Asianet Suvarna News Asianet Suvarna News

ಸುದ್ದಿ ಮಾಡಿ ಬೆಳಗಾಗುವುದರೊಳಗೆ ಮನೆ ಬಾಗಿಲಿಗೆ ಔಷಧಿ: ಕುಟುಂಬದ ಅಂತರಾಳದ ಮಾತು ಹೀಗಿತ್ತು..!

ಕಿಡ್ನಿ ಕಸಿಮಾಡಿಕೊಂಡಿದ್ದ ಮಹಿಳೆ ಔಷಧಿಗಾಗಿ ಪರದಾಡುತ್ತಿದ್ದ ಹಿನ್ನಲೆಯಲ್ಲಿ ಸೂಕ್ತ ಔಷಧಿ ಆಕೆಯ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ, (ಏ.11): ಕಿಡ್ನಿ ಕಸಿಮಾಡಿಕೊಂಡಿದ್ದ ಮಹಿಳೆ ಔಷಧಿಗಾಗಿ ಪರದಾಡುತ್ತಿದ್ದ ಹಿನ್ನಲೆಯಲ್ಲಿ ಸೂಕ್ತ ಔಷಧಿ ಆಕೆಯ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾನವೀಯತೆ ಮೆರೆದಿದ್ದಾರೆ.

ಕೊರೋನಾ ಸೇವೆಯಲ್ಲಿರುವ ತಾಯಿಗೆ ಸಿಎಂ ಕರೆ; ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಂತ್ವನ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಭಾವಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ವೇಳೆ ಪತಿ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಆದ್ರೆ, ಲಾಕ್‌ಡೌನ್‌ನಿಂದ ಔಷಧಿಗಾಗಿ ಪರದಾಡುತ್ತಿದ್ದರು. ಈ ಬಗ್ಗೆ ಸುವರ್ಣ ನ್ಯೂಸ್ ಸುದ್ದಿ ಪ್ರಕಟಿಸದಲ್ಲದೇ ಸಿಎಂ ಮಾಧ್ಯಮ ಸಲಹೆಗಾರರ ಮುಖಾಂತರ ಯಡಿಯೂರಪ್ಪನವರ ಗಮನಕ್ಕೆ ತರಲಾಗಿತ್ತು. 

ಇದರ ಬೆನ್ನಲ್ಲೇ ಸಿಎಂ  ಡಿಸಿ ಮೂಲಕ ಬೆಳಗಾಗುವುದರೊಳಗೆ ಆ ಮನೆಗೆ ಔ‍ಷಧಿ ತಲುಪಿಸಿದ್ದಾರೆ. ಇನ್ನು ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕುಟುಂಬಸ್ಥರು, ಸುವರ್ಣ ನ್ಯೂಸ್‌ ಜತೆ ಪ್ರತಿಕ್ರಿಯಿಸಿದ್ದು ಹೀಗೆ 

Video Top Stories