ಪರಮೇಶ್ವರ ಪಿ.ಎ.ರಮೇಶ ಆತ್ಮಹತ್ಯೆ  ಪ್ರಕರಣ ತಿರುಗಿಸುವ ಹುನ್ನಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸರಿಯಾದ ತನಿಖೆಯಾಗಲಿ ನಿಜವಾದ ಅಂಶಗಳು ಹೊರಗೆ ಬರಲಿದೆ ಎಂದಿದ್ದಾರೆ.

ಹುಬ್ಬಳ್ಳಿ(ಅ.13): ಪರಮೇಶ್ವರ ಪಿ.ಎ.ರಮೇಶ ಆತ್ಮಹತ್ಯೆ ಪ್ರಕರಣ ತಿರುಗಿಸುವ ಹುನ್ನಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸರಿಯಾದ ತನಿಖೆಯಾಗಲಿ ನಿಜವಾದ ಅಂಶಗಳು ಹೊರಗೆ ಬರಲಿದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿ.ಪರಮೇಶ್ವರ ಅವರ‌ ಮೇಲೆ ನಡೆದ ಐಟಿ ರೆಡ್ ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷದವರು ರಾಜಕೀಯಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಅವರೇ ಐ.ಟಿ ರೇಡ್‌ನಲ್ಲಿ ಯಾವುದೇ ರಾಜಕೀಯ ಇಲ್ಲ. ಕಾನೂನು ಬದ್ದವಾಗಿ ಎದುರಿಸುತ್ತೆನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೊಸರಲ್ಲಿ ಕಲ್ಲು ಹುಡುಕೋ ಪ್ರಯತ್ನ:

ಆದರೆ ಕಾಂಗ್ರೆಸ್ ಮುಖಂಡರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ.‌ ಪ್ರಾಮಾಣಿಕವಾಗಿ ಐ.ಟಿ ಕೆಲಸ ಮಾಡುತ್ತಿದೆ ಪ್ರಶಂಸೆ ಮಾಡುವುದನ್ನು ಬಿಟ್ಟು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ತಪ್ಪಿಲ್ಲ ಎಂದರೆ ಐ.ಟಿ. ತನಿಖೆ ಎದುರಿಸಬೇಕು ಎಂದಿದ್ದಾರೆ.

‘ರಮೇಶ್ ಸಾವು ಸಹಜವಲ್ಲ, ಆತನನ್ನು ಮುಗಿಸಲಾಗಿದೆ’

ಪರಮೇಶ್ವರ ಪಿ.ಎ.ರಮೇಶ ಆತ್ಮಹತ್ಯೆ ಪ್ರಕರಣವನ್ನು ತಿರುಗಿಸುವ ಹುನ್ನಾರ ನಡೆಯುತ್ತಿದೆ. ಸರಿಯಾದ ತನಿಖೆಯಾಗಲಿ. ನಿಜವಾದ ಅಂಶಗಳು ಹೊರಗೆ ಬರಲಿದೆ ಎಂದರು. ಆತ್ಮಹತ್ಯೆ ಗೂ ಐಟಿಗೂ ಸಂಬಂಧಿವಿಲ್ಲ, ಆದರೂ ಕೂಡ ತನಿಖೆ ಆಗಲಿ ಎಂದಿದ್ದಾರೆ.

ಕಿಮ್ಸ್‌ಗೆ SDP ಯಂತ್ರ ತಂದು 9 ವರ್ಷವಾದ್ರೂ ಒಮ್ಮೆಯೂ ಬಳಕೆಯಾಗಿಲ್ಲ..!