Nov 1, 2019, 10:19 PM IST
ಮಂಡ್ಯ[ನ. 01] ರಾಜ್ಯ ಸರ್ಕಾರ ಪಠ್ಯದಿಂದ ಟಿಪ್ಪು ಸುಲ್ತಾನ್ ಅಧ್ಯಾಯ ಕೈಬಿಡುವ ಆಲೋಚನೆಯಲ್ಲಿ ಇರುವಾಗ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇತಿಹಾಸ ಎಷ್ಟು ಸರಿ? ಎಷ್ಟು ಸರಿಯಿಲ್ಲ ಎಂಬುದು ಯಾರಿಗೂ ಶೇಕಡ ನೂರಕ್ಕೆ ನೂರರಷ್ಟು ಗೊತ್ತಿರುವುದಿಲ್ಲ. ಈ ರೀತಿಯ ನಿರ್ಧಾರ ಮಾಡುವಾಗ ಎಲ್ಲರ ಜತೆ ಚರ್ಚಿಸಿ ತೀರ್ಮಾನ ಮಾಡಬೇಕು. ಏಕಪಕ್ಷೀಯವಾಗಿ ನಿರ್ಧಾರ ಮಾಡುವುದು ತಪ್ಪಾಗುತ್ತದೆ ಎಂದು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.