ಕೋಟಿ ಹೃದಯ ಗೆದ್ದ ಸಾಹಸ ಸಿಂಹನಿಗೆ ತುಂಡು ಭೂಮಿ ಸಿಗದೇ ಹೋಯ್ತಾ?

Dec 1, 2018, 12:19 PM IST

ಡಾ. ವಿಷ್ಣುವರ್ಧನ್ ನಮ್ಮನ್ನಗಲಿ 10 ವರ್ಷಗಳೇ ಸಂದಿವೆ. ಆದರೂ ವಿಷ್ಣು ಸ್ಮಾರಕ ಮಾತ್ರ ನಿರ್ಮಾಣವಾಗಿಲ್ಲ. ವಿವಾದ ಕಗ್ಗಂಟಾಗಿಯೇ ಇದೆ. ಕಂಠೀರವ ಸ್ಟುಡಿಯೋದಲ್ಲಿ ಡಾ, ರಾಜ್, ಅಂಬಿ ಜೊತೆ ಮಾಡಬೇಕು ಎಂದು ಒಂದು ವಾದವಾದರೆ ಅವರನ್ನು ಸಮಾಧಿ ಮಾಡಿದ ಸ್ಥಳ ಅಭಿಮಾನ್ ಸ್ಟುಡಿಯೋದಲ್ಲಿ ಮಾಡಬೇಕು ಅನ್ನೋದು ಇನ್ನೊಂದು ವಾದ. ಒಟ್ಟಿನಲ್ಲಿ ಈ ಕಗ್ಗಂಟು ಮಾತ್ರ ಬಗೆಹರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ.