್ಕಾರದ ಪತನದ ಅಂಚಿನಲ್ಲಿದೆ. ಇದೇ ಜ್ಯೋತಿಷಿ ನೇಪಾಳದಲ್ಲಿನ ಮಹತ್ತರ ಬದಲಾವಣೆ ಕುರಿತು ಭವಿಷ್ಯ ನುಡಿದಿದ್ದಾರೆ. ಇದು ಶೀಘ್ರದಲ್ಲೇ ಆಗುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.
05:45 PM (IST) Sep 10
ಭಾರತದ ಮಾರುಕಟ್ಟೆಗೆ ಚೀನಾದ ಬೆಳ್ಳುಳ್ಳಿ ಆಗಾಗ್ಗೆ ಲಗ್ಗೆ ಇಟ್ಟು ಸದ್ದು ಮಾಡುತ್ತಲೇ ಇರುತ್ತದೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ಬೆಳ್ಳುಳ್ಳಿ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
05:21 PM (IST) Sep 10
ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ 2323% ರಷ್ಟು ಲಾಭ ತಂದುಕೊಟ್ಟಿದೆ. ₹11 ರಿಂದ ₹290 ಕ್ಕೆ ಏರಿಕೆಯಾಗಿರುವ ಈ ಷೇರು, ಕೇವಲ ಆರು ತಿಂಗಳಲ್ಲಿ 172% ಲಾಭ ನೀಡಿದೆ.
05:06 PM (IST) Sep 10
140 ವರ್ಷಗಳ ಹಿಂದೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಡಿವೋರ್ಸ್ ಪಡೆದ ರುಕ್ಮಾಬಾಯಿಯ ಸ್ಟೋರಿ ಇದು. ಬಾಲ್ಯ ವಿವಾಹ ಸೇರಿದಂತೆ ಇಡೀ ದೇಶದಲ್ಲಿಯೇ ಮಹಿಳಾ ಕ್ರಾಂತಿಗೆ ನಾಂದಿ ಹಾಡಿದ ಈಕೆಯ ರೋಚಕ ಕಥೆ ಕೇಳಿ...
03:47 PM (IST) Sep 10
ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಭಾರತದತ್ತ ದೃಷ್ಟಿ ಹರಿಸಿದ್ದಕ್ಕೆ ಕಾರಣವಾದದ್ದು ಆಪರೇಷನ್ ಸಿಂದೂರ್. ಯುದ್ಧ ಮಾಡದೇ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದ ಈ ಕಾರ್ಯಾಚರಣೆಯ ಕುತೂಹಲದ ಸ್ಟೋರಿ ಹಂಚಿಕೊಂಡಿದೆ ಇಸ್ರೊ. ಏನದು?
03:42 PM (IST) Sep 10
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು 15 ದಿನದ ಮಗುವನ್ನು ಫ್ರಿಡ್ಜ್ನಲ್ಲಿ ಇಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
03:06 PM (IST) Sep 10
02:45 PM (IST) Sep 10
ಸಂಜಯ್ ಕಪೂರ್ ಅವರ ನಿಧನದ ನಂತರ, ಅವರ 30,000 ಕೋಟಿ ರೂಪಾಯಿಗಳ ಆಸ್ತಿಯನ್ನು ಪಡೆಯಲು ಕುಟುಂಬದ ಸದಸ್ಯರ ನಡುವೆ ಕಾನೂನು ಹೋರಾಟ ಆರಂಭವಾಗಿದೆ. ತಾಯಿ, ಪತ್ನಿ ಮತ್ತು ಮಕ್ಕಳು ಆಸ್ತಿಯಲ್ಲಿ ತಮ್ಮ ಪಾ ಲು ಕೇಳಿದ್ದು, ಈ ಸುದ್ದಿ ತೀವ್ರ ಕುತೂಹಲವನ್ನು ಸೃಷ್ಟಿಸಿದೆ.
01:31 PM (IST) Sep 10
12:51 PM (IST) Sep 10
12:51 PM (IST) Sep 10
12:17 PM (IST) Sep 10
ಖೆರೇಶ್ವರ್ ಮಹಾದೇವ ದೇವಸ್ಥಾನದಲ್ಲಿ ರಷ್ಯನ್ ಯುವತಿಯೊಬ್ಬರು ಅಶ್ಲೀಲ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ದೇವಸ್ಥಾನದ ಆಡಳಿತ ಮಂಡಳಿಯೇ ಈ ಕಾರ್ಯಕ್ರಮ ಆಯೋಜಿಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
11:55 AM (IST) Sep 10
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.
08:42 AM (IST) Sep 10
ಭಾರತದ ಮೇಲಿನ ತೆರಿಗೆ ಹೇರಿಕೆ ನಂತರ ಭಾರತ ಚೀನಾದತ್ತ ಮುಖ ಮಾಡಿದ ಹಿನ್ನೆಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ಆಸಕ್ತಿ ತೋರಿಸಿದ್ದಾರೆ.
07:24 AM (IST) Sep 10
ಕರ್ನಾಟಕದ ಟಾಪ್ ಸುದ್ದಿಗಳು, ಅಕ್ರಮ ಅದಿರು ಸಾಗಣೆ ಪ್ರಕರಣ, ಚಿನ್ನದ ಬೆಲೆ ಏರಿಕೆ, ಜಾಗತಿಕ ರಾಜಕೀಯ ಬದಲಾವಣೆಗಳು ಸೇರಿದಂತೆ ಹಲವು ಮಹತ್ವದ ಸುದ್ದಿಗಳು ಇಲ್ಲಿವೆ.