ಕಾಯುವುದು ಅನರ್ಹ ಶಾಸಕರಿಗೆ ಅನಿವಾರ್ಯ, ಮತ್ತೆ ವಿಚಾರಣೆ ಮುಂದಕ್ಕೆ

Oct 21, 2019, 6:17 PM IST

ಬೆಂಗಳೂರು[ಅ. 21]  ಅನರ್ಹ ಶಾಸಕರಿಗೆ ಒಂದೆಲ್ಲಾ ಒಂದು ವಿಘ್ನಗಳು ಎದುರಾಗುತ್ತಿದ್ದು ಸದ್ಯಕ್ಕೆ ರಿಲೀಫ್ ಸಿಗುವ ಲಕ್ಷಣ ಕಾಣುತ್ತಿಲ್ಲ. 17 ಅನರ್ಹ ಶಾಸಕರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಮದೂಡಿದೆ.

ಮಂಗಳವಾರ ಅಕ್ಟೋಬರ್ 22 ರಂದು ನಡೆಯಬೇಕಿದ್ದ ವಿಚಾರಣೆಯನ್ನು ಒಂದು ದಿನ ಮುಂದೂಡಿದ್ದು 23ಕ್ಕೆ ವಿಚಾರಣೆ ನಿಗದಿ ಮಾಡಲಾಗಿದೆ. ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಲ್ ಮಾಡಿಕೊಂಡಿದ್ದ ಮನವಿಯನ್ನು ಒಂದು ದಿನ ಮುಂದಕ್ಕೆ  ಹಾಕಲಾಗಿದೆ.