Mekedatu Padayatre: ರ್ಯಾಲಿ, ಧರಣಿ, ಪ್ರತಿಭಟನೆಗೆ ಅವಕಾಶ ಕೊಡ್ಬೇಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Jan 14, 2022, 3:26 PM IST

ಬೆಂಗಳೂರು (ಜ. 14): ರ್ಯಾಲಿ (Rally) ಧರಣಿ (Dharna) ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವಂತೆ ಸರ್ಕಾರಕ್ಕೆ ಹೈಕೋರ್ಟ್ (High Court) ಖಡಕ್ ನಿರ್ದೇಶನ ನೀಡಿದೆ. ಕೊರೊನಾ ಸಂದರ್ಭದಲ್ಲಿ ರ್ಯಾಲಿ, ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ಕೊಡಬೇಡಿ. ಜ. 4 ರ ಗೈಡ್‌ಲೈನ್ಸ್ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದಿದೆ. 

UP Elections 2022: ರಾಜಕೀಯ ತಲ್ಲಣದ ಹಿಂದೆ ಯಾರೂ ಅರಿಯದ ಸಿಕ್ರೇಟ್: ಶಾಸಕರ ಪಕ್ಷಾಂತರ ಯೋಗಿಗೆ ವರ!?

ಮೇಕೆದಾಟು ಪಾದಯಾತ್ರೆ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಶುಕ್ರವಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದೆ. ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಹಾಗೂ ಹಿರಿಯ ವಕೀಲ ಎ.ಎಸ್‌. ಪೊನ್ನಣ್ಣ ಪಕ್ಷದ ನಿಲುವನ್ನು ಸಮರ್ಥವಾಗಿ ವಿಭಾಗೀಯ ಪೀಠದ ಮುಂದಿಟ್ಟರು. ಈಗಾಗಲೇ ಪಾದಯಾತ್ರೆಯನ್ನು ಹಿಂಪಡೆದಿರುವುದರಿಂದ ನ್ಯಾಯಾಲಯದ ಕೆಂಗಣ್ಣಿನಿಂದ ಪಾರಾದಂತಾಗಿದೆ.