ಕುಡಿದ ಪೋಷಕರನ್ನೇ ಹತ್ಯೆಗೈದ ಹಲವು ಘಟನೆಗಳು ವರದಿಯಾಗಿದೆ. ತಂದೆ ಜೊತೆ ಗುಂಡು ಪಾರ್ಟಿ ಮಾಡಿದ್ದಾನೆ. ಕೆಲ ಹೊತ್ತಲ್ಲೇ ಎಣ್ಣೆ ಬಾಟಲಿ ಖಾಲಿ ಆಗಿದೆ. ಮತ್ತೊಂದು ಬಾಟಲಿ ಎಣ್ಣೆ ತರಲು ತಾಯಿ ಬಳಿ ಹಣ ಕೇಳಿದ್ದಾನೆ. ಆದರೆ ಕುಡಿತ ಸಾಕು ಎಂದು ಬುದ್ದಿವಾದ ಹೇಳಿದ ತಾಯಿ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ.
ತಿರುವನಂತಪುರಂ(ಮಾ.09): ಎಣ್ಣೆ ಪಾರ್ಟಿ ಮಾಡಿ ಜಗಳ, ಕುಡಿತ ಮತ್ತಿನಲ್ಲಿ ಪೋಷಕರ ಹತ್ಯೆ ಸೇರಿದಂತೆ ಹಲವು ಭೀಕರ ಘಟನೆಗಳು ವರದಿಯಾಗಿದೆ. ಇದೀಗ ಕೇರಳದ ಅಲಪ್ಪುಯದಲ್ಲಿ ನಡೆದ ಹತ್ಯೆ ಮನುಕುಲವನ್ನೇ ಬೆಚ್ಚಿ ಬೀಳಿಸಿದೆ. ತಂದೆ ಜೊತೆ ಎಣ್ಣೆ ಪಾರ್ಟಿ ಮಾಡಿದ 30 ವರ್ಷದ ಮಗ ಮಿಥುನ್ ಮೋಹನ್, ಹೈ ಸ್ಪೀಡಲ್ಲಿ ಕುಡಿದಿದ್ದಾನೆ. ತಂದೆ ಕೂಡ ಪೈಪೋಟಿಗೆ ಬಿದ್ದು ಎಣ್ಣೆ ಕುಡಿದಿದ್ದಾರೆ. ಕೆಲ ಹೊತ್ತಲ್ಲೇ ಎಣ್ಣೆ ಖಾಲಿ. ಇಬ್ಬರಿಗೂ ಇನ್ನೂ ಒಂದು ಬಾಟಲ್ ಎಣ್ಣೆ ಬೇಕು ಅನ್ನೋ ಹಂಬಲ. ನಶೆ ಮೆಲ್ಲನೆ ಏರುತ್ತಿರುವಾಗಲೇ ಎಣ್ಣೆ ಖಾಲಿಯಾದರೆ ಹೇಗೆ? ಹೀಗಾಗಿ ಮಿಥುನ್ ಕೆಲ ಗೆಳೆಯರಿಗೆ ಕರೆ ಮಾಡಿ ಹಣ ಕೇಳಿದ್ದಾನೆ. ಆದರೆ ಗೆಳೆಯರು ನಿರಾಕರಿಸಿದ್ದಾರೆ. ತಂದೆ ಹಾಗೂ ಮಗ ಇಬ್ಬರಲ್ಲೂ ಹಣವಿಲ್ಲ. ಹೀಗಾಗಿ ತಾಯಿ ರಾಮಾ ಮೋಹನ್ ಬಳಿ ಹಣ ಕೇಳಿದ್ದಾನೆ. ಆದರೆ ಮಗನಿಗೆ ಬುದ್ದಿವಾದ ಹೇಳಲು ಆರಂಭಿಸಿದ ತಾಯಿ ಕತ್ತು ಹಿಸುಕಿ ಮಗ ಮಿಥುನ್ ಮೋಹನ್ ಹತ್ಯೆ ಮಾಡಲಾಗಿದೆ.
ಪತಿ ಹಾಗೂ ಮಗನ ಕುಡಿತದ ಪರಿಣಾಮ 65 ವರ್ಷದ ರಾಮಾ ಮೋಹನ್ ಕೆಲ ಹಿರಿಯ ಮಗನ ಬಳಿ ತೆರಳಿದ್ದರು. ಪತಿ ಹಾಗೂ ಕಿರಿಯ ಮಗನ ಕುಡಿತ ಕಾರಣದಿಂದಲೇ ಮನೆ ಬಿಟ್ಟು ತೆರಳಿದ್ದರು. ಬಳಿಕ ಮತ್ತೆ ಪತಿ ಹಾಗೂ ಕಿರಿಯ ಮಗನ ಬಳಿ ಬಂದಿದ್ದರು. ಇತ್ತೀಚೆಗೆ ಮತ್ತೆ ಪತಿ ಹಾಗೂ ಮಗನ ಕುಡಿತ ಚಟ ಹೆಚ್ಚಾಗಿತ್ತು. ಕುಡಿದ ಬಳಿಕ ರಂಪಾಟ, ಡ್ರಾಮ ಹೆಚ್ಚಾಗಿತ್ತು.
ಈ ಮದ್ಯದ ಸಿಪ್ ಏರಿಸಿದ್ರೆ ಸಾಕು ನಶೆ ಏರುತ್ತೆ! ಹೆಚ್ಚಾದರೆ ಮಾತ್ರ ಹೊಗೆ ಗ್ಯಾರಂಟಿ
ರಾಮಾ ಮೋಹನ್ ಅಕ್ಕ ಪಕ್ಕದ ಮನೆಗೆ ಕೆಲಸಕ್ಕೆ ಹೋಗಿ ಕುಟುಂಬ ನಡೆಸುತ್ತಿದ್ದಾರೆ. ಕಿರಿಯ ಮಗ ಸಂಪಾದನೆ ಕುಡಿತಕ್ಕೆ ಸಾಕಾಗುವುದಿಲ್ಲ. ಪತ್ನಿಯ ಆದಾಯದಲ್ಲಿ ಪತಿ ಕುಡಿತ. ಇದು ರಾಮಾ ಮೋಹನ್ ಸಂಸಾರ. ರಾಧಾ ಮೋಹನ್ ಗದರಿಸಿ ಹಣ ಪಡೆದು ಬುಧವಾರ ಅಪ್ಪ ಮಗ ಇಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ. ಬಾಟಲಿ ಖಾಲಿಯಾಗಿದೆ. ಇನ್ನೂ ಬೇಕು ಎನಿಸಿದೆ.
ಆದರ ತರಲು ಹಣವಿಲ್ಲ, ಮತ್ತೆ ತಾಯಿ ಬಳಿ ಮಗ ಮಿಥುನ್ ಮೋಹನ್ ಕೇಳಿದ್ದಾನೆ. ಮೊದಲೇ ಕುಡಿತದಿಂದ ರೋಸಿ ಹೋಗಿದ್ದ ತಾಯಿ, ಉಪದೇಶ ಮಾಡಲು ಆರಂಭಿಸಿದ್ದಾರೆ. ಇದರಿಂದ ಮಗ ಮಿಥುನ್ ಮೋಹನ್ ರೊಚ್ಚಿಗೆದ್ದಿದ್ದಾನೆ. ಇದೇ ಕೋಪದಲ್ಲಿ ತಾಯಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಇತ್ತ ತಂದೆ ಕುಡಿದ ಅಮಲಿನಲ್ಲೇ ಅಲ್ಲೆ ಮಲಗಿದ್ದಾರೆ. ಇತ್ತ ಕಿರಿಯ ಮಗ ಮನೆಯಿಂದ ಹೊರಹೋಗಿದ್ದಾನೆ. ಮರುದಿನ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಹೆರಿಗೆಯ ನಂತರ ವಿಪರೀತ ಮದ್ಯ ಸೇವಿಸ್ತಿದ್ದ ಮಹಿಳೆ, ಎದೆಹಾಲು ಕುಡಿದ ಎರಡು ತಿಂಗಳ ಮಗು ಸಾವು!
ಪೊಲೀಸರ ಸ್ಥಳಕ್ಕೆ ಆಗಮಿಸಿದಾಗ ರಾಮಾ ಮೋಹನ್ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ. ಇತ್ತ ನಶೆ ಇಳಿಯದ ಪತಿ ಏನೂ ಅರಿವಿಲ್ಲದೆ ಮಲಗಿದ್ದಾರೆ. ಮಗನ ಸುಳಿವಿಲ್ಲ. ದೂರು ದಾಖಲಿಸಿಕೊಂಡ ಪೊಲೀಸು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಳಿಕ ಅಪ್ಪ ಹಾಗೂ ಮಗ ಇಬ್ಬರನ್ನೂ ಬಂಧಿಸಿದ್ದಾರೆ.