Aug 23, 2021, 12:01 PM IST
ಬೆಂಗಳೂರು(ಆ.23): ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆ ಸವಾಲುಗಳ ಸಾಲೇ ಇದೆ. ಹೌದು, ಕೊರೋನಾ, ಕ್ಯಾಬಿನೆಟ್ ಕದನದ ಬೆನ್ನಲ್ಲೇ ಇದೀಗ ಮೀಸಲಾತಿ ಟೆನ್ಷನ್ ಆರಂಭವಾಗಿದೆ. ಮೀಸಲಾತಿಗಾಗಿ ಸಿಎಂ ಮನೆ ಕದ ತಟ್ಟುತ್ತಿದ್ದಾರೆ ಮುಖಂಡರು. ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಬಿಗಿ ಪಟ್ಟು ಹಿಡಿಯಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಒಂದು ಗುಡುವು ಕೊಟ್ಟಿದ್ದಾರೆ ಪಂಚಮಸಾಲಿ ಮುಖಂಡರು. ಹುಬ್ಬಳ್ಳಿಯಲ್ಲಿ ಸಭೆ ಮಾಡಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ. ಇನ್ನು ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿಗಾಗಿ ಆಗ್ರಹಿಸಲಾಗಿದೆ.