ಡಿಸಿಗಳ ಜೊತೆ ಸಿಎಂ ಸಭೆ: ಮತ್ತೆ ಲಾಕ್‌ಡೌನ್‌ ಆಗುತ್ತಾ ಉಡುಪಿ?

Jul 13, 2020, 3:50 PM IST

ಬೆಂಗಳೂರು (ಜು. 13): ರಾಜ್ಯಾದ್ಯಂತ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ್ದಾರೆ.  ಉಡುಪಿಯಲ್ಲಿ ಲಾಕ್‌ಡೌನ್ ಬೇಡವೇ ಬೇಡ. ಅಂತರ್‌ಜಿಲ್ಲಾ ಓಡಾಟಕ್ಕೆ ನಿರ್ಬಂಧ ಹಾಕುವ ಬಗ್ಗೆ ಡಿಸಿ ಒಲವು ತೋರಿದ್ದಾರೆ. 

ಬೆಂಗಳೂರು ಹಾಗೂ ಮಂಗಳೂರಿನಿಂದ ಬರುವವರಿಂದ ಸೋಂಕು ಹೆಚ್ಚಾಗುತ್ತಿದೆ. ಅಲ್ಲಿಂದ ಬರುವವರಿಗೆ ನಿರ್ಬಂಧ ಹೇರಿದರೆ ನಾವು ನಿಯಂತ್ರಿಸಬಹುದು. ಲಾಕ್‌ಡೌನ್‌ ಹೇರುವುದರಿಂದ ಮತ್ತೆ ಆರ್ಥಿಕತೆ ಕುಸಿದು ಹೋಗುತ್ತದೆ. ಜನರಿಗೆ ಸಮಸ್ಯೆಯಾಗುತ್ತದೆ.  ಎಂದು ಡಿಸಿ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ BSY ವಿಡಿಯೋ ಕಾನ್ಫರೆನ್ಸ್‌: ಸಿಎಂ ಮಹತ್ವದ ಆದೇಶ