ಮಾಧುರಿ ಒಪ್ಪದಿದ್ರೂ ಬಲವಂತದಿಂದ ರೇ* ಮಾಡ್ಲೇಬೇಕಾಯ್ತು: ಶೂಟಿಂಗ್​ನಲ್ಲಿ ನಡೆದದ್ದನ್ನು ಹೇಳಿದ ನಟ ರಂಜೀತ್​

ಪ್ರೇಮ್​ ಪ್ರತಿಜ್ಞಾ ಶೂಟಿಂಗ್​ ಸಮಯದಲ್ಲಿ ಮಾಧುರಿ ದೀಕ್ಷಿತ್​ ಅವರು ಆ ದೃಶ್ಯ  ಮಾಡಲ್ಲ ಎಂದು ಬಿಕ್ಕಿಬಿಕ್ಕಿ ಅತ್ತು, ಶೂಟಿಂಗ್​ ಮುಗಿದ ಬಳಿಕವೂ ಅತ್ತಿದ್ದನ್ನು ನೆನಪಿಸಿಕೊಂಡಿದ್ದಾರೆ ಖಳ ನಟ ರಂಜೀತ್​. 
 

Ranjeet recalls Madhuri Dixit was sobbing after a scene with him in Prem Pratigya suc

1970 ರಿಂದ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಹಿರಿಯ ಬಾಲಿವುಡ್​ ನಟ ರಂಜೀತ್, 1989 ರ ಪ್ರೇಮ್​ ಪ್ರತಿಜ್ಞಾ ಚಿತ್ರದ ಶೂಟಿಂಗ್​ನಲ್ಲಿ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ. ಆ ದಿನಗಳಲ್ಲಿ ರಂಜೀತ್ ತಮ್ಮ ಖಳನಾಯಕ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು ಮತ್ತು ಅವರ ವಿವಿಧ ಚಿತ್ರಗಳಲ್ಲಿ ಹೆಚ್ಚಾಗಿ ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಪಾತ್ರಗಳೇ ಇರುತ್ತಿದ್ದವು. ಆದ್ದರಿಂದ ಹೊಸ ನಟಿಯರು ಕೂಡ ಇವರನ್ನು ಕಂಡರೆ ಹೆದರುತ್ತಿದ್ದರು. ಪ್ರೇಮ್​ ಪ್ರತಿಜ್ಞಾ ಚಿತ್ರದ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್​ ಮೇಲೂ ಇಂಥದ್ದೇ ದೃಶ್ಯವನ್ನು ನಟ ಮಾಡಬೇಕಿತ್ತು. ಆಗ ಮಾಧುರಿ ಅವರು ಬಾಲಿವುಡ್​ನಲ್ಲಿ ಐದು ವರ್ಷ ಪೂರ್ಣಗೊಳಿಸಿದ್ದರು. ಅದರ ಹೊರತಾಗಿಯೂ ಮಾಧುರಿ, ರಂಜೀತ್​ ಅವರನ್ನು ಕಂಡರೆ ಭಯಬಿದ್ದಿದ್ದರಂತೆ. ಆ ದೃಶ್ಯವನ್ನು ತಾವು ಮಾಡುವುದೇ ಇಲ್ಲ ಎಂದು ಜೋರಾಗಿ ಅತ್ತಿದ್ದರಂತೆ.

ಈ ಕುರಿತು ನಟ ರಂಜೀತ್​ ಈಗ ರಿವೀಲ್​ ಮಾಡಿದ್ದಾರೆ.  ವಿಕಿ ಲಾಲ್ವಾನಿ ಅವರೊಂದಿಗಿನ ಸಂದರ್ಶನವೊಂದರಲ್ಲಿ, ರಂಜೀತ್ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.   ನನ್ನ ಇಮೇಜ್ ಆ ಸಂದರ್ಭದಲ್ಲಿ ನಿರ್ದಯಿ, ರೇ*ಸ್ಟ್ ಎಂದೆಲ್ಲಾ ಆಗಿಬಿಟ್ಟಿತ್ತು.  ಇಂಡಸ್ಟ್ರಿಗೆ ಹೊಸದಾಗಿ ಬರ್ತಿದ್ದ ಹುಡುಗಿಯರು ಮತ್ತು ಹುಡುಗರು ನನಗೆ ಭಯಪಡುತ್ತಿದ್ದರು. ಮಾಧುರಿ ಕೂಡ ನನ್ನ ಬಗ್ಗೆ ತಿಳಿದುಕೊಂಡಿದ್ದರು. ಈ ಚಿತ್ರದಲ್ಲಿ ನಾನು ರೇ* ಮಾಡುವ ದೃಶ್ಯವಿದೆ. ಆದರೆ, ಈ ದೃಶ್ಯ ಮಾಡುವುದೇ ಇಲ್ಲ ಎಂದು ಮಾಧುರಿ ಸಿಕ್ಕಾಪಟ್ಟೆ ಅಳತೊಡಗಿದರು. ಕೊನೆಗೆ ಎಲ್ಲರೂ ಆಕೆಯನ್ನು ಸಮಾಧಾನಪಡಿಸಿದರು. ನಾನು ಒಳ್ಳೆಯ ಮನುಷ್ಯ ಎಂದು ಆಕೆಗೆ ಮನವರಿಕೆ ಮಾಡಿಕೊಡಲಾಯಿತು. ಇದರ ಹೊರತಾಗಿಯೂ ಆಕೆಗೆ ಈ ದೃಶ್ಯ ಮಾಡಲು ಇಷ್ಟವಿರಲಿಲ್ಲ. ಅಳುತ್ತಲೇ ಇದ್ದರು. ಆದರೂ ಅನಿವಾರ್ಯವಾಗಿ ಹೇಗೋ ಸಮಾಧಾನ ಮಾಡಿ ಈ ದೃಶ್ಯ ಮಾಡಿ ಮುಗಿಸಿದ್ವಿ. ಶೂಟಿಂಗ್​ ಮುಗಿದ ಮೇಲೂ ಆಕೆ ಅಳುತ್ತಿದ್ದರು ಎಂದಿದ್ದಾರೆ.

Latest Videos

ಕಾಣಬಾರದ್ದೆಲ್ಲಾ ಕಂಡೋಯ್ತಮ್ಮಾ, ಈಗೇನ್​ ಡ್ರೆಸ್​ ಸರಿಮಾಡ್ಕೋತ್ಯಾ? ತುಪ್ಪದ ಬೆಡಗಿ ರಾಗಿಣಿ ಟ್ರೋಲ್​- ವಿಡಿಯೋ ವೈರಲ್​

 ಈ ಶೂಟಿಂಗ್​ ಮುಗಿದ ಮೇಲೆ ಅಲ್ಲಿದ್ದವರು  ಮಾಧುರಿಯನ್ನು ಹುರಿದುಂಬಿಸಲು ಚಪ್ಪಾಳೆ ತಟ್ಟಿದರು. ಆದರೂ ಆಕೆ ಅಳುವುದನ್ನು ಮುಂದುವರೆಸಿದ್ದರು.  ನಿರ್ಮಾಪಕರು ಮತ್ತು ಇತರರು ಅವರ ಬಳಿಗೆ ಧಾವಿಸಿ, 'ನೀವು ಚೆನ್ನಾಗಿದ್ದೀರಾ?' ಎಂದು ಕೇಳಿದರು ಎಂದರು. ಅಷ್ಟಕ್ಕೂ, ನಟಿ ಮಾಧುರಿ ದೀಕ್ಷಿತ್ 90 ರ ದಶಕದಲ್ಲಿ ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಮನರಂಜನಾ ಉದ್ಯಮದಲ್ಲಿ ತಮ್ಮ ಬಹುಮುಖ ಅಭಿನಯದಿಂದ, ಹಾಸ್ಯದಿಂದ, ಭಾವುಕ ದೃಶ್ಯಗಳಿಂದ ಹಾಗೂ ಅಷ್ಟೇ ರೊಮ್ಯಾನ್ಸಿಂಗ್​ ಸೀನ್​ಗಳಿಂದ ಕೋಟ್ಯಂತರ ಜನರ ಹೃದಯ ಗೆದ್ದ ನಟಿಯೀಕೆ. ತಮ್ಮ ಸಹ-ನಟರೊಂದಿಗೆ ಕೆಲಸ ಮಾಡುವಾಗ ಕೆಲವೊಂದು ಷರತ್ತು ವಿಧಿಸಿ ಮಾಧುರಿ ನಿಷ್ಠೂರರಾಗಿದ್ದೂ ಇದೆ.  ಆದಾಗ್ಯೂ, ಈಕೆ ಕೆಲವು ಸನ್ನಿವೇಶಗಳನ್ನು ಹೇಗೆ ಎದುರಿಸಬೇಕಾಯಿತು ಮತ್ತು ಅದು ತಮ್ಮನ್ನು  ಹೇಗೆ ಗಾಬರಿಗೊಳಿಸಿತು ಎಂಬ ಬಗ್ಗೆ ನಟಿ ಈ ಹಿಂದೆ ಹೇಳಿದ್ದರು. ಇದೇ ಚಿತ್ರದ ಬಗ್ಗೆ ಹೇಳಿದ್ದ ಅವರು, ರೇ* ಸೀನ್​ ಒಂದರಲ್ಲಿ ತಮ್ಮನ್ನು ಹೇಗೆ ಬಲವಂತಗೊಳಿಸಲಾಯಿತು, ವಿಲನ್​ ತಮ್ಮ ಮೇಲೆ ಅತ್ಯಾಚಾರ ಮಾಡುವ ದೃಶ್ಯದ ಸಂದರ್ಭದಲ್ಲಿ ತಾವು ಅನುಭವಿಸಿದ್ದ ನೋವನ್ನು ನಟಿ ತೋಡಿಕೊಂಡಿದ್ದರು. 
  
  ರಂಜೀತ್ (Ranjeeth) ಮಾಧುರಿಯವರನ್ನು ಈ ಸೀನ್​ನಲ್ಲಿ ನಡುಗಿಯೇಬಿಟ್ಟಿದ್ದರಂತೆ. ರೇಪ್​ ಸೀನ್​ ಬಳಿಕ ಅವರು ಹಿಡಿತವನ್ನು ಬಿಗಿಗೊಳಿಸಿದ್ದ ನಂತರ ನಾನು ಅಕ್ಷರಶಃ ನಲುಗಿ ಹೋಗಿದ್ದೆ ಎಂದಿದ್ದಾರೆ ಮಾಧುರಿ. ಈ ದೃಶ್ಯದ ಸಂದರ್ಭದಲ್ಲಿ ಅವರು ತಮ್ಮ ಹಿಡಿತವನ್ನು ಸಡಿಲಿಸಲು ನಿರಾಕರಿಸಿದ್ದರು. ಎಷ್ಟೇ ಹೇಳಿದರೂ ಬಲವಾಗಿ ಹಿಡಿದುಕೊಂಡಿದ್ದರು. ಇದರಿಂದ ನಾನು ಕೋಪಗೊಂಡಿದ್ದೆ.  ಎಲ್ಲರ ಮುಂದೆ ಜೋರಾಗಿ ಕೂಗಿದೆ. ನನ್ನನ್ನು ಮುಟ್ಟಬೇಡ ಎಂದು ಕಿರುಚಿದೆ ಎಂದು ಆ ದಿನಗಳ ನೆನಪಿಸಿಕೊಂಡಿದ್ದರು.  ಪ್ರೇಮ್ ಪ್ರತಿಜ್ಞಾ ಚಿತ್ರದಲ್ಲಿ ಮಾಧುರಿ, ಮಿಥುನ್ ಚಕ್ರವರ್ತಿ ಮತ್ತು ವಿನೋದ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  

ಸೌತ್​ನಲ್ಲಿ ಛಾನ್ಸ್​ ಬೇಕಿದ್ರೆ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ, ಅವ್ರ ಜೊತೆನೂ... ಅಂದಿನ ಘಟನೆ ಹೇಳಿದ ನಟಿ
 

vuukle one pixel image
click me!