Mythology: ಶ್ರೀಕೃಷ್ಣನ ಸ್ನೇಹಿತ ಸುಧಾಮನನ್ನೇಕೆ ಶಿವ ಕೊಂದಿದ್ದು?

First Published May 17, 2023, 3:47 PM IST

ಸುಧಾಮ ಮತ್ತು ಶ್ರೀ ಕೃಷ್ಣನ ಸ್ನೇಹದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಆದರೆ ಸುಧಾಮನು ಹೇಗೆ ಸತ್ತನು ಮತ್ತು ಸುಧಾಮನನ್ನು ಕೊಂದವನು ಯಾರು ಎಂದು ನಿಮಗೆ ತಿಳಿದಿದ್ಯಾ? ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.   
 

ಸುಧಾಮ (Sudhama) ಶ್ರೀ ಕೃಷ್ಣನ ಕಟ್ಟಾ ಭಕ್ತ ಮತ್ತು ಅತ್ಯುತ್ತಮ ಸ್ನೇಹಿತನಾಗಿದ್ದ. ಶ್ರೀ ಕೃಷ್ಣ ಮತ್ತು ಸುಧಾಮನ ಸ್ನೇಹವನ್ನು ಪಠ್ಯ, ಪುರಾಣ ಮತ್ತು ಕಥೆಗಳಲ್ಲಿ ಜನಪ್ರಿಯ ಮತ್ತು ಇನ್ನೂ ಅದ್ಭುತ ರೀತಿಯಲ್ಲಿ ವಿವರಿಸಲಾಗಿದೆ. 

ಸುಧಾಮನು ಶ್ರೀ ಕೃಷ್ಣನ(Sri Krishna) ಭಕ್ತರಲ್ಲಿ ಒಬ್ಬನಾಗಿದ್ದನೆಂದು ನಂಬಲಾಗಿದೆ, ಅವನು ಸ್ವತಃ ಶ್ರೀ ಕೃಷ್ಣನಿಂದ ಸೇವೆ ಪಡೆದಿದ್ದನು ಮತ್ತು ಕೃಷ್ಣನ ಜೀವನದುದ್ದಕ್ಕೂ ಸುಧಾಮನನ್ನು ನೋಡಿಕೊಂಡನು, ಆದರೆ ಶ್ರೀ ಕೃಷ್ಣನ ಸರ್ವೋಚ್ಚ ಭಕ್ತನಾದ ಸುಧಾಮನನ್ನು ಶಿವನು ಕೊಂದನು ಎಂದು ನಂಬಲಾಗಿದೆ.

ಈ ಸಂಗತಿಯ ಹಿಂದಿನ ಸತ್ಯವನ್ನು ತಿಳಿದುಕೊಳ್ಳೋಣ ಮತ್ತು ಹಾಗೆಯೇ ಶಿವನು(Lord Shiva) ಕೃಷ್ಣ ಭಕ್ತ ಸುಧಾಮನಿಗೆ ಭಯಾನಕ ಅಂತ್ಯವನ್ನು ಯಾಕೆ ನೀಡಬೇಕಾಯಿತು ಎಂದು ಇಲ್ಲಿ ತಿಳಿಯೋಣ. 

ದಂತಕಥೆಯ ಪ್ರಕಾರ, ಸುಧಾಮ ಮತ್ತು ವಿರಾಜಾ(Viraja) ಎಂಬ ಕೃಷ್ಣ ಭಕ್ತರು ಶ್ರೀ ಕೃಷ್ಣ ಮತ್ತು ರಾಧಾ ರಾಣಿಯ ಗೋಲೋಕ ಧಾಮದಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಶ್ರೀ ಕೃಷ್ಣನ ಭಕ್ತಿ ಮತ್ತು ಅಚಲ ಸೇವೆಯಲ್ಲಿ ತೊಡಗಿದ್ದರು. 

ಒಂದು ದಿನ ಸುಧಾಮನಿಗೆ ವಿರಾಜಾಳ ಮೇಲೆ ಪ್ರೀತಿ(Love) ಉಂಟಾಯಿತು, ಆದರೆ ವಿರಾಜಾಳು ಕೃಷ್ಣನ ಪ್ರೀತಿಯಲ್ಲಿ ಸಂಪೂರ್ಣವಾಗಿ ಮುಳುಗಿದ್ದಳು. ಆದರೂ ಸುಧಾಮನು ವಿರಾಜಾಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳುತ್ತಾನೆ. 

ವಿರಾಜಾಳು ಸುಧಾಮನ ಪ್ರೀತಿಯನ್ನು ಸ್ವೀಕರಿಸುತ್ತಾಳೆ. ಆದರೆ ಕೃಷ್ಣ ಭಕ್ತಿಯ ಸಮಯದ ನಂತರ ಪ್ರೀತಿಸುವೆ ಎಂಬ ಷರತ್ತಿನೊಂದಿಗೆ, ಸುಧಾಮ ಮತ್ತು ವಿರಾಜಾ ಇಬ್ಬರೂ ಇದನ್ನು ಶ್ರೀ ಕೃಷ್ಣನಿಗೆ ಹೇಳಲು ಯೋಚಿಸಿದರು.

ಆದರೆ ಅದಕ್ಕೂ ಮೊದಲು, ಶ್ರೀ ರಾಧಾ(Radha) ರಾಣಿ ಅವರಿಬ್ಬರ ಮಾತನ್ನು ಆಲಿಸಿದರು. ಗೋಲೋಕದಲ್ಲಿ ಕೃಷ್ಣ ಭಕ್ತಿ ಮತ್ತು ಕೃಷ್ಣನ ಪ್ರೀತಿಯನ್ನು ಹೊರತುಪಡಿಸಿ ಬೇರೆ ಯಾವುದೇ ಭಾವನೆಗೆ ಸ್ಥಾನವಿಲ್ಲ ಎಂದು ರಾಧಾ ರಾಣಿ ಕೋಪಗೊಂಡಳು.

ಶ್ರೀ ರಾಧಾ ರಾಣಿಯು ಸುಧಾಮ ಮತ್ತು ವಿರಾಜಾರನ್ನು ಭೂಮಿಯಲ್ಲಿ ಮತ್ತೆ ಜನಿಸುವಂತೆ ಶಪಿಸಿದಳು, ನಂತರ ಧರ್ಮ ಧ್ವಜದಲ್ಲಿ ವಿರಾಜಾ ತುಳಸಿಯಾಗಿ(Tulasi) ಮತ್ತು ಸುಧಾಮ ರಾಕ್ಷಸ ಕುಲದಲ್ಲಿ ಶಂಖಚೂಣನಾಗಿ ಜನಿಸಿದನು.  

ಶಂಖಚೂಣ ಮೂರೂ ಲೋಕಗಳಲ್ಲಿ ಕೋಲಾಹಲ ಉಂಟುಮಾಡುವ ರಾಕ್ಷಸನಾದ ಮತ್ತು ಸ್ವರ್ಗದಿಂದ ಭೂಮಿಯವರೆಗೆ ಜನ ಆತನ ಶಕ್ತಿಗಳಿಂದ ಹೆದರುತ್ತಿದ್ದರು. ಆ ಸಮಯದಲ್ಲಿ ತುಳಸಿ ಶಂಖಚೂಣರು ವಿವಾಹವಾದರು(Marriage).

ತುಳಸಿಯ ಪತ್ನಿ ಧರ್ಮ ಶಂಖಚೂಣನನ್ನು ಶತ್ರುಗಳಿಂದ(Enemy) ರಕ್ಷಿಸುತ್ತಿತ್ತು ಮತ್ತು ಯುದ್ಧದಲ್ಲಿ ಯಾರೂ ಅವನನ್ನು ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವನ ರಾಕ್ಷಸ ಸ್ವಭಾವವನ್ನು ಸಹಿಸಲಾಗದೆ ಶ್ರೀ ಕೃಷ್ಣನ ಸಹಾಯದಿಂದ, ಶಿವನು ಆತನನ್ನು ಕೊಂದನು.

ಹೀಗೆ ಶಿವನು ಸುಧಾಮನನ್ನು ಕೊಂದನು. ಆದರೆ ಅವನ ಪುನರ್ಜನ್ಮದಲ್ಲಿ. ಸುಧಾಮನ ರೂಪದಲ್ಲಿ, ಗೋಲೋಕ್ನಲ್ಲಿ ಪರಮ ಭಕ್ತಿ, ದೈವಿಕ ಅನುಗ್ರಹ ಮತ್ತು ಕೃಷ್ಣ ಚರಣ ಸೇವೆಯ ಉನ್ನತ ಸ್ಥಾನವನ್ನು ಪಡೆದರು. ಇದು ಇಲ್ಲಿಯವರೆಗೆ ಒಗಟಾಗಿದ್ದ ಸುಧಾಮನ ಸಾವಿನ ರಹಸ್ಯವಾಗಿದೆ. 

click me!