Asianet Suvarna News Asianet Suvarna News

ಚಾರ್ಮಾಡಿ ಘಾಟಿಯಲ್ಲಿ ವಾಹನಗಳಿಲ್ಲ, ಒಂಟಿ ಸಲಗ ಸಂಚಾರ

ಮಂಗಳೂರು- ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿಯ ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಮಧ್ಯರಾತ್ರಿಒಂಟಿ ಸಲಗ ಕಾಣಿಸಿಕೊಂಡಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದ್ದು, ಕಾಡು ಪ್ರಾಣಿಗಳು ರಸ್ತೆಗಿಳಿಯುತ್ತಿರುವ ಘಟನೆ ನಡೆಯುತ್ತಲೇ ಇದೆ.

 

Wild elephant found in chamarmadi ghat
Author
Bangalore, First Published Apr 9, 2020, 7:08 AM IST

ಮಂಳೂರು(ಏ.09): ಮಂಗಳೂರು- ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿಯ ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಮಧ್ಯರಾತ್ರಿಒಂಟಿ ಸಲಗ ಕಾಣಿಸಿಕೊಂಡಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದ್ದು, ಕಾಡು ಪ್ರಾಣಿಗಳು ರಸ್ತೆಗಿಳಿಯುತ್ತಿರುವ ಘಟನೆ ನಡೆಯುತ್ತಲೇ ಇದೆ.

ಚಾರ್ಮಾಡಿ ಘಾಟ್‌ ರಸ್ತೆಯ 8ನೇ ತಿರುವಿನಲ್ಲಿ ಮಧ್ಯರಾತ್ರಿ 12 ಗಂಟೆ ಬಳಿಕ ರಸ್ತೆ ಬದಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಇದೇ ರಸ್ತೆಯಾಗಿ ಸಂಚರಿಸುತ್ತಿದ್ದ ವಾಹನ ಸವಾರರೊಬ್ಬರು ತಮ್ಮ ಮೊಬೈಲ್‌ನಲ್ಲಿ ಆನೆಯನ್ನು ಸೆರೆ ಹಿಡಿದು, ಸಂಬಂಧಪಟ್ಟಇಲಾಖೆಗೆ ಮಾಹಿತಿ ನೀಡಿದ್ದರು.

ಜಮಾತ್‌ನಲ್ಲಿ ಕರ್ನಾಟಕದ 1300 ಜನರಿದ್ದರು, 758 ಜನರ ಗುರ್ತಿಸಲಾಗಿದ್ದು ಉಳಿದವರೆಲ್ಲಿ?

ಬಣಕಲ್‌ ಸಬ್‌ಇನ್ಸ್‌ಪೆಕ್ಟರ್‌ ಶ್ರೀನಾಥ್‌ ರೆಡ್ಡಿ ಅವರು ಮಾಹಿತಿ ಮೇರೆಗೆ ಬೆಳ್ತಂಗಡಿ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳಾದ ಉಪ ವಲಯಅರಣ್ಯ ಅಧಿಕಾರಿಗಳಾದ ಉಲ್ಲಾಸ್‌, ವಿನೋದ್‌, ಅರಣ್ಯ ರಕ್ಷಕರಾದ ರಾಘವೇಂದ್ರ, ಪ್ರಸಾದ್‌, ಮೋಹಿತ್‌, ಸದಾಶಿವ ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟು ಆನೆಯನ್ನು ಕಾಡಿಗಟ್ಟಿದ್ದಾರೆ.

Follow Us:
Download App:
  • android
  • ios