Published : Apr 18, 2025, 06:04 AM ISTUpdated : Apr 18, 2025, 10:41 PM IST

Karnataka News Live 18th April: ತವರಿನಲ್ಲೇನೋ ಸಮಸ್ಯೆ ಇದೆ, ಮಳೆಯ ಜೊತೆ ಆರ್‌ಸಿಬಿಗೆ ಕೈಕೊಟ್ಟ ಬ್ಯಾಟಿಂಗ್

ಸಾರಾಂಶ

ಕನ್ನಡಪ್ರಭ ವಾರ್ತೆ ಬೀದರ್ / ಶಿವಮೊಗ್ಗ: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಹಾಕುವಂತೆ ಸೂಚಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಬೀದರ್ ಸಾಯಿ ಸ್ಪೂರ್ತಿಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲೊಪ್ಪದೆ ಸಿಇಟಿ ಗಣಿತ ಪರೀಕ್ಷೆಯಿಂದಲೇ ಹೊರಗುಳಿದಿದ್ದು, ಆತನ ಎಂಜಿ ನಿಯರಿಂಗ್ ಕನಸು ಭಗ್ನಗೊಂಡಿದೆ. ಹಾಗೆಯೇ ಶಿವಮೊಗ್ಗದಲ್ಲಿ ಜನಿವಾರಕ್ಕೆ ಕತ್ತರಿ ಹಾಕಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಇದು ಬ್ರಾಹ್ಮಣ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 
ಏನಿದು ಜನಿವಾರ ಗದ್ದಲ? 
ಜನಿವಾರ ಧರಿಸಿ ಬುಧವಾರ ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ ಬೀದ‌ರ್ ವಿದ್ಯಾರ್ಥಿ, ಗುರುವಾರದ ಗಣಿತ ಪರೀಕ್ಷೆಗೆ ಬಂದಾಗ ಜನಿವಾರ ನೋಡಿ ಪರೀಕ್ಷಾ ಸಿಬ್ಬಂದಿಯಿಂದ ಆಕ್ಷೇಪ, ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷೆ ಬರೆಯಲು ನಿರಾಕರಣೆ. ಅಂಗಲಾಚಿದರೂ ಬಿಡದ ಸಿಬ್ಬಂದಿ ಪರೀಕ್ಷೆಯಿಂದಲೇ ದೂರ ಉಳಿದ ವಿದ್ಯಾರ್ಥಿ. ಎಂಜಿನಿಯರಿಂಗ್ ಪ್ರವೇಶಾವಕಾಶದಿಂದ ವಂಚಿತ 

 Karnataka News Live 18th April: ತವರಿನಲ್ಲೇನೋ ಸಮಸ್ಯೆ ಇದೆ, ಮಳೆಯ ಜೊತೆ ಆರ್‌ಸಿಬಿಗೆ ಕೈಕೊಟ್ಟ ಬ್ಯಾಟಿಂಗ್

10:41 PM (IST) Apr 18

ತವರಿನಲ್ಲೇನೋ ಸಮಸ್ಯೆ ಇದೆ, ಮಳೆಯ ಜೊತೆ ಆರ್‌ಸಿಬಿಗೆ ಕೈಕೊಟ್ಟ ಬ್ಯಾಟಿಂಗ್

ಆರ್‌ಸಿಬಿಗೆ ತವರಿನ ಪಂದ್ಯಗಳು ನಿದ್ದೆ ಬಾರದ ರಾತ್ರಿಗಳಾಗುತ್ತಿದೆ. ತವರಿನ ಕಳೆದೆರಡು ಪಂದ್ಯ ಸೋತಿರುವ ಆರ್‌ಸಿಬಿ ಈ ಬಾರಿ ಅತೀವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದೆ. ಆದರೆ 6 ವಿಕೆಟ್ ಕಳೆದುಕೊಂಡು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ.

ಪೂರ್ತಿ ಓದಿ

10:40 PM (IST) Apr 18

ರೈತರಿಗೆ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸೌಲಭ್ಯ ಒದಗಿಸಿ: ಶಾಸಕ ಶರತ್‌ ಬಚ್ಚೇಗೌಡ

ರೈತರ ಅಭ್ಯುದಯದ ದೃಷ್ಟಿಯಿಂದ ಹಲವಾರು ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ಇಸ್ರೇಲ್ ಮಾದರಿ ಕೃಷಿಗೆ ಪೂರಕ ಸೌಲಭ್ಯಗಳನ್ನು ಒದಗಿಸುವುದು ಉತ್ತಮ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಪೂರ್ತಿ ಓದಿ

10:40 PM (IST) Apr 18

ಕೇರಳದಲ್ಲಿ ವಿವಾದ ಎಬ್ಬಿಸಿದ ಪೊಲೀಸರ ಆನೆ ಮೆರವಣಿಗೆ; ನಡೆದಿದ್ದೇನು?

ಪೊಲೀಸ್ ಠಾಣೆಯೊಳಗೆ ಆನೆ ಪ್ರವೇಶಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪೂರ್ತಿ ಓದಿ

10:31 PM (IST) Apr 18

ಮೈಸೂರಂತೆ ಬೀದರ್‌ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಸಂಕಲ್ಪ: ಸಚಿವ ಈಶ್ವರ ಖಂಡ್ರೆ

ಮೈಸೂರು ಜಿಲ್ಲೆ ಅಭಿವೃದ್ಧಿಯಾದಂತೆ ಬೀದರ್‌ ಜಿಲ್ಲೆಯನ್ನೂ ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ ಅದಕ್ಕಾಗಿ ಸಾವಿರಾರು ಕೋಟಿ ರು.ಗಳನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಬೀದರ್‌ ಜಿಲ್ಲೆಗೆ ನೀಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು. 

ಪೂರ್ತಿ ಓದಿ

10:18 PM (IST) Apr 18

GIPKL 2025 ತಮಿಳು ಲಯನ್ಸ್ ಹಿಮ್ನೆಟ್ಟಿಸಿ ಮುನ್ನಡೆ ಪಡೆದ ಪಂಜಾಬಿ ಟೈಗರ್ಸ್

10:11 PM (IST) Apr 18

ಗ್ಲೋಬಲ್ ಇಂಡಿಯನ್ ಪ್ರವಾಸಿ ಕಬಡ್ಡಿ ಲೀಗ್, ಎಲ್ಲಾ ತಂಡಗಳ ಕ್ರೀಡಾಪಟುಗಳು, ವೇಳಾಪಟ್ಟಿ ಇಲ್ಲಿದೆ

ಜಾಗತಿಕ ಭಾರತೀಯ ಪ್ರವಾಸಿ ಕಬಡ್ಡಿ ಲೀಗ್  ಟೂರ್ನಿಯ ಸಂಪೂರ್ಣ ತಂಡ ಹಾಗೂ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ. 

ಪೂರ್ತಿ ಓದಿ

09:51 PM (IST) Apr 18

ಮಳೆಯಿಂದ 14 ಓವರ್ ಪಂದ್ಯ, ತವರಿನಲ್ಲಿ ಟಾಸ್ ಸೋತ ಆರ್‌ಸಿಬಿ


ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಪಂದ್ಯ 20 ಓವರ್ ಬದಲು 14 ಓವರ್‌ಗೆ ಸೀಮಿತಗೊಳಿಸಲಾಗಿದೆ. ಆದರೆ ಆತಂಕ ಎಂದರೆ ತವರಿನಲ್ಲಿ ಮತ್ತೆ ಆರ್‌ಸಿಬಿ ಟಾಸ್ ಸೋತಿದೆ.
 

ಪೂರ್ತಿ ಓದಿ

09:48 PM (IST) Apr 18

ಮಮತಾ ಸಾಗರ ವಾಚಿಸಿದ ಪದ್ಯ: ದಂಗೆ ಎದ್ದ ಆರು ಸಾಲು

ಮಮತಾ ಸಾಗರ ಅವರ ಕವಿತೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕವಿತೆಯಲ್ಲಿನ ನಿರ್ಭಿಡೆಯಾದ ಹೆಣ್ಣಿನ ದನಿ ಮತ್ತು ಸಾಮಾಜಿಕ ನಿರೀಕ್ಷೆಗಳನ್ನು ಮುರಿದಿರುವುದು ಓದುಗರನ್ನು ತಲ್ಲಣಗೊಳಿಸಿದೆ. ಕವಿತೆಯ ಸತ್ಯ ಹೇಳುವ ಸ್ವಭಾವ ಮತ್ತು ಸ್ಟೀರಿಯೊಟೈಪ್‌ಗಳನ್ನು ಮುರಿಯುವ ಪ್ರವೃತ್ತಿಯೇ ಇದಕ್ಕೆ ಕಾರಣ.

ಪೂರ್ತಿ ಓದಿ

09:14 PM (IST) Apr 18

ಜಾತಿ ಗಣತಿ ವರದಿ ತರಾತುರಿಯಲ್ಲಿ ಅಂಗೀಕರಿಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಜಾತಿ ಗಣತಿ ವರದಿ ತರಾತುರಿಯಲ್ಲಿ ಅಂಗೀಕಾರ ಮಾಡುವುದಿಲ್ಲ. ವರದಿಯ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ಮಾಡಿಯೇ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. 
 

ಪೂರ್ತಿ ಓದಿ

09:05 PM (IST) Apr 18

ಯಾರು ಈ ಲೇಡಿ ಡಾನ್ ಝಿಖ್ರಾ? 17ರ ಹರೆಯದ ಬಾಲಕನ ಹತ್ಯೆಗೈದ ಶಂಕಿತ ಆರೋಪಿ

ಲೇಡಿ ಡಾನ್ ಝಿಖ್ರಾ ಹೆಸರು ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇತ್ತ ಪೊಲೀಸರು ಈಕೆಯ ಹುಡುಕಾಟ ಚುರುಕುಗೊಳಿಸಿದ್ದಾರೆ. ದೆಹಲಿಯ 17ರ ಹರೆಯದ ಬಾಲಕನ ಹತ್ಯೆಯ ಶಂಕಿತ ಆರೋಪಿಯಾಗಿರುವ ಈ ಲೇಡಿ ಡಾನ್‌ಗಿದೆ ಗ್ಯಾಂಗ್‌ಸ್ಟರ್ ಕನೆಕ್ಷನ್.

ಪೂರ್ತಿ ಓದಿ

09:04 PM (IST) Apr 18

ಮದುವೇಲಿ ಈ ಫ್ರೆಂಡ್ಸ್‌ಗಳು ಕೊಟ್ಟ ಕ್ವಾಟ್ಲೆ ಒಂದೊಂದಲ್ಲ ಕಣಣ್ಣ!

ಮದುವೆ ವೇದಿಕೆಯಲ್ಲಿ ಮದುಮಗನಿಗೆ ಸ್ನೇಹಿತರು ಕ್ಯೂಆರ್ ಕೋಡ್ ಸ್ಕ್ಯಾನರ್ ಮೂಲಕ ಕ್ವಾಟ್ಲೆ ಕೊಟ್ಟ ಘಟನೆ. ಒಬ್ಬೊಬ್ಬರೇ ಬಂದು ಹಣ ಹಾಕಿ ಹೋಗುವ ಮೂಲಕ ವಿನೂತನವಾಗಿ ಕ್ವಾಟ್ಲೆ ಕೊಟ್ಟಿದ್ದಾರೆ. ಮದುಮಗ ಹಾಗೂ ಮದುಮಗಳ ಪ್ರತಿಕ್ರಿಯೆಗಳು ವಿಡಿಯೋದಲ್ಲಿ ಸೆರೆಯಾಗಿದೆ.

ಪೂರ್ತಿ ಓದಿ

08:47 PM (IST) Apr 18

RCB-ಪಂಜಾಬ್ ಮ್ಯಾಚ್ ನಡೆಸಲು ಎಲ್ಲಿವರೆಗೂ ಚಾನ್ಸ್ ಇದೆ? ಕೊನೆ ಘಳಿಗೆ ಎಷ್ಟು?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಪಂದ್ಯ ಆರಂಭವಾಗುವುದು ತಡವಾಗಿದ್ದು, ಪೂರ್ಣ 20 ಓವರ್‌ಗಳ ಪಂದ್ಯ ನಡೆಯುವುದು ಅನುಮಾನ. ಕನಿಷ್ಠ 5 ಓವರ್‌ಗಳ ಪಂದ್ಯವಾಡಲು ರಾತ್ರಿ 10.54ರವರೆಗೆ ಕಾಲಾವಕಾಶವಿದೆ.

ಪೂರ್ತಿ ಓದಿ

08:44 PM (IST) Apr 18

WhatsApp ಮೇಲೆ ಕಣ್ಣಿಟ್ಟ ಕಿಡಿಗೇಡಿಗಳು; ಈ ರೀತಿ ಮಾಡಿದ್ರೆ ಮಾತ್ರ ಬಚಾವ್‌ ಆಗ್ತೀರಾ!

ವಾಟ್ಸಾಪ್ ಆಪ್‌ನಲ್ಲಿ ಏನಾಗುತ್ತಿದೆ? ನಿಮ್ಮ ವಾಟ್ಸಾಪ್, ಇತರ ಸೋಶಿಯಲ್‌ ಮೀಡಿಯಾ ಆಪ್‌ಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು?

ಪೂರ್ತಿ ಓದಿ

08:26 PM (IST) Apr 18

ಆನ್‌ಲೈನ್ ಪ್ರೀತಿ, ಕೊರಿಯಾ ಯುವಕನ ಮದ್ವೆಯಾಗಲು ಹೋದ ಹುಡುಗಿ ಅದೇ ಸ್ಪೀಡ್‌ಲ್ಲಿ ವಾಪಸ್

ಆನ್‌ಲೈನ್ ಮೂಲಕ ಚಾಟಿಂಗ್, ಬಳಿಕ ವಿಡಿಯೋ ಕಾಲ್, ಹೀಗೆ ಪ್ರೀತಿ ಶುರುವಾಗಿದೆ, ಗಾಢವಾಗಿದೆ. ಕೊನೆಗೆ 17ರ ವಯಸ್ಸಿನ ಭಾರತದ ಬಾಲಕಿ ತನ್ನ ಆನ್‌ಲೈನ್ ಪ್ರೀತಿಯ ಕೊರಿಯಾ ಹುಡುಗನ ಮದುವೆಯಾಗಲು ತೆರಳಿದ್ದಾಳೆ. ಆದರೆ ಆತನ ಭೇಟಿಯಾಗುತ್ತಿದ್ದಂತೆ ಭ್ರಮನಿರಸನಗೊಂಡ ಅದೇ ಸ್ಪೀಡ್‌ಲ್ಲಿ ವಾಪಾಸ್ ಆಗಿದ್ದಾಳೆ.

ಪೂರ್ತಿ ಓದಿ

08:00 PM (IST) Apr 18

ಪ್ರವಾಸಿಗರ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ; ಐವರು ಯುವತಿಯರ ರಕ್ಷಣೆ!

ಪ್ರವಾಸಿ ತಾಣದ ಹೋಟೆಲ್‌ವೊಂದರಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 5 ಮಂದಿ ಯುವತಿಯರನ್ನು ರಕ್ಷಿಸಲಾಗಿದ್ದು, ಅವರು ನೇಪಾಳ ಮತ್ತು ಜಾರ್ಖಂಡ್ ಮೂಲದವರು ಎಂದು ತಿಳಿದುಬಂದಿದೆ.

ಪೂರ್ತಿ ಓದಿ

07:40 PM (IST) Apr 18

ಐಫೋನ್‌ ಬಳಕೆದಾರರಿಗೆ ಬಿಗ್‌ ಶಾಕ್‌ ಕೊಟ್ಟ Meta; ಛೇ ಹೀಗಾಗಬಾರದಿತ್ತು..!

07:39 PM (IST) Apr 18

ಇನ್ನೂ ಹತ್ತೇ ವರ್ಷ: ವೈದ್ಯರೂ ಇರಲ್ಲ, ಶಿಕ್ಷಕರೂ ಬೇಕಿಲ್ಲ- ಬಿಲ್​ ಗೇಟ್ಸ್​ ಶಾಕಿಂಗ್​ ವಿಷ್ಯ ರಿವೀಲ್​!

ಕೃತಕ ಬುದ್ಧಿಮತ್ತೆಯ ವ್ಯಾಪ್ತಿ ಹರಡುತ್ತಲೇ ಇದ್ದು, ಇನ್ನು ಹತ್ತೇ ವರ್ಷದಲ್ಲಿ ವೈದ್ಯಕೀಯ ಮತ್ತು ಶಿಕ್ಷಣ ಲೋಕಕ್ಕೂ ಕಾಲಿಡಲಿದೆ. ಅಂದು ಏನಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ ಬಿಲ್​ ಗೇಟ್ಸ್​!
 

ಪೂರ್ತಿ ಓದಿ

07:38 PM (IST) Apr 18

ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ ಮಡಿಕೇರಿಯ ಕೂರ್ಗ್ ವಿಲೇಜ್: ವಿಫಲಗೊಂಡ ಪ್ರವಾಸಿ ತಾಣ

ಪ್ರವಾಸೋದ್ಯಮದ ಪಾಲಿಗೆ ಕೊಡಗು ಜಿಲ್ಲೆ ಚಿನ್ನದ ಮೊಟ್ಟೆ ಇಡೋ ಕೋಳಿ. ಹಾಗಾಗಿಯೇ ರಾಜ್ಯ ಸರ್ಕಾರ ಇತ್ತೀಚೆಗೆ ಕೊಡಗಿನ ಪದ್ಧತಿ, ಆಚಾರ ವಿಚಾರ ಇಲ್ಲಿನ ಬೆಳೆಗಳಿಗೂ ಉತ್ತೇಜನ ನೀಡಿ ಸಂಸ್ಕೃತಿ ಸಾರಲು ಕೂರ್ಗ್ ವಿಲೇಜ್ ಎಂಬ ಕಲ್ಪನೆಯನ್ನ ಹುಟ್ಟುಹಾಕಿ ಅದಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಕೂಡ ಮಾಡಿತ್ತು.

ಪೂರ್ತಿ ಓದಿ

07:27 PM (IST) Apr 18

ವಂದೇ ಭಾರತ್ ಸ್ಲೀಪರ್ ರೈಲು: ಈ ವರ್ಷಾಂತ್ಯದಲ್ಲಿ ಮಂಗಳೂರಿಗೆ

ತಿರುವನಂತಪುರಂ-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಈ ವರ್ಷಾಂತ್ಯದಲ್ಲಿ ಸಂಚರಿಸುವ ನಿರೀಕ್ಷೆ ಇದೆ. 16 ಬೋಗಿಗಳ ಹೈಸ್ಪೀಡ್ ರೈಲು ಇದಾಗಿದ್ದು, ಹಲವು ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಯಶವಂತಪುರ-ಮಂಗಳೂರು ರೈಲು ಸಂಚಾರವನ್ನು ಸೆಂಟ್ರಲ್‌ಗೆ ವಿಸ್ತರಿಸಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಪೂರ್ತಿ ಓದಿ

07:26 PM (IST) Apr 18

ನಾರಾಯಣ ಮೂರ್ತಿಯ 17 ತಿಂಗಳ ಮೊಮ್ಮಗನ ಈ ವರ್ಷದ ಆದಾಯ 3.3 ಕೋಟಿ ರೂ

ನಾರಾಯಣ ಮೂರ್ತಿ ಮೊಮ್ಮಗನ ವಯಸ್ಸು ಕೇವಲ 1 ವರ್ಷ ನಾಲ್ಕು ತಿಂಗಳು. ಆದರೆ ಆದಾಯ ಯಾವ ಸಿಇಒಗಿಂತ ಕಡಿಮೆ ಇಲ್ಲ. ಈ ವರ್ಷ ಈ ಪುಟ್ಟ ಕಂದ 3.3 ಕೋಟಿ ರೂಪಾಯಿ ಆದಾಯಗಳಿಸಿದ್ದಾನೆ. ಈ ಮಗು ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ಜೇಬು ಗಟ್ಟಿ ಮಾಡಿದ್ದು ಹೇಗೆ? 

ಪೂರ್ತಿ ಓದಿ

07:05 PM (IST) Apr 18

ತುಟಿ ಬಳಿ ಮಚ್ಚೆ ಇದ್ಯಾ? ಹಾಗಿದ್ರೆ ನಿಮ್ಮ ವ್ಯಕ್ತಿತ್ವ, ಜೀವನ ಖಂಡಿತಾ ಹೀಗೇ ಇರುತ್ತೆ ನೋಡಿ!

ತುಟಿ ಬಳಿ ಮಚ್ಚೆ ಇದ್ಯಾ? ಹಾಗಿದ್ರೆ ನಿಮ್ಮ ವ್ಯಕ್ತಿತ್ವ, ಜೀವನದ ಆಗುಹೋಗು, ಭವಿಷ್ಯ ಎಲ್ಲವೂ ಹೀಗೆ ಇರುತ್ತದೆ ನೋಡಿ... 
 

ಪೂರ್ತಿ ಓದಿ

07:05 PM (IST) Apr 18

IPL 2025 ಬೆಂಗಳೂರು ಮಳೆಯಿಂದ ಆರ್‌ಸಿಬಿ ತವರಿನ ಪಂದ್ಯಕ್ಕೆ ಅಡೆ ತಡೆ, ಟಾಸ್ ವಿಳಂಬ

ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ತುಂತುರ ಮಳೆಯಿಂದ ಟಾಸ್ ವಿಳಂಬಗೊಂಡಿದೆ. ಕಳೆದೆರಡು ತವರಿನ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿಗೆ ಇದು ಮಹತ್ವದ ಪಂದ್ಯವಾಗಿದೆ. 

ಪೂರ್ತಿ ಓದಿ

06:22 PM (IST) Apr 18

ಮೇ.1 ರಿಂದ ಫಾಸ್ಟ್ಯಾಗ್ ಕೆಲಸ ಮಾಡಲ್ವಾ? ಸ್ಯಾಟಲೈಟ್ ಆಧಾರಿತ ಟೋಲ್‌ಗೆ ಸರ್ಕಾರ ಹೇಳಿದ್ದೇನು?

ಮೇ.1 ರಿಂದ ಸ್ಯಾಟಲೈಟ್ ಆಧಾರಿತ ಟೋಲ್ ಪಾವತಿ ವ್ಯವಸ್ಥೆ ಜಾರಿಯಾಗುತ್ತಿದೆ. ಇದರ ನಡುವೆ ಗೊಂದಲ ಹೆಚ್ಚಾಗಿದೆ. ಹಾಗಾದರೆ ಸದ್ಯ  ಇರುವ ಫಾಸ್ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲವೇ? ಫಾಸ್ಟ್ಯಾಗ್ ಟೋಲ್ ಬೂತ್ ಇರೋದಿಲ್ವಾ? ಈ ಎಲ್ಲಾ ಗೊಂದಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ.

ಪೂರ್ತಿ ಓದಿ

06:14 PM (IST) Apr 18

ಬೆಂಗಳೂರು ಮೆಟ್ರೋದಲ್ಲಿ 35 ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 35 ಪದವೀಧರ ಎಂಜಿನಿಯರ್ (ಸಿವಿಲ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 03, 2025 ರ ಮೊದಲು ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ

06:13 PM (IST) Apr 18

ಜಾತಿಗಣತಿ ವರದಿಯನ್ನು ಸಿದ್ದರಾಮಯ್ಯ ಗ್ಯಾಂಗ್‌ ಎಲ್ಲೋ ಕುಳಿತು ರೂಪಿಸಿದೆ: ಆರ್‌.ಅಶೋಕ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾಂಗ್‌ ಎಲ್ಲೋ ಕುಳಿತು ಸಿದ್ಧಪಡಿಸಿದ ಜಾತಿ ಗಣತಿ ವರದಿಯನ್ನು ಒಪ್ಪಬಾರದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ. ವರದಿಯಲ್ಲಿ ಸಹಿ ಹಾಕದೆ ಕಾಂತರಾಜು ಓಡಿ ಹೋಗಿದ್ದಾರೆ, ಜಯಪ್ರಕಾಶ್ ಹೆಗ್ಡೆ ವರದಿಯನ್ನು ನಕಲಿ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪೂರ್ತಿ ಓದಿ

05:35 PM (IST) Apr 18

ದಾಂಡೇಲಿಯಲ್ಲಿ ₹12 ಕೋಟಿ ಮೌಲ್ಯದ ₹500 ಮುಖಬೆಲೆಯ ನಕಲಿ ನೋಟು ಪತ್ತೆ!

ದಾಂಡೇಲಿಯ ಗಾಂಧಿನಗರದ ಮನೆಯೊಂದರಲ್ಲಿ ₹12 ಕೋಟಿ ಮೌಲ್ಯದ 500 ರೂ. ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಚಲನಚಿತ್ರ ಚಿತ್ರೀಕರಣಕ್ಕೆ ಮಾತ್ರ ಬಳಕೆ ಎಂದು ನಮೂದಿಸಿದ್ದ ನೋಟುಗಳ ಮೇಲೆ RBI ಸಹಿ, ಸೀರಿಯಲ್ ನಂಬರ್, ಗಾಂಧಿ ಚಿತ್ರ ಇದ್ದವು. ಪೊಲೀಸರು ಆರೋಪಿ ಅರ್ಷದ್ ಅಜುಂ ಖಾನ್‌ನನ್ನು ಬಂಧಿಸಿದ್ದಾರೆ.

ಪೂರ್ತಿ ಓದಿ

05:35 PM (IST) Apr 18

ಹುಟ್ಟಹಬ್ಬದ ದಿನವೇ ನೆನಪಿರಲಿ ಪ್ರೇಮ್‌ಗೆ ಭಾರೀ ಸಂಕಷ್ಟ; ಶ್ರುತಿ ನಾಯ್ಡು ರಾಂಗ್..!

ಇಂದು ಪ್ರೇಮ್‌ ಹುಟ್ಟುಹಬ್ಬದ ಅಂಗವಾಗಿ ರಿಲೀಸ್‌ ಆಗಿರುವ ಸ್ಪಾರ್ಕ್ ಸಿನಿಮಾದ ಪೋಸ್ಟರ್‌ ನೋಡಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರು ಕೆಂಡಾಮಂಡಲ ಆಗಿದ್ದಾರೆ. ಅವರ ಈ ಪರಿ ಕೋಪಕ್ಕೆ ಕಾರಣವೇನು? ನಡೆದಿದ್ದಾರೂ ಏನು?..

ಪೂರ್ತಿ ಓದಿ

05:32 PM (IST) Apr 18

ಜನಿವಾರ ವಿವಾದ: ತನಿಖೆಗೆ ಆದೇಶ, ಬುರ್ಖಾ ಬಗ್ಗೆ ಧ್ವನಿ ಎತ್ತಿದ ಮುಖಂಡ

ಶಿವಮೊಗ್ಗದಲ್ಲಿ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ, ಬೀದರ್‌ನಲ್ಲಿ ಜನಿವಾರ ಧರಿಸಿ ಬಂದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಘಟನೆ ಜನಿವಾರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯಿಂದಾಗಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ತನಿಖೆಗೆ ಆದೇಶಿಸಿದೆ.

ಪೂರ್ತಿ ಓದಿ

05:21 PM (IST) Apr 18

ಸ್ವೀಟ್ 60ಯಲ್ಲಿ ಘೋಷ್‌ ಹೃದಯಲ್ಲಿ ಜೋಶ್, ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಬಿಜಿಪಿ ಹಿರಿಯ ನಾಯಕ

ಬಿಜೆಪಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಯಸ್ಸು 60.  ಸ್ವೀಟ್ 60ಯಲ್ಲಿ ಘೋಷ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಂದು ಮದುವೆಯಾಗುತ್ತಿದ್ದಾರೆ. ದಿಲೀಪ್ ಘೋಷ್ ಪ್ರೀತಿ ಶುರುವಾಗಿದ್ದು ಹೇಗೆ? ಇಲ್ಲಿದೆ ರೋಚಕ ಲವ್ ಸ್ಟೋರಿ.

ಪೂರ್ತಿ ಓದಿ

05:16 PM (IST) Apr 18

ರಚನಾ ಮಾಡರ್ನ್‌ ಹುಡುಗಿ, ರಾಕೇಶ್‌ ಹಳ‍್ಳಿ ಹುಡುಗ.. ಇವರಿಬ್ಬರ ಮಧ್ಯೆ ನಾಯಿಗೇನು ಕೆಲಸ?

ರಘು ಹಾಸನ್‌ ನಿರ್ದೇಶಿಸಿ, ನಿರ್ಮಿಸಿರುವ ‘ನಾನು ಮತ್ತು ಗುಂಡ 2’ ಚಿತ್ರದ ಟೀಸರ್‌ ಅನ್ನು ನಿರ್ಮಾಪಕ ವಿಜಯ್‌ ಕಿರಗಂದೂರ್‌ ಅವರ ಪತ್ನಿ ಶೈಲಜಾ ಕಿರಗಂದೂರ್‌ ಬಿಡುಗಡೆ ಮಾಡಿದರು. 

ಪೂರ್ತಿ ಓದಿ

04:36 PM (IST) Apr 18

ಸೋಲಬಾರದು ಅಂತ ಹೆದರಿಕೊಂಡು ಯುದ್ಧಕಾಂಡ ಸಿನಿಮಾ ಮಾಡಿದ್ದೇನೆ: ಅಜಯ್‌ ರಾವ್‌

ಅನ್ಯಾಯವಾದವರಿಗೆ ರಕ್ಷಣೆ ಮತ್ತು ನ್ಯಾಯ ಸಿಗಬೇಕು. ಇವತ್ತಿನ ತಂತ್ರಜ್ಞಾನ ಬಳಸಿಕೊಂಡು ಕ್ರೈಮ್‍ ಆಗದಿರುವಂತಹ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯವನ್ನು ಯುದ್ಧಕಾಂಡ ಸಿನಿಮಾ ಹೊಂದಿದೆ.
 

ಪೂರ್ತಿ ಓದಿ

04:30 PM (IST) Apr 18

ಕುಕ್ಕೆ ಸುಬ್ರಹ್ಮಣ್ಯವೀಗ ನಂ.1 ಶ್ರೀಮಂತ ದೇಗುಲ- ಉಳಿದ ದೇವಸ್ಥಾನಗಳ ಲಿಸ್ಟ್​ ಇಲ್ಲಿದೆ...

 ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಮೂಲಕ   ನಂ.1 ಶ್ರೀಮಂತ ದೇಗುಲ ಎನ್ನಿಸಿಕೊಂಡಿದೆ. ಮುಂದಿನ ಪಟ್ಟಿಯಲ್ಲಿ ಇರುವುದು ಯಾವ ದೇಗುಲ? 
 

ಪೂರ್ತಿ ಓದಿ

04:30 PM (IST) Apr 18

ಬ್ರಾಹ್ಮಣರ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆ, ಅನುರಾಗ್ ಕಶ್ಯಪ್ ವಿರುದ್ಧ ಪ್ರತಿಭಟನೆ ಶುರು

ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ. ಇದು ಬಾಲಿವುಡ್‌ನಿಂದ ಓಡಿ ಹೋದ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ನೀಡಿದ ಪ್ರತಿಕ್ರಿಯೆ. ಈ ಪ್ರತಿಕ್ರಿಯೆ ಭಾರಿ ವಿವಾದ ಸೃಷ್ಟಿಯಾಗಿದೆ. ಪ್ರತಿಭಟನೆ ಜೋರಾಗಿದೆ. ಫುಲೆ ಸಿನಿಮಾದಿಂದ ಆರಂಭಗೊಂಡ ವಿವಾದಕ್ಕೆ ಅನುರಾಗ್ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಪೂರ್ತಿ ಓದಿ

04:24 PM (IST) Apr 18

Chikkamagaluru: ಅಕ್ರಮ ಸಂಬಂಧಕ್ಕಾಗಿ ಲವರ್ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ!

ಆಸ್ತಿ ಕೈತಪ್ಪುತ್ತೆ ಎಂದು ಪತ್ನಿಯೇ ಲವರ್ ಜೊತೆ ಸೇರಿ ಪತಿಯನ್ನ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಸಮೀಪದ ಲಕ್ಯಾ ಕ್ರಾಸ್ ನಲ್ಲಿ ನಡೆದಿದೆ. ಮೃತನನ್ನ 55 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ.

ಪೂರ್ತಿ ಓದಿ

04:22 PM (IST) Apr 18

ರೈಲಿನಲ್ಲಿ ಇಡ್ಲಿ, ದೋಸೆ ಇಲ್ಲವೇ ಇಲ್ಲ; ಹಿಂದಿ ಭಾಷೆಯಾಯ್ತು, ಈಗ ಆಹಾರ ಹೇರಿಕೆ!

ದಕ್ಷಿಣ ಭಾರತದಲ್ಲಿ ಓಡಾಡುವ ವಂದೇ ಭಾರತ್ ರೈಲಿನಲ್ಲಿ ಉತ್ತರ ಭಾರತದ ಆಹಾರಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ಮಲಯಾಳಂ ಲೇಖಕರು ಆರೋಪಿಸಿದ್ದಾರೆ. ಇಡ್ಲಿ, ದೋಸೆಗಳಂತಹ ದಕ್ಷಿಣ ಭಾರತದ ತಿನಿಸುಗಳು ಮೆನುವಿನಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆ ಆಯ್ತು, ಈಗ ಆಹಾರ ಹೇರಿಕೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ.

ಪೂರ್ತಿ ಓದಿ

04:10 PM (IST) Apr 18

ಮೊದಲ ಬಾರಿ ಮಗಳ ಫೋಟೋ ರಿವೀಲ್‌ ಮಾಡಿ ಹೆಸರು ತಿಳಿಸಿದ KL Rahul, Athiya Shetty!

ನಟಿ ಅಥಿಯಾ ಶೆಟ್ಟಿ, ಕೆ ಎಲ್‌ ರಾಹುಲ್‌ ಅವರು ಮೊದಲ ಬಾರಿಗೆ ಮಗಳ ಫೋಟೋವನ್ನು ರಿವೀಲ್‌ ಮಾಡಿದ್ದಾರೆ. 

ಪೂರ್ತಿ ಓದಿ

04:03 PM (IST) Apr 18

ಮದರಂಗಿ ಹಾಕಿಸಿಕೊಂಡು ಬರುವೆ ಅಂತ ಬ್ಯೂಟಿಪಾರ್ಲರ್‌ಗೆ ಹೋದ ವಧು ನಾಪತ್ತೆ

ಮದುವೆಗೆ ದಿನ ಮೊದಲು ವಧುವೊಬ್ಬಳು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಮಂಗಳೂರಿನ ಬೋಳಾರ್‌ನಲ್ಲಿ ನಡೆದಿದೆ. 22 ವರ್ಷದ ಪಲ್ಲವಿ ಎಂಬ ವಧುವಿನ ಮದುವೆ ಏಪ್ರಿಲ್ 16 ರಂದು ನಿಗದಿಯಾಗಿತ್ತು.

ಪೂರ್ತಿ ಓದಿ

03:42 PM (IST) Apr 18

CET ಪರೀಕ್ಷೆ ಜನಿವಾರ ವಿವಾದ, ಕ್ಷಮೆ ಕೇಳಿದ ಕೆಇಎ ನಿರ್ದೇಶಕ ಪ್ರಸನ್ನ

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ. ಈ ವಿವಾದದ ಬಗ್ಗೆ ಶಿಕ್ಷಣ ಸಚಿವರು ಮತ್ತು KEA ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಪೂರ್ತಿ ಓದಿ

03:19 PM (IST) Apr 18

ಅಮೆರಿಕಾದ FBIನಿಂದ ಮತ್ತೊಂದು ಬೇಟೆ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್-ವಾಂಟೆಡ್ ಉಗ್ರ ಅರೆಸ್ಟ್

ಪಂಜಾಬ್‌ನಾದ್ಯಂತ ನಡೆದ 14ಕ್ಕೂ ಹೆಚ್ಚು ಗ್ರೇನೆಡ್ ದಾಳಿಗಳಲ್ಲಿ ಭಾಗಿಯಾದ ಹ್ಯಾಪಿ ಪ್ಯಾಸಿಯಾ ಅಲಿಯಾಸ್ ಹರ್‌ಪ್ರೀತ್‌ ಸಿಂಗ್‌ನನ್ನು ಅಮೆರಿಕದಲ್ಲಿ ಎಫ್‌ಬಿಐ ಬಂಧಿಸಿದೆ. ಭಾರತದಲ್ಲಿ ನಡೆದ ಹಲವಾರು ಇಂತಹ ದಾಳಿಗಳ ಜವಾಬ್ದಾರಿಯನ್ನು ಅವನು ವಹಿಸಿಕೊಂಡಿದ್ದಾನೆ ಎಂಬುದು ಭಾರತದ ತನಿಖಾ ಸಂಸ್ಥೆಗಳ ಆರೋಪವಾಗಿದೆ.

ಪೂರ್ತಿ ಓದಿ

03:08 PM (IST) Apr 18

ವಿಕೃತಕಾಮಿ ಕಾರ್ತಿಕ, ಮಹಿಳೆಯರಿಗೆ ಖಾಸಗಿ ಅಂಗ ತೋರಿಸೋದೇ ಈತನ ಕಾಯಕ!

ಬೆಂಗಳೂರಿನಲ್ಲಿ 21 ವರ್ಷದ ಯುವಕನೊಬ್ಬ ಮಹಿಳೆಯರಿಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದ. ಈತನ ಕಾಟ ತಾಳಲಾರದೆ ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಪೂರ್ತಿ ಓದಿ

More Trending News