Jan 5, 2022, 2:50 PM IST
ಬೆಂಗಳೂರು (ಜ. 05): ಮೇಕೆದಾಟು ಪಾದಯಾತ್ರೆ (Mekedatu Padayatra) ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ನೀರಿಗಾಗಿ ನಾವು ನಡೆಯುತ್ತೇವೆ. ಇದು ನಿಲ್ಲುವ ಪ್ರಶ್ನೆಯೇ ಇಲ್ಲ. ನಮ್ಮ ಮೇಲಿನ ದ್ವೇಷಕ್ಕಾಗಿ ವ್ಯಾಪಾರಿಗಳಿಗೆ, ವರ್ತಕರಿಗೆ, ಜನಸಾಮಾನ್ಯರಿಗೆ ಸರ್ಕಾರ ತೊಂದರೆ ಕೊಡುತ್ತಿದೆ. ಸರ್ಕಾರ ಜಾರಿಗೆ ತಂದಿರುವುದು ಕೋವಿಡ್ ಕರ್ಫ್ಯೂ ಅಲ್ಲ (Covid Curfew) ಇದು ಬಿಜೆಪಿ ಲಾಕ್ಡೌನ್ (Lockdown) ಯಾವ ಟಫ್ರೂಲ್ಸ್ ಇಲ್ಲ ಇಲ್ಲಿ' ಎಂದು ಡಿಕೆಶಿ (DK shivakumar) ವಾಗ್ದಾಳಿ ನಡೆಸಿದ್ದಾರೆ.
'ಸರ್ಕಾರ ರ್ಯಾಲಿ ಮಾಡಬೇಡಿ, ಪ್ರತಿಭಟನೆ ಮಾಡಬೇಡಿ ಎಂದಿದೆ. ನಾವು ರ್ಯಾಲಿ ಮಾಡುವುದಿಲ್ಲ. ನೀರಿಗಾಗಿ ನಡೆಯುತ್ತೇವೆ. ರಾಜ್ಯದ ಜನರ ಹಿತಕ್ಕಾಗಿ, ಬೆಂಗಳೂರಿನ ನಾಗರೀಕರಿಗೆ ಉತ್ತಮ ನೀರು ಸಿಗಲಿ' ಎಂದು ನಾವು ಪ್ರಯತ್ನಿಸುತ್ತಿದ್ದೇವೆ.