Asianet Suvarna News Asianet Suvarna News

ಹೊರನಾಡು- ಕಳಸ ರಸ್ತೆ ಸಂಚಾರಕ್ಕೆ ಮುಕ್ತ; ತಗ್ಗಿದೆ ಹೆಬ್ಬಾಳೆ ಸೇತುವೆ ನೀರು

ಕಳೆದೆರಡು ದಿನಗಳಿಂದ ಚಿಕ್ಕಮಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿದ್ದ ಮಳೆ ಇಂದು ಕೊಂಚ ಬಿಡುವು ಕೊಟ್ಟಿದೆ.  ಭಾರೀ ಮಳೆಯಿಂದಾಗಿ ಕಳಸ- ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿತ್ತು. ಸಂಚಾರ ಬಂದ್ ಆಗಿತ್ತು. ಇಂದು ಮಳೆ ಕೊಂಚ ತಗ್ಗಿದ್ದರಿಂದ ಹೆಬ್ಬಾಳೆ ಸೇತುವೆ ಈಗ ಸಂಚಾರಕ್ಕೆ ಮುಕ್ತವಾಗಿದೆ. 

ಬೆಂಗಳೂರು (ಸೆ. 21): ಕಳೆದೆರಡು ದಿನಗಳಿಂದ ಚಿಕ್ಕಮಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿದ್ದ ಮಳೆ ಇಂದು ಕೊಂಚ ಬಿಡುವು ಕೊಟ್ಟಿದೆ.  ಭಾರೀ ಮಳೆಯಿಂದಾಗಿ ಕಳಸ- ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿತ್ತು. ಸಂಚಾರ ಬಂದ್ ಆಗಿತ್ತು. ಇಂದು ಮಳೆ ಕೊಂಚ ತಗ್ಗಿದ್ದರಿಂದ ಹೆಬ್ಬಾಳೆ ಸೇತುವೆ ಈಗ ಸಂಚಾರಕ್ಕೆ ಮುಕ್ತವಾಗಿದೆ. 

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ; ಹಂಪಿ ಸ್ಮಾರಕಗಳು ಮುಳುಗಡೆ

ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದ್ದ ಭದ್ರೆ ಇಂದು ಸ್ವಲ್ಪ ಶಾಂತವಾಗಿದ್ದಾಳೆ. ನೀರಿನ ಹರಿವಿನ ಪ್ರಮಾಣವೂ ತಗ್ಗಿದೆ. ಹಾಗಂತ ವಾಹನ ಸವಾರರು ಕೊಂಚ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗಿದೆ.