ಬೇರೆ ಬೇರೆ ದೇಶಗಳಿಂದ, ರಾಜ್ಯಗಳಿಂದ ಕರ್ನಾಟಕಕ್ಕೆ ಜನ ವಾಪಸ್; ಸರ್ಕಾರಕ್ಕೆ ಶುರುವಾಗಿದೆ ಟೆನ್ಷನ್

May 10, 2020, 5:09 PM IST

ಬೆಂಗಳೂರು (ಮೇ. 10): ಹೊರದೇಶಗಳಿಂದ, ಬೇರೆ ಬೇರೆ ರಾಜ್ಯಗಳಿಂದ ಜನ ಕರ್ನಾಟಕಕ್ಕೆ ವಾಪಸ್ ಆಗುತ್ತಿದ್ದಾರೆ. ವಿದೇಶದಿಂದ ರಾಜ್ಯಕ್ಕೆ 10 ಸಾವಿರ ಜನ ವಾಪಸ್ಸಾಗುತ್ತಿದ್ದಾರೆ. ಅವರನ್ನೆಲ್ಲಾ ಕ್ವಾರಂಟೈನ್‌ನಲ್ಲಿಟ್ಟು ಪರೀಕ್ಷೆ ನಡೆಸಬೇಕು. ಬೇರೆ ರಾಜ್ಯಗಳಿಂದ ಬರುವವರನ್ನು ಪರೀಕ್ಷೆ ನಡೆಸಬೇಕು. ಇವರನ್ನೆಲ್ಲಾ ಸಂಭಾಳಿಸುವ ಜವಾಬ್ದಾರಿ ಸರ್ಕಾರ ಮೇಲಿದೆ. ಇಲ್ಲಿನ ಜನರಿಗೂ ಆತಂಕ ಶುರುವಾಗಿದೆ. ಜೊತೆಗೆ ಸರ್ಕಾರಕ್ಕೂ ಟೆನ್ಷನ್ ಹೆಚ್ಚಾಗಿದೆ. 

ಲಾಕ್‌ಡೌನ್ ನಡುವೆ ಕೇಂದ್ರದಿಂದ ಹೊಸ ಗೈಡ್‌ಲೈನ್ಸ್!