
ಗುಲಾಬಿ ಕೊಟ್ಟು ಕರ್ನಾಟಕ ಬಂದ್ಗೆ ವಿರೋಧ!
ಕರ್ನಾಟಕ ಬಂದ್ ವಿರೋಧಿಸುವಂತೆ ಮನವಿ| ಬಂದ್ ವಿರೋಧಿಸುವಂತೆ ಕೋರಿ ಗುಲಾಬಿ ಹಂಚಿದ ಸರ್ವ ಕರ್ನಾಟಕ ಸಂಘಟನೆ ಕಾರ್ಯಕರ್ತರು
ಬೆಂಗಳೂರು[ಫೆ.13]: ಕರ್ನಾಟಕ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿದ್ದರೆ, ಇನ್ನು ಕೆಲವು ವಿರೋಧ ವ್ಯಕ್ತಪಡಿಸಿದ್ದವು. ಹೀಗಿರುವಾಗ ಕರ್ನಾಟಕ ಸರ್ವ ಸಂಘಟನೆ ಬಹಳ ವಿಭಿನ್ನವಾಗಿ ಬಂದ್ಗೆ ವಿರೋಧ ವ್ಯಕ್ತಪಡಿಸಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕರವೇ ಪ್ರವೀಣ್ ಶೆಟ್ಟಿಗೆ ಗೃಹಬಂಧನ; ವಾಕಿಂಗ್ಗೂ ಕೊಟ್ಟಿಲ್ಲ ಪರ್ಮಿಶನ್
ಬೆಂಗಳೂರಿನ ಕೆ. ಆರ್. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಹಾಗೂ ಜನರಿಗೆ ಗುಲಾಬಿ ನೀಡಿರುವ ಕಾರ್ಯಕರ್ತರು ಕರ್ನಾಟಕ ಬಂದ್ ನಡೆಸದಂತೆ ಮನವಿ ಮಾಡಿಕೊಂಡಿದ್ದಾರೆ.
ಇಷ್ಟೇ ಅಲ್ಲದೇ ಬೆಂಗಳೂರಿನ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರಿಗೂ ಗುಲಾಬಿ ಹೂವು ನೀಡಿ ಈ ಬಂದ್ಗೆ ವಿರೋಧ ವ್ಯಕ್ತಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.