
ಚೆನ್ನೈ: ಹಾಲಿ ಚಾಂಪಿಯನ್, ಈ ಬಾರಿಯೂ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದೇ ಟೂರ್ನಿಗೆ ಕಾಲಿರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈಗ ಅಸ್ಥಿರ ಆಟವಾಡುತ್ತಿದ್ದು, ಸೋಲುಗಳೂ ತಂಡವನ್ನು ಬೆಂಬಿಡದೆ ಕಾಡುತ್ತಿದೆ.
ತನ್ನ ಭದ್ರಕೋಟೆ ಎನಿಸಿಕೊಂಡಿರುವ ಚೆಪಾಕ್ ಕ್ರೀಡಾಂಗಣದಲ್ಲೇ ಚೆನ್ನೈಗೆ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್ ಸೋಲು ಎದುರಾಯಿತು. ಆಡಿರುವ 10 ಪಂದ್ಯಗಳಲ್ಲಿ 5ನೇ ಸೋಲು ಕಂಡ ಚೆನ್ನೈ ಪ್ಲೇ-ಆಫ್ ಹಾದಿಯನ್ನು ಕಠಿಣಗೊಳಿಸಿದರೆ, ಪಂಜಾಬ್ 10ರಲ್ಲಿ 4ನೇ ಗೆಲುವು ಸಾಧಿಸಿ ಪ್ಲೇ-ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಮತ್ತೆ ಟಾಸ್ ಸೋತ ಚೆನ್ನೈ ಬ್ಯಾಟಿಂಗ್ಗೆ ಇಳಿಸಲ್ಪಟ್ಟಿತು. ಋತುರಾಜ್ರ ಏಕಾಂಗಿ ಹೋರಾಟದ ಹೊರತಾಗಿಯೂ ತಂಡ 7 ವಿಕೆಟ್ಗೆ 162 ರನ್ ಮಾತ್ರ ಕಲೆಹಾಕಿತು. ಕಳೆದ ಪಂದ್ಯದಲ್ಲಿ ಕೋಲ್ಕತಾ 262 ರನ್ ಬೆನ್ನತ್ತಿ ಗೆದ್ದಿದ್ದ ಪಂಜಾಬ್ಗೆ 163 ರನ್ ಸುಲಭ ತುತ್ತಾಯಿತು. ತಂಡ 000 ಓವರಲ್ಲಿ 00 ವಿಕೆಟ್ ನಷ್ಟದಲ್ಲಿ ಜಯಭೇರಿ ಬಾರಿಸಿತು.
IPL 2024: ರುತುರಾಜ್ ಶೈನ್, ಸವಾಲಿನ ಮೊತ್ತ ಪೇರಿಸಿದ ಚೆನ್ನೈ ಸೂಪರ್ ಕಿಂಗ್ಸ್!
ಪ್ರಭ್ಸಿಮ್ರನ್(13) ಬೇಗನೇ ಪೆವಿಲಿಯನ್ಗೆ ಮರಳಿದರೂ, ರೀಲಿ ರೋಸ್ಸೌ ಹಾಗೂ ಜಾನಿ ಬೇರ್ಸ್ಟೋವ್ ಚೆನ್ನೈ ಬೌಲರ್ಗಳನ್ನು ಚೆಂಡಾಡಿದರು. ಈ ಜೋಡಿ 2ನೇ ವಿಕೆಟ್ಗೆ 64 ರನ್ ಸೇರಿಸಿತು. ಬೇರ್ಸ್ಟೋಬ್ 46, ರೋಸ್ಸೌ 43 ರನ್ ಗಳಿಸಿ ಔಟಾದ ಬಳಿಕ, ಶಶಾಂಕ್(26) ಹಾಗೂ ಸ್ಯಾಮ್ ಕರ್ರನ್(25) ತಂಡವನ್ನು ಗೆಲುವಿನ ದಡ ಸೇರಿಸಿತು.
ಋತು ಆಸರೆ: ಪವರ್-ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 55 ರನ್ ಗಳಿಸಿದ್ದ ಚೆನ್ನೈ ಇದ್ದಕ್ಕಿದ್ದಂತೆ ಕುಸಿಯಿತು. 7ರಿಂದ 15 ಓವರ್ ತನಕ ಒಂದೂ ಬೌಂಡರಿ ಬಾರಿಸದ ತಂಡ ಈ 9 ಓವರಲ್ಲಿ ಕೇವಲ 47 ರನ್ ಗಳಿಸಿ, 3 ವಿಕೆಟ್ ಕೂಡಾ ಕಳೆದುಕೊಂಡಿತು. ಆದರೆ ಟೂರ್ನಿಯುದ್ದಕ್ಕೂ ಚೆನ್ನೈನ ಕೈ ಹಿಡಿದಿದ್ದ ನಾಯಕ ಋತುರಾಜ್(48 ಎಸೆತದಲ್ಲಿ 52) ಈ ಪಂದ್ಯದಲ್ಲೂ ತಂಡಕ್ಕೆ ಆಸರೆಯಾದರು. ಉಳಿದಂತೆ ರಹಾನೆ 29, ಸಮೀರ್ ರಿಜ್ವಿ 21 ರನ್ ಕೊಡುಗೆ ನೀಡಿದರು.
ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯದ ನತದೃಷ್ಟ ಕ್ರಿಕೆಟಿಗರಿವರು..!
ಸ್ಕೋರ್: ಚೆನ್ನೈ 20 ಓವರಲ್ಲಿ 162/7 (ಋತುರಾಜ್ 62, ರಾಹುಲ್ ಚಹರ್ 2-16, ಬ್ರಾರ್ 2-17), ಪಂಜಾಬ್ 17.5 ಓವರಲ್ಲಿ 163 (ಬೇರ್ಸ್ಟೋವ್ 46, ರೋಸ್ಸೌ 43, ದುಬೆ 1-14)
10ರಲ್ಲಿ 9 ಪಂದ್ಯದಲ್ಲಿ ಟಾಸ್ ಸೋತ ಋತು!
ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್ ಈ ಬಾರಿ 10 ಪಂದ್ಯಗಳನ್ನಾಡಿದ್ದು, ಈ ಪೈಕಿ 9ರಲ್ಲಿ ಟಾಸ್ ಸೋತಿದ್ದಾರೆ. ಅವರು ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಮಾತ್ರ ಟಾಸ್ ಗೆದ್ದಿದ್ದರು.
66 ಸಿಕ್ಸರ್: ಧೋನಿ ಐಪಿಎಲ್ನ 20ನೇ ಓವರ್ನಲ್ಲಿ 66 ಸಿಕ್ಸರ್ ಸಿಡಿಸಿದ್ದಾರೆ. ಕೀರನ್ ಪೊಲ್ಲಾರ್ಡ್ 33 ಸಿಕ್ಸರ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ಗೆ ಆಯ್ಕೆಯಾದ ದುಬೆ ಬೌಲಿಂಗ್ ಆರಂಭ!
ಟಿ20 ವಿಶ್ವಕಪ್ನ ಭಾರತ ತಂಡಕ್ಕೆ ಆಯ್ಕೆಯಾದ ಶಿವಂ ದುಬೆ ಈ ಬಾರಿ ಐಪಿಎಲ್ನಲ್ಲಿ ಮೊದಲ ಬಾರಿ ಬೌಲಿಂಗ್ ಮಾಡಿದರು. ಪಂಜಾಬ್ ವಿರುದ್ಧ ಅವರು 1 ಓವರ್ ಬೌಲ್ ಮಾಡಿ 14 ರನ್ಗೆ 1 ವಿಕೆಟ್ ಪಡೆದರು. ಆಲ್ರೌಂಡರ್ ಆಗಿದ್ದರೂ ಈ ಬಾರಿ ಐಪಿಎಲ್ನ ಮೊದಲ 9 ಪಂದ್ಯಗಳಲ್ಲಿ ದುಬೆಗೆ ಬೌಲಿಂಗ್ ಅವಕಾಶ ಸಿಕ್ಕಿರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.