
ವಿಶಾಖಪಟ್ಟಣಂ (ಮೇ.2): ಆಂಧ್ರಪ್ರದೇಶದ ಪೀಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿಯಾಗಿ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸ್ಪರ್ಧೆ ಮಾಡುತ್ತಿದ್ದು, ಇವರಿಗೆ ವಿರುದ್ಧವಾಗಿ ಭಾರತೀಯ ಚೈತನ್ಯ ಯುವಜನ ಪಕ್ಷದಿಂದ ಬಿಗ್ಬಾಸ್ ಸ್ಪರ್ಧಿ ಮಂಗಳಮುಖಿ ತಮನ್ನಾ ಸಿಂಹಾದ್ರಿ ಕಣಕ್ಕಿಳಿದಿದ್ದಾರೆ. ಎಸ್ಆರ್ ಕಾಂಗ್ರೆಸ್ ಪಕ್ಷದಿಂದ ವಂಗಾ ಗೀತಾ ಅವರು ಸ್ಪರ್ಧೆ ಮಾಡಲಿದ್ದಾರೆ.
ಈ ಬಗ್ಗೆ ಮಾತನಾಡಿದ ತಮನ್ನಾ ‘ಬ್ರಾಹ್ಮಣ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ವೇದ ಶಾಲೆಯನ್ನು ಸ್ಥಾಪಿಸುವ ಜೊತೆಗೆ ಪೀಠಾಪುರಂ ಪಟ್ಟಣ(Peetapuram Assembly constituency)ವನ್ನು ರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವರ್ತಿಸುವ ಗುರಿಯಿಂದ ನಾನು ಇಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಯಾರಿಗೂ ಹೆದರಿಕೊಂಡಿಲ್ಲ ರಾಯ್ಬರೇಲಿ, ಅಮೇಠಿಗೆ ಶೀಘ್ರ ಅಭ್ಯರ್ಥಿ ಪ್ರಕಟ: ಕಾಂಗ್ರೆಸ್
2019ರ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಮಂಗಳಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಟಿಡಿಪಿ ಅಭ್ಯರ್ಥಿ ನಾರ ಲೋಕೇಶ್ ಅವರ ವಿರುದ್ಧ ತಮನ್ನಾ ಸ್ಪರ್ಧಿಸಿ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದ ಮೊದಲ ಮಂಗಳಮುಖಿ ಎಂಬ ಖ್ಯಾತಿ ಪಡೆದಿದ್ದರು.
ಭಾರತೀಯ ಚೈತನ್ಯ ಯುವಜನ ಪಕ್ಷದ ನಾಮನಿರ್ದೇಶಿತರಾಗಿ, ತಮನ್ನಾ ಅವರ ಉಮೇದುವಾರಿಕೆಯು ಭಾರೀ ಸಂಚಲನ ಮೂಡಿಸಿದೆ. ಎನ್ಡಿಎಯ ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಮತ್ತು ಪಿಠಾಪುರದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಂಗ ಗೀತಾ ಅವರಂತಹ ಅಸಾಧಾರಣ ಎದುರಾಳಿಗಳಿಗೆ ಸವಾಲು ಹಾಕಿ ಸ್ಪರ್ಧೆಗಿಳಿದಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಕೋಟ್ಯಂತರ ರೂಪಾಯಿ ಏಕೆ ಬೇಕು?, ತಿರುಗಾಡಲು ಹೆಲಿಕಾಪ್ಟರ್ಗಳು ಬೇಕಾಗಿಲ್ಲ, ನಾನು ಹಣ ಹಂಚಿ ಮತಗಳನ್ನು ಖರೀದಿಸುವುದಿಲ್ಲ, ನನ್ನ ವಿಧಾನ ತುಂಬಾ ಸರಳವಾಗಿದೆ, ನಾನು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ. ಜನರು ನನ್ನನ್ನು ಗೌರವಿಸುತ್ತಿದ್ದಾರೆ ಎನ್ನುತ್ತಾರೆ ತಮನ್ನಾ ಸಿಂಹಾದ್ರಿ .
ಆಂಧ್ರದಲ್ಲಿ ಎನ್ಡಿಎ ಭರ್ಜರಿ ಉಚಿತ ಪ್ರಣಾಳಿಕೆ ಘೋಷಣೆ; ಬಡವರಿಗೆ ಹೊನ್ನು ಮಣ್ಣು !
ಇನ್ನು ಅವರ ಚುನಾವಣಾ ಅಫಿಡವಿಟ್ ಪ್ರಕಾರ, ಚಿನ್ನಾಭರಣಗಳು ಸೇರಿದಂತೆ 7.50 ಲಕ್ಷ ಚರ ಆಸ್ತಿಯನ್ನು ಹೊಂದಿದ್ದಾರೆ. ಆಕೆಯ ಇನ್ಸ್ಟಾಗ್ರಾಮ್ ಪುಟವು 40,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ ಮತ್ತು ಅವರು ಉತ್ತಮ ಸಂಖ್ಯೆಯ ಅಭಿಮಾನಿಗಳೊಂದಿಗೆ ಫೇಸ್ಬುಕ್ ಮತ್ತು ಯುಟ್ಯೂಬ್ ಖಾತೆಗಳನ್ನು ಸಹ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.