ವಿಸ್ತರಣೆ ಬೆನ್ನಲ್ಲೇ ಶುರುವಾಯ್ತು ಆಟ; ಚುರುಕಾಯ್ತು ಅತೃಪ್ತರ ಕೂಟ

Jun 15, 2019, 6:19 PM IST

ಬೆಂಗಳೂರು (ಜೂ.15): ಬಹಳಷ್ಟು ಲೆಕ್ಕಾಚಾರಗಳ ಬಳಿಕ ಮೈತ್ರಿ ನಾಯಕರು ಇಬ್ಬರು ಪಕ್ಷೇತರರನ್ನು ಸಚಿವ ಸಂಪುಟಕ್ಕೆ ಸೇರಿಸಿದ್ದಾಯ್ತು. ಇನ್ನೊಂದು ಕಡೆ, ಹೈಕಮಾಂಡ್ ನಡೆಯಿಂದ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಇತರ ಶಾಸಕರ ಕಣ್ಣು ಕೆಂಪಾಗಿದೆ.   

ಅತೃಪ್ತರ ಬಳಗದಲ್ಲಿ ಕೆಲದಿನಗಳಿಂದ ಬೂದಿ ಮುಚ್ಚಿರುವ ಕೆಂಡದಂತಿದ್ದ ಅಸಮಾಧಾನವು ಮತ್ತೆ ಹೊಗೆಯಾಡಲಾರಂಭಿಸಿದೆ. ಸಚಿವ ಸಂಪುಟ ವಿಸ್ತರಣೆ ಬಳಿಕ, ಅತೃಪ್ತ ಶಾಸಕರೊಬ್ಬರು ಬಂಡಾಯದ ನೇತೃತ್ವವನ್ನು ವಹಿಸಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಿವಾಕ್ಕೆ ತೆರಳಿ ಭೇಟಿಯಾಗಿರೋದು ಕುತೂಹಲ ಹುಟ್ಟಿಸಿದೆ. 

ತಮಗೆ ಈ ಬಾರಿಯೂ ಸಚಿವ ಸಂಪುಟ ವಿಸ್ತರಣೆಯಲ್ಲಿ ಅನ್ಯಾಯವಾಗಿದೆ ಎಂದು, ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್  ಮತ್ತು ಹಿರೆಕೆರೂರು ಶಾಸಕ ಬಿ.ಸಿ. ಪಾಟೀಲ್  ಈಗಾಗಲೇ ತಮ್ಮ ಆಕ್ರೋಶವನ್ನು ಬಹಿರಂಗವಾಗಿ ಹೊರ ಹಾಕಿದ್ದಾರೆ.