ಬೊಮ್ಮಾಯಿ ಭೇಟಿ ಮಾಡಿದ ಲಕ್ಷ್ಮಣ್ ಸವದಿ; ಬೆಳಗಾವಿಗೆ ಹೆಚ್ಚುವರಿ ಪೊಲೀಸ್ ಭದ್ರತೆ

Aug 28, 2020, 3:04 PM IST

ಬೆಂಗಳೂರು (ಆ. 28): ಬೆಳಗಾವಿಯಲ್ಲಿ ರಾಯಣ್ಣ- ಶಿವಾಜಿ ಪ್ರತಿಮೆ ವಿವಾದ ಜೋರಾಗುತ್ತಿದೆ. ವಿವಾದಿತ ಜಾಗ ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಯನ್ನು ಖಂಡಿಸಿ ಮರಾಠಿಗರು ರೊಚ್ಚಿಗೆದ್ದಿದ್ದಾರೆ. ಡಿಸಿಎಂ ಲಕ್ಷ್ಮಣ್ ಸವದಿ, ಗೃಹ ಸಚಿವ ಬೊಮ್ಮಾಯಿಯವರನ್ನು ಭೇಟಿ ಮಾಡಿ ವಿದ್ಯಮಾನದ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಭದ್ರತಾ ದೃಷ್ಟಿಯಿಂದ ಬೆಳಗಾವಿಗೆ ಹೆಚ್ಚುವರಿ ಪೊಲೀಸರನ್ನು ಆಯೋಜಿಸಲಾಗಿದೆ. ಕನ್ನಡಿಗರು- ಮರಾಠಿಗರ ವಿಚಾರದಲ್ಲಿ ಸಮಸ್ಯೆ ಬಗೆಹರಿಸುವುದಕ್ಕಿಂತ ರಾಜಕಾರಣಿಗಳಿಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಹೆಚ್ಚಾಗಿರುತ್ತದೆ. 

ರಾಯಣ್ಣ ವಿಚಾರದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಯತ್ನ: ಹೀಗೊಂದು ಸ್ಫೋಟಕ ಹೇಳಿಕೆ