ಅ.15 ರಿಂದ ಥಿಯೇಟರ್‌ ಶುರು; ಧೂಳು ಹಿಡಿದಿರುವ ಸೀಟು, ಸ್ಕ್ರೀನ್ ಸರಿ ಮಾಡಲು ಬೇಕು ಲಕ್ಷ ಲಕ್ಷ ಹಣ!

Oct 1, 2020, 4:42 PM IST

ಬೆಂಗಳೂರು (ಅ. 01): ಅಕ್ಟೋಬರ್ 15 ರಿಂದ ರಾಜ್ಯಾದ್ಯಂತ ಥಿಯೇಟರ್‌ಗಳು ಓಪನ್ ಆಗುತ್ತಿವೆ. ಲಾಕ್‌ಡೌನ್ ಅವಧಿಯಲ್ಲಿ ಥಿಯೇಟರ್‌ಗಳು ಧೂಳು ಹಿಡಿದಿವೆ. ಅದರ ಸ್ವಚ್ಚತೆಗೆ ಬಹಳಷ್ಟು ಸಮಯ ಹಿಡಿಯಲಿದೆ. ಸಂತೋಷ್, ನರ್ತಕಿ ಥಿಯೇಟರ್‌ ಸೀಟುಗಳು ಗಬ್ಬೆದ್ದಿವೆ. ಇನ್ನೊಂದು ಕಡೆ ಸ್ಕ್ರೀನ್‌ಗಳು ಹಾಳಾಗಿವೆ.

ಅ. 15 ರಿಂದ ಥಿಯೇಟರ್‌ಗಳು ಆರಂಭಕ್ಕೆ ಸಮ್ಮತಿ; ಆದರೆ ಈ ಕಂಡೀಶನ್‌ಗಳು ಅಪ್ಲೈಯಾಗುತ್ತೆ!

ಇವುಗಳ ದುರಸ್ತಿಗೆ ಮಾಲಿಕ ಲಕ್ಷ ಲಕ್ಷ ಖರ್ಚು ಮಾಡಬೇಕಿದೆ. ಬೆಂಗಳೂರಿನ ಸಂತೋಷ್ ಥಿಯೇಟರ್‌ನ ಚಿತ್ರಣ ಹೇಗಾಗಿದೆ ನೋಡೋಣ ಬನ್ನಿ. ಇದು ಬರೀ ಒಂದು ಉದಾಹರಣೆಯಷ್ಟೇ. ಬಹುತೇಕ ಚಿತ್ರಮಂದಿರಗಳ ಕಥೆಯೂ ಇದೆ ಆಗಿದೆ.