ವಿಮಾನ ನಿಲ್ದಾಣದ ಒಳಗೆ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಬೆಂಬಲಿಗರನ್ನ ಬಿಡದ ಪೊಲೀಸರು| ಪೊಲೀಸರ ಜೊತೆ ವಾಗ್ದಾದಕ್ಕಿಳಿದ ಚಿಂಚನಸೂರ| ಸಿಎಂ ಸ್ವಾಗತ ಕೋರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಬಾಬುಬಾರ್‌ ಚಿಂಚನಸೂರ ಬೆಂಬಲಿಗರು| 

ಕಲಬುರಗಿ(ಫೆ.05):  ನಾನು ಐದು ಸಲ ಗೆದ್ದು ಶಾಸಕನಾಗಿದ್ದವನು ನನ್ನನ್ನೇ ಒಳಗೆ ಬಿಡಲ್ವಾ, 25 ವರ್ಷ ರಾಜಕೀಯದಲ್ಲಿದ್ದೇನೆ ಎಂದು ವಿಮಾನ ನಿಲ್ದಾಣದ ಒಳಗಡೆ ಬಿಡದಿರುವುದಕ್ಕೆ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ನಗರದಲ್ಲಿ ಇಂದು(ಬುಧವಾರ) ನಡೆದಿದೆ. 

Add Asianetnews Kannada as a Preferred SourcegooglePreferred

"

ವಿಮಾನ ನಿಲ್ದಾಣದ ಪೊಲೀಸರು ಬಾಬುಬಾರ್ ಚಿಂಚನೂರ ಅವರ ಬೆಂಬಲಿಗರನ್ನು ಬಿಡದಕ್ಕೆ ಮತ್ತು ಹೂ ಗುಚ್ಛ ಒಳಗಡೆ ತೆಗೆದುಕೊಂಡು ಹೋಗಲು ಅನುಮತಿ ನಿರಾಕರಿಸಿದ್ದಾರೆ. ಈ ವೇಳೆ ಬಾಬುರಾವ ಚಿಂಚನಸೂರ ಅವರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಮಧ್ಯ ಪ್ರವೇಶಿದಿದ ಕಮೀಷನರ್ ನಾಗರಾಜ್ ಅವರು ಪರಿಸ್ಥಿತಿಯನ್ನ ತಿಳಿಸಿಗೊಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸರು ಬಾಬುಬಾರ್ ಚಿಂಚನೂರ ಅವರ ಬೆಂಬಲಿಗರನ್ನು ಬಿಡದಕ್ಕೆ ಮತ್ತು ಹೂ ಗುಚ್ಛ ಒಳಗಡೆ ತೆಗೆದುಕೊಂಡು ಹೋಗಲು ಅನುಮತಿ ನಿರಾಕರಿಸಿದ್ದಾರೆ. ಈ ವೇಳೆ ಬಾಬುರಾವ ಚಿಂಚನಸೂರ ಅವರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಮಧ್ಯ ಪ್ರವೇಶಿದಿದ ಕಮೀಷನರ್ ನಾಗರಾಜ್ ಅವರು ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ. 

ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಸ್ವಾಗತಕೋರಲು ಏರ್ಪೋರ್ಟ್ ಒಳಗಡೆ ಬಾಬುರಾವ್ ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ.