ಮಳೆಗಾಲದಲ್ಲಿ ಅತಿಯಾಗಲಿದೆ ಕೊರೋನಾ ಅಬ್ಬರ; ವೈದ್ಯಕೀಯ ಸಚಿವರು ನೀಡಿದ್ರು ಎಚ್ಚರ!

Jun 12, 2020, 7:11 PM IST

ಬೆಂಗಳೂರು(ಜೂ.12): ತಜ್ಞ ವೈದ್ಯರ ಪ್ರಕಾರವೇ ಮೇ ಅಂತ್ಯ ಹಾಗೂ ಜೂನ್ ತಿಂಗಳಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಅತಿಯಾಗಿದೆ. ಇದೀಗ ಮಳೆಗಾಲ ಆರಂಭವಾಗಿದೆ. ಪ್ರತಿಯೊಬ್ಬರು ಅತೀವ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಕೊರೋನಾ ಎಲ್ಲೆಡೆ ಹಬ್ಬಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.