Published : Feb 01, 2026, 06:56 AM ISTUpdated : Feb 01, 2026, 11:45 PM IST

India Latest News Live: ಟ್ರಂಪ್ ಬೆದರಿಕೆಗೆ ಜಗ್ಗದ ಖಮೇನಿ - 'ನಮ್ಮ ಬೆರಳು ಟ್ರಿಗರ್ ಮೇಲಿದೆ' ಎಂದ ಇರಾನ್!

ಸಾರಾಂಶ

ನವದೆಹಲಿ: ಶುಕ್ರವಾರ ಬಹಿರಂಗವಾದ ಅಮೆರಿಕದ ಲೈಂ*ಗಿಕ ಅಪರಾಧಿ ಎಪ್‌ಸ್ಟೀನ್‌ನ 3 ಲಕ್ಷ ಪುಟದ ಕಡತಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 2017ರ ಇಸ್ರೇಲ್‌ ಭೇಟಿ ನಮೂದಾಗಿದೆ. ಕಡತಗಳಲ್ಲಿನ ಒಂದು ಎಪ್‌ಸ್ಟೀನ್‌ನ ಇ-ಮೇಲ್‌ನಲ್ಲಿ, ‘ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮಾರ್ಗದರ್ಶನದ ಪ್ರಕಾರ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಅಮೆರಿಕ ಅಧ್ಯಕ್ಷರ ಲಾಭಕ್ಕಾಗಿ ಇಸ್ರೇಲ್‌ನಲ್ಲಿ ಕುಣಿದರು ಮತ್ತು ಹಾಡಿದರು. ಕೆಲವು ದಿನದ ಹಿಂದೆ ಇಬ್ಬರೂ ಭೇಟಿಯಾಗಿದ್ದರು. ಇದು ಕೆಲಸ ಮಾಡಿದೆ’ ಎಂದು ಬರೆಯಲಾಗಿದೆ.

ಇದನ್ನು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಪ್ರಶ್ನಿಸಿದ್ದು, ‘ಇದು ರಾಷ್ಟ್ರೀಯ ನಾಚಿಕೆಗೇಡಿನ ವಿಷಯವಾಗಿದೆ. ಲೈಂಗಿಕ ಅಪರಾಧಿಯೊಬ್ಬನ ಮಾರ್ಗದರ್ಶನದಂತೆ ಇಸ್ರೇಲ್‌ಗೆ ಹೋಗಿದ್ದರು ಎಂಬ ಮಾಹಿತಿ ಇದೆ. ಈ ಬಗ್ಗೆ ಮೋದಿ ಸ್ಪಷ್ಟನೆ ನೀಡಬೇಕು’ ಎಂದಿದ್ದಾರೆ.

11:45 PM (IST) Feb 01

ಟ್ರಂಪ್ ಬೆದರಿಕೆಗೆ ಜಗ್ಗದ ಖಮೇನಿ - 'ನಮ್ಮ ಬೆರಳು ಟ್ರಿಗರ್ ಮೇಲಿದೆ' ಎಂದ ಇರಾನ್!

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಗಳಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ. ಅಮೆರಿಕ ದಾಳಿ ನಡೆಸಿದರೆ ಅದು ಪ್ರಾದೇಶಿಕ ಯುದ್ಧಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದು, ಇರಾನ್ ಸೇನೆಯು ಯಾವುದೇ ಪರಿಸ್ಥಿತಿ  ಎದುರಿಸಲು ಸನ್ನದ್ಧ!.

Read Full Story

10:41 PM (IST) Feb 01

Budget 2026 ದೇಶದ ಆರ್ಥಿಕತೆಯನ್ನೇ ನಾಶಪಡಿಸುವ ಬಜೆಟ್; ಮಮತಾ ಬ್ಯಾನರ್ಜಿ ಆಕ್ರೋಶ

ಕೇಂದ್ರ ಬಜೆಟ್ 2026 ಅನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಟೀಕಿಸಿದ್ದಾರೆ. ಇದೊಂದು ಪ್ರಾಯೋಗಿಕವಲ್ಲದ, ಮಹಿಳಾ ವಿರೋಧಿ ಮತ್ತು ಬಂಗಾಳಕ್ಕೆ ತಾರತಮ್ಯ ಮಾಡಿದ ಬಜೆಟ್ ಎಂದು ಆರೋಪಿಸಿದ್ದಾರೆ. 

Read Full Story

10:15 PM (IST) Feb 01

ಅಂಡರ್-19 ವಿಶ್ವಕಪ್ - ಪಾಕ್‌ ತಂಡವನ್ನು ಬಗ್ಗುಬಡಿದು ಸೆಮೀಸ್‌ಗೆ ಎಂಟ್ರಿಕೊಟ್ಟ ಯಂಗಿಸ್ತಾನ್! ಸೋಲಿನ ಲೆಕ್ಕ ಚುಕ್ತಾ

ಅಂಡರ್ 19 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 58 ರನ್‌ಗಳಿಂದ ಸೋಲಿಸಿ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಏಷ್ಯಾಕಪ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಯುವಪಡೆ ಸೇಡು ತೀರಿಸಿಕೊಂಡಿದ್ದು, ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ.
Read Full Story

08:34 PM (IST) Feb 01

Big Breaking News - ಟಿ20 ವಿಶ್ವಕಪ್‌ನಲ್ಲಿ ಭಾರತ ಎದುರಿನ ಮ್ಯಾಚ್ ಬಾಯ್ಕಾಟ್ ಮಾಡಿದ ಪಾಕಿಸ್ತಾನ!

ಬಹುನಿರೀಕ್ಷಿತ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ತಂಡವು ಬಹಿಷ್ಕರಿಸಿದೆ ಎಂದು ಪಾಕ್ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಈ ನಿರ್ಧಾರದಿಂದ ಭಾರತಕ್ಕೆ ವಾಕ್‌ಓವರ್ ಸಿಗಲಿದ್ದು, ಐಸಿಸಿ ಹಾಗೂ ಪ್ರಸಾರಕರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ.
Read Full Story

08:25 PM (IST) Feb 01

Union Budget ಬಗ್ಗೆ ಸುಳ್ಳು ಹಬ್ಬಿಸಬೇಡಿ; ಅಂಕಿ-ಅಂಶಗಳಿದ್ದರೆ ಚರ್ಚೆಗೆ ಬನ್ನಿ ರಾಹುಲ್ ಗಾಂಧಿಗೆ ಸೀತಾರಾಮನ್ ಸವಾಲು!

ಕೇಂದ್ರ ಬಜೆಟ್ 2026 ಮಂಡನೆಯ ನಂತರ, ನಿರುದ್ಯೋಗದ ಕುರಿತು ರಾಹುಲ್ ಗಾಂಧಿ ಮಾಡಿದ ಟೀಕೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಸಮರ್ಥಿಸಿಕೊಂಡರು.

Read Full Story

07:44 PM (IST) Feb 01

ಮೇ ಬಳಿಕ ಮೋದಿ ರಾಜೀನಾಮೆ? ಯೋಗಿ ಆಗಲ್ಲ ಪಿಎಂ- 10 ರೋಚಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

ಖ್ಯಾತ ಜ್ಯೋತಿಷಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಮತ್ತು  ಮುಂದಿನ ಪ್ರಧಾನಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದರೊಂದಿಗೆ, ಅಮಿತಾಭ್ ಬಚ್ಚನ್, ಐಶ್ವರ್ಯ-ಅಭಿಷೇಕ್, ವಿರಾಟ್-ಅನುಷ್ಕಾ ಸೇರಿದಂತೆ ಹಲವು ಸೆಲೆಬ್ರಿಟಿಗಳ ಭವಿಷ್ಯದ ಬಗ್ಗೆಯೂ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

Read Full Story

07:09 PM (IST) Feb 01

ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಹೊಟ್ಟೆ ಉರಿದುಕೊಳ್ತಿದ್ದಾರೆ ಬೆಂಗಳೂರಿಗರು

ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಈ ರಸ್ತೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಬೆಂಗಳೂರಿಗರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ರಸ್ತೆ ಮಾಡಿಸಿದ ನಾಯಕ, ಕಾಂಟ್ರಾಕ್ಟರ್ ಕರೆಸಿ ಇಲ್ಲಿ ರಸ್ತೆ ಮಾಡಿಸಿ ಎಂದು ಸಲಹೆ ನೀಡುತ್ತಿದ್ದಾರೆ.

 

Read Full Story

06:26 PM (IST) Feb 01

ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಉಡೀಸ್

ಪಾಕ್‌ಗೆ ಕರೆಂಟ್ ಶಾಕ್ ಕೊಟ್ಟ ವೈಭವ್ ಸೂರ್ಯವಂಶಿ, ಯೂತ್ ಏಕದಿನ ಪಂದ್ಯದಲ್ಲಿ ಸೂರ್ಯವಂಶಿ ಹೊಡೆತಕ್ಕೆ ಪಾಕಿಸ್ತಾನ ತಲೆ ತಿರುಗಿದ್ದು ಮಾತ್ರವಲ್ಲ, ಶುಭಮನ್ ಗಿಲ್, ಉನ್ಮುಕ್ತ್ ಚಾಂದ್ ದಾಖಲೆ ಪುಡಿ ಪುಡಿಯಾಗಿದೆ.

 

Read Full Story

04:56 PM (IST) Feb 01

ಅವಳಿ ಮಕ್ಕಳು ಹುಟ್ಟಿದ್ಮೇಲೆ ಮೊದಲ ಪ್ರತಿಕ್ರಿಯೆ ಕೊಟ್ಟ ರಾಮ್ ಚರಣ್!

ರಾಮ್ ಚರಣ್ ಅವಳಿ ಮಕ್ಕಳಿಗೆ ತಂದೆಯಾದ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಗೊತ್ತೇ ಇದೆ. ಈಗಾಗಲೇ ಚಿರಂಜೀವಿ ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Read Full Story

04:55 PM (IST) Feb 01

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ರಸ್ತೆ ಅಪಘಾತ ಸಂತ್ರಸ್ತರ ಪರಿಹಾರಕ್ಕೆ ಶೂನ್ಯ ತೆರಿಗೆ

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಭರ್ಜರಿ ವಿನಾಯಿತಿ ನೀಡಿದೆ. ಈ ಪೈಕಿ ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೂ ಹೊಸ ಪದ್ಧತಿ ಘೋಷಿಸಲಾಗಿದೆ.

 

Read Full Story

04:22 PM (IST) Feb 01

ನಾಳೆನೇ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ? ವೈರಲ್ ಆಯ್ತು ವಿಡಿಯೋ

ಟಾಲಿವುಡ್‌ನ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾಗಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಫೆಬ್ರವರಿ 2 ರಂದು ಅವರ ಮದುವೆ ನಡೆಯಲಿದ್ದು, ಉದಯಪುರ ಸಿಟಿ ಪ್ಯಾಲೇಸ್‌ನಲ್ಲಿ ಸಿದ್ಧತೆಗಳು ನಡೆಯುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ.

 

Read Full Story

04:01 PM (IST) Feb 01

ನೀವು ಮನಸ್ಸಲ್ಲಿ ಅಂದುಕೊಂಡಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತಾಗಿ ಬರುತ್ತಿದೆಯೇ? ತಪ್ಪಿಸಲು ಇಲ್ಲಿದೆ ಸಿಂಪಲ್ ದಾರಿ

ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಿಷಯಗಳು, ನೀವು ಪ್ರಸ್ತುತ ಎದುರಿಸುತ್ತಿರುವ ಮಾನಸಿಕ ಸ್ಥಿತಿ. ಇದಕ್ಕೆ ಸಂಬಂಧಿಸಿದ ಜಾಹೀರಾತುಗಳು ಮತ್ತು ರೀಲ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಮುಂದೆ ಪದೇ ಪದೇ ಕಾಣಿಸಿಕೊಳ್ಳುತ್ತಿರಬಹುದು. ಇದಕ್ಕೆ ಕಾರಣವೇನು? 

Read Full Story

03:37 PM (IST) Feb 01

ಭಾರತದ ಟಾಪ್ 10 ಶ್ರೀಮಂತ ಕ್ರಿಕೆಟಿಗರು - ಸಿರಿತನದಲ್ಲಿ ಸಚಿನ್, ಕೊಹ್ಲಿ, ಧೋನಿಗಿಂತ ಮೇಲಿದ್ದಾರೆ ಈ ಕ್ರಿಕೆಟಿಗ!

ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಅವರಂತಹ ಪ್ರಮುಖರಿದ್ದಾರೆ. ಕ್ರಿಕೆಟ್, ಜಾಹೀರಾತುಗಳು ಮತ್ತು ಬ್ಯುಸಿನೆಸ್‌ಗಳು ಇವರ ಪ್ರಮುಖ ಆದಾಯದ ಮೂಲಗಳಾಗಿವೆ. ಆದರೆ ಅವರಿಗಿಂತ ಶ್ರೀಮಂತ ಕ್ರಿಕೆಟಿಗನಿದ್ದಾನೆ.

Read Full Story

03:20 PM (IST) Feb 01

ಕಡಿಮೆ ಬೆಲೆ, ಹೆಚ್ಚು ಆದಾಯ! ಒಳ್ಳೆಯ ರೀಸೇಲ್ ವ್ಯಾಲ್ಯೂ ಇರುವ ಬೈಕ್‌, ಸ್ಕೂಟರ್‌ಗಳು ಇವೇ ನೋಡಿ!

ಭಾರತದ ಮಾರುಕಟ್ಟೆಯಲ್ಲಿ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ಹಾಗೂ ಉತ್ತಮ ರೀ-ಸೇಲ್ ಮೌಲ್ಯವನ್ನು ನೀಡುವ ದ್ವಿಚಕ್ರ ವಾಹನಗಳ ಬಗ್ಗೆ ತಿಳಿಯೋಣ. ಹೀರೋ, ಹೋಂಡಾ, ಬಜಾಜ್‌ನಂತಹ ಬ್ರ್ಯಾಂಡ್‌ಗಳ ಆಕ್ಟಿವಾ, ಸ್ಪ್ಲೆಂಡರ್, ಶೈನ್‌ನಂತಹ ಮಾಡೆಲ್‌ಗಳು ಇಲ್ಲಿವೆ. 

Read Full Story

02:59 PM (IST) Feb 01

ಆತ್ಮಗೌರವ ಅಡವಿಟ್ಟು ಮಿತ್ರ ದೇಶಗಳ ಬಳಿ ಸಾಲ - ತಾವು ಬಿಕಾರಿಯಾಗಿದ್ದನ್ನು ಒಪ್ಪಿಕೊಂಡ ಪಾಕ್ ಪ್ರಧಾನಿ ಷರೀಫ್!

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ದೇಶದ ತೀವ್ರ ಆರ್ಥಿಕ ಸಂಕಷ್ಟವನ್ನು ಒಪ್ಪಿಕೊಂಡಿದ್ದಾರೆ. ಐಎಂಎಫ್ ಮತ್ತು ಮಿತ್ರ ದೇಶಗಳ ಮುಂದೆ ಸಾಲ ಕೇಳುವುದು ಆತ್ಮಗೌರವಕ್ಕೆ ಧಕ್ಕೆ ತಂದಂತೆ ಮತ್ತು ತಲೆಬಗ್ಗಿಸಿದಂತೆ ಎಂದು ಅವರು ತಮ್ಮ ಅಸಹಾಯಕತೆಯನ್ನು ಬಣ್ಣಿಸಿದ್ದಾರೆ.  

Read Full Story

02:09 PM (IST) Feb 01

ಆಂಬುಲೆನ್ಸ್‌ನಲ್ಲಿ 2.6 ಕೋಟಿ ಮೌಲ್ಯದ ಗಾಂಜಾ ಸಾಗಣೆ - ಹಾವು ಹಿಡಿಯುವುದಕ್ಕೆ ಫೇಮಸ್ ಆಗಿದ್ದ ಯುಟ್ಯೂಬರ್‌ ಅಂದರ್

ಸಾಮಾಜಿಕ ಜಾಲತಾಣದಲ್ಲಿ ಹಾವುಗಳ ರಕ್ಷಣೆ ಮಾಡುವ ವೀಡಿಯೋಗಳಿಂದಲೇ ಖ್ಯಾತಿ ಗಳಿಸಿದ್ದ 'ಸರ್ಪಮಿತ್ರ' ಆಕಾಶ್ ಜಾಧವ್ ಎಂಬ ಯೂಟ್ಯೂಬರ್‌ನನ್ನು ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಸಾರ್ವಜನಿಕ ಇಮೇಜ್ ಬಳಸಿ ಆಂಬ್ಯುಲೆನ್ಸ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ ಅಕ್ರಮವಾಗಿ ಸಾಗಿಸುತ್ತಿದ್ದ..

Read Full Story

02:00 PM (IST) Feb 01

ಅಚ್ಚರಿಯ ಬೆಳವಣಿಗೆ - ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು!

ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ನೀಡುತ್ತಿದ್ದ ಝುಡಿಯೋ, ಇದೀಗ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಒಂದೇ ರೀತಿಯ ಡಿಸೈನ್‌ಗಳಿಂದಾಗಿ ಗ್ರಾಹಕರು ಮುಜುಗರ ಅನುಭವಿಸುತ್ತಿದ್ದು, ಈ ಕಾರಣದಿಂದ ಝುಡಿಯೋದಿಂದ ದೂರ ಸರಿಯುತ್ತಿದ್ದಾರೆ.
Read Full Story

12:24 PM (IST) Feb 01

ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಪ್ಪ ಕ್ಯಾಪ್ಟನ್ ಸುಮಿತ್ ಕಪೂರ್ ಸ್ಮರಿಸಿ ಮಗಳ ಭಾವುಕ ಬರಹ

ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಬಲಿ ಪಡೆದ ಲಿಯರ್‌ಜೆಟ್ ವಿಮಾನದಲ್ಲಿದ್ದ ಕ್ಯಾಪ್ಟನ್ ಸುಮಿತ್ ಕಪೂರ್ ಕೂಡ ದುರಂತರದಲ್ಲಿ ಸಾವನ್ನಪ್ಪಿದ್ದು, ಅವರ ಪುತ್ರಿ ತಮ್ಮ ತಂದೆಯನ್ನು ಸ್ಮರಿಸಿಕೊಂಡು ಭಾವುಕರಾಗಿ ಪೋಸ್ಟ್ ಮಾಡಿದ್ದು, ಆ ಪೋಸ್ಟ್‌ ಅನೇಕರನ್ನು ಭಾವುಕರಾಗಿಸಿದೆ. 

Read Full Story

10:56 AM (IST) Feb 01

ಇರಾನ್‌ ಬದಲು ವೆನಜುವೇಲದಿಂದ ಭಾರತದ ತೈಲ ಖರೀದಿ ಎಂದ ಟ್ರಂಪ್‌, ಖಚಿತಪಡಿಸದ ಭಾರತ ಸರ್ಕಾರ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಾರ, ಭಾರತ ಇರಾನ್ ಬದಲಿಗೆ ವೆನುಜುವೇಲದಿಂದ ತೈಲ ಖರೀದಿಸಲಿದೆ. 2019ರಲ್ಲಿ ಅಮೆರಿಕದ ನಿರ್ಬಂಧಗಳಿಂದಾಗಿ ಭಾರತವು ವೆನುಜುವೇಲದಿಂದ ತೈಲ ಖರೀದಿ ನಿಲ್ಲಿಸಿತ್ತು. ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಮತ್ತೆ ಅಲ್ಲಿಂದ ಕಚ್ಚಾ ತೈಲ ಖರೀದಿಸಲು ಪ್ರಯತ್ನ ನಡೆಸುತ್ತಿದೆ.

Read Full Story

10:33 AM (IST) Feb 01

Union Budget 2026 - ಬಜೆಟ್‌ ದಿನ ಗಮನಸೆಳೆಯಬಹುದಾದ 11 ಷೇರುಗಳು!

NMDC, ಭಾರತ್ ಎಲೆಕ್ಟ್ರಾನಿಕ್ಸ್, ಲಾರ್ಸೆನ್ & ಟೂಬ್ರೊ, ಜುಪಿಟರ್ ವ್ಯಾಗನ್ಸ್, ಹಿಂದೂಸ್ತಾನ್ ಏರೋನಾಟಿಕ್ಸ್, ಟಿವಿಎಸ್ ಮೋಟಾರ್, ವಾರೀ ಎನರ್ಜಿಸ್ ಸೇರಿದಂತೆ 11 ಷೇರುಗಳ ಬಗ್ಗೆ ಗಮನವಿರಲಿ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

 

Read Full Story

10:07 AM (IST) Feb 01

ಮೂರನೇ ದಿನವೂ ಭಾರೀ ಇಳಿಕೆಯಾದ ಚಿನ್ನದ ಬೆಲೆ; ಬಂಗಾರದಂಗಡಿಗೆ ಚಿನ್ನಾಭರಣಪ್ರಿಯರ ದಾಂಗುಡಿ

ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡುಬಂದಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರಗಳು ಗಣನೀಯವಾಗಿ ಕುಸಿದಿದ್ದು, ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. ಈ ದರ ಕುಸಿತವು ಬಂಗಾರ ಪ್ರಿಯರನ್ನು ಆಭರಣ ಮಳಿಗೆಗಳತ್ತ ಆಕರ್ಷಿಸುತ್ತಿದೆ.
Read Full Story

09:57 AM (IST) Feb 01

ಸಾವಿರಾರು ಕೋಟಿ ಒಡತಿ ಉಪಾಸನಾರನ್ನು ರಾಮ್ ಚರಣ್ ಯಾಕೆ ಪ್ರೀತಿಸಿದ್ದು? ಕೊನೆಗೂ ಬಯಲಾಯ್ತು ಆ ಸೀಕ್ರೇಟ್‌

ಒಂದು ಸಂದರ್ಶನದಲ್ಲಿ ರಾಮ್ ಚರಣ್ ತಾನು ಉಪಾಸನಾರನ್ನು ಪ್ರೀತಿಸಲು ಕಾರಣವೇನು ಎಂದು ವಿವರಿಸಿದ್ದಾರೆ. ಉಪಾಸನಾಗೆ ನಂದಮೂರಿ ಕುಟುಂಬದ ಜೊತೆಗೂ ನಂಟಿದೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ

 

Read Full Story

09:17 AM (IST) Feb 01

ಬಜೆಟ್‌ ಸಿಂಪಲ್ ಆಗಿ ಅರ್ಥ ಆಗ್ಬೇಕಾ? ಮೊದಲು ಇದನ್ನು ಓದಿ..!

ಇಂದು ಕೇಂದ್ರ ಸರ್ಕಾರದಿಂದ 2026-27ನೇ ಸಾಲಿನ ಆಯವ್ಯಯ ಮಂಡನೆ. ಪ್ರತಿವರ್ಷ ಫೆ.1ರಂದು ಬಜೆಟ್‌ ಮಂಡಿಸುವುದು ವಾಡಿಕೆ. ಬಜೆಟ್‌ ಮಂಡನೆ ವೇಳೆ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಪದಗಳನ್ನು ಬಳಸಲಾಗುತ್ತದೆ. ಅಂತಹ ಕೆಲ ಪದಗಳ ಸರಳಾರ್ಥ ಇಲ್ಲಿದೆ:

 

Read Full Story

09:02 AM (IST) Feb 01

ಚಂದಿರನ ಮೇಲೆ ಮನೆ ಕಟ್ಟಲು ಬೆಂಗಳೂರಿನ ಮಣ್ಣೇ ಚೆಂದ - ಗಗನಯಾತ್ರಿ ಶುಭಾಂಶು ಶುಕ್ಲಾ

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು, ಬೆಂಗಳೂರಿನ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಬಳಸಿ ಬಾಹ್ಯಾಕಾಶ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ತಯಾರಿಸಬಹುದೆಂದು ಕಂಡುಹಿಡಿದಿದ್ದಾರೆ. 

Read Full Story

08:44 AM (IST) Feb 01

ಎಪ್‌ಸ್ಟೀನ್‌ ಫೈಲಲ್ಲಿ ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್‌ ರಾಸ*ಲೀಲೆ ವಿಡಿಯೋ ಬಹಿರಂಗ! ಭಾರತದ ಈ ಉದ್ಯಮಿಯ ಹೆಸರಿದೆ!

ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಹಗರಣದ ಕಡತಗಳು ಬಿಡುಗಡೆಯಾಗಿದ್ದು, ಡೊನಾಲ್ಡ್‌ ಟ್ರಂಪ್‌, ಬಿಲ್‌ ಗೇಟ್ಸ್‌, ಅನಿಲ್ ಅಂಬಾನಿ ಮತ್ತು ಮೀರಾ ನಾಯರ್‌ ಸೇರಿದಂತೆ ವಿಶ್ವದ ಗಣ್ಯರ ಹೆಸರುಗಳು ಬಹಿರಂಗಗೊಂಡಿವೆ. ಈ ವರದಿಯು ಟ್ರಂಪ್ ಮತ್ತು ಗೇಟ್ಸ್ ಮೇಲಿನ ಲೈಂಗಿಕ ದುರ್ಬಳಕೆಯ ಗಂಭೀರ ಆರೋಪಗಳು ಒಳಗೊಂಡಿವೆ.

Read Full Story

07:44 AM (IST) Feb 01

ಬಜೆಟ್‌ಗೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ! LPG ಸಿಲಿಂಡರ್ ದರದಲ್ಲಿ ಹೆಚ್ಚಳ

ಕೇಂದ್ರ ಬಜೆಟ್‌ಗೂ ಮುನ್ನವೇ ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಿಸಿವೆ. ಆದರೆ, ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಬೆಲೆ ಏರಿಕೆಯಿಂದಾಗಿ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರಗಳು ಪರಿಷ್ಕರಣೆಗೊಂಡಿವೆ.
Read Full Story

07:25 AM (IST) Feb 01

Union Budget - ಇಂದು ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆ; ವಾರ್ಷಿಕ ಆಯವ್ಯಯದ ಕುತೂಹಲಕಾರಿ ಮಾಹಿತಿ

ಕೇಂದ್ರ ಸರ್ಕಾರದ ವಾರ್ಷಿಕ ಆಯವ್ಯಯ ಮಂಡನೆಯ ಹಿನ್ನೆಲೆಯಲ್ಲಿ, 'ಬಜೆಟ್' ಪದದ ಮೂಲ, ಭಾರತದಲ್ಲಿ ಅದರ ಇತಿಹಾಸ, ದಾಖಲೆಗಳು ಮತ್ತು ಆರು ತಿಂಗಳ ಸುದೀರ್ಘ ತಯಾರಿಯ ಪ್ರಕ್ರಿಯೆಯನ್ನು ಈ ಲೇಖನ ವಿವರಿಸುತ್ತದೆ. ಜೊತೆಗೆ, ಬಜೆಟ್ ಭಾಷಣದಲ್ಲಿ ಬಳಸುವ ಪ್ರಮುಖ ಆರ್ಥಿಕ ಪದಗಳ ಸರಳ ಅರ್ಥವನ್ನು ಸಹ ನೀಡಲಾಗಿದೆ.
Read Full Story

07:07 AM (IST) Feb 01

ಚಿನ್ನ 2 ದಿನದಲ್ಲಿ ₹18000 ಬೆಳ್ಳಿ 60,000 ರು. ಕುಸಿತ! ದಿಢೀರ್‌ ಇಳಿಕೆಗೆ ಕಾರಣವೇನು?

Gold And Silver Price Down: ಸತತ ಎರಡನೇ ದಿನವೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ಎರಡು ದಿನಗಳಲ್ಲಿ ಚಿನ್ನದ ಬೆಲೆ 18,000 ರೂ. ಹಾಗೂ ಬೆಳ್ಳಿ 60,000 ರೂ. ಇಳಿಕೆಯಾಗಿದೆ.

Read Full Story

More Trending News