ಸಿದ್ದರಾಮಯ್ಯಗೆ ಮತ್ತೆ ಕುಕ್ಕಿದ 'ಹಳ್ಳಿ ಹಕ್ಕಿ'

Jun 12, 2019, 8:26 PM IST

ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮರುಪರಿಶೀಲನೆ ಮಾಡ್ತೇನೆ ಎಂದಿರುವ ಸರ್ಕಾರದ ಕ್ರಮವನ್ನು ಬಿಎಸ್ ಯಡಿಯೂರಪ್ಪ ಸ್ವಾಗತಿಸಿದ್ದಾರೆ.   ಮತ್ತೊಂದೆಡೆ ಜನರ ಸಂಶಯ ಬಗೆಹರಿಸಿ ಮುಂದಿನ ತಿರ್ಮಾನ ಮಾಡಲಾಗುವುದೆಂದು ಸಚಿವ ಜಾರ್ಜ್ ತಿಳಿಸಿದ್ದಾರೆ. ವಿಶೇಷ ಅಂದ್ರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರು ಹೆಚ್ ಕೆ ಪಾಟೀಲ್ ಗೆ ಬೆಂಬಲವಾಗಿ ನಿಂತಿದ್ದಾರೆ. ಮಾತ್ರವಲ್ಲದೇ ಜಿಂದಾಲ್ ನೆಪವಾಗಿ ತನ್ನ ರಾಜಕೀಯ ವೈರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಚಾಟಿ ಬೀಸಿದ್ದಾರೆ. ಹಾಗಾದ್ರೆ ಸಿದ್ದು ವಿರುದ್ಧ ವಿಶ್ವನಾಥ್ ಹೇಗೆಲ್ಲ ಗುಡುಗಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.